ಆ್ಯಪ್ನಗರ

ಬೆಳಗ್ಗೆ ಒಂದು ಲೋಟ ಹಾಲು ಕುಡಿದರೆ, ಮಧುಮೇಹ ಕಂಟ್ರೋಲ್‪ಗೆ ಬರುತ್ತೆ!

ಹಾಲು ಅಮೃತವಿದ್ದಂತೆ. ಹಲವಾರು ಕಾಯಿಲೆಗಳಿಗೆ ಇದು ರಾಮಬಾಣ. ಸಕ್ಕರೆ ಕಾಯಿಲೆಗೂ ಕೂಡ.

Vijaya Karnataka Web 25 Aug 2021, 5:50 pm
ಹಾಲಿನಲ್ಲಿ ಕ್ಯಾಲ್ಸಿಯಂ ಅಂಶ ಮತ್ತು ಇನ್ನಿತರ ಹೆಚ್ಚಿನ ಪೌಷ್ಟಿಕ ಸತ್ವಗಳು ಸಿಗುವುದರಿಂದ ಇದು ದೇಹದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಅದರಂತೆ ಹಲವಾರು ಕಾಯಿಲೆಗಳು ಹಾಲು ಕುಡಿಯುವುದರಿಂದ ಗುಣ ಕಾಣುತ್ತವೆ.
Vijaya Karnataka Web drink one glass of milk in the morning to reduce blood glucose levels
ಬೆಳಗ್ಗೆ ಒಂದು ಲೋಟ ಹಾಲು ಕುಡಿದರೆ, ಮಧುಮೇಹ ಕಂಟ್ರೋಲ್‪ಗೆ ಬರುತ್ತೆ!


ಮುಖ್ಯವಾಗಿ ಕ್ಯಾಲ್ಸಿಯಂ ಅಂಶದ ಪ್ರಭಾವದಿಂದ ದೇಹದಲ್ಲಿ ಮೂಳೆಗಳ ಸದೃಢತೆ ಸಿಗುತ್ತದೆ. ಆದರೆ ದೊಡ್ಡವರಿಗೆ ಸಕ್ಕರೆ ಕಾಯಿಲೆ ಕೂಡ ಹಾಲು ಕುಡಿಯುವುದರಿಂದ ನಿಯಂತ್ರಣಕ್ಕೆ ಬರುತ್ತದೆ ಎಂಬುದು ತಿಳಿದುಬಂದಿದೆ.

​ಖಾಲಿ ಹೊಟ್ಟೆಯಲ್ಲಿಒಂದು ಲೋಟ ಹಾಲು ಕುಡಿಯಿರಿ

  • ಖಾಲಿ ಹೊಟ್ಟೆಯಲ್ಲಿ ಬೆಳಗಿನ ಸಮಯದಲ್ಲಿ ಕುಡಿಯುವ ಒಂದು ಲೋಟ ಹಾಲು ದೇಹಕ್ಕೆ ಉಪಹಾರದ ರೀತಿ ಕೆಲಸ ಮಾಡುತ್ತದೆ ಅಷ್ಟೇ ಅಲ್ಲದೆ ನಮ್ಮ ದೇಹದಲ್ಲಿ ಶಕ್ತಿಯನ್ನು ಮತ್ತು ಸದೃಢತೆಯನ್ನು ಹೆಚ್ಚು ಮಾಡುತ್ತದೆ.
  • ಹಾಲಿನಲ್ಲಿ ಕಂಡುಬರುವ ಅಪಾರ ಪ್ರಮಾಣದ ಪ್ರೊಟೀನ್ ಅಂಶ ನಮ್ಮ ದೇಹದ ರಕ್ತದಲ್ಲಿನ ಗ್ಲೂಕೋಸ್ ಅಂಶವನ್ನು ನಿರ್ವಹಣೆ ಮಾಡುವುದರ ಜೊತೆಗೆ ಮಾಂಸಖಂಡಗಳ ಅಭಿವೃದ್ಧಿಯಲ್ಲಿ ನೆರವಾಗುತ್ತದೆ.

​ನಾರಿನ ಅಂಶ

ಹಾಲಿನಲ್ಲಿ ಹೆಚ್ಚಿನ ಪ್ರಮಾಣದ ನಾರಿನ ಅಂಶ ಹಾಲಿನಲ್ಲಿ ಇರುವ ಕಾರಣ ಸೇವನೆ ಮಾಡುವ ಆಹಾರ ಪದಾರ್ಥದಲ್ಲಿ ಕಂಡುಬರುವ ಸಕ್ಕರೆ ಅಂಶವನ್ನು ನಿಧಾನವಾಗಿ ಸಂಸ್ಕರಿಸಿ ಅದರಲ್ಲಿರುವ ಗ್ಲೂಕೋಸ್ ಅಂಶವನ್ನು ದೇಹಕ್ಕೆ ನಿಧಾನವಾಗಿ ಹೀರಿಕೊಳ್ಳುತ್ತದೆ.

​ಸಂಶೋಧಕರ ಪ್ರಕಾರ

  • ಸಂಶೋಧಕರು ಹೇಳುವ ಹಾಗೆ ಮಧುಮೇಹ ಮತ್ತು ಬೊಜ್ಜಿನ ಸಮಸ್ಯೆ ಇಂದು ಒಬ್ಬ ವ್ಯಕ್ತಿಯನ್ನು ಸಂಪೂರ್ಣವಾಗಿ ಆರೋಗ್ಯದ ವಿಚಾರದಲ್ಲಿ ಹಾಳು ಮಾಡುವ ನಿಟ್ಟಿನಲ್ಲಿ ಕುಖ್ಯಾತಿ ಪಡೆದಿದೆ.
  • ಹಾಗಾಗಿ ಮೊದಲು ಇವುಗಳ ನಿಯಂತ್ರಣ ಮಾಡಿಕೊಳ್ಳಬೇಕಾದರೆ ಪರಿಣಾಮಕಾರಿಯಾದ ಆಹಾರಪದ್ಧತಿಯನ್ನು ಪ್ರತಿದಿನವೂ ಅಭ್ಯಾಸ ಮಾಡಿಕೊಳ್ಳಬೇಕು.

​ಮಧುಮೇಹ ಇದ್ದವರು ಬೆಳಿಗ್ಗೆ ಹಾಲು ಕುಡಿಯಲೇಬೇಕು...

  • ದಿನಬಳಕೆಯ ಕೆಲವೊಂದು ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಮಧುಮೇಹ ನಿರ್ವಹಣೆಯಾಗುತ್ತದೆ ನಿಜ. ಆದರೆ ಹಾಲಿನಂತಹ ಆರೋಗ್ಯಕರವಾದ ದ್ರವ ಅಂಶಗಳನ್ನು ಬೆಳಗಿನ ಸಮಯದಲ್ಲಿ ಸೇವನೆ ಮಾಡುವುದರಿಂದ ಸಿಗುವ ಫಲಿತಾಂಶದ ಪ್ರಮಾಣ ಹೆಚ್ಚಾಗಿರುತ್ತದೆ.
  • ಅದರಲ್ಲಿ ಮುಖ್ಯವಾಗಿ ಕಾರ್ಬೋಹೈಡ್ರೇಟ್ ಅಂಶಗಳು ಹೆಚ್ಚು ಕಂಡುಬರುವುದರಿಂದ ಮತ್ತು ಹೆಚ್ಚಿನ ಪ್ರಮಾಣದ ಪ್ರೋಟಿನ್ ಅಂಶ ಇರುವುದರಿಂದ ದೇಹದಲ್ಲಿ ಗ್ಲೂಕೋಸ್ ಅಂಶದ ಅತ್ಯುತ್ತಮ ನಿರ್ವಹಣೆಗೆ ಇದು ಸಹಾಯ ಮಾಡಲಿದೆ.
  • ಮಧುಮೇಹ ಸಮಸ್ಯೆ ಹೊಂದಿರುವವರು ಬೆಳಗಿನ ಆಹಾರಪದ್ಧತಿಯ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಉಗುರುಬೆಚ್ಚಗಿನ ಹಾಲಿನ ಸೇವನೆಗೆ ಹೆಚ್ಚಿನ ಆದ್ಯತೆ ಕೊಡಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ