ಆ್ಯಪ್ನಗರ

ದಿನಾ ನಿಂಬೆಹಣ್ಣಿನ ಪಾನಕ ಕುಡಿಯಬಾರದು ಕಾರಣ ಇಲ್ಲಿದೆ ನೋಡಿ...

ನೀವು ಸಹ ನಿಂಬೆಹಣ್ಣಿನ ನೀರನ್ನು ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಕುಡಿಯುತ್ತಿದ್ದರೆ, ಅದನ್ನು ಬಿಟ್ಟುಬಿಡಿ. ಶಾಕಿಂಗ್ ಸುದ್ದಿಯೊಂದು ಇಲ್ಲಿದೆ.

Vijaya Karnataka Web 19 Aug 2022, 11:50 am
ಪ್ರತಿ ದಿನ ಖಾಲಿ ಹೊಟ್ಟೆಯಲ್ಲಿ ನಿಂಬೆ ಹಣ್ಣಿನ ನೀರು ಕುಡಿಯುವ ಅಭ್ಯಾಸ ನೀವು ಕೂಡ ಮಾಡಿಕೊಂಡಿದ್ದೀರಾ? ಆದರೆ ದಿನ ಇದನ್ನು ಕುಡಿಯಬಾರದು ಎಂದು ವೈದ್ಯರು ಹೇಳುತ್ತಾರೆ. ಇತ್ತೀಚಿಗೆ ನಡೆದ ಕೆಲವೊಂದು ಸಂಶೋಧನೆಗಳು ಸಹ ಜನರಿಗೆ ಒಂದು ಅಭ್ಯಾಸವನ್ನು ತಪ್ಪಿಸಲು ಸೂಚನೆ ಕೊಡಲು ಮುಂದಾಗಿವೆ.
Vijaya Karnataka Web dont continue the habit of lemon water drinking in the morning daily
ದಿನಾ ನಿಂಬೆಹಣ್ಣಿನ ಪಾನಕ ಕುಡಿಯಬಾರದು ಕಾರಣ ಇಲ್ಲಿದೆ ನೋಡಿ...


ಹಾಗಾದರೆ ಆರೋಗ್ಯಕ್ಕೆ ಒಳ್ಳೆಯ ಪ್ರಯೋಜನಗಳನ್ನು ಒದಗಿಸುವ ನಿಂಬೆಹಣ್ಣು ಹೀಗೇಕೆ? ಈ ಪ್ರಶ್ನೆ ನಿಮಗೂ ಕೂಡ ಬಂದಿರಬಹುದು. ವಿಟಮಿನ್ ಸಿ ಅಂಶ ಹೆಚ್ಚಾಗಿರುವ ಈ ಸಿಟ್ರಸ್ ಹಣ್ಣು ಹೆಚ್ಚಿನ ಲಾಭ ಕೊಡುವುದರ ಜೊತೆಗೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಬದಲಾಗಿ ಯಾವ ತೊಂದರೆ ನೀಡಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಹುಳುಕು ಹಲ್ಲು ಆಗಬಹುದು!

  • ಪ್ರತಿದಿನ ನಿಂಬೆಹಣ್ಣಿನ ನೀರು ಕುಡಿಯುತ್ತಾ ಹೋದರೆ ಕ್ರಮೇಣವಾಗಿ ಹಲ್ಲುಗಳು ಹಾಳಾಗುತ್ತವೆ. ಮುಖ್ಯವಾಗಿ ಹಲ್ಲುಗಳ ಮೇಲ್ಪದರ ಹಾಳಾಗುತ್ತದೆ ಎಂದು ಹೇಳುತ್ತಾರೆ.
  • ಇದಕ್ಕೆ ಕಾರಣವೆಂದರೆ ನಿಂಬೆಹಣ್ಣಿನ ಜ್ಯೂಸ್ ನಲ್ಲಿ ಕಂಡುಬರುವ ಆಮ್ಲೀಯತೆ. ನಿಂಬೆ ಹಣ್ಣಿನ ಜ್ಯೂಸ್ ಕುಡಿದ ನಂತರದಲ್ಲಿ ನೀವು ಸಾಧಾರಣ ನೀರಿನಲ್ಲಿ ಬಾಯಿ ಮುಕ್ಕಳಿಸುವುದು ಒಳ್ಳೆಯದು.

ಕೆಲವರಿಗೆ ಇದರಿಂದ ಎದೆಯುರಿ ಬರಬಹುದು

ಹೌದು, ನಿಂಬೆಹಣ್ಣಿನ ನೀರನ್ನು ಸ್ವಲ್ಪ ಹೆಚ್ಚಾಗಿ ಕುಡಿದರೆ ವಾಕರಿಕೆ ಮತ್ತು ಎದೆಯುರಿ ಬರುತ್ತದೆ. ಏಕೆಂದರೆ ಇದರಲ್ಲಿ ಆಮ್ಲಿಯತೆ ಹೆಚ್ಚಾಗಿರುತ್ತದೆ. ಅದರಲ್ಲೂ ವಿಶೇಷವಾಗಿ ವಯಸ್ಸಾದವರಿಗೆ ಮತ್ತು ಗರ್ಭಿಣಿ ಮಹಿಳೆಯರಿಗೆ ಇದು ಸಾಮಾನ್ಯವಾದ ಸಂಗತಿಯಾಗುತ್ತದೆ.

ಹೊಟ್ಟೆ ಕೆಟ್ಟು ಹೋಗುವ ಸಾಧ್ಯತೆಯಿದೆ

ನಿಂಬೆ ಹಣ್ಣಿನ ನೀರು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಂಡರೆ ಹೊಟ್ಟೆ ಕಿವುಚಿದ ಅನುಭವ ಸಹ ಆಗುತ್ತದೆ. ಕೆಲವರಿಗೆ ಇದರಿಂದ ಗ್ಯಾಸ್ಟ್ರಿಕ್ ಸಹ ಆಗಬಹುದು. ಅದೇನೇ ಇರಲಿ ಯಾವುದಕ್ಕೂ ಈ ವಿಚಾರದಲ್ಲಿ ನಿಯಂತ್ರಣವನ್ನು ಕಾಯ್ದುಕೊಳ್ಳುವುದು ಒಳ್ಳೆಯದು.

ಮೂತ್ರ ವಿಸರ್ಜನೆ ಮಾಡಬೇಕು ಎನಿಸುವುದು

  • ಕೆಲವರಿಗೆ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಕಂಡುಬರುತ್ತದೆ. ನಿಂಬೆಹಣ್ಣಿನ ನೀರನ್ನು ಪ್ರತಿದಿನ ಕುಡಿಯುವ ಅಭ್ಯಾಸ ಇದ್ದವರಿಗೆ ಅಸ್ಕಾರ್ಬಿಕ್ ಆಮ್ಲ ದೇಹಕ್ಕೆ ಹೆಚ್ಚು ಸೇರುತ್ತದೆ ಮತ್ತು ಇದು ಮೂತ್ರವರ್ಧಕ ಕೂಡ.
  • ಹೀಗಾಗಿ ಇದು ಪ್ರಮುಖವಾಗಿ ಕಿಡ್ನಿಗಳ ಮೇಲೆ ಪ್ರಭಾವ ಬೀರುತ್ತದೆ ಮತ್ತು ಕಿಡ್ನಿಗಳಿಂದ ಹೆಚ್ಚಿನ ನೀರನ್ನು ಹೊರಹಾಕಲು ಅನುಕೂಲ ಮಾಡಿಕೊಡುತ್ತದೆ. ಸಾಕಷ್ಟು ಬಾರಿ ಬಾತ್ರೂಮ್ಗೆ ಹೋಗಬೇಕು ಎನಿಸುವಂತೆ ಆಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ