ಆ್ಯಪ್ನಗರ

ಇದ್ದಕ್ಕಿದ್ದಂತೆ ಗ್ಯಾಸ್ಟ್ರಿಕ್, ವಾಕರಿಕೆ, ವಾಂತಿ ಬಂದರೆ ತಕ್ಷಣ ಹೀಗೆ ಮಾಡಿಬಿಡಿ....

ಸಣ್ಣ ವಾಕರಿಕೆಯಿಂದ ಪ್ರಾರಂಭವಾಗುವ ಗ್ಯಾಸ್ಟ್ರಿಕ್ ಆನಂತರದಲ್ಲಿ ದೊಡ್ಡ ಕಾಯಿಲೆಯಾಗಿ ಪರಿವರ್ತನೆ ಯಾಗುತ್ತದೆ. ಹಾಗಾಗಿ ಇದನ್ನು ಮೊದಲೇ ಕಂಟ್ರೋಲ್ ಮಾಡಿಕೊಳ್ಳಬೇಕು.

Vijaya Karnataka Web 2 Dec 2021, 12:13 pm
ಗ್ಯಾಸ್ಟ್ರಿಕ್ ಸಮಸ್ಯೆ ಎನ್ನುವುದು ಇತ್ತೀಚಿಗೆ ಸಾಕಷ್ಟು ಜನರಲ್ಲಿ ಕಂಡುಬರುತ್ತಿದೆ. ವಿಶೇಷವಾಗಿ ಈಗಿನ ಕಾಲದ ಯುವಜನತೆ ಇದಕ್ಕೆ ಬಲಿಯಾಗುತ್ತಿರುವುದು ನಿಜಕ್ಕೂ ಅಚ್ಚರಿಯ ವಿಷಯ. ಇದಕ್ಕೆ ಪ್ರಮುಖ ಕಾರಣವೆಂದರೆ ಅವರು ತಿನ್ನುವ ಆಹಾರ ಪದಾರ್ಥಗಳು.
Vijaya Karnataka Web gastric problems can be far away from you if you drink these ayurvedic teas
ಇದ್ದಕ್ಕಿದ್ದಂತೆ ಗ್ಯಾಸ್ಟ್ರಿಕ್, ವಾಕರಿಕೆ, ವಾಂತಿ ಬಂದರೆ ತಕ್ಷಣ ಹೀಗೆ ಮಾಡಿಬಿಡಿ....


ಜೊತೆಗೆ ಸ್ವಲ್ಪವೂ ವ್ಯಾಯಾಮ ಇಲ್ಲದಂತಹ ಜೀವನ. ದೇಹಕ್ಕೆ ಆರೋಗ್ಯಕರ ಆಹಾರ ಪದಾರ್ಥಗಳು ಜೊತೆಗೆ ಕಸರತ್ತು ಯಾವ ಸಮಯದಲ್ಲಿ ಕಡಿಮೆಯಾಗುತ್ತದೆ, ಅಂತಹ ಸಮಯದಲ್ಲಿ ಅನಾರೋಗ್ಯಕರ ವಾತಾವರಣ ನಿರ್ಮಾಣವಾಗುತ್ತದೆ.

ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾದ ಸಂದರ್ಭದಲ್ಲಿ ಇದಕ್ಕೆ ಅಂಟಿಕೊಂಡಂತೆ ಎದೆಯುರಿ, ಹೊಟ್ಟೆಯ ಭಾಗದಲ್ಲಿ ಉರಿ, ಹೊಟ್ಟೆ ಉಬ್ಬರಿಸಿಕೊಂಡ ಅನುಭವ, ಹೊಟ್ಟೆ ಹಸಿವು ಇಲ್ಲದಾಗುವುದು ಹೀಗೆ ಹಲವಾರು ಲಕ್ಷಣಗಳು ಕಾಣಿಸುತ್ತವೆ.

ಅಜೀರ್ಣತೆ ಸಮಸ್ಯೆಯನ್ನು ಹೋಗಲಾಡಿಸಿಕೊಳ್ಳಬೇಕು ಎಂದರೆ ಅದಕ್ಕೆ ಹಲವಾರು ಮಾರ್ಗಗಳಿವೆ. ಆದರೆ ಬಹುತೇಕ ಜನರು ಆಸ್ಪತ್ರೆಯ ಔಷಧಿಗಳ ಮೇಲೆ ಅವಲಂಬಿತವಾಗಿರುವ ಕಾರಣ ಮನೆ ಮದ್ದುಗಳನ್ನು ಮರೆಯುತ್ತಾರೆ.

ಮನೆ ಮದ್ದುಗಳು ಸಂಪೂರ್ಣವಾಗಿ ನೈಸರ್ಗಿಕ ಆಹಾರ ಪದಾರ್ಥಗಳಿಂದ ಕೂಡಿರುವುದರಿಂದ ಇವುಗಳಲ್ಲಿ ಯಾವುದೇ ಅಡ್ಡ-ಪರಿಣಾಮಗಳು ಇರುವುದಿಲ್ಲ. ಆರಾಮದಾಯಕವಾಗಿ ಎದುರಾಗಿರುವ ಸಮಸ್ಯೆಯಿಂದ ಹೊರಬರಬಹುದು. ಇಲ್ಲಿ ಅಂತಹ ಮನೆಮದ್ದುಗಳು ಯಾವುವು ಎಂಬುದನ್ನು ನೋಡೋಣ.

​ಪುದೀನಾ ಚಹಾ

  • ಗ್ಯಾಸ್ಟ್ರಿಕ್ ಸಮಸ್ಯೆಗೆ ಇದೊಂದು ಉತ್ತಮ ಪರಿಹಾರ. ಆದರೆ ಬಹಳಷ್ಟು ಜನರಿಗೆ ಇದರ ಬಗ್ಗೆ ತಿಳಿದೇ ಇಲ್ಲ. ಯಾವ ಸಂದರ್ಭದಲ್ಲಿ ವಾಕರಿಕೆ ಬಂದ ಅನುಭವ ಉಂಟಾಗುತ್ತದೆ ಅಥವಾ ವಾಂತಿ ಬಂದ ಹಾಗೆ ಆಗುತ್ತದೆ, ಅಂತಹ ಸಂದರ್ಭದಲ್ಲಿ ಒಂದು ಕಪ್ ಪುದಿನ ಚಹಾ ಕುಡಿಯುವುದರಿಂದ ನಿಮ್ಮ ಹೊಟ್ಟೆಯ ಭಾಗವನ್ನು ಉಪಶಮನ ಮಾಡಿಕೊಂಡು ಅತಿಯಾದ ಗ್ಯಾಸ್ಟ್ರಿಕ್ ಅಥವಾ ಆಮ್ಲಿಯ ಪ್ರಭಾವದಿಂದ ಹೊರ ಬರಬಹುದು.
  • ಅಜೀರ್ಣತೆ ಸಮಸ್ಯೆಯಿಂದ ದೂರಾಗಲು ಹೊಟ್ಟೆಯಲ್ಲಿ ಉಬ್ಬರ ಸಮಸ್ಯೆಯಿಂದ ಹೊರ ಬರಲು ಪುದಿನ ಚಹ ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳಬಹುದು. ಆದರೆ ಯಾರಿಗೆ ಈಗಾಗಲೇ ಹೊಟ್ಟೆಯಲ್ಲಿ ಹುಣ್ಣುಗಳು ಕಂಡುಬಂದಿರುತ್ತದೆ ಅಂತಹವರು ಇದರಿಂದ ದೂರ ಉಳಿಯುವುದು ಒಳ್ಳೆಯದು.

​ಚಾಮೋಮೈಲ್ ಚಹಾ

  • ನಮಗೆ ನಿದ್ರೆಯನ್ನು ಹೆಚ್ಚು ಮಾಡಿ, ಮಾನಸಿಕ ಆತಂಕವನ್ನು ಕಡಿಮೆ ಮಾಡುವ ಒಂದು ಗಿಡಮೂಲಿಕೆ ಪದಾರ್ಥ ಇದು. ಕರುಳಿನ ಭಾಗ ಹಾಗೂ ಹೊಟ್ಟೆಯ ಭಾಗದಲ್ಲಿ ಕಂಡುಬರುವ ಅಸ್ವಸ್ಥತೆಯನ್ನು ಸಹ ಇದು ದೂರಮಾಡುತ್ತದೆ. ಇದರಲ್ಲಿ ಆಂಟಿ ಇನ್ಫಾಮೇಟರಿ ಗುಣಲಕ್ಷಣಗಳು ಸಾಕಷ್ಟಿವೆ.
  • ಹೀಗಾಗಿ ಹೊಟ್ಟೆಯ ಭಾಗದಲ್ಲಿ ಆಮ್ಲೀಯತೆ ಮತ್ತು ನೋವು ಇತ್ಯಾದಿ ಸಮಸ್ಯೆಗಳನ್ನು ಇದು ಸುಲಭವಾಗಿ ದೂರಮಾಡುತ್ತದೆ. ನಿಗಮ ತಯಾರುಮಾಡಿ ಕುಡಿಯುವ ಸಂದರ್ಭದಲ್ಲಿ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಸೇವನೆ ಮಾಡುವುದರಿಂದ ಅತಿಯಾದ ಅಜೀರ್ಣತೆ ಸಮಸ್ಯೆಯಿಂದ ಸುಲಭವಾಗಿ ಹೊರಬರಬಹುದು.
  • ಈಗಾಗಲೇ ರಕ್ತದಲ್ಲಿ ಕೊಬ್ಬಿನ ಅಂಶವನ್ನು ಕಡಿಮೆ ಮಾಡಲು ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರುವವರು ಅಥವಾ ಆಸ್ಪರಿನ್ ಔಷಧಿಗಳ ಸೇವನೆ ಮಾಡುತ್ತಿರುವವರು ಇದರಿಂದ ಸ್ವಲ್ಪ ದೂರ ಉಳಿಯುವುದು ಒಳ್ಳೆಯದು. ಏಕೆಂದರೆ ಇದಕ್ಕೂ ಸಹ ರಕ್ತವನ್ನು ತೆಳ್ಳಗೆ ಮಾಡುವ ಗುಣ ಇದೆ.

​ಆಪಲ್ ಸೈಡರ್ ವಿನೆಗರ್

  • ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನುವವರಿಗೆ ಆಪಲ್ ಸೈಡರ್ ವಿನೆಗರ್ ಹೆಚ್ಚು ಪ್ರಯೋಜನಕಾರಿ. ಅಜೀರ್ಣತೆ ಸಮಸ್ಯೆಯನ್ನು ಹೋಗಲಾಡಿಸಲು ಕೂಡ ಇದು ಕೆಲಸ ಮಾಡುತ್ತದೆ. ಹೊಟ್ಟೆಯ ಭಾಗದಲ್ಲಿ ಅತಿಯಾದ ಆಮ್ಲೀಯ ಅಂಶ ಉತ್ಪತ್ತಿಯಾಗದಂತೆ ತಡೆದು ಆರೋಗ್ಯಕರವಾದ ಜೀರ್ಣ ಶಕ್ತಿಯನ್ನು ಹೆಚ್ಚು ಮಾಡುತ್ತದೆ.
  • ಹೀಗಾಗಿ ನೀರಿನಲ್ಲಿ 1 ಅಥವಾ 2 ಟೀ ಚಮಚ ಆಪಲ್ ಸೈಡರ್ ವಿನಿಗರ್ ಹಾಕಿ ಮಿಶ್ರಣ ಮಾಡಿ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಿ. ಆಹಾರ ಸೇವನೆ ಮಾಡುವ ಅರ್ಧ ಗಂಟೆ ಮುಂಚೆ ಇದನ್ನು ಸೇವನೆ ಮಾಡಬಹುದು. ಆದರೆ ಯಾವುದೇ ಕಾರಣಕ್ಕೂ ನೀರು ಬೆರೆಸದೆ ಮಾತ್ರ ಸೇವನೆ ಮಾಡಬೇಡಿ.
  • ಇದು ಗಂಟಲು ಉರಿ ಮತ್ತು ಹಲ್ಲುಗಳ ಹಾನಿ ಜೊತೆಗೆ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಇದ್ದಕ್ಕಿದ್ದಂತೆ ಸಾಕಷ್ಟು ಕಡಿಮೆ ಮಾಡುವ ಸಾಧ್ಯತೆ ಇರುತ್ತದೆ. ಕೆಲವರಿಗೆ ಅತಿಯಾದ ಗಂಟಲು ನೋವು ಕೂಡ ಕಂಡುಬರಬಹುದು.

​ಶುಂಠಿ ಸೇವನೆ

  • ಹೊಟ್ಟೆಯ ಭಾಗದಲ್ಲಿ ಆಮ್ಲಿಯ ಪ್ರಭಾವವನ್ನು ತಕ್ಷಣ ಕಡಿಮೆ ಮಾಡುವ ಗುಣ ಇದರಲ್ಲಿದೆ. ಹೀಗಾಗಿ ಆಹಾರ ಪದಾರ್ಥಗಳಲ್ಲಿ ಶುಂಠಿಯನ್ನು ಬಳಕೆ ಮಾಡಬಹುದು ಅಥವಾ ಶುಂಠಿ ಚಹಾ ತಯಾರು ಮಾಡಿ ಕುಡಿಯಬಹುದು.
  • ನಾಲ್ಕು ಕಪ್ ನೀರಿಗೆ ಒಂದು ಅಥವಾ ಎರಡು ಪೀಸ್ ಶುಂಠಿಯನ್ನು ಹಾಕಿ ಸೇವನೆ ಮಾಡಬಹುದು. ನಿಂಬೆ ಹಣ್ಣು ಅಥವಾ ಜೇನು ತುಪ್ಪ ಬೆರೆಸಿ ಈ ಪಾನೀಯವನ್ನು ಸೇವನೆ ಮಾಡಿ.

​ಸೋಂಪು ಕಾಳುಗಳು

  • ಅಜೀರ್ಣತೆ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗೆ ರಾಮಬಾಣವಾಗಿ ಸೋಂಪು ಕಾಳುಗಳು ಕೆಲಸ ಮಾಡುತ್ತವೆ. ಹೀಗಾಗಿ ಊಟ ಆದ ನಂತರ ಸೋಂಪು ಕಾಳುಗಳನ್ನು ಸ್ವಲ್ಪ ತಿನ್ನುವುದರಿಂದ ಹೊಟ್ಟೆಯ ಭಾಗದಲ್ಲಿ ಉರಿ, ಹೊಟ್ಟೆಯ ಸೆಳೆತ, ಅಜೀರ್ಣತೆ, ಹೊಟ್ಟೆ ಉಬ್ಬರ ಇತ್ಯಾದಿ ಸಮಸ್ಯೆಗಳಿಂದ ಹೊರ ಬರಬಹುದು.
  • ಸುಮಾರು ಹತ್ತು ನಿಮಿಷಗಳ ಕಾಲ ಅರ್ಧ ಟೀ ಚಮಚ ಸೋಂಪು ಕಾಳುಗಳನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಆನಂತರ ಇದನ್ನು ಶೋಧಿಸಿಕೊಂಡು ಸೇವನೆ ಮಾಡಿ. ಸಾಕಷ್ಟು ಆರೋಗ್ಯ ಪ್ರಯೋಜನಗಳು ಇದರಿಂದ ಸಿಗುತ್ತವೆ ಎಂದು ಹೇಳಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ