ಆ್ಯಪ್ನಗರ

ಆರೋಗ್ಯ ಟಿಪ್ಸ್: ಟೂತ್‌ ಜ್ಯುವೆಲ್ಲರಿ ಬಳಸುವ ಮುನ್ನ ಎರಡೆರಡು ಬಾರಿ ಯೋಚಿಸಿ

ದಂತ ಆಭರಣವು ಆಧುನಿಕ ಯುವಜನತೆಯ ವ್ಯಕ್ತಿತ್ವದ ಅಭಿವ್ಯಕ್ತಿಗೆ, ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು, ಆಕರ್ಷಕವಾಗಿ ಕಾಣಲು, ವಿಭಿನ್ನತೆಯನ್ನು ಅಭಿವ್ಯಕ್ತಿಗೊಳಿಸಲು ಸಹಕಾರಿಯಾಗಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಆದರೆ ಇವುಗಳನ್ನು ಬಳಸುವಾಗ ತಜ್ಞರ ಸಲಹೆ ಪಡೆಯಿರಿ.

Vijaya Karnataka Web 21 Feb 2020, 3:05 pm
ಇತ್ತೀಚೆಗೆ ಯುವ ಜನತೆಯನ್ನು ವ್ಯಾಪಕವಾಗಿ ಸೆಳೆಯುತ್ತಿರುವ ಟೂತ್‌ ಜುವೆಲರಿ ವ್ಯಕ್ತಿತ್ವ ಸೂಚಕ, ಸೌಂದರ‍್ಯವನ್ನು ಇಮ್ಮಡಿಸುತ್ತದೆ. ಆದರೆ ಇದರಿಂದ ಉಂಟಾಗುವ ಅಡ್ಡ ಪರಿಣಾಮಗಳ ಬಗ್ಗೆಯೂ ಎಚ್ಚರವಹಿಸಿ.
Vijaya Karnataka Web ಆರೋಗ್ಯ ಟಿಪ್ಸ್: ಟೂತ್‌ ಜ್ಯುವೆಲ್ಲರಿ ಬಳಸುವ ಮುನ್ನ ಎರಡೆರಡು ಬಾರಿ ಯೋಚಿಸಿ


ಫ್ಯಾಷನ್‌ ಟ್ರೆಂಡ್‌ನಲ್ಲಿಇದೀಗ ದಂತ ಆಭರಣಗಳು ಗಮನ ಸೆಳೆಯುತ್ತಿವೆ. ಈ ಮೂಲಕ ಈ ಜುವೆಲರಿಗಳು ಕಾಸ್ಮೆಟಿಕ್‌ ಡೆಂಟಿಸ್ಟ್ರಿಯ ಅವಿಭಾಜ್ಯ ಅಂಗವಾಗಿ ಹೊರಹೊಮ್ಮಿದೆ.

ಬಾಯಿ ಹುಣ್ಣು ಹೋಗಲಾಡಿಸುವ ಅಗ್ಗದ ಮನೆಮದ್ದುಗಳು

ದಂತ ಆಭರಣ ಎಂದರೆ ಹರಳುಗಳನ್ನು ದಂತ ಪಂಕ್ತಿಯ ಮೇಲೆ ಕೂರಿಸುವುದು. ಇದರಲ್ಲಿಡೈಮಂಡ್‌ ಅಥವಾ ಹರಳುಗಳನ್ನು ಒಬ್ಬ ವ್ಯಕ್ತಿಯ ದಂತ ಪಂಕ್ತಿಯಲ್ಲಿನ ಪ್ರಮುಖವಾದ ಹಲ್ಲಿಗೆ ಜೋಡಣೆ ಮಾಡುವುದನ್ನು ಟೂತ್‌ ಜೆಮ್‌ ಅಥವಾ ಟೂತ್‌ ಡ್ಯಾಸಲರ್‌ ಎಂದು ಕೂಡ ಕರೆಯುತ್ತಾರೆ. ಟೂತ್‌ ಜೆಮ್‌ಗಳಲ್ಲಿಸ್ಕೆತ್ರೖಸ್‌ ಹಾಗೂ ಸಫೈರ್‌ ಕ್ರಿಸ್ಟಲ್‌ಗಳನ್ನು ಬಳಸುತ್ತಾರೆ.

ಇದು ವ್ಯಕ್ತಿಯ ಕಿರುನಗೆಯ ಗುಣಮಟ್ಟವನ್ನು, ವ್ಯಕ್ತಿಯ ಸೌಂದರ್ಯವನ್ನು ಇಮ್ಮಡಿಸುತ್ತದೆ. ಇವುಗಳು ಸಾಮಾನ್ಯವಾಗಿ ಬಿಳಿ ಅಥವಾ ನೀಲಿ ಬಣ್ಣದಾಗಿರುತ್ತದೆ. ಡ್ಯಾಸ್ಲರ್ಸ್ ಎಂಬುವು ವಿಶೇಷವಾಗಿ ದಂತ ಪಂಕ್ತಿಗೆ ಜೋಡಣೆ ಮಾಡಲು ತಯಾರಾಗಿದ್ದು ಅದು ಹಲ್ಲಿಗೆ ಅಂಟುವಂತೆ ತಯಾರು ಮಾಡಲಾಗುತ್ತದೆ. ಈ ಆಭರಣಗಳು ಸ್ಟಾರ್‌, ತ್ರಿಕೋನ, ರೌಂಡ್‌, ಹೃದಯದ ಆಕಾರ ಮುಂತಾದ ಅನೇಕ ಆಕಾರಗಳಲ್ಲಿಲಭ್ಯವಿರುತ್ತವೆ.

ಹಲ್ಲುಗಳಲ್ಲಿನ ಹಳದಿ ಬಣ್ಣ ತೆಗೆಯಲು ಸರಳ ಸೂತ್ರ

ದಂತ ಆಭರಣವು ಆಧುನಿಕ ಯುವಜನತೆಯ ವ್ಯಕ್ತಿತ್ವದ ಅಭಿವ್ಯಕ್ತಿಗೆ, ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು, ಆಕರ್ಷಕವಾಗಿ ಕಾಣಲು, ವಿಭಿನ್ನತೆಯನ್ನು ಅಭಿವ್ಯಕ್ತಿಗೊಳಿಸಲು ಸಹಕಾರಿಯಾಗಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಆದರೆ ಇವುಗಳನ್ನು ಬಳಸುವಾಗ ತಜ್ಞರ ಸಲಹೆ ಪಡೆಯಿರಿ.

ಎಚ್ಚರವಹಿಸಿ
ದಂತದ ಆಭರಣಗಳು ಹಲವು ಬಗೆಯ ಅಡ್ಡ ಪರಿಣಾಮಗಳನ್ನು ಒಳಗೊಂಡಿರುತ್ತವೆ. ಹಲ್ಲುಗಳ ಸಂವೇದನೆ, ಆಹಾರ ಸಿಕ್ಕಿಹಾಕಿಕೊಳ್ಳುವುದು, ಕೆಲವೊಮ್ಮೆ ಹರಳುಗಳನ್ನು ನುಂಗುವ ಸಂಭವ ಇದೆ. ಅಲರ್ಜಿ ಅಥವಾ ಹಲ್ಲುಮುರಿದು ಹೋಗುವ ಸಂಭವ ಹೆಚ್ಚಿರುತ್ತದೆ. ಆದರೆ ಸರಿಯಾದ ರೀತಿಯಲ್ಲಿಬಾಯಿಯನ್ನು ಸ್ವಚ್ಛಗೊಳಿಸುವುದರಿಂದ ಇಂತಹ ದಂತ ಆಭರಣಗಳ ಆಯಸ್ಸು ಹೆಚ್ಚಿಸಲು ಸಹಕಾರಿಯಾಗುತ್ತದೆ.

ಡಾ. ಸ್ಮಿತಾ
ಲೇಖಕರು: ದಂತ ತಜ್ಞರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ