ಆ್ಯಪ್ನಗರ

ಮಾನಸಿಕ ಒತ್ತಡ ನಿಮ್ಮನ್ನು ಬುದ್ಧಿ ಮಾಂದ್ಯರನ್ನಾಗಿಸಿತು... ಜೋಕೆ!

ಕಿರಿಯ ವಯಸ್ಸಿನಲ್ಲೇ ಹೆಚ್ಚು ಟೆನ್ಷನ್‌ ಮಾಡಿಕೊಳ್ಳುವುದರಿಂದ ಹಿರಿಯರಾದಂತೆ ಬುದ್ದಿ ಮಾಂದ್ಯತೆಯಂತ ಗಂಭೀರ ಸಮಸ್ಯೆ ಉಲ್ಬಣಿಸುವ ಸಾಧ್ಯತೆ ಇದೆ ಎಂದು ಲಂಡನ್‌ನ ಸಂಶೋಧನೆಯೊಂದು ತಿಳಿಸಿದೆ.

Times Now 19 Jan 2019, 7:48 pm
[This story originally published in Timesnews.com on Jan 19,2019]
Vijaya Karnataka Web brain


ಲಂಡನ್‌: ಹೆಚ್ಚು ತಲೆಕೆಡಿಸಿಕೊಳ್ಳಬಾರದು ಎಂಬ ಮಾತು ಇದೀಗ ವೈಜ್ಞಾನಿಕವಾಗಿಯೂ ದೃಢಪಟ್ಟಿದೆ.

ಕಿರಿಯ ವಯಸ್ಸಿನಲ್ಲೇ ಹೆಚ್ಚು ಟೆನ್ಷನ್‌ ಮಾಡಿಕೊಳ್ಳುವುದರಿಂದ ಹಿರಿಯರಾದಂತೆ ಬುದ್ದಿ ಮಾಂದ್ಯತೆಯಂತ ಗಂಭೀರ ಸಮಸ್ಯೆ ಉಲ್ಬಣಿಸುವ ಸಾಧ್ಯತೆ ಇದೆ ಎಂದು ಲಂಡನ್‌ನ ಸಂಶೋಧನೆಯೊಂದು ತಿಳಿಸಿದೆ.

ಡೆನ್ಮಾರ್ಕ್‌ನ ಕೋಪನ್ ಹ್ಯಾಗನ್ ವಿಶ್ವವಿದ್ಯಾಲಯದಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಮಾನಸಿಕ ಒತ್ತಡದಿಂದ ಕ್ರಮೇಣ ಬುದ್ದಿ ಮಾಂದ್ಯತೆ ಉಂಟಾಗುತ್ತದೆ. ಸಣ್ಣ ವಯಸ್ಸಿನಲ್ಲೇ ಮಿದುಳಿಗೆ ಅತಿಯಾದ ಆಯಾಸಕರ ಕೆಲಸ ನೀಡುವುದು, ಮಾನಸಿಕ ಒತ್ತಡದಿಂದ ಮಿದುಳಿನ ನರಗಳಿಗೆ ತೀವ್ರವಾದ ಹಾನಿಯಾಗುತ್ತದೆ. ಇಂತಹ ಜೀವನಶೈಲಿಯುಳ್ಳವರ ಭವಿಷ್ಯದಲ್ಲಿ ಬುದ್ದಿ ಮಾಂದ್ಯತೆ ಸಮಸ್ಯೆ ಕಾಣಿಸುವುದು ಶೇ.2ರಷ್ಟು ಖಚಿತ ಎಂದು ಅಧ್ಯಯನ ಹೇಳಿದೆ.

ಪ್ರತಿ 9 ಜನರಲ್ಲಿ ಐವರು ಭವಿಷ್ಯದಲ್ಲಿ ಬುದ್ದಿ ಮಾಂದ್ಯತೆ ಸಮಸ್ಯೆ ಎದುರಿಸುವ ಸಾಧ್ಯತೆ ಶೇ.25ರಷ್ಟಿದೆ ಎಂದು ತಿಳಿದು ಬಂದಿದೆ. ಅಂತೆಯೇ ಪ್ರಸ್ತುತ ಯಾವುದೇ ರೀತಿಯ ಸಮಸ್ಯೆಗಳಿಲ್ಲದ ಪ್ರತಿ 17 ಮಂದಿಯಲ್ಲಿ 10 ಮಂದಿಯಲ್ಲಿ ಈ ಸಮಸ್ಯೆ ಬರುವ ಸಾಧ್ಯತೆ ಶೇ.40ರಷ್ಟಿದೆ ಎಂದು ಸಂಶೋಧನೆ ತಿಳಿಸಿದೆ.

ಮಾನಸಿಕ ಒತ್ತಡದಿಂದ ಹೃದಯ ಹಾಗೂ ಹೃದಯಕ್ಕೆ ಸಂಬಂಧಿತ ರಕ್ತನಾಳಗಳಲ್ಲಿ ಹೆಚ್ಚು ಕೆಟ್ಟ ಕೊಬ್ಬು ಶೇಖರವಾಗಲು ಆರಂಭವಾಗುತ್ತದೆ. ಇವುಗಳು ಮಿದುಳಿನ ರಕ್ತನಾಳಗಳಿಗೂ ಹಾನಿಯುಂಟು ಮಾಡುತ್ತದೆ. ಅಂತೆಯೇ ಸಂಪೂರ್ಣ ದೇಹಕ್ಕೂ ಅಪಾಯವನ್ನು ತಂದೊಡ್ಡುತ್ತವೆ ಎಂದು ಅಧ್ಯಯನ ಹೇಳಿದೆ. ಅಧ್ಯಯನಕ್ಕಾಗಿ ಸರಾಸರಿ 60 ವರ್ಷ ಪ್ರಾಯದ 6,807 ಮಂದಿಯ ಜೀವನ ಕ್ರಮ, ಮಾನಸಿಕ ಒತ್ತಡ ಸೇರಿದಂತೆ ಇನ್ನಿತರ ಆರೋಗ್ಯ ವಿಶ್ಲೇಷಣೆ ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ