ಆ್ಯಪ್ನಗರ

ಮಕ್ಕಳಲ್ಲಿ ಮೆದುಳಿನ ಜ್ವರದ ಲಕ್ಷಣಗಳೇನು?

ಯಾವ ಸಂದರ್ಭದಲ್ಲಿ ಮೆದುಳಿನ ಜ್ವರದ ಅಪಾಯವಿದೆ? ಮೆದುಳಿನ ಜ್ವರದ ಲಕ್ಷಣಗಳೇನು? ಇದು ಕಂಡು ಬಂದ ತಕ್ಷಣ ಏನು ಮಾಡಬೇಕು ಎಂಬುವುದರ ಬಗ್ಗೆ ಮಾಹಿತಿ ನೋಡಿ ಇಲ್ಲಿದೆ.

TIMESOFINDIA.COM 10 Sep 2020, 6:07 pm
ಮೆದುಳಿನ ಜ್ವರವು ನರವೈಜ್ಞಾನಿಕ ಕಾಯಿಲೆಯಾಗಿದ್ದು, ಇದು ವೈರಸ್ ಅಥವಾ ಬ್ಯಾಕ್ಟೀರಿಯಾದ ನಿರ್ದಿಷ್ಟ ಒತ್ತಡವು ದೇಹದ ಮೇಲೆ ದಾಳಿ ಮಾಡಿದಾಗ ಮೆದುಳು ಮತ್ತು ಲಿಂಬಿಕ್ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. "ಎನ್ಸೆಫಾಲಿಟಿಸ್ ಎಂಬುದು ಮೆದುಳಿನ ಅಂಗಾಂಶದ ಉರಿಯೂತವಾಗಿದೆ. ಒಮ್ಮೆ ವೈರಸ್ ರಕ್ತದೊಳಗೆ ಪ್ರವೇಶಿಸಿದಾಗ, ಅದು ಮೆದುಳಿನ ಅಂಗಾಂಶಗಳಿಗೆ ಹೋಗಲು ಪ್ರಾರಂಭಿಸುತ್ತದೆ . ಸಿಗ್ನಲ್ ನಮ್ಮ ರೋಗನಿರೋಧಕ ವ್ಯವಸ್ಥೆಗೆ ತಲುಪಿದ ತಕ್ಷಣ, ಅದು ಇದಕ್ಕೆ ಪ್ರತಿಕ್ರಿಯೆಯನ್ನು ಉಂಟುಮಾಡುತ್ತದೆ ಇದರಿಂದ ಮೆದುಳು ಉಬ್ಬುತ್ತದೆ.
Vijaya Karnataka Web encephalities


ಈ ಕಾಯಿಲೆ ಹೆಚ್ಚಾಗಿ ಕಂಡುಬರಲು ಕಾರಣವೆಂದರೆ ಪೋಷಣೆಯ ಕೊರತೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಹೊಂದಾಣಿಕೆಯಾಗುವುದಿಲ್ಲ ಮತ್ತು ನಿಮ್ಮ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ. ಯಾವ ಸಂದರ್ಭದಲ್ಲಿ ಮೆದುಳಿನ ಜ್ವರದ ಅಪಾಯವಿದೆ? ಮೆದುಳಿನ ಜ್ವರದ ಲಕ್ಷಣಗಳೇನು? ಇದು ಕಂಡು ಬಂದ ತಕ್ಷಣ ಏನು ಮಾಡಬೇಕು ಎಂಬುವುದರ ಬಗ್ಗೆ ಮಾಹಿತಿ ನೋಡಿ ಇಲ್ಲಿದೆ:

ಮಕ್ಕಳಲ್ಲಿ ಕಂಡು ಬರುವ ಹೊಟ್ಟೆನೋವಿಗೆ ಕಾರಣಗಳು, ಲಕ್ಷಣಗಳು ಇವು

ಯಾವ ಮಕ್ಕಳಲ್ಲಿ ಮೆದುಳಿನ ಜ್ವರ ಅಪಾಯ ಹೆಚ್ಚು?
* ತೀವ್ರ ಉಸಿರಾಟದ ತೊಂದರೆ
* ವಾಂತಿ, ಭೇದಿ, ತಲೆಸುತ್ತು
* ಮೀಸೆಲ್ಸ್
* ಚಿಕನ್‌ಪಾಕ್ಸ್
* ರೇಬಿಸ್‌
* ಸರ್ಪಸುತ್ತು
* ಟಿಬಿ
* ಲೈಮ್ ರೋಗ


ಮೆದುಳಿನ ಜ್ವರದ ಲಕ್ಷಣಗಳು
* ಜ್ವರ
* ತಲೆನೋವು
* ಮಗುವಿನ ತಲೆಯಲ್ಲಿ ಮೃದುವಾದ ಗುಳ್ಳೆಗಳು ಏಳುವುದು
* ಬೆಳಕಿಗೆ ಕಣ್ಣು ತೆರೆಯಲು ಸಾಧ್ಯವಾಗದಿರುವುದು
* ಕುತ್ತಿಗೆ ಬಿಗಿಯಾಗುವುದು
* ಕೋಮಾವಸ್ಥೆ
* ತ್ವಚೆಯಲ್ಲಿ ಗುಳ್ಳೆಗಳು
* ನಡೆದಾಡಲು ತೊಂದರೆ
* ಹಸಿವು ಇಲ್ಲದಿರುವುದು
* ಮಾತನಾಡುವಾಗ ತೊದಲುವುದು
* ಮೈಯಲ್ಲಿ ನಡುಕ

ಮಕ್ಕಳಿಗೂ ಕಾಡುವ ಟೈಪ್-1 ಮಧುಮೇಹದ ಕೆಲವು ಲಕ್ಷಣಗಳು

ಈ ಲಕ್ಷಣಗಳು ಕಂಡು ಬಂದರೆ ಸಮಯ ವ್ಯರ್ಥ ಮಾಡದೆ ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಿರಿ.
ಆಸ್ಪತ್ರೆಯಲ್ಲಿ ಎಂಆರ್‌ಐ, ಸಿಟಿ ಸ್ಕ್ಯಾನ್,ಮಲ ಮೂತ್ರ ಪರೀಕ್ಷೆ, ರಕ್ತ ಪರೀಕ್ಷೆ, ಕಫ ಪರೀಕ್ಷೆ, EEG, ಸ್ಪೈನಲ್ ಟ್ಯಾಪ್, ಬ್ರೈನ್ ಬಯೋಸ್ಪೈ

ಮೆದುಳು ಜ್ವರ ಚಿಕಿತ್ಸೆಯ ನಂತರ ಏನು ಮಾಡಬೇಕು?
ಚಿಕಿತ್ಸೆಯ ನಂತರ ಮಕ್ಕಳು ಗುಣಮುಖವಾದರೂ ಕೆಲವೊಂದು ಮಕ್ಕಳಿಗೆ ನರಗಳಲ್ಲಿ ತೊಂದರೆ ಉಂಟಾಗಿರುತ್ತದೆ. ಅಂಥ ಮಕ್ಕಳಿಗೆ ಸ್ಪೀಚ್‌ ಥೆರಪಿ, ದೈಹಿಕ ವ್ಯಾಯಾಮ ಇವುಗಳ ಅಗತ್ಯ ಬೀಳಬಹುದು.

ಇದರಿಂದ ಪಾರಾಗುವುದು ಹೇಗೆ?
ಸೊಳ್ಳೆಯಿಂದ ಹರಡುವ ರೋಗವನ್ನು ತಡೆಯಲು ಮೊದಲು ಮಾಡಬೇಕಾದದ್ದು ನಿಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛ ಗೊಳಿಸುವುದು ಮತ್ತು ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ನಿಲ್ಲಿಸುವುದು. ಅಲ್ಲದೆ ಸಾಕಷ್ಟು ನೀರು ಕುಡಿಯುವಂತೆ ವೈದ್ಯರು ಸೂಚಿಸುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ