ಆ್ಯಪ್ನಗರ

ಬಂಜೆತನ ನಿವಾರಣೆಗೆ ಶಿಸ್ತುಬದ್ಧ ಜೀವನ, ಸರಿಯಾದ ಆಹಾರಕ್ರಮ ಇಷ್ಟೇ ಸಾಕು!

ಮಗು ಪಡೆಯಬೇಕು ಎಂದು ದಂಪತಿ ಪ್ರಯತ್ನಿಸಿದರೂ ಆಗದೆ ಇರುವುದೇ ಬಂಜೆತನ ಎಂದು ಕರೆಯಲಾಗುತ್ತದೆ.

Vijaya Karnataka Web 25 Jun 2021, 12:45 pm
ವಿವಾಹವಾದ ದಂಪತಿಯು ಮಗುವನ್ನು ಬಯಸುವುದು ಸಹಜ. ಹೀಗಾಗಿ ಅವರು ಯಾವುದೇ ರೀತಿಯ ಗರ್ಭ ನಿರೋಧಕವನ್ನು ಬಳಸದೆ ನಿರಂತರವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವರು.
Vijaya Karnataka Web fertility problems tips for couples to dealing with this issues
ಬಂಜೆತನ ನಿವಾರಣೆಗೆ ಶಿಸ್ತುಬದ್ಧ ಜೀವನ, ಸರಿಯಾದ ಆಹಾರಕ್ರಮ ಇಷ್ಟೇ ಸಾಕು!


ಇದರಿಂದ ಅವರು ಬೇಗನೆ ಮಗು ಪಡೆಯಲು ಸಾಧ್ಯವಾಗುವುದು. ಆದರೆ ಕೆಲವರು ಅಸುರಕ್ಷಿತ ಲೈಂಗಿಕ ಕ್ರಿಯೆಯನ್ನು ಹಲವಾರು ತಿಂಗಳುಗಳ ಕಾಲ ನಡೆಸಿದರೂ ಅದರಿಂದ ಅವರಿಗೆ ಮಗು ಪಡೆಯಲು ಮಾತ್ರ ಸಾಧ್ಯವಾಗಲ್ಲ.

ಇದನ್ನು ಸಾಮಾನ್ಯವಾಗಿ ಬಂಜೆತನ ಎಂದು ಕರೆಯಬಹುದು. ಪುರುಷ ಹಾಗೂ ಮಹಿಳೆಯರಲ್ಲಿ ಇದು ಸಾಮಾನ್ಯವಾಗಿ ಕಂಡುಬರಬಹುದು. ಮಹಿಳೆಯರಲ್ಲಿ ಕೆಲವೊಂದು ಸಮಸ್ಯೆಗಳು ಇದಕ್ಕೆ ಕಾರಣವಾದರೆ, ಪುರುಷರಲ್ಲಿ ಕೂಡ ವೀರ್ಯದ ಗುಣಮಟ್ಟ, ಗಣತಿ ಇತ್ಯಾದಿಗಳು ಬಂಜೆತನಕ್ಕೆ ಕಾರಣವಾಗಬಹುದು. ಬಂಜೆತನ ನಿವಾರಣೆ ಮಾಡುವುದು ಹೇಗೆ ಎಂದು ನೀವು ಈ ಲೇಖನದ ಮೂಲಕ ತಿಳಿಯಲು ರೆಡಿಯಾಗಿ….

​ಆರೋಗ್ಯಕಾರಿ ಆಹಾರ

  • ಇಂದಿನ ದಿನಗಳಲ್ಲಿ ಆಹಾರ ಕಡೆಗೆ ಹೆಚ್ಚಿನ ಜನರು ನಿರ್ಜಕ್ಷ್ಯ ವಹಿಸುತ್ತಿರುವರು. ಆದರೆ ಆರೋಗ್ಯಕಾರಿ ಆಹಾರ ಸೇವನೆ ಮಾಡಿದರೆ, ಅದು ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು.
  • ವಿಟಮಿನ್ ಗಳು, ಕಬ್ಬಿಣಾಂಶ ಇತ್ಯಾದಿಗಳು ಇರುವಂತಹ ಸಮತೋಲಿತ ಆಹಾರ ಸೇವನೆ ಮಾಡಿದರೆ ಅದು ಒಳ್ಳೆಯದು. ಪಾಲಕ, ಬ್ರಾಕೋಲಿ, ಧಾನ್ಯಗಳು, ಮೊಟ್ಟೆ, ಮೀನು ಮತ್ತು ಸೋಯಾ ಸೇವನೆ ಮಾಡಿದರೆ ಒಳ್ಳೆಯದು. ಮೈದಾ ಮತ್ತು ಸಕ್ಕರೆ ಸೇವನೆ ಪ್ರಮಾಣವನ್ನು ಕಡಿಮೆ ಮಾಡಬೇಕು.

​ದೈಹಿಕ ಚಟುವಟಿಕೆ

  • ನಿತ್ಯವೂ ಸ್ವಲ್ಪ ಮಟ್ಟದಲ್ಲಿ ದೈಹಿಕ ಚಟುವಟಿಕೆಗಳನ್ನು ನಡೆಸಿದರೆ, ಅದರಿಂದ ಹಾರ್ಮೋನ್ ಸಮತೋಲನವು ಸುಧಾರಣೆ ಆಗುವುದು ಮತ್ತು ಗರ್ಭಧಾರಣೆ ಆಗುವ ಸಾಧ್ಯತೆಯು ಹೆಚ್ಚಾಗಿ ಇರುವುದು.
  • ಆರೋಗ್ಯಕಾರಿ ತೂಕವನ್ನು ಕಾಪಾಡಿಕೊಳ್ಳುವುದು ಅತೀ ಅಗತ್ಯ. ತುಂಬಾ ಸ್ಲಿಮ್ ಆಗಬೇಕು ಎನ್ನುವ ಧಾವಂತದಲ್ಲಿ ಅನಾರೋಗ್ಯಕಾರಿ ತೂಕವನ್ನು ಇಳಿಸಬೇಡಿ. ಜಾಗಿಂಗ್, ಸೈಕ್ಲಿಂಗ್, ಈಜು ಇತ್ಯಾದಿಗಳು ತುಂಬಾ ಲಾಭಕಾರಿ.

ವಿವಾಹ ವಿಳಂಬ, ಒತ್ತಡ, ಸ್ಮೂಕಿಂಗ್, ಆಲ್ಕೋಹಾಲ್, ಇವೇ ಬಂಜೆತನಕ್ಕೆ ಪ್ರಮುಖ ಕಾರಣಗಳು!

​ಫಲವತ್ತತೆ ಬಗ್ಗೆ ತಿಳಿಯಿರಿ

ಮಹಿಳೆಯು ತಿಂಗಳಲ್ಲಿ ಒಂದು ಸಲ ಯಶಸ್ವಿಯಾಗಿ ಅಂಡೋತ್ಪತ್ತಿ ಮಾಡುವಳು. ಇಂತಹ ಸಮಯದಲ್ಲಿ ಗರ್ಭಧಾರಣೆಗೆ ಪ್ರಯತ್ನಿಸುವುದು ತುಂಬಾ ಲಾಭಕಾರಿ.

ಹೀಗಾಗಿ ಮಹಿಳೆಯರಿಗೆ ತಮ್ಮ ಅಂಡೋತ್ಪತ್ತಿ ಸಮಯದ ಬಗ್ಗೆ ಸರಿಯಾದ ತಿಳುವಳಿಕೆ ಇರಬೇಕು. ಫಲವತ್ತತೆಯ ಆರು ದಿನಗಳನ್ನು ತಿಳಿದುಕೊಂಡರೆ ಅದು ತುಂಬಾ ಲಾಭವಾಗಲಿದೆ.

ಪುರುಷರ ಫಲವತ್ತತೆ ಬಗ್ಗೆ ಇರುವ ಈ ಕಟ್ಟುಕಥೆಗಳನ್ನು ನಂಬಲೇಬೇಡಿ!

​ಒತ್ತಡ ಮತ್ತು ಆತಂಕ ತಗ್ಗಿಸಿ

  • ಒತ್ತಡ ಮತ್ತು ಆತಂಕದ ಜೀವನವು ಇಂದು ಪ್ರತಿಯೊಬ್ಬರನ್ನು ಕಾಡುತ್ತಲಿರುವುದು. ಆದರೆ ಇದು ವಿವಾಹಿತ ದಂಪತಿಗಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ.
  • ಮುಖ್ಯವಾಗಿ ಒತ್ತಡ ಮತ್ತು ಆತಂಕದಿಂದ ನೇರವಾಗಿ ಫಲವತ್ತತೆ ಮೇಲೆ ಪರಿಣಾಮ ಬೀರುವುದು ಎಂದು ತಜ್ಞರು ಹೇಳುವರು. ಯೋಗ ಮತ್ತು ಧ್ಯಾನದಿಂದ ಒತ್ತಡ ನಿವಾರಣೆ ಮಾಡಬಹುದು.

ಆತಂಕ, ಒತ್ತಡ ನಿವಾರಣೆ ಮಾಡುವ ಗಿಡಮೂಲಿಕೆಗಳು

​ಕೆಫಿನ್, ಆಲ್ಕೋಹಾಲ್ ತಗ್ಗಿಸಿ

ಕೆಫಿನ್ ಮತ್ತು ಆಲ್ಕೋಹಾಲ್ ಸೇವನೆ ಕಡಿಮೆ ಮಾಡಿದರೆ, ಅದರಿಂದ ಫಲವತ್ತತೆಯು ಹೆಚ್ಚಾಗುವುದು. ಮಿತ ಪ್ರಮಾಣದಲ್ಲಿ ಟೀ ಮತ್ತು ಕಾಫಿ ಕುಡಿದರೆ ಅದರಿಂದ ಹೆಚ್ಚು ಸಮಸ್ಯೆಯಾಗದು.

ಆದರೆ ಅತಿಯಾಗಿ ಸೇವನೆ ಮಾಡಬೇಡಿ. ಆಲ್ಕೋಹಾಲ್ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದನ್ನು ಕೂಡ ಆದಷ್ಟು ಕಡಿಮೆ ಮಾಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ