ಆ್ಯಪ್ನಗರ

ಈ ಚೋಟುದ್ದ ಹಸಿಮೆಣಸಿನಕಾಯಿಯಲ್ಲಿ ಯಾವೆಲ್ಲಾ ಪೌಷ್ಟಿಕ ಸತ್ವಗಳು ಇರುತ್ತವೆ ಗೊತ್ತಾ?

ಇಂದು ನಾವು ತಯಾರು ಮಾಡುವ ಬಹುತೇಕ ತಿಂಡಿ ಅಡುಗೆಗಳಲ್ಲಿ ಹಸಿಮೆಣಸಿನಕಾಯಿಯನ್ನು ಬಳಸುತ್ತೇವೆ. ಸುಮ್ಮನೆ ತಿಂದರೆ ಆಗುವುದಿಲ್ಲ. ಅದರಲ್ಲಿರುವ ಸತ್ವಗಳ ಬಗ್ಗೆ ಕೂಡ ತಿಳಿದುಕೊಳ್ಳಬೇಕಲ್ಲವೇ?

Authored byಮನೋಹರ್ ಶೆಟ್ಟಿ | Vijaya Karnataka Web 10 May 2024, 12:31 pm
ಬೆಳಗಿನ ಸಮಯದಲ್ಲಿ ತಯಾರಿಸುವ ಅನೇಕ ಬಗೆಯ ವಿವಿಧ ತಿಂಡಿಗಳಿಗೆ ಹಸಿಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪು ಇರಲೇಬೇಕು. ಏಕೆಂದರೆ ಇವುಗಳನ್ನು ಬಳಸಿದಾಗ ತಯಾರಾದ ಗಮ್ಮತ್ತೆ ಬೇರೆ. ನಾವೆಲ್ಲರೂ ಸಹ ಹಸಿಮೆಣಸಿನಕಾಯಿಯನ್ನು ತಿನ್ನುತ್ತೇವೆ ಮತ್ತು ಅದರ ಪ್ರಯೋಜನಗಳ ಬಗ್ಗೆ ನಮಗೆ ಗೊತ್ತಿರುವುದಿಲ್ಲ.
Vijaya Karnataka Web have green chillies and get the benefits of these nutrients
ಈ ಚೋಟುದ್ದ ಹಸಿಮೆಣಸಿನಕಾಯಿಯಲ್ಲಿ ಯಾವೆಲ್ಲಾ ಪೌಷ್ಟಿಕ ಸತ್ವಗಳು ಇರುತ್ತವೆ ಗೊತ್ತಾ?



ಅದೇ ರೀತಿ ಹಸಿ ಮೆಣಸಿನಕಾಯಿಯಲ್ಲಿ ಕಂಡುಬರುವ ಪೌಷ್ಟಿಕ ಸತ್ವಗಳ ಬಗ್ಗೆಯೂ ಕೂಡ ನಮಗೆ ತಿಳಿದಿರುವುದಿಲ್ಲ. ಈ ಲೇಖನದಲ್ಲಿ ಹಸಿಮೆಣಸಿನಕಾಯಿಯಲ್ಲಿ ಸಿಗುವಂತಹ ನಮ್ಮ ದೇಹಕ್ಕೆ ಅವಶ್ಯಕವಾದ ಪೌಷ್ಟಿಕಾಂಶಗಳ ಬಗ್ಗೆ ತಿಳಿದುಕೊಳ್ಳೋಣ ಮತ್ತು ಅವುಗಳ ಪ್ರಯೋಜನಗಳ ಬಗ್ಗೆಯೂ ಕೂಡ ಮಾಹಿತಿ ಕಲೆ ಹಾಕೋಣ.

ವಿಟಮಿನ್ ಸಿ

ಹಸಿಮೆಣಸಿನಕಾಯಿಯಲ್ಲಿ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಯನ್ನು ಹೆಚ್ಚಿಸುವ ವಿಟಮಿನ್ ಸಿ ಪ್ರಮಾಣ ಹೇರಳವಾಗಿ ಕಂಡು ಬರುತ್ತದೆ. ಇದು ನಮ್ಮ ದೇಹವನ್ನು ಕಾಯಿಲೆಗಳಿಂದ ರಕ್ಷಿಸುವ ಜೊತೆಗೆ ಆರೋಗ್ಯಕರವಾದ ಚರ್ಮ, ರಕ್ತನಾಳಗಳು, ಮೂಳೆಗಳು ಹಾಗೂ ಮಾಂಸಖಂಡಗಳನ್ನು ನಿರ್ವಹಿಸುತ್ತದೆ.

ವಿಟಮಿನ್ ಬಿ6

ಹಸಿಮೆಣಸಿನಕಾಯಿ ತಿನ್ನುವುದರಿಂದ ನಮ್ಮ ತಲೆ ಕೂದಲಿನ ಆರೋಗ್ಯ ಚೆನ್ನಾಗಿರುತ್ತದೆ ಎಂದು ಹೇಳುತ್ತಾರೆ. ಇದಕ್ಕೆ ಪ್ರಮುಖ ಕಾರಣವೆಂದರೆ ವಿಟಮಿನ್ ಬಿ 6. ಇದು ಕೂಡ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸು ವುದರಲ್ಲಿ ನೆರವಾಗುವುದರ ಜೊತೆಗೆ ತಲೆ ಕೂದಲಿಗೆ ಸಂಬಂಧಪಟ್ಟಂತೆ ಯಾವುದೇ ತೊಂದರೆಗಳು ಬರದಂತೆ ಕಾಪಾಡುತ್ತದೆ.

ವಿಟಮಿನ್ ಕೆ

  • ನಮಗೆ ಗಾಯ ಆದ ಸಂದರ್ಭದಲ್ಲಿ ಸುರಿಯುತ್ತಿರುವ ರಕ್ತವನ್ನು ತಡೆ ಹಿಡಿಯಲು ಅನುಕೂಲವಾಗುವಂತೆ ರಕ್ತ ಹೆಪ್ಪುಗಟ್ಟುವ ಅವಶ್ಯಕತೆ ಇರುತ್ತದೆ.
  • ಇದಕ್ಕೆ ವಿಟಮಿನ್ ಕೆ ನೆರವಾಗುತ್ತದೆ. ಇಷ್ಟು ಮಾತ್ರವಲ್ಲದೆ ನಮ್ಮ ದೇಹದಲ್ಲಿ ಮೂಳೆಗಳು ಬಲಗೊಳ್ಳಲು ಕೂಡ ವಿಟಮಿನ್ ಕೆ ಪ್ರಮಾಣ ಹೆಚ್ಚಾಗಿ ಕೆಲಸ ಮಾಡುತ್ತದೆ.​

ತಾಮ್ರದ ಅಂಶ

ಹಸಿಮೆಣಸಿನಕಾಯಿಯಲ್ಲಿ ತಾಮ್ರದ ಪ್ರಮಾಣ ಕೂಡ ಸಣ್ಣ ಪ್ರಮಾಣದಲ್ಲಿ ಇರುತ್ತದೆ ಎಂದು ಹೇಳುತ್ತಾರೆ. ಇದು ನಮ್ಮ ಜೀವ ಕೋಶಗಳನ್ನು ರಕ್ಷಿಸುವ ಜೊತೆಗೆ ನಮ್ಮ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಿ ನರಮಂಡಲ ವ್ಯವಸ್ಥೆಯನ್ನು ಕಾಪಾಡುತ್ತದೆ. ತಾಮ್ರದ ಪ್ರಮಾಣ ದೇಹ ಸೇರುವುದರಿಂದ ದೇಹ ಗಟ್ಟಿಮುಟ್ಟಾಗಿರುತ್ತದೆ.

ಮ್ಯಾಂಗನೀಸ್

  • ಹಸಿ ಮೆಣಸಿನಕಾಯಿಯಲ್ಲಿ ಮ್ಯಾಂಗನೀಸ್ ಪ್ರಮಾಣ ಕೂಡ ಹೇರಳವಾಗಿ ಕಂಡುಬರುತ್ತದೆ ಎಂದು ಹೇಳುತ್ತಾರೆ.
  • ಇದು ನಮ್ಮ ಜೀವಕೋಶಗಳನ್ನು ರಕ್ಷಿಸುತ್ತದೆ ಮತ್ತು ಆರೋಗ್ಯಕ ರವಾದ ಮೂಳೆಗಳನ್ನು ನಮ್ಮದಾಗುವಂತೆ ಮಾಡುತ್ತದೆ. ಹಸಿ ಮೆಣಸಿನಕಾಯಿಯನ್ನು ಆಗಾಗ ಬಳಸುವುದರಿಂದ ಮೂಳೆ ಗಳ ಸಮಸ್ಯೆ ಬರುವುದಿಲ್ಲ.

ಕಬ್ಬಿಣದ ಅಂಶ

ಮನುಷ್ಯನ ದೇಹಕ್ಕೆ ಕಬ್ಬಿಣದ ಅಂಶ ಬಹಳ ಅವಶ್ಯಕತೆ ಇದೆ. ಹಸಿ ಮೆಣಸಿನಕಾಯಿಯಲ್ಲಿ ಕಬ್ಬಿಣದ ಅಂಶಕ್ಕೆ ಯಾವುದೇ ಕೊರತೆ ಇಲ್ಲ. ಇದು ಜೀವಕೋಶಗಳ ಅಭಿವೃದ್ಧಿಯಲ್ಲಿ ಕೆಲಸ ಮಾಡುವುದು ಮಾತ್ರ ವಲ್ಲದೆ ಸುಸ್ತು ಮತ್ತು ಆಯಾಸವನ್ನು ದೂರ ಮಾಡುತ್ತದೆ ಜೊತೆಗೆ ನಮ್ಮ ಅರಿವಿನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

Myricetin

ಈ ಒಂದು ಪ್ರಮಾಣ ಹಸಿ ಮೆಣಸಿನ ಕಾಯಿಯಲ್ಲಿ ಸಿಗುವುದರಿಂದ ನಮ್ಮ ಜೀವಕೋಶಗಳು ಹಾಳಾಗುವುದು ತಪ್ಪುತ್ತದೆ ಮತ್ತು ಇದರಿಂದ ಕ್ಯಾನ್ಸರ್ ಮತ್ತು ಸಕ್ಕರೆ ಕಾಯಿಲೆ ಬರುವ ಸಾಧ್ಯತೆ ಕೂಡ ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ. ಬೇರೆ ಬೇರೆ ರುಚಿಕರ ಖಾದ್ಯಗಳಲ್ಲಿ ಹಸಿ ಮೆಣಸಿನ ಕಾಯಿಯನ್ನು ಬಳಸಬಹುದು.

ಇದನ್ನೂ ಓದಿ: ಹಸಿಮೆಣಸಿನಕಾಯಿ ಖಾರ ಅಂತ ಇದನ್ನು ದೂರ ಮಾಡ ಬೇಡಿ! ಇದರಿಂದ ಆರೋಗ್ಯಕ್ಕೆ ತುಂಬಾನೇ ಲಾಭವಿದೆ!

ಲೇಖಕರ ಬಗ್ಗೆ
ಮನೋಹರ್ ಶೆಟ್ಟಿ
"ಕನ್ನಡದ ಲೇಖನ ಬರವಣಿಗೆಯಲ್ಲಿ 9 ವರ್ಷಗಳ ಸುದೀರ್ಘ ವೃತ್ತಿಪರ ಅನುಭವದೊಂದಿಗೆ ಭಾಷೆಯ ಅನುವಾದದೊಂದಿಗೆ ಪ್ರಾರಂಭಿಸಿ ಇಂದಿಗೆ ವಿವಿಧ ವಿಭಾಗಗಳಲ್ಲಿ ಅಂದರೆ ಜೀವನಶೈಲಿ, ಆರೋಗ್ಯ, ಸೌಂದರ್ಯ, ಸಂಬಂಧ, ಜಾಹೀರಾತು ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸಿದ ಹೆಮ್ಮೆ ನನ್ನದು. ಭಾಷೆಯ ಬಗೆಗಿನ ಹಿಡಿತ, ವಿಚಾರದ ಕುರಿತಾದ ಜ್ಞಾನಾಸಕ್ತಿಯೊಂದಿಗೆ ಓದುಗರಿಗೆ ಅತ್ಯುತ್ತಮ ವಿಷಯಗಳನ್ನೊಳಗೊಂಡ ಲೇಖನಗಳನ್ನು ನೀಡುವಲ್ಲಿ ನನಗೆ ತೃಪ್ತಿಯಿದೆ. ಅದು ವಿಚಾರವಿರುವ ಲೇಖನವಾದರೂ ಅಥವಾ ಸಾಧಾರಣ ಮುಖ್ಯಾಂಶವಾದರೂ ಸಾಧ್ಯವಾದಷ್ಟು ಉತ್ತಮ ಗುಣಮಟ್ಟದ ಬರವಣಿಗೆಯನ್ನು ತರಲು ನಾನು ಪ್ರಯತ್ನಿಸುತ್ತೇನೆ. ಸದ್ಯದ ಡಿಜಿಟಲ್ ವಿದ್ಯಮಾನಗಳ ಬಗ್ಗೆ ನನ್ನನ್ನು ನಾನು ಕ್ರೂಢೀಕರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುವ ಇತರ ಲೇಖಕರ ವಿಷಯಗಳನ್ನು, ವಿಚಾರಗಳನ್ನು ಅನುಸರಿಸಿ ನನ್ನ ಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಳ್ಳುತ್ತಾ ನನ್ನ ಬರವಣಿಗೆಯ ಗುಣಮಟ್ಟವನ್ನು ಈಗಿನ ಓದುಗರ ಆಸಕ್ತಿಗೆ ತಕ್ಕಂತೆ ಕಾಪಾಡಿಕೊಳ್ಳುತ್ತೇನೆ. ಬಿಡುವಿನ ಸಮಯದಲ್ಲಿ ನನ್ನ ಕುಟುಂಬದ ಜೊತೆ ಗುಣಮಟ್ಟದ ಸಮಯ ಕಳೆಯುವ ಮೂಲಕ ಉತ್ತಮ ವೃತ್ತಿಪರತೆಗಾಗಿ ನನ್ನನ್ನು ನಾನು ಚೈತನ್ಯದಿಂದ ಕೂಡಿರುವಂತೆ ನೋಡಿಕೊಳ್ಳುತ್ತೇನೆ."... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ