ಆ್ಯಪ್ನಗರ

ಹಾವು ಕಚ್ಚಿದಾಗ ಗಾಬರಿ ಬೇಡ, ಇಷ್ಟು ಮಾಡಿ ಸಾಕು ಎನ್ನುತ್ತಾರೆ ವೈದ್ಯರು

ಹಾವಿನ ಕಡಿತ ಯಾವಾಗ, ಎಲ್ಲಿ ಆಗುವುದೆಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ಪ್ರಾಣಾಪಾಯದಿಂದ ಪಾರಾಗಲು ವೈದ್ಯರ ಬಳಿ ಹೋಗುವ ಮೊದಲು ಏನು ಮಾಡಬಹುದು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

Vijaya Karnataka Web 29 Sep 2022, 1:02 pm
ವಿಷಕಾರಿ ಹುಳು, ಪ್ರಾಣಿಗಳು ಎಲ್ಲಿ ಬೇಕಾದರೂ ಕಾಣಸಿಗುತ್ತವೆ. ಕೆಲವೊಮ್ಮೆ ಅಪಾಯಕಾರಿಯಾದ ಪ್ರಾಣಿಗಳು ಕಚ್ಚುವ ಮೂಲಕ ಜೀವಕ್ಕೇ ಕುತ್ತು ಬರಬಹುದು. ಅಂತಹ ಪ್ರಾಣಿಗಳಲ್ಲಿ ಹಾವು ಕೂಡ ಒಂದು. ಓಡಾಡುವಾಗ ನಮಗೇ ಅರಿವಿಲ್ಲದೆ ಹಾವು ಕಚ್ಚಬಹುದು.
Vijaya Karnataka Web doctor explains how to treat during snake biting
ಹಾವು ಕಚ್ಚಿದಾಗ ಗಾಬರಿ ಬೇಡ, ಇಷ್ಟು ಮಾಡಿ ಸಾಕು ಎನ್ನುತ್ತಾರೆ ವೈದ್ಯರು


ವಿಷಕಾರಿ ಹಾವಾಗಲಿ ಅಥವಾ ಮಾಮೂಲಿ ಹಾವಾಗಲಿ ಯಾವುದೇ ಕಚ್ಚಿದರೂ ಕೂಡ ಮನುಷ್ಯನ ಜೀವಕ್ಕೆ ಅದು ಹಾನಿಯೆ. ಹೀಗಾಗಿ ಸೂಕ್ತ ಪ್ರಾಥಮಿಕ ಚಿಕಿತ್ಸೆಯ ಜೊತೆಗೆ ವೈದ್ಯರ ಚಿಕಿತ್ಸೆ ಪಡೆದುಕೊಳ್ಳುವುದು ಬಹಳ ಮುಖ್ಯ.

ಹಾಗಾದರೆ ಹಾವು ಕಚ್ಚಿದಾಗ ಏನು ಮಾಡಬೇಕು, ಅಪಾಯವನ್ನು ಹೇಗೆ ತಪ್ಪಿಸಬಹುದು ಎನ್ನುವ ಬಗ್ಗೆ ಆಯುರ್ವೇದ ವೈದ್ಯರಾದ ಡಾ. ಶರದ್‌ ಕುಲಕರ್ಣಿ ಮಾಹಿತಿ ನೀಡಿದ್ದಾರೆ ಇಲ್ಲಿದೆ ನೋಡಿ.


​ಧೈರ್ಯವಾಗಿರುವುದು ಮುಖ್ಯ

ಹಾವು ಕಚ್ಚಿದಾಗ ಮುಖ್ಯವಾಗಿ ಬೇಕಾಗಿರುವುದು ಧೈರ್ಯ. ಅಯ್ಯೋ ಏನೋ ಆಗಿಬಿಡುತ್ತದೆ ಎನ್ನುವ ಆತಂಕ ಬೇಡ. ಹಾವು ಕಚ್ಚಿದೆ ಎಂದು ಸುಖಾಸುಮ್ಮನೆ ಅತಿಯಾಗಿ ಗಾಬರಿಯಾದರೂ ಕೂಡ ಹಾವು ಕಚ್ಚಿದಾಗ ಕಾಣಿಸಿಕೊಳ್ಳುವ ಲಕ್ಷಣವೇ ಉಂಟಾಗುತ್ತದೆ. ಆದ್ದರಿಂದ ಹಾವು ಕಚ್ಚಿದೆ ಎಂದು ತಿಳಿದಾಗ ಮಾನಸಿಕವಾಗಿ ಧೈರ್ಯವಾಗಿರುವುದು ಮುಖ್ಯ ಎನ್ನುತ್ತಾರೆ ಡಾ. ಶರದ್‌.

​ವ್ಯಕ್ತಿಯನ್ನು ನೇರವಾಗಿ ಮಲಗಿಸಿ

ಹಾವು ಕಚ್ಚಿದಾಗ ವ್ಯಕ್ತಿ ಮೂರ್ಛೆ ಹೋಗದಂತೆ ನೋಡಿಕೊಳ್ಳುವುದು ಮುಖ್ಯ. ಅದೇ ರೀತಿ ಅವರನ್ನು ನೇರವಾಗಿ ಮಲಗಿಸಿ. ಏಕೆಂದರೆ ವಿಷ ಹೃದಯಕ್ಕೆ ಹೋಗಬಾರದು. ಹೃದಯ ಬಡಿತವನ್ನು ಪರೀಕ್ಷಿಸುತ್ತಿರಿ.

ಅದೇ ರೀತಿ ಹಾವು ಕಚ್ಚಿದ ಭಾಗದಲ್ಲಿ ಕಚ್ಚಿ ವಿಷ ತೆಗೆಯುವುದು ಅಥವಾ ಬಟ್ಟೆ ಕಟ್ಟುವುದು ಕೂಡ ಒಳ್ಳೆಯದಲ್ಲ ಎನ್ನುತ್ತಾರೆ ವೈದ್ಯರು

​ಸ್ವಚ್ಚಗೊಳಿಸಿ

ಹಾವು ಕಚ್ಚಿದ ಜಾಗವನ್ನು ಶುಚಿಗೊಳಿಸುವುದು ಬಹಳ ಮುಖ್ಯ. ಸೋಪಿನ ನೀರಿನಿಂದ ಮೊದಲು ಸ್ವಚ್ಛಗೊಳಿಸಿಕೊಳ್ಳಿ. ಇದರಿಂದ ಹೊರಗಿನಿಂದ ಧೂಳು ಇನ್ನಿತರ ವಸ್ತುಗಳು ತಾಗಿದ್ದರೆ ಅದನ್ನು ತೆಗೆಯಿರಿ. ನಂತರ ಒಂದು ಶುಭ್ರವಾದ ಬಟ್ಟೆಯಿಂದ ಅದಕ್ಕೆ ಬ್ಯಾಂಡೇಜ್‌ ಮಾಡಿ. ಆದರೆ ಗಟ್ಟಿಯಾಗಿ ಕಟ್ಟಬೇಡಿ.

​ಬಳೆ ಅಥವಾ ಇನ್ನಿತರ ವಸ್ತುಗಳಿದ್ದರೆ ತೆಗೆಯಿರಿ

ಸಾಮಾನ್ಯವಾಗಿ ಕಾಲು ಅಥವಾ ಕೈಗಳಿಗೆ ಒಡವೆ ಇನ್ನಿತರ ವಸ್ತುಗಳನ್ನು ಧರಿಸಿರುತ್ತೇವೆ. ಆದರೆ ಹಾವು ಕಚ್ಚಿದ ಸಂದರ್ಭದಲ್ಲಿ ಆ ಭಾಗ ಊದಿಕೊಳ್ಳುತ್ತದೆ. ಹೀಗಾಗಿ ಅಂತಹ ವಸ್ತುಗಳನ್ನು ತೆಗೆಯಿರಿ. ಇಲ್ಲವಾದರೆ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಅಲ್ಲದೆ ಬಳೆ ಅಥವಾ ಧರಿಸಿದ ವಸ್ತುಗಳು ಬಿಗಿಯಾಗಿ ನೋವು ಹೆಚ್ಚಾಗುತ್ತದೆ.

​ಆದಷ್ಟು ಬೇಗ ವೈದ್ಯರ ಭೇಟಿ

ಹಾವು ಕಚ್ಚಿದಾಗ ಉದ್ವೇಗಕ್ಕೆ ಒಳಗಾಗುವುದು, ಭಯ ಪಡುವುದನ್ನು ಮೊದಲು ತಪ್ಪಿಸಬೇಕು. ಅದೇ ರೀತಿ ಆದಷ್ಟು ಬೇಗ ಹತ್ತಿರದ ವೈದ್ಯರನ್ನು ಕಾಣುವುದು ಮುಖ್ಯವಾಗಿರುತ್ತದೆ. ಇದರಿಂದ ಪ್ರಾಣಕ್ಕೆ ಹಾನಿಯಾಗದಂತೆ ತಪ್ಪಿಸಬಹುದಾಗಿದೆ.

Dr. Sharad Kulkarni

BAMS, MS

Jeevottama Health - Ayurveda Clinic, Bengaluru

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ