ಆ್ಯಪ್ನಗರ

ಮಧುಮೇಹಿಗಳು ಕಿಡ್ನಿ ಅಪಾಯ ತಪ್ಪಿಸಲು ಹೀಗೆ ಮಾಡಿ

ಮಧುಮೇಹಿಗಳು ಕಿಡ್ನಿಯು ಆರೋಗ್ಯವಾಗಿ ಇರಲು ಆಹಾರ ಕ್ರಮದ ಬಗ್ಗೆ ಗಮನಹರಿಸಬೇಕು.

Vijaya Karnataka Web 16 Jul 2021, 5:44 pm
ಮಧುಮೇಹಿಗಳು ತಮ್ಮ ಆಹಾರದ ಕಡೆಗೆ ಮೊದಲ ಆದ್ಯತೆ ನೀಡುವುದು ಅತೀ ಅಗತ್ಯ. ಮಧುಮೇಹವಿದ್ದವರು ತಮ್ಮ ಆಹಾರ ಹಾಗೂ ಆರೋಗ್ಯದ ಕಡೆಗೆ ಗಮನ ನೀಡಬೇಕು. ರಕ್ತದಲ್ಲಿನ ಸಕ್ಕರೆ ಮಟ್ಟವು ಅತಿಯಾದರೂ ಸಮಸ್ಯೆ ಹಾಗೂ ಕಡಿಮೆಯಾದರೂ ಅದು ಸಮಸ್ಯೆ ಕಾಡುವುದು.
Vijaya Karnataka Web diet tips to prevent kidney disease when you have diabetes
ಮಧುಮೇಹಿಗಳು ಕಿಡ್ನಿ ಅಪಾಯ ತಪ್ಪಿಸಲು ಹೀಗೆ ಮಾಡಿ


ಹೀಗಾಗಿ ಅದನ್ನು ಸಮತೋಲನದಲ್ಲಿ ಕಾಪಾಡಬೇಕು. ಮಧುಮೇಹವಿದ್ದರೆ ಆಗ ದೇಹದ ಬೇರೆ ಅಂಗಾಂಗಗಳ ಮೇಲೆ ಕೂಡ ಪರಿಣಾಮವಾಗುವುದು. ಅದರಲ್ಲೂ ಮುಖ್ಯವಾಗಿ ದೇಹದಲ್ಲಿ ವಿಷಕಾರಿ ಅಂಶಗಳನ್ನು ಹೊರಗೆ ಹಾಕುವಂತಹ ಕಿಡ್ನಿಯ ಮೇಲೆ ಮಧುಮೇಹವು ಸಮಸ್ಯೆಯನ್ನು ಉಂಟು ಮಾಡುವುದು.

​ಕಟ್ಟುನಿಟ್ಟಿನ ಆಹಾರಕ್ರಮ ಅತ್ಯಗತ್ಯ

  • ಮಧುಮೇಹಿಗಳು ಕಿಡ್ನಿಯ ಆರೋಗ್ಯವನ್ನು ಕಾಪಾಡಲು ತಮ್ಮ ಆರೋಗ್ಯ ಕ್ರಮದಲ್ಲಿ ಕೆಲವು ಬದಲಾವಣೆ ಮಾಡಬೇಕು. ಅಂತಹ ಕೆಲವು ಆಹಾರಗಳು ಯಾವುದು ಎಂದು ನಾವು ನಿಮಗೆ ತಿಳಿಸಿಕೊಡಲಿದ್ದೇವೆ.
  • ಅಧಿಕ ಸೋಡಿಯಂ, ಪೊಟಾಶಿಯಂ ಮತ್ತು ಪೋಸ್ಪರಸ್ ಇರುವ ಆಹಾರವನ್ನು ಕಡಗಣಿಸಿ, ಇದೆಲ್ಲವೂ ಕಿಡ್ನಿಯ ಮೇಲೆ ಪರಿಣಾಮ ಬೀರುವುದು.
  • ಪ್ರೋಟೀನ್ ಅಧಿಕವಾಗಿ ಇರುವ ಮಾಂಸ ಮತ್ತು ಹಾಲಿನ ಉತ್ಪನ್ನಗಳು ಕಲ್ಮಷವಾಗಿ ರಕ್ತದಲ್ಲಿ ಸೇರಿಕೊಳ್ಳುವುದು. ಇದನ್ನು ಕಿಡ್ನಿಯು ಹೊರಗೆ ಹಾಕುವುದು. ಹೀಗಾಗಿ ಪ್ರೋಟೀನ್ ಅಧಿಕವಾಗಿ ಇರುವ ಆಹಾರವನ್ನು ಸೇವನೆ ಮಾಡಿದರೆ, ಅದು ಕಿಡ್ನಿ ಮೇಲೆ ಒತ್ತಡ ಹಾಕುವುದು ಮತ್ತು ಕಿಡ್ನಿಯ ಕ್ರಿಯೆಯು ವೇಗವಾಗಿ ತಗ್ಗುವುದು. ಮಧುಮೇಹಿಗಳು ಅತ್ಯಧಿಕ ಪ್ರೋಟೀನ್ ಸೇವನೆ ಮಾಡುವುದನ್ನು ಕಡೆಗಣಿಸಿ.

​ಈ ವಿಷ್ಯಗಳು ನೆನಪಿರಲಿ....

  • ಅಧಿಕ ರಕ್ತದೊತ್ತಡವು ಇರುವಂತಹ ಜನರು ದಿನಕ್ಕೆ 1500 ಮಿ.ಗ್ರಾಂ.ಗಿಂತ ಅಧಿಕ ಸೋಡಿಯಂ ಸೇವನೆ ಮಾಡಬಾರದು. ಸೋಡಿಯಂ ಮುಕ್ತ ಅಥವಾ ಕಡಿಮೆ ಸೋಡಿಯಂ ಇರುವ ಆಹಾರವನ್ನು ಸೇವನೆ ಮಾಡಿದರೆ ತುಂಬಾ ಒಳ್ಳೆಯದು. ಲಿಂಬೆ ರಸ, ಉಪ್ಪು ಇಲ್ಲದೆ ಇರುವ ಮಿಶ್ರಣ ಮತ್ತು ಕರಿಮೆಣಸಿನ ಸಾಸ್ ನ್ನು ಸೇವನೆ ಮಾಡಿದರೆ ಒಳ್ಳೆಯದು.
  • ದೇಹದಲ್ಲಿ ಪೊಟಾಶಿಯಂ ಮತ್ತು ಸೀರಮ್ ನ್ನು ಯಾವಾಗಲೂ ಗಮನಿಸುತ್ತಿರಬೇಕು. ಅಧಿಕ ಪೊಟಾಶಿಯಂ ಮತ್ತು ತುಂಬಾ ಕಡಿಮೆ ಪೊಟಾಶಿಯಂ ಇದ್ದರೆ ಅದು ಸಮಸ್ಯೆಯಾಗುವುದು. ಪೊಟಾಶಿಯಂ ಹೃದಯ ಬಡಿತವನ್ನು ನಿಯಂತ್ರಣದಲ್ಲಿ ಇಡುವುದು ಮತ್ತು ಸ್ನಾಯುಗಳು ಸರಿಯಾಗಿ ಕೆಲಸ ಮಾಡಲು ಸಹಕಾರಿ.
  • ಕಿಡ್ನಿಗೆ ಹಾನಿಯಾದರೆ ಆಗ ದೇಹದಲ್ಲಿ ಪೊಟಾಶಿಯಂ ಹೆಚ್ಚಾಗುವುದು ಮತ್ತು ಇದರಿಂದಾಗಿ ಹೃದಯದ ಸಮಸ್ಯೆಗಳು ಕಾಡಬಹುದು. ಪೊಟಾಶಿಯಂ ಕೆಲವೊಂದು ಬಗೆಯ ಹಣ್ಣುಗಳು ಹಾಗೂ ತರಕಾರಿಗಳಲ್ಲಿ ಕಂಡುಬರುವುದು. ಇದನ್ನು ಕಡಿಮೆ ಮಾಡಿದರೆ ಸೂಕ್ತ.
  • ದೀರ್ಘಕಾಲಿಕ ಕಿಡ್ನಿ ಸಮಸ್ಯೆಯು ಇರುವ ಜನರು ನೀರು ಸೇವನೆಯನ್ನು ಮಿತವಾಗಿಡಬೇಕು. ಕಿಡ್ನಿಗೆ ಹಾನಿಯಾದರೆ ಆಗ ಅತಿಯಾದ ದ್ರವಾಂಶವನ್ನು ಹೊರಗೆ ಹಾಕಲು ತೊಂದರೆ ಆಗುವುದು. ದೇಹದಲ್ಲಿ ದ್ರವಾಂಶವು ಶೇಖರಣೆ ಆಗುವುದು ಮತ್ತು ಹೃದಯಕ್ಕೆ ತೊಂದರೆ ಉಂಟು ಮಾಡುವುದು. ಹೀಗಾಗಿ ಮಿತವಾಗಿ ನೀರಿನಾಂಶವನ್ನು ಸೇವನೆ ಮಾಡಿ.
  • ಆಹಾರದಲ್ಲಿನ ಬದಲಾವಣೆಗಳ ಜತೆಗೆ ಕೆಲವೊಂದು ದೈಹಿಕ ಚಟುವಟಕೆಗಳು ಹಾಗೂ ಜೀವನಶೈಲಿ ಬದಲಾವಣೆ ಮಾಡಿಕೊಂಡರೆ ಅದು ಒಳ್ಳೆಯದು.

ಇದೆಲ್ಲಾ ಕಿಡ್ನಿ ಸ್ಟೋನ್ ಸಮಸ್ಯೆಯ ಲಕ್ಷಣಗಳು! ನಿರ್ಲಕ್ಷಿಸಬೇಡಿ...

​ದೈಹಿಕ ಚಟುವಟಿಕೆ

ದೈಹಿಕ ಚಟುವಟಿಕೆಯಿಂದ ದೇಹದಲ್ಲಿ ಇನ್ಸುಲಿನ್ ಬಳಸಿಕೊಳ್ಳಲು ನೆರವಾಗುವುದು ಮತ್ತು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿ ಇಡುವುದು.

​ದೇಹದ ತೂಕ ಸಮತೋಲನ

ದೇಹದ ತೂಕವನ್ನು ಆರೋಗ್ಯವಾಗಿಟ್ಟುಕೊಂಡರೆ ಆಗ ಇದು ಖಂಡಿತವಾಗಿಯೂ ರಕ್ತದಲ್ಲಿ ಗ್ಲುಕೋಸ್ ಮಟ್ಟದ ಮೇಲೆ ಪರಿಣಾಮ ಬೀರುವುದು ಮತ್ತು ಕಿಡ್ನಿಗೆ ನೆರವಾಗುವುದು. ದೇಹದ ಬೇರೆ ಅಂಗಾಂಗಗಳು ಕೂಡ ಸರಿಯಾದ ರೀತಿ ಕೆಲಸ ಮಾಡಲು ಇದು ಸಹಕಾರಿ.

​ಧೂಮಪಾನ, ತಂಬಾಕು

ಧೂಮಪಾನ ಮತ್ತು ತಂಬಾಕು ಸೇವನೆ ಕಡಿಮೆ ಮಾಡಿದರೆ, ಅದರಿಂದ ಖಂಡಿತವಾಗಿಯೂ ಇಂತಹ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಧೂಮಪಾನವು ಹಲವಾರು ರೀತಿಯ ಅನಾರೋಗ್ಯ ಸಮಸ್ಯೆಗಳನ್ನು ದೂರ ಮಾಡುವುದು. ಇದರಿಂದ ಕಿಡ್ನಿಯ ಸಮಸ್ಯೆಯ ಅಪಾಯವು ಕಡಿಮೆ ಆಗುವುದು.

ಧೂಮಪಾನ-ತಂಬಾಕು ಸೇವನೆಯಿಂದ ದೂರವಿರಿ, ಇಲ್ಲಾಂದ್ರೆ ಕ್ಯಾನ್ಸರ್ ಪಕ್ಕಾ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ