ಆ್ಯಪ್ನಗರ

ಸಂತೋಷ ಭಾವ ಹೆಚ್ಚಿಸುತ್ತವಂತೆ ಹಣ್ಣು, ತರಕಾರಿ

ಹೌದು, ಹಣ್ಣು ಮತ್ತು ತರಕಾರಿಗಳ ಸೇವನೆಯಿಂದ ನಮಗೆ ಸಂತೋಷವಾಗುತ್ತದೆ. ಹೊಸ ಸಮೀಕ್ಷೆಯೊಂದು ಸಹ ಇದನ್ನು ಸಾಬೀತು ಪಡಿಸಿದೆ.

Vijaya Karnataka Web 21 Apr 2019, 3:37 pm
ಹಣ್ಣು, ಹಸಿ ತರಕಾರಿ ಮತ್ತು ಮಸಾಲೆ ಭರಿತ ಆಹಾರ ಪದಾರ್ಥಗಳನ್ನು ತಿನ್ನುವಾಗ ನಮ್ಮಲ್ಲಿ ಆಗುವ ವ್ಯತ್ಯಾಸಗಳನ್ನು ಎಂದಾದರು ಗಮನಿಸಿದ್ದೀರ. ಸಾತ್ವಿಕ ಆಹಾರಗಳೆನಿಸುವ ಹಣ್ಣು, ತರಕಾರಿಗಳ ಸೇವನೆಯಿಂದ ನಿಮ್ಮ ಮನಸ್ಸಿನಲ್ಲಾಗುವ ಬದಲಾವಣೆಯನ್ನು ಒಮ್ಮೆ ಸೂಕ್ಷ್ಮವಾಗಿ ಗಮನಿಸಿ.
Vijaya Karnataka Web Vegitables


ಹೌದು, ಹಣ್ಣು ಮತ್ತು ತರಕಾರಿಗಳ ಸೇವನೆಯಿಂದ ನಮಗೆ ಸಂತೋಷವಾಗುತ್ತದೆ. ಹೊಸ ಸಮೀಕ್ಷೆಯೊಂದು ಸಹ ಇದನ್ನು ಸಾಬೀತು ಪಡಿಸಿದೆ.

ದೈಹಿಕ ಆರೋಗ್ಯವನ್ನು ಕಾಪಾಡಲು ಹಣ್ಣು, ತರಕಾರಿಗಳು ಎಷ್ಟು ಸಹಾಯಕವೋ ಅದೇ ರೀತಿ ಮಾನಸಿಕ ಆರೋಗ್ಯಕ್ಕೂ ಹಣ್ಣು ತರಕಾರಿಗಳು ಉತ್ತಮ ಎಂದು ಸಾಬೀತು ಪಡಿಸಿದೆ. ಬ್ರಿಟನ್‌ನ ಲೀಡ್ಸ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿರುವ ಈ ಸಮೀಕ್ಷೆಯು, ವಿವಿಧ ಹಣ್ಣು ಮತ್ತು ತರಕಾರಿಗಳನ್ನು ನಮ್ಮ ಆಹಾರದ ಭಾಗವನ್ನಾಗಿ ಮಾಡಿಕೊಂಡರೆ, ಸಪ್ಲಿಮೆಂಟರಿ ವಿಟಮಿನ್‌ಗಳನ್ನು ಸೇವಿಸುವ ಅಗತ್ಯವೇ ಇರುವುದಿಲ್ಲ . ಇದರಿಂದ ಖಿನ್ನತೆ ಮುಂತಾದ ಮಾನಸಿಕ ಸಮಸ್ಯೆಗಳು ಸಹ ಕಾಡುವುದಿಲ್ಲ ಎಂದು ವಿವರಿಸಿದೆ.

ಹಣ್ಣುಗಳ ಸಿಪ್ಪೆ ತೆಗೆದು ತಿನ್ನುವುದಕ್ಕಿಂತ ಅದನನು ಹಾಗೆಯೇ ಇಡಿಯಾಗಿ ತಿಂದರೆ ತಿಂದರೆ ಇನ್ನೂ ಹೆಚ್ಚಿನ ಆರೋಗ್ಯ ಪ್ರಯೋಜನಗಳಿವೆ . ಇದರಿಂದ ನಮಗೆ ತೃಪ್ತಿಯ ಭಾವ ಮೂಡುತ್ತದೆ ಮತ್ತು ದೇಹದ ತೂಕವೂ ಕಡಿಮೆಯಾಗುತ್ತದ.

ತರಕಾರಿಗಳನ್ನು ಪೂರ್ತಿ ಬೇಯಿಸಿ ತಿನ್ನುವುದಕ್ಕಿಂತ ಸ್ವಲ್ಪ ಬೇಯಿಸಿ ತಿಂದರೆ ಒಳ್ಳೆಯದು ಎಂದು ಸಮೀಕ್ಷೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ