ಆ್ಯಪ್ನಗರ

ವಿಟಮಿನ್‌ ಮಾತ್ರೆಗಳ ಬಗ್ಗೆ ಎಚ್ಚರವಿರಲಿ

ವಿಟಮಿನ್‌ ಮಾತ್ರೆಗಳ ಮೇಲಿನ ಅತಿಯಾದ ಅವಲಂಬನೆ ರೋಗ ನಿರೋಧಕ ಶಕ್ತಿಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎನ್ನಲಾಗಿದೆ.

Vijaya Karnataka Web 5 Dec 2022, 1:02 pm
*ಡಾ. ಕರವೀರಪ್ರಭು ಕ್ಯಾಲಕೊಂಡ
Vijaya Karnataka Web Image by diapicard from Pixabay


ವಿಟಮಿನ್‌ ಮಾತ್ರೆಗಳನ್ನು ಅತಿಯಾಗಿ ಸೇವನೆಯಿಂದ ದೇಹದ ರೋಗನಿರೋಧಕ ಶಕ್ತಿಯ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತದೆ. ಕ್ಯಾನ್ಸರ್‌, ಹೃದ್ರೋಗಗಳಂತಹ ಕಾಯಿಲೆಗಳನ್ನು ತಡೆಯಲು ಸಾಧ್ಯವಿಲ್ಲ ಎನ್ನುತ್ತಾರೆ ತಜ್ಞರು.

ವಿಟಮಿನ್‌ ಮಾತ್ರೆಗಳ ಸೇವನೆಗಿಂತ ಸಹಜ ಆಹಾರ ಸೇವನೆ ಹೆಚ್ಚು ಉತ್ತಮ. ಮಾತ್ರೆಗಳನ್ನು ಖರೀದಿಸುವ ಹಣದಲ್ಲಿಯೇ ಹಣ್ಣು , ತರಕಾರಿಗಳನ್ನು ಕೊಳ್ಳಬಹುದು. ಇದರಿಂದ ದೇಹಕ್ಕೆ ಸಹಜ ಪೋಷಕಾಂಶಗಳು ಸಮೃದ್ಧವಾಗಿ ದೊರೆಯುತ್ತವೆ. ನಾರಿನಂಶವು ಧಾರಾಳವಾಗಿ ಸಿಗುವುದರಿಂದಾಗಿ ಮಲಬದ್ಧ್ದತೆ ತನ್ನಷ್ಟಕ್ಕೆ ತಾನೇ ನಿವಾರಣೆಯಾಗುತ್ತದೆ. ಜೊತೆಗೆ ಯಾವ ಅಡ್ಡ ಪರಿಣಾಮಗಳೂ ಇರುವುದಿಲ್ಲ. ಕೇವಲ ಮಾತ್ರೆಗಳ ಸೇವನೆಯಿಂದ ರೋಗಗಳನ್ನು ತಡೆಗಟ್ಟುವುದು ಸಾಧ್ಯವಿಲ್ಲ. ಭಾರತದಲ್ಲಿ ವಿಟಮಿನ್‌ ಮಾತ್ರೆಗಳನ್ನು ತಯಾರಿಸುವ ಕ್ರಮದಲ್ಲೇ ದೋಷವಿದೆ. ಇಲ್ಲಿ ವಿಟಮಿನ್‌ಗಳನ್ನು ಸಂಯುಕ್ತ ಪ್ರಮಾಣದಲ್ಲಿ, ಇತರೇ ಔಷಧಗಳನ್ನು ಕೂಡಿಸಿ ತಯಾರಿಸಲಾಗುತ್ತದೆ. ಈ ರೀತಿಯ ಮಿಶ್ರಣದಿಂದ ಮೂಲ ಔಷಧದ ಶಕ್ತಿ ಕುಂದುತ್ತದೆ. ವಿಟಮಿನ್‌ ಮಾತ್ರೆ ಕೂಡ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಬೇರೆ ಔಷಧಗಳ ಜೊತೆಗೆ ಈ ಮಾತ್ರೆಗಳನ್ನು ತೆಗೆದುಕೊಂಡಾಗಲೂ ಇದೇ ಪರಿಣಾಮ ಉಂಟಾಗುತ್ತದೆ ಎನ್ನುತ್ತಾರೆ ಔಷಧÜ ತಜ್ಞರು.

ಇದಕ್ಕೇನು ಪರಿಹಾರ?: ಸಹಜ ಆಹಾರ ಸೇವನೆಯೇ ಏಕೈಕ ಹಾಗೂ ಸುಲಭ ಮಾರ್ಗ. ಹಣ್ಣುಗಳು ಮತ್ತು ತರಕಾರಿಗಳು ಸಹಜ ಪೋಷಕಾಂಶಗಳನ್ನು ಯೋಗ್ಯ ಪ್ರಮಾಣದಲ್ಲಿ ಹೊಂದಿವೆ. ಇವು ಎಲ್ಲೆಡೆ ದೊರೆಯುವುದರಿಂದ ಜನರಿಗೆ ವಿಟಮಿನ್‌ ಕೊರತೆ ಉಂಟಾಗುವ ಪ್ರಶ್ನೆಯೇಬಾರದು. ಆದ್ದರಿಂದ ಇನ್ನಾದರೂ ಜನ ಸಹಜ ಆಹಾರಗಳತ್ತ ಗಮನ ಹರಿಸಬೇಕು. ಔಷಧಗಳೇನಿದ್ದರೂ ಅನಿವಾರ್ಯ ಸಂದರ್ಭಗಳಿಗೆ ಮಾತ್ರ ಎನ್ನುವುದನ್ನು ನಾವು ಅರಿತರೆ ಆರೋಗ್ಯವನ್ನು ನಿಯಂತ್ರಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ