ಆ್ಯಪ್ನಗರ

ಹೃದಯ ಸ್ತಂಭನ ಎಂಬ ಸೈಲೆಂಟ್‌ ಕಿಲ್ಲರ್‌

ನೋಡಲು ತುಂಬಾ ಆರೋಗ್ಯವಂತವಾಗಿ ಕಾಣುವ ವ್ಯಕ್ತಿಗಳಲ್ಲೂ ಸಹ ರಕ್ತನಾಳಗಳಲ್ಲಿ ಅಡ್ಡಗಟ್ಟುವಿಕೆ (ಬ್ಲಾಕೇಜ್‌) ಕೆಲವೊಮ್ಮೆ ಹೃದಯ ಸ್ತಂಭನಕ್ಕೆ ದಾರಿ ಮಾಡುತ್ತದೆ.

Vijaya Karnataka Web 27 Feb 2018, 6:22 pm

ಹೃದಯ ಸ್ತಂಭನ ಎಂಬ ಸೈಲೆಂಟ್‌ ಕಿಲ್ಲರ್‌ ಕುರಿತು ಹೆಚ್ಚಿನ ವಿವರ ಇಲ್ಲಿದೆ:

ರಕ್ತದ ಬ್ಲಾಕೇಜ್‌: ನೋಡಲು ತುಂಬಾ ಆರೋಗ್ಯವಂತವಾಗಿ ಕಾಣುವ ವ್ಯಕ್ತಿಗಳಲ್ಲೂ ಸಹ ರಕ್ತನಾಳಗಳಲ್ಲಿ ಅಡ್ಡಗಟ್ಟುವಿಕೆ (ಬ್ಲಾಕೇಜ್‌) ಕೆಲವೊಮ್ಮೆ ಹೃದಯ ಸ್ತಂಭನಕ್ಕೆ ದಾರಿ ಮಾಡುತ್ತದೆ. ಕೆಲವೊಮ್ಮೆ ಮೆದುಳಿನಲ್ಲಿ ದಿಢೀರ್‌ ರಕ್ತಸ್ರಾವದಿಂದಲೂ ಹೃದಯ ಸ್ತಂಭನವಾಗುತ್ತದೆ ಎಂದು ಫೋರ್ಟಿಸ್‌ ಆಸ್ಪತ್ರೆಯ ಹೃದ್ಯೋಗ ವಿಭಾಗದ ಮುಖ್ಯಸ್ಥರಾದ ಡಾ. ಅಶೋಕ್‌ ಸೇಠ್‌ ಮಾಹಿತಿ ನೀಡುತ್ತಾರೆ.

ಹಿಂದೆ ಆಗಿರಬೇಕೆಂದಿಲ್ಲ: ಹೃದಯ ಬೇನೆಯ ಪೂರ್ವ ಇತಿಹಾಸವಿಲ್ಲದ ವ್ಯಕ್ತಿಗೂ ಹೃದಯ ಸ್ತಂಭನ ಸಂಭವಿಸಬಹುದು. ರಕ್ತನಾಳಗಳ ಅಡ್ಡಗಟ್ಟುವಿಕೆಯು ಶೇ. 80-90ರ ಮಟ್ಟಕ್ಕೆ ತಲುಪುವರೆಗೂ ಈ ಸಮಸ್ಯೆ ಅರಿವಿಗೆ ಬರುವುದಿಲ್ಲ. ನಾವು ಹೊರಗೆ ಎಷ್ಟೇ ಆರೋಗ್ಯ ಕಾಳಜಿಯಿಂದ ದೇಹವನ್ನು ಕಾಪಾಡಿಕೊಂಡರೂ, ಹೃದಯ ಒಳಗೆ ಏನಾಗುತ್ತಿದೆ ಎಂಬುದು ತಿಳಿಯುವುದಿಲ್ಲ. ಅದರಲ್ಲೂ ಭಾರತದಲ್ಲಿ ಹೃದಯ ಸಂಬಂಧಿತ ಕಾಯಿಲೆಗಳಿಂದ ಮೃತಪಡುವವರ ಸಂಖ್ಯೆ ಹೆಚ್ಚು ಎನ್ನುತ್ತಾರೆ ವೈದ್ಯರು.

ತಪಾಸಣೆಯೊಂದೇ ಮಾರ್ಗ: ಆಗಾಗ್ಗೆ, ಕನಿಷ್ಠ ವರ್ಷಕ್ಕೊಮ್ಮೆಯಾದರೂ ಹೃದಯ ತಪಾಸಣೆಗೆ ಒಳಗಾಗುವುದರಿಂದ ಹೃದಯ ಸ್ತಂಭನ ಅಥವಾ ಹೃದಯಾಘಾತವನ್ನು ತಡೆಯಬಹುದು.

ಹೃದಯ ಸ್ತಂಭನದ ಲಕ್ಷಣಗಳು: ಹೃದಯ ಬಡಿತ ಇಲ್ಲದಿರುವುದು, ದಿಢೀರ್‌ ಕುಸಿದು ಬೀಳುವುದು, ಉಸಿರಾಟ ಸ್ಥಗಿತ, ಪ್ರಜ್ಞೆ ತಪ್ಪುವುದು ಇತ್ಯಾದಿಗಳು ಹೃದಯಸ್ತಂಭನದ ಲಕ್ಷಣಗಳಾಗಿವೆ.

ಹೃದಯಾಘಾತ ವರ್ಸಸ್‌ ಹೃದಯ ಸ್ತಂಭನ: ಹೃದಯ ಸ್ತಂಭನ ಮತ್ತು ಹೃದಯಾಘಾತ ಎರಡೂ ಪದಗಳನ್ನು ಸಾಮಾನ್ಯವಾಗಿ ಒಂದೇ ರೀತಿ ಬಳಸಲಾಗುತ್ತದೆಯಾದರೂ, ವೈದ್ಯಕೀಯ ಪರಿಭಾಷೆಯಲ್ಲಿ ಇವೆರಡೂ ಬೇರೆ ಬೇರೆ. ಹೃದಯ ಸ್ತಂಭನವೆಂದರೆ ಹೃದಯ ಬಡಿತದ ಲಯಬದ್ಧತೆಯಲ್ಲಾಗುವ ಅಡಚಣೆ.

Vijaya Karnataka Web deadly killer cardiac arrest
ಹೃದಯ ಸ್ತಂಭನ ಎಂಬ ಸೈಲೆಂಟ್‌ ಕಿಲ್ಲರ್‌


ಹೃದಯ ಬಡಿತ ಅನಿರೀಕ್ಷಿತವಾಗಿ ನಿಂತುಹೋಗುವುದನ್ನು ಕಾರ್ಡಿಯಾಕ್‌ ಅರೆಸ್ಟ್‌ ಅಥವಾ ಹೃದಯ ಸ್ತಂಭನ ಎಂದು ಹೇಳಲಾಗುತ್ತದೆ. ಆದರೆ ರಕ್ತನಾಳಗಳಲ್ಲಿ ಕೊಬ್ಬು ಹೆಚ್ಚಾಗಿ, ಹೃದಯಕ್ಕೆ ರಕ್ತ ಸರಬರಾಜು ನಿಂತು ಹೋದಾಗ ಹಾರ್ಟ್‌ ಅಟ್ಯಾಕ್‌ ಅಥವಾ ಹೃದಯಾಘಾತವು ಸಂಭವಿಸುತ್ತದೆ. ಸರಳವಾಗಿ ಹೇಳುವುದಾದರೆ, ಹೃದಯಾಘಾತವು 'ರಕ್ತ ಪ್ರಸರಣ'ಕ್ಕೆ ಸಂಬಂಧಿಸಿದ ಸಮಸ್ಯೆಯಾದರೆ, ಹೃದಯ ಸ್ತಂಭನವು ಹೃದಯಬಡಿತವನ್ನು ನಿಯಂತ್ರಿಸುವ 'ವಿದ್ಯುನ್ಮಂಡಲ'ದ (ಎಲೆಕ್ಟ್ರಿಕಲ್‌) ಸಮಸ್ಯೆಯಾಗಿದೆ. ಇಂತಹ ಸಂದರ್ಭದಲ್ಲಿ ರಕ್ತನಾಳಗಳಲ್ಲಿ ಅಡ್ಡಗಟ್ಟುವಿಕೆ ಇಲ್ಲದಿದ್ದರೂ, ಹೃದಯ ಬಡಿತ ನಿಲ್ಲುವುದರಿಂದ ರಕ್ತ ಪ್ರಸರಣ ಸ್ಥಗಿತಗೊಂಡು ಸಾವು ಸಂಭವಿಸುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ