ಆ್ಯಪ್ನಗರ

ಮಧುಮೇಹಿ ರೋಗಿಗಳಿಗೆ ಹೇಳಿ ಮಾಡಿಸಿದ ಆಹಾರಗಳಿವು! ತಪ್ಪದೇ ಸೇವಿಸಿ...

ತರಕಾರಿಗಳು ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು ಮಾತ್ರವಲ್ಲದೆ, ಪೋಷಕಾಂಶಗಳು ಕೂಡ ಇವುಗಳಲ್ಲಿ ಅಧಿಕವಾಗಿದೆ.

Vijaya Karnataka Web 19 May 2021, 1:23 pm
ಮಧುಮೇಹಿಗಳು ತಮ್ಮ ಆಹಾರ ಕ್ರಮದಲ್ಲಿ ತರಕಾರಿಗಳ ಸೇವನೆ ಮಾಡಿದರೆ ಅದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಿಕೊಂಡು, ಆರೋಗ್ಯಕಾರಿ ಜೀವನ ನಡೆಸಬಹುದು ಎಂದು ಹಲವಾರು ಅಧ್ಯಯನಗಳಿಂದ ಕಂಡುಕೊಳ್ಳಲಾಗಿದೆ.
Vijaya Karnataka Web foods that every diabetic patient must include in their diet list
ಮಧುಮೇಹಿ ರೋಗಿಗಳಿಗೆ ಹೇಳಿ ಮಾಡಿಸಿದ ಆಹಾರಗಳಿವು! ತಪ್ಪದೇ ಸೇವಿಸಿ...


ಸಸ್ಯಾಹಾರಿ ಆಹಾರ ಕ್ರಮವು ಟೈಪ್ 2 ಮಧುಮೇಹವು ಬರುವ ಅಪಾಯವು ಕಡಿಮೆ ಎಂದು ಹೇಳಲಾಗಿದೆ. ತರಕಾರಿಗಳು ಗ್ಲೈಸೆಮಿಕ್ ನಿಯಂತ್ರಣ, ಕೊಲೆಸ್ಟ್ರಾಲ್ ನ್ನು ಸುಧಾರಣೆ ಮಾಡುವುದು ಮತ್ತು ಮಧುಮೇಹವನ್ನು ನಿಯಂತ್ರಿಸಲು ಸಹಕರಿಸುವುದು. ಇದರಲ್ಲಿ ಪೈಥೋಕೆಮಿಕಲ್, ನಾರಿನಾಂಶವು ಅಧಿಕವಾಗಿದೆ. ಮಧುಮೇಹಿಗಳು ತಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬೇಕಾದ ಕೆಲವು ತರಕಾರಿಗಳು

​ಬ್ರಾಕೋಲಿ

ಕ್ರೋಮಿಯಂ ಎನ್ನುವ ಖನಿಜಾಂಶವು ಇದರಲ್ಲಿ ಸಮೃದ್ಧವಾಗಿದ್ದು, ಇದು ಗ್ಲುಕೋಸ್ ಸೂಕ್ಷ್ಮತೆಯನ್ನು ಸುಧಾರಣೆ ಮಾಡುವುದು.

ಟೈಪ್ 2 ಮಧುಮೇಹಿಗಳಲ್ಲಿ ಕ್ರೋಮಿಯಂ ಮಟ್ಟವು ಕಡಿಮೆ ಇರುವುದಾಗಿ ವಿಜ್ಞಾನಿಗಳು ಕಂಡುಕೊಂಡಿರುವರು. ಕ್ರೋಮಿಯಂ ಕೊರತೆ ನೀಗಿಸಲು ಬ್ರಾಕೋಲಿ ಸೇವನೆ ಮಾಡಿ. ಕ್ರೋಮಿಯಂ ಅಧಿಕವಾಗಿ ಇರುವ ಇತರ ಆಹಾರಗಳೆಂದರೆ ಧಾನ್ಯಗಳು, ಬಾರ್ಲಿ, ಓಟ್ಸ್ ಮತ್ತು ಕರಿಮೆಣಸು.

ಹಸಿರು ಕೋಸುಗಡ್ಡೆ ಮತ್ತು ಬಿಳಿ ಹೂಕೋಸು: ಆರೋಗ್ಯಕ್ಕೆ ಯಾವುದು ಒಳ್ಳೆಯದು?

​ಬಟಾಣಿ ಮತ್ತು ಬೆಂಡೆಕಾಯಿ

ಇವೆರಡರಲ್ಲಿ ಉತ್ತಮ ಪ್ರಮಾಣದ ಹೀರಿಕೊಳ್ಳುವ ನಾರಿನಾಂಶವು ಇದೆ ಮತ್ತು ಇದು ಮಧುಮೇಹಿಗಳಿಗೆ ಒಳ್ಳೆಯದು. ಕಡಲೆಕಾಳು, ಬಟಾಣಿ ಮತ್ತು ಒಣ ಬಟಾಣಿಯು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ನ್ನು ಹೊಂದಿದೆ ಮತ್ತು ಇದು ಹೊಟ್ಟೆ ತುಂಬುವಂತೆ ಮಾಡುವುದು.

ಹಸಿ ಬಟಾಣಿ ಅಥವಾ ಹಸಿರು ಬಟಾಣಿಯಲ್ಲಿ ನಮಗೆ ಸಿಗುವ ಲಾಭಗಳು

​ನುಗ್ಗೆಕಾಯಿ ಎಲೆಗಳು

ಇದು ಹೈಪರ್ ಗ್ಲೈಸೆಮಿಕ್ ಚಟುವಟಿಕೆಯನ್ನು ತಡೆಯುವುದು ಮತ್ತು ಗ್ಲುಕೋಸ್ ಸೂಕ್ಷ್ಮತೆಯನ್ನು ಸುಧಾರಣೆ ಮಾಡುವುದು.

ಈ ಎಲೆಗಳಲ್ಲಿ ಉತ್ತಮ ಪ್ರಮಾಣದ ನೈಟ್ರಿಕ್ ಆಮ್ಲವಿದೆ ಮತ್ತು ಸೀರಮ್ ಗ್ಲುಕೋಸ್ ಇದೆ. ಇದರಿಂದಾಗಿ ಸೀರಮ್ ಇನ್ಸುಲಿನ್ ಮತ್ತು ಪ್ರೋಟೀನ್ ಮಟ್ಟವು ಹೆಚ್ಚಾಗುವ ಕಾರಣದಿಂದಾಗಿ ರಕ್ತದಲ್ಲಿನ ಗ್ಲುಕೋಸ್ ಮಟ್ಟವು ನಿಯಂತ್ರಣಕ್ಕೆ ಬರುವುದು ಎಂದು ಅಧ್ಯಯನಗಳು ಹೇಳಿವೆ.

ಹಲವಾರು ಕಾಯಿಲೆಗಳಿಗೆ ಮದ್ದು ಈ ಚೋಟುದ್ದ ನುಗ್ಗೆಕಾಯಿ!

​ಹಾಗಲಕಾಯಿ

ಮಧುಮೇಹ ನಿಯಂತ್ರಿಸುವ ಹಲವಾರು ರೀತಿಯ ಅಂಶಗಳು ಹಾಗಲಕಾಯಿಯಲ್ಲಿ ಇದೆ. ಹಾಗಲಕಾಯಿಯು ಹೈಪರ್ ಗ್ಲೈಸೆಮಿಕ್ ನ್ನು ಕಡಿಮೆ ಮಾಡುವುದು ಮತ್ತು ಇದರಲ್ಲಿ ಪೈಥೋನ್ಯೂಟ್ರಿಯೆಂಟ್ಸ್ ಗಳು ಗ್ಲುಕೋಸ್ ರಕ್ತದಿಂದ ಸ್ನಾಯುಗಳಿಗೆ ತಲುಪಿಸಲು ನೆರವಾಗುವುದು. ಇದರಿಂದಾಗಿ ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವು ತಗ್ಗುವುದು.

ಸಣ್ಣ ಜೋಳದ ಕಾಳು

ದೊಡ್ಡ ಜೋಳಕ್ಕೆ ಹೋಲಿಕೆ ಮಾಡಿದರೆ ಅದರಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ತುಂಬಾ ಕಡಿಮೆ ಪ್ರಮಾಣದಲ್ಲಿದೆ. ಇದು ಮಧುಮೇಹಿಗಳಿಗೆ ತುಂಬಾ ಲಾಭಕಾರಿ.

ಹಾಗಲಕಾಯಿ ಜ್ಯೂಸ್: ನಾಲಗೆಗೆ ಕಹಿಯಾದ್ರೂ, ಆರೋಗ್ಯಕ್ಕೆ ಸಿಹಿ

​ಮೆಂತ್ಯೆಕಾಳು

ಜೀರ್ಣಕ್ರಿಯೆ ವೇಳೆ ಹೊಟ್ಟೆಯಿಂದ ಹೀರಿಕೊಳ್ಳುವ ಸಕ್ಕರೆ ಪ್ರಮಾಣವನ್ನು ಇದು ತಗ್ಗಿಸುವುದು. ಇದು ಮೇಧೋಜ್ಜೀರಕಗ್ರಂಥಿಯ ಕೋಶಗಳನ್ನು ಉತ್ತೇಜಿಸಿ, ಇನ್ಸುಲಿನ್ ಉತ್ಪತ್ತಿಯನ್ನು ಹೆಚ್ಚಿಸುವುದು.

ನೆನೆಸಿಟ್ಟ ಮೆಂತೆ ಕಾಳಿನ ನೀರು ಮಧುಮೇಹಿಗಳಿಗೆ ತುಂಬಾನೇ ಒಳ್ಳೆಯದು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ