ಆ್ಯಪ್ನಗರ

ಮೂಲಂಗಿ ಸಾಂಬರ್ ರುಚಿಯೂ ಇರುತ್ತೆ, ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು!!

ಆಹಾರ ಕ್ರಮದಲ್ಲಿ ಮೂಲಂಗಿ ಸೇರ್ಪಡೆ ಮಾಡಿದರೆ ಈ ಲಾಭಗಳು ಖಚಿತ.

Vijaya Karnataka Web 1 Nov 2021, 2:29 pm
ಆರೋಗ್ಯವಾಗಿರಬೇಕಾದರೆ ನಮ್ಮ ಆಹಾರ ಕ್ರಮದಲ್ಲಿ ತರಕಾರಿಗಳು ತಪ್ಪದೆ ಇರಬೇಕು. ವಾರದಲ್ಲಿ 4-5 ದಿನವಾದರೂ ತರಕಾರಿಗಳ ಸೇವನೆ ಮಾಡಬೇಕು. ಒಂದೊಂದು ಬಗೆಯ ತರಕಾರಿಗಳಲ್ಲಿ ಒಂದೊಂದು ರೀತಿಯ ಪೋಷಕಾಂಶಗಳಿದ್ದು, ಇದು ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವುದು.
Vijaya Karnataka Web benefits of eating radish on your health
ಮೂಲಂಗಿ ಸಾಂಬರ್ ರುಚಿಯೂ ಇರುತ್ತೆ, ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು!!


ಹಲವಾರು ಬಗೆಯ ಪೋಷಕಾಂಶಗಳನ್ನು ತನ್ನಲ್ಲಿ ಅಡಗಿಸಿಕೊಂಡಿರುವ ತರಕಾರಿಯೆಂದರೆ ಅದು ಮೂಲಂಗಿ. ಇದು ಕೇವಲ ಆರೋಗ್ಯಕ್ಕೆ ಮಾತ್ರವಲ್ಲದೆ, ಸೌಂಧರ್ಯ ರಕ್ಷಣೆಯಲ್ಲೂ ಪ್ರಮುಖ ಪಾತ್ರ ವಹಿಸುವುದು. ಇದರಲ್ಲಿ ಪ್ರಮುಖ ವಿಟಮಿನ್ ಗಳು, ಖನಿಜಾಂಶಗಳು, ಆಂಟಿಆಕ್ಸಿಡೆಂಟ್, ಪೈಥೋನ್ಯೂಟ್ರಿಯೆಂಟ್ಸ್, ಪಾಲಿಫೆನಾಲ್ ಮತ್ತು ಆಹಾರದ ನಾರಿನಾಂಶವು ಇದೆ.

ಮೂಲಂಗಿ ಸೇವನೆಯಿಂದಾಗಿ (ಸಾಂಬರ್, ಅಥವಾ ಪಲ್ಯದ ರೂಪದಲ್ಲಿ) ಸಿಗುವ ಆರು ಲಾಭಗಳು ಯಾವುದು ಎಂದು ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ.

​ತೂಕ ಇಳಿಸಲು ಸಹಕಾರಿ

  • ಕಡಿಮೆ ಕ್ಯಾಲರಿ ಹೊಂದಿರುವ ಮೂಲಂಗಿ ತೂಕ ಇಳಿಸಲು ಸಹಕಾರಿ. ಆಹಾರದ ನಾರಿನಾಂಶವು ಹೊಟ್ಟೆಯಲ್ಲಿ ತೃಪ್ತಿ ಉಂಟು ಮಾಡುವುದು, ಪದೇ ಪದೇ ತಿನ್ನುವುದನ್ನು ಇದು ಕಡಿಮೆ ಮಾಡುವುದು.
  • ದೇಹದಲ್ಲಿ ಬೊಜ್ಜು ಬೆಳೆಯಲು ಕಾರಣವಾಗುವ ಅತಿಯಾದ ತಿನ್ನುವುದನ್ನು ಇದು ಕಡಿಮೆ ಮಾಡುವುದು. ಜೀರ್ಣಕ್ರಿಯೆ ಸುಧಾರಣೆ ಮಾಡಿ, ಪೋಷಕಾಂಶಗಳು ಸರಿಯಾಗಿ ಹೀರಿಕೊಳ್ಳುವಂತೆ ಮಾಡುವ ಮೂಲಂಗಿಯು ಅತಿಯಾಗಿ ತಿನ್ನುವುದನ್ನು ತಡೆಯುವುದು.

​ಸಕ್ಕರೆ ಮಟ್ಟ ನಿರ್ವಹಣೆ

  • ಮಧುಮೇಹಿಗಳು ಮತ್ತು ಮಧುಮೇಹದ ಅಪಾಯವಿರುವವರಿಗೆ ಮೂಲಂಗಿಯು ತುಂಬಾ ಪರಿಣಾಮಕಾರಿಯಾಗಿದೆ. ಯಾಕೆಂದರೆ ಇದರಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ತುಂಬಾ ಕಡಿಮೆ ಇದೆ.
  • ಇದು ರಕ್ತನಾಳಗಳಿಗೆ ಸಕ್ಕರೆ ಬಿಡುಗಡೆಯನ್ನು ನಿಧಾನವಾಗಿಸುವುದು ಮತ್ತು ಹಠಾತ್ ಆಗಿ ಸಕ್ಕರೆಯು ಏರಿಕೆ ಆಗುವುದನ್ನು ತಡೆಯುವುದು.
  • ಇದರಿಂದ ಮಧುಮೇಹ ನಿರ್ವಹಿಸಲು ಸಹಕಾರಿ. ಇದರಲ್ಲಿ ಇರುವಂತಹ ಆಹಾರದ ನಾರಿನಾಂಶವು ರಕ್ತನಾಳಗಳು ಸಕ್ಕರೆ ಪ್ರಮಾಣವನ್ನು ಹೀರಿಕೊಳ್ಳುವುದನ್ನು ಕಡಿಮೆ ಮಾಡುವುದು ಮತ್ತು ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು. ಮೂಲಂಗಿಯನ್ನು ಮಿತ ಪ್ರಮಾಣದಲ್ಲಿ ಸೇವನೆ ಮಾಡಿ.
  • ಅತಿಯಾಗಿ ಸೇವಿಸಿದರೆ ಅದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಕುಸಿಯಬಹುದು. ಇದರಿಂದ ಮೈ ನಡುಕ, ಬಳಲಿಕೆ, ಬೆವರು, ಅತಿಯಾದ ಹಸಿವು, ಎದೆಬಡಿತ ಹೆಚ್ಚಳ ಮತ್ತು ಗೊಂದಲವು ಮೂಡುವುದು. ಮಧುಮೇಹಿಯಾಗಿದ್ದರೆ, ಆಗ ನೀವು ಮೂಲಂಗಿ ಸೇವನೆ ಮಾಡುವ ಮೊದಲು ವೈದ್ಯರ ಸಲಹೆ ಪಡೆಯಿರಿ.

​ಪ್ರತಿರೋಧಕ ಶಕ್ತಿ ವೃದ್ಧಿ

  • ಮೂಲಂಗಿಯಲ್ಲಿ ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಇ ಮತ್ತು ಇತರ ಆಂಟಿಆಕ್ಸಿಡೆಂಟ್ ಗಳು ಇವೆ. ಇದು ಪ್ರತಿರೋಧಕ ಅಂಗಾಂಶಗಳು ಮತ್ತು ಬಿಳಿ ರಕ್ತ ಕಣಗಳನ್ನು ಫ್ರೀ ರ್ಯಾಡಿಕಲ್ ನಿಂದ ರಕ್ಷಣೆ ಮಾಡುವುದು ಹಾಗೂ ಪ್ರತಿರೋಧಕ ಶಕ್ತಿ ವೃದ್ಧಿಸುವುದು.
  • ಸೂಕ್ಷ್ಮಾಣುಗಳು ಮತ್ತು ವೈರಸ್ ದಾಳಿಯಿಂದ ರಕ್ಷಿಸಲು ಪ್ರತಿರೋಧಕ ವ್ಯವಸ್ಥೆಯು ಬಲವಾಗಿ ಇರಬೇಕು. ಪ್ರತಿರೋಧಕ ವ್ಯವಸ್ಥೆಯು ಬಲಿಷ್ಠವಾಗಿದ್ದರೆ ಆಗ ಕೆಮ್ಮು, ಕಫ, ಜ್ವರ ಮತ್ತು ಶೀತವು ದೂರವಿರುವುದು. ಸತು, ಪೊಟಾಶಿಯಂ, ಮೆಗ್ನಿಶಿಯಂ, ಕಬ್ಬಿಣಾಂಶ ಮತ್ತು ಫಾಲಟೆ ಕೂಡ ಇದರಲ್ಲಿದ್ದು, ಪ್ರತಿರೋಧಕ ಶಕ್ತಿ ವೃದ್ಧಿಸಲು ಸಹಕಾರಿ.

​ಜ್ವರಕ್ಕೆ ಚಿಕಿತ್ಸೆ

ಸೂಕ್ಷ್ಮಾಣು ವಿರೋಧಿ ಗುಣಗಳನ್ನು ಹೊಂದಿರುವ ಮೂಲಂಗಿಯು ವಿವಿಧ ಬ್ಯಾಕ್ಟೀರಿಯಾ ಮತ್ತು ಸೋಂಕಿನ ವಿರುದ್ಧ ಹೋರಾಡುವುದು. ಇದರಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಪ್ರತಿರೋಧಕ ಶಕ್ತಿ ವೃದ್ಧಿಸುವುದು ಮತ್ತು ಕಫ, ಕೆಮ್ಮು, ಜ್ವರ, ಶೀತ ಇತ್ಯಾದಿಗಳನ್ನು ದೂರವಿಡುವುದು.

​ರಕ್ತಹೀನತೆ ತಡೆಯುವುದು

  • ಕಬ್ಬಿಣಾಂಶದ ಕೊರತೆಯಿಂದ ಕಾಡಿರುವಂತಹ ರಕ್ತಹೀನತೆ ಸಮಸ್ಯೆಯನ್ನು ದೂರ ಮಾಡುವಲ್ಲಿ ಮೂಲಂಗಿಯು ಪರಿಣಾಮಕಾರಿ. ದೇಹದಲ್ಲಿ ಕಬ್ಬಿಣಾಂಶದ ಕೊರತೆ ಕಂಡುಬಂದರೆ ಅದರಿಂದ ರಕ್ತಹೀನತೆಯು ಕಾಡುವುದು.
  • ಇದರಿಂದ ಬಳಲಿಕೆ, ನಿಶ್ಯಕ್ತಿ, ಪೇಲವ ಚರ್ಮ, ಅಸಾಮಾನ್ಯ ಎದೆಬಡಿತ, ಉಸಿರಾಟದ ತೊಂದರೆ, ಎದೆನೋವು, ಕಾಲು ಮತ್ತು ಕೈಗಳನ್ನು ತಣ್ಣಗಾಗುವುದು ಇತ್ಯಾದಿಗಳು ಕಾಣಿಸಿಕೊಳ್ಳುವುದು. ಕಬ್ಬಿಣಾಂಶವು ಕೆಂಪು ರಕ್ತದ ಕಣಗಳನ್ನು ವೃದ್ಧಿಸುವುದು. ಇದರಿಂದ ರಕ್ತಹೀನತೆ ಕಡಿಮೆ ಆಗುವುದು.
  • ಮೂಲಂಗಿಯಲ್ಲಿ ವಿಟಮಿನ್ ಸಿ ಕೂಡ ಇರುವ ಕಾರಣದಿಂದಾಗಿ ಕಬ್ಬಿಣಾಂಶವು ಸರಿಯಾಗಿ ಹೀರಿಕೊಳ್ಳಲು ಇದು ಸಹಕಾರಿ. ಕಬ್ಬಿಣಾಂಶದಿಂದ ಪ್ರತಿರೋಧಕ ಶಕ್ತಿ ವೃದ್ಧಿಸುವುದು, ಅರಿವಿನ ಕಾರ್ಯವು ಸುಧಾರಿಸುವುದು ಮತ್ತು ಚರ್ಮ ಹಾಗೂ ಉಗುರಿನ ಆರೋಗ್ಯವು ಉತ್ತಮವಾಗಿರುವುದು.

​ಮೂಳೆಗಳನ್ನು ಬಲಪಡಿಸುವುದು

  • ಮೂಲಂಗಿಯಲ್ಲಿ ಕ್ಯಾಲ್ಸಿಯಂ, ಪೊಟಾಶಿಯಂ, ಮೆಗ್ನಿಶಿಯಂ ಇರುವ ಕಾರಣದಿಂದಾಗಿ ಇದು ಮೂಳೆಗಳನ್ನು ಬಲಪಡಿಸಲು ಸಹಕಾರಿ. ಮೂಳೆಗಳ ಬೆಳವಣಿಗೆ ಮತ್ತು ನಿರ್ವಹಣೆಗೆ ಕ್ಯಾಲ್ಸಿಯಂ ಅತೀ ಅಗತ್ಯ. ಕ್ಯಾಲ್ಸಿಯಂ ಕೊರತೆಯಿಂದ ಅಸ್ಥಿರಂಧ್ರತೆ ಸಮಸ್ಯೆಯು ಬರಬಹುದು.
  • ಪೊಟಾಶಿಯಂ ಆಮ್ಲ ಶೇಖರಣೆಯನ್ನು ತಟಸ್ಥಗೊಳಿಸುವುದು ಮತ್ತು ಇದರಿಂದ ಮೂಳೆಗಳಲ್ಲಿ ಕ್ಯಾಲ್ಸಿಯಂ ನಾಶವಾಗದಂತೆ ತಡೆಯುವುದು. ಇದರಿಂದ ಮೂಳೆ ಸಾಂದ್ರತೆ ವೃದ್ಧಿಸುವುದು. ಇದರಲ್ಲಿ ಇರುವ ಮೆಗ್ನಿಶಿಯಂ ಮೂಳೆ ಸಾಂದ್ರತೆಯನ್ನು ಉತ್ತಮಪಡಿಸುವುದು.
  • ಮೂಲಂಗಿಯಲ್ಲಿ ಇರುವ ಮೆಗ್ನಿಶಿಯಂ ಕ್ಯಾಲ್ಸಿಯಂ ಹೀರುವಿಕೆಯನ್ನು ಉತ್ತಮಪಡಿಸುವುದು ಮತ್ತು ಇದರಿಂದ ಬೆನ್ನುಹುರಿ ಸಹಿತ ಮೂಳೆಗಳ ಲವಣಾಂಶವು ಸುಧಾರಣೆ ಆಗುವುದು.
  • ವಿಟಮಿನ್ ಸಿ ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಸತು, ಪೋಸ್ಪರಸ್ ಮತ್ತು ಫಾಲಟೆ ಅಂಶ ಕೂಡ ಮೂಳೆಯನ್ನು ಆರೋಗ್ಯಕಾರಿಯಾಗಿಡುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ