ಆ್ಯಪ್ನಗರ

ನಟ ಅಕ್ಷಯ್ ಕುಮಾರ್ ಫಿಟ್ನೆಸ್ ಸೀಕ್ರೆಟ್ ಗೋಮೂತ್ರವಂತೆ..!

ಗೋಮೂತ್ರವು ದೇವರ ಕೊಡುಗೆ ಮಾನವನ ದೇಹಕ್ಕೆ ಯಾವ ರೀತಿ ಪ್ರಯೋಜನಕಾರಿಯಾಗಿದೆ ಎಂಬುದನ್ನು ತಿಳಿಯಲು ಮುಂದೆ ಓದಿ.

Vijaya Karnataka Web 22 Dec 2021, 5:55 pm
ಗೋಮೂತ್ರವು ಹಸುಗಳಲ್ಲಿನ ಚಯಾಪಚಯ ಕ್ರಿಯೆಯ ದ್ರವ ಉತ್ಪನ್ನವಾಗಿದೆ. ನಮ್ಮ ಭಾರತೀಯರು ಗೋಮೂತ್ರವನ್ನು ಅತ್ಯಂತ ಪವಿತ್ರ ಎಂದು ಭಾವಿಸುತ್ತಾರೆ. ಅಲ್ಲದೇ, ಗೋಮೂತ್ರ ವಿವಿಧ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ.
Vijaya Karnataka Web gomutra health benefits in kannada
ನಟ ಅಕ್ಷಯ್ ಕುಮಾರ್ ಫಿಟ್ನೆಸ್ ಸೀಕ್ರೆಟ್ ಗೋಮೂತ್ರವಂತೆ..!


ಬಾಲಿವುಡ್ ನ ಅಕ್ಷಯ್ ಕುಮಾರ್ ಉತ್ತಮ ಫಿಟ್ನೆಸ್ ನಟರಲ್ಲಿ ಒಬ್ಬರು. ಇವರು ತಮ್ಮ ದಿನಚರಿಗಳಲ್ಲಿ ಮತ್ತು ಆರೋಗ್ಯಕರವಾದ ಜೀವನಶೈಲಿಗೆ ಗೋಮೂತ್ರವನ್ನು ಕುಡಿಯುತ್ತಾರಂತೆ. ಇದನ್ನು ಸ್ವತಃ ಅಕ್ಷಯ್ ಕುಮಾರ್ ಅವರೇ ತಮ್ಮ ಫಿಟ್ನೆಸ್ ಸೀಕ್ರೆಟ್ ನ ಬಗ್ಗೆ ಬಹಿರಂಗವಾಗಿ ವ್ಯಕ್ತಪಡಿಸಿದ್ದರು.

ಹಾಗಾದರೆ ಗೋಮೂತ್ರದಲ್ಲಿ ಅಂತಹದೇನಿದೆ? ಎಂಬುದನ್ನು ತಿಳಿಯಲು ಮುಂದೆ ಓದಿ.

​೧. ಪಂಚಗವ್ಯ

ಪಂಚಗವ್ಯ ಎಂಬುದು ಗೋವಿನಿಂದ ಪಡೆದ ೫ ಉತ್ಪನ್ನವಾಗಿದೆ. ಅಂದರೆ ಹಾಲು, ಮೊಸರು, ತುಪ್ಪ, ಗೋಮೂತ್ರ ಮತ್ತು ಸಗಣಿ. ಈ ೫ ಅದ್ಭುತಗಳನ್ನು ಔಷಧಿಯಾಗಿ ಬಳಸಲಾಗುತ್ತದೆ. ಗೋಮೂತ್ರವನ್ನು ಕುಷ್ಠರೋಗಕ್ಕೆ ಪರಿಣಾಮಕಾರಿ ಚಿಕಿತ್ಸೆಯಾಗಿ ಆಯುರ್ವೇದದಲ್ಲಿ ಬಳಸಲಾಗುತ್ತದೆ ಎಂದು ಉಲ್ಲೇಖಿಸಲಾಗಿದೆ.

ಇಂದಿನ ಆಯುರ್ವೇದ ವೈದ್ಯರು ವಿವಿಧ ರೀತಿಯ ಕ್ಯಾನ್ಸರ್, ಜಠರ ಹುಣ್ಣುಗಳು, ಪಿತ್ತಜನಕಾಂಗದ ಅಸ್ವಸ್ಥತೆಗಳು, ಮಧುಮೇಹ, ಅಸ್ತಮಾ ಮತ್ತು ಇತರ ಕಾಯಿಲೆಗಳಿಗೂ ಕೂಡ ಗೋಮೂತ್ರವನ್ನು ಬಳಸುತ್ತಿದ್ದಾರೆ.

​೨. ಯಾವೆಲ್ಲಾ ರೋಗಗಳನ್ನು ಗುಣಪಡಿಸುವ ಶಕ್ತಿ ಹೊಂದಿದೆ ಗೊತ್ತಾ?

ಮುಖ್ಯವಾಗಿ ಗೋಮೂತ್ರವು ಅಸಂಖ್ಯಾತ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಅವುಗಳೆಂದರೆ, ಮಲಬದ್ಧತೆ, ಕೆಮ್ಮು, ಮೈಗ್ರೇನ್, ಡಿಸ್ಮೆನೋರಿಯಾ, ಥೈರಾಯ್ಡ್, ಮಧುಮೇಹದಂತಹ ಕಾಯಿಲೆಗಳನ್ನು ಗುಣಪಡಿಸುತ್ತದೆ. ಅಲ್ಲದೇ, ಚರ್ಮ ಸಮಸ್ಯೆಗಳಾದ ಮೊಡವೆ, ತುರಿಕೆ, ಎಗ್ಜಿಮಾದಂತಹ ಚರ್ಮ ವ್ಯಾಧಿಯನ್ನು ಗುಣಪಡಿಸುತ್ತದೆ.

ಅಲ್ಲದೇ, ಏಡ್ಸ್, ಉಸಿರಾಟದ ತೊಂದರೆಗಳು, ಲೈಂಗಿಕ ತೊಂದರೆ, ಹೃದ್ರೋಗಗಳು, ಮೂತ್ರಪಿಂಡದ ತೊಂದರೆ, ಅಸ್ತಮಾ, ಪುರುಷ ಸಂಬಂಧಿ ಕಾಯಿಲೆಗಳು, ಕ್ಯಾನ್ಸರ್ ಗಳಂತಹ ಕಾಯಿಲೆಗಳನ್ನು ಗುಣಪಡಿಸುವ ಅದ್ಭುತವಾದ ಶಕ್ತಿ ಹೊಂದಿದೆ.

​೩. ನಟ ಅಕ್ಷಯ್ ಕುಮಾರ್

ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ ಅವರು ಕೂಡ ತಮ್ಮ ಫಿಟ್ನೆಸ್ ಸೀಕ್ರೆಟ್ ನ ಬಗ್ಗೆ ಬಹಿರಂಗವಾಗಿ ತಿಳಿಸಿದ್ದರು. ಅದೇನೆಂದರೆ, ಅವರು ಪ್ರತಿನಿತ್ಯ ಗೋಮೂತ್ರವನ್ನು ತಪ್ಪದೇ ಕುಡಿಯುತ್ತಾರಂತೆ. ಹಾಗಾಗಿಯೇ ನಾನು ತುಂಬಾ ಫಿಟ್ ಆಗಿದ್ದೇನೆ ಎನ್ನುತ್ತಾರೆ ಅಕ್ಷಯ್.

40 ದಾಟಿದ ಪುರುಷರು ಈ 5 ಆಹಾರಗಳ ಸೇವನೆ ಕಡಿಮೆ ಮಾಡುತ್ತಾ ಬನ್ನಿ..!

​೪. ಹೋಮಿಯೋಸ್ಟಾಸಿಸ್ ನಿರ್ವಹಿಸುತ್ತದೆ

  • ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.
  • ನೆನೆಪಿನ ಶಕ್ತಿಯನ್ನು ಸುಧಾರಿಸುತ್ತದೆ.
  • ಯಕೃತ್ತಿನ ಕಾರ್ಯನಿರ್ವಹಣೆಯನ್ನು ಹೆಚ್ಚಿಸುತ್ತದೆ.
  • ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.
  • ಹೃದಯ ಹಾಗು ಮೆದುಳಿಗೆ ಬಲವನ್ನು ನೀಡುತ್ತದೆ.
  • ದೇಹದ ವಿಷವನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ.

ದೇಹದ ತೂಕ ಇಳಿಸಲು ಸ್ವಲ್ಪ ಜೀರಿಗೆ-ಒಂದು ಬಾಳೆಹಣ್ಣಿನ ರೆಸಿಪಿ!

​೫. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಗೋಮೂತ್ರವು ಪ್ರಾಚೀನ ಕಾಲದಿಂದಲೂ ದೇವರ ಕೊಡುಗೆ ಎಂದೇ ಭಾವಿಸಲಾಗಿದೆ. ಗೋಮೂತ್ರವನ್ನು ನಿಯಮಿತವಾಗಿ ಸೇವಿಸುತ್ತಾ ಬರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮುಖ್ಯವಾಗಿ ಇದು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುವುದರಿಂದ ದೇಹದಿಂದ ಹಾನಿಕಾರಕ ವಿಷವನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ.

ಪುರುಷರಿಗೆ ಆ ಭಾಗದಲ್ಲಿ ನೋವು ಕಾಣಿಸಿದರೆ ಕ್ಯಾನ್ಸರ್ ಬಂದ ಹಾಗೆ..!

​೬. ಮಧುಮೇಹಿಗಳ ಗಾಯ ವಾಸಿ ಮಾಡುತ್ತದೆ

ನಿಮಗೆ ತಿಳಿದಿರಲಿ, ಗೋಮೂತ್ರ ಚಿಕಿತ್ಸೆಯಿಂದ ಮಧುಮೇಹ ರೋಗಿಗಳಿಗೆ ಉಂಟಾಗುವ ಗಾಯವನ್ನು ವಾಸಿ ಮಾಡಬಹುದು. ಏಕೆಂದರೆ ಮಧುಮೇಹ ಹೊಂದಿರುವವರಿಗೆ ಗಾಯಗಳು ಉಂಟಾದರೆ ಬೇಗ ವಾಸಿಯಾಗುವುದಿಲ್ಲ. ಗ್ರ್ಯಾನ್ಯುಲೇಷನ್ ಅಂಗಾಂಶ ರಚನೆಯನ್ನು ಹೆಚ್ಚಿಸುವ ಚಟುವಟಿಕೆಯಿಂದಾಗಿ ಗಾಯದ ಗುಣಪಡಿಸುವಿಕೆಯನ್ನು ಇದು ಮತ್ತಷ್ಟು ತೀವ್ರಗೊಳಿಸುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ