ಆ್ಯಪ್ನಗರ

ಒಣದ್ರಾಕ್ಷಿ ತಿನ್ನುವುದರ ಪ್ರಯೋಜನಗಳು ಗೊತ್ತಾದ್ರೆ, ನೀವೂ ಕೂಡ ದಿನಾ ತಿನ್ನುವಿರಿ!!

ಸಾಮಾನ್ಯವಾಗಿ ಒಣದ್ರಾಕ್ಷಿ ಎಂದರೆ ಸಿಹಿಪದಾರ್ಥಗಳ ಅಂದ ಹೆಚ್ಚಿಸಲು ಬಳಸಲ್ಪಡುವ ಒಣಫಲವೆಂದೇ ನಮ್ಮಲ್ಲಿ ಹೆಚ್ಚಿನವರು ಪರಿಗಣಿಸಿದ್ದಾರೆ.

Vijaya Karnataka Web 18 Jun 2020, 4:10 pm
Vijaya Karnataka Web health benefits of eating few dry grapes daily
ಒಣದ್ರಾಕ್ಷಿ ತಿನ್ನುವುದರ ಪ್ರಯೋಜನಗಳು ಗೊತ್ತಾದ್ರೆ, ನೀವೂ ಕೂಡ ದಿನಾ ತಿನ್ನುವಿರಿ!!

ವಿವಿಧ ಬಗೆಯ ದ್ರಾಕ್ಷಿಗಳನ್ನು ಬಿಸಿಲಿನಲ್ಲಿ ಅಥವಾ ಡ್ರೈಯರ್ ನಲ್ಲಿ ಒಣಗಿಸಿ ತಯಾರಿಸುವುದೇ ಒಣದ್ರಾಕ್ಷಿ. ಇದನ್ನು ಹಾಗೆ ತಿನ್ನಲು ನಿಮಗೆ ಇಷ್ಟವಿಲ್ಲವೆಂದಾದರೆ ಆಗ ನೀವು ಇದನ್ನು ವಿವಿಧ ರೀತಿಯ ಸಿಹಿ ತಿಂಡಿಗಳು ಹಾಗೂ ಸಿಹಿ ಖಾದ್ಯಗಳಿಗೆ ಹಾಕಿಕೊಂಡು ಸೇವಿಸಬಹುದು.

ಒಣ ಹಣ್ಣುಗಳು ಯಾವಾಗಲೂ ಅದರ ಬಣ್ಣ ಹಾಗೂ ರುಚಿಯಿಂದ ನಮ್ಮನ್ನು ಸೆಳೆಯುವುದು. ಅದೇ ರೀತಿಯಾಗಿ ಅದರಲ್ಲಿ ಇರುವಂತಹ ಪೋಷಕಾಂಶ ಗುಣಗಳ ಬಗ್ಗೆ ನಮಗೆ ಹೆಚ್ಚಾಗಿ ತಿಳಿದಿಲ್ಲ.

ನೋಡಲು ಸಣ್ಣದಾದರೂ ತುಂಬಾನೇ ಆರೋಗ್ಯಕಾರಿ!

ಒಣ ಹಣ್ಣುಗಳು ನೋಡಲು ತುಂಬಾ ಸಣ್ಣದಾಗಿದ್ದರೂ ಅದರಲ್ಲಿ ಇರುವಂತಹ ಪೋಷಕಾಂಶಗಳು ಅತ್ಯಧಿಕ ಮಟ್ಟದ್ದಾಗಿದೆ. ಒಣದ್ರಾಕ್ಷಿಯಲ್ಲಿ ಉನ್ನತ ಮಟ್ಟದ ನಾರಿನಾಂಶ, ಕಬ್ಬಿನಾಂಶ, ಕ್ಯಾಲ್ಸಿಯಂ ಮತ್ತು ಇತರ ಕೆಲವೊಂದು ಪೋಷಕಾಂಶಗಳು ಇವೆ. ಇದು ಶಕ್ತಿ ನೀಡುವುದು ಮತ್ತು ಕೂದಲು ಹಾಗೂ ಚರ್ಮದ ಕಾಂತಿ ವೃದ್ಧಿಸುವಲ್ಲಿಯು ಪ್ರಮುಖ ಪಾತ್ರ ವಹಿಸುವುದು.

ಇದನ್ನು ನೀರಿನಲ್ಲಿ ನೆನೆಸಿಕೊಂಡು ತಿನ್ನಬಹುದು ಅಥವಾ ಹಾಗೆ ತಿನ್ನಬಹುದು. ಇದನ್ನು ನಿಮ್ಮ ಆಹಾರ ಕ್ರಮಕ್ಕೆ ಸೇರಿಸಿಕೊಂಡರೆ ಅದರಿಂದ ಹಲವಾರು ರೀತಿಯ ಲಾಭಗಳು ಸಿಗುವುದು.

ಇದನ್ನು ಸ್ಮೂಥಿ, ಟಾನಿಕ್, ಶೇಕ್ ಇತ್ಯಾದಿಗಳಿಗೆ ಬಳಕೆ ಮಾಡಲಬಹುದು. ಇದನ್ನು ಸಲಾಡ್ ಗೆ ಬಳಸಿದರೂ ಅದರಿಂದ ನೈಸರ್ಗಿಕ ಸಿಹಿ ಸಿಗುವುದು. ಇದರಲ್ಲಿ ಇರುವಂತಹ ಹಲವಾರು ರೀತಿಯ ಆರೋಗ್ಯ ಗುಣಗಳು ಇದನ್ನು ತಿನ್ನುವಂತೆ ಮಾಡುವುದು. ಒಣದ್ರಾಕ್ಷಿಯಿಂದ ಸಿಗುವಂತಹ ಲಾಭಗಳ ಬಗ್ಗೆ ತಿಳಿಯಿರಿ.

ಗರ್ಭಿಣಿಯರು ದಿನಾ ಮೂರು ನಾಲ್ಕು ಒಣದ್ರಾಕ್ಷಿ ತಿನ್ನುವುದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ?

ರಕ್ತಹೀನತೆ ನಿವಾರಣೆ

ಒಣದ್ರಾಕ್ಷಿಯಲ್ಲಿ ಉನ್ನತ ಮಟ್ಟದ ಕಬ್ಬಿನಾಂಶವಿದೆ ಮತ್ತು ಇದರಿಂದ ದೇಹದಲ್ಲಿ ರಕ್ತಹೀನತೆ ನಿವಾರಣೆ ಮಾಡಲು ಇದು ಪ್ರಮುಖ ಪಾತ್ರ ವಹಿಸುವುದು. ದಿನನಿತ್ಯವೂ ಒಣದ್ರಾಕ್ಷಿಯನ್ನು ಮಿತ ಪ್ರಮಾಣದಲ್ಲಿ ಸೇವನೆ ಮಾಡಿದರೆ ಅದರಿಂದ ಕಬ್ಬಿನಾಂಶದ ಕೊರತೆ ನೀಗಿಸಬಹುದು.

ತೂಕ ಇಳಿಸಲು ಸಹಕಾರಿ

ಇದರಲ್ಲಿ ತುಂಬಾ ಕಡಿಮೆ ಕ್ಯಾಲರಿ ಹಾಗೂ ನೈಸರ್ಗಿಕ ಸಿಹಿ ಅಂಶವಿದೆ. ಇದು ನಾರಿನಾಂಶವನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ಕಾರಣದಿಂದಾಗಿ ಹೊಟ್ಟೆ ತುಂಬಿದಂತೆ ಮಾಡಿ ಬಯಕೆ ಕಡಿಮೆ ಮಾಡುವುದು. ಇದರಿಂದ ತೂಕ ಇಳಿಸಲು ಇದು ಸಹಕಾರಿ ಆಗುವುದು.

ದೃಷ್ಟಿ ಸುಧಾರಣೆ

ಒಣದ್ರಾಕ್ಷಿಯಲ್ಲಿ ಉನ್ನತ ಮಟ್ಟದ ಆಂಟಿಆಕ್ಸಿಡೆಂಟ್ ಇದೆ ಮತ್ತು ಇದು ವಿವಿಧ ರೀತಿಯಿಂದ ದೇಹಕ್ಕೆ ನೆರವಾಗುವುದು. ಪಾಲಿಫೆನಾಲಿಕ್ ಪೈಥೋನ್ಯೂಟ್ರಿಯಂಟ್ಸ್ ಗಳು ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುವುದು ಮತ್ತು ದೃಷ್ಟಿಗೆ ಹಾನಿಯಾಗದಂತೆ ನೋಡಿಕೊಳ್ಳುವುದು. ಇದರಿಂದ ಅಕ್ಷಿಪಟಲದ ಅವನತಿ ತಡೆಯಬಹುದು. ಇದು ದೃಷ್ಟಿ ಸುಧಾರಣೆ ಜತೆಗೆ ಕಣ್ಣಿಗೆ ಹಲವಾರು ವಿಧದಿಂದ ನೆರವಾಗುವುದು.

ಕಣ್ಣುಗಳ ಆರೋಗ್ಯಕ್ಕೆ ಏನೇನು ಸೇವಿಸಬೇಕು? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

ಮೂಳೆಗಳನ್ನು ಬಲಪಡಿಸುವುದು

ಗಂಟು ನೋವು ಅಥವಾ ಮೂಳೆಗಳು ದುರ್ಬಲವಾಗಿದ್ದರೆ ಆಗ ನೀವು ನಿತ್ಯವೂ ಒಣದ್ರಾಕ್ಷಿ ತಿನ್ನಿ. ಇದರಲ್ಲಿ ಹೆಚ್ಚಿನ ಮಟ್ಟದ ಕ್ಯಾಲ್ಸಿಯಂ ಇದ್ದು, ಮೂಳೆಗಳನ್ನು ಬಲಪಡಿಸಲು ತುಂಬಾ ಸಹಕಾರಿ ಆಗಿರುವುದು. ಇದು ಮೂಳೆ ಸಾಂದ್ರತೆ ಹೆಚ್ಚಿಸುವುದು ಮತ್ತು ಸಂಧಿವಾತದಂತಹ ಸಮಸ್ಯೆಯನ್ನು ಕಡಿಮೆ ಮಾಡುವುದು.

ಜೀರ್ಣಕ್ರಿಯೆ ಉತ್ತಮಪಡಿಸುವುದು

ಈಗಾಗಲೇ ಹೇಳಿರುವಂತೆ ಒಣದ್ರಾಕ್ಷಿಯಲ್ಲಿ ಉನ್ನತ ಮಟ್ಟದ ನಾರಿನಾಂಶವಿದೆ ಮತ್ತು ಇದು ಹೊಟ್ಟೆಯಲ್ಲಿ ವಿರೇಚಕವನ್ನು ಉಂಟು ಮಾಡುವುದು.

ಆರೋಗ್ಯಕಾರಿ ಆಗಿ ಒಣದ್ರಾಕ್ಷಿ ಸೇವಿಸಿದರೆ ಅದರಿಂದ ಮಲಬದ್ಧತೆ ನಿವಾರಿಸಬಹುದು, ಕರುಳಿನ ಕ್ರಿಯೆ ಸುಗಮವಾಗಿಸಿ, ದೇಹದಲ್ಲಿ ಇರುವಂತಹ ವಿಷಕಾರಿ ಅಂಶವನ್ನು ಹೊರಗೆ ಹಾಕಲು ನೆರವಾಗುವುದು.

ಅಸಿಡಿಟಿ ಕಡಿಮೆ ಮಾಡುವುದು

ಒಣ ದ್ರಾಕ್ಷಿಯಲ್ಲಿ ಇರುವಂತಹ ಪೊಟಾಶಿಯಂ ಮತ್ತು ಮೆಗ್ನಿಶಿಯಂ ಅಂಶವು ದೇಹದಲ್ಲಿ ಇರುವಂತಹ ವಿಷಕಾರಿ ಅಂಶ ಮತ್ತು ಹಾನಿಕಾರಕ ದ್ರವವನ್ನು ಹೊರಗೆ ಹಾಕಲು ನೆರವಾಗುವುದು.

ದೇಹದಲ್ಲಿ ಪಿಎಚ್ ಮಟ್ಟವನ್ನು ಕಾಪಾಡಲು ನೆರವಾಗುವುದು. ಇದರಿಂದ ರಕ್ತದಲ್ಲಿನ ವಿಷಕಾರಿ ಅಂಶವು ಕಡಿಮೆ ಆಗುವುದು. ಹೊಟ್ಟೆಯಲ್ಲಿ ಸಮಸ್ಯೆ ಉಂಟು ಮಾಡುವಂತಹ ಗ್ಯಾಸ್ ಸಮಸ್ಯೆಯನ್ನು ಇದು ನಿವಾರಣೆ ಮಾಡುವುದು.

ಅಸಿಡಿಟಿಯನ್ನು ಶಾಶ್ವತವಾಗಿ ಗುಣಪಡಿಸುವ ನೈಸರ್ಗಿಕ ಮದ್ದುಗಳು

ಪ್ರತಿರೋಧಕ ಶಕ್ತಿ ವೃದ್ಧಿ

ಒಣದ್ರಾಕ್ಷಿಯಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಗಳು ಹಾಗೂ ಖನಿಜಾಂಶಗಳು ಇವೆ. ಇದು ಪ್ರತಿರೋಧಕ ಶಕ್ತಿ ವೃದ್ಧಿಸುವುದು ಮತ್ತು ಸೊಂಕಿನ ವಿರುದ್ಧ ಹೋರಾಡುವುದು.

ಉರಿಯೂತ ಶಮನಕಾರಿ ಗುಣ ಹೊಂಧಿರುವ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿರುವ ಒಣದ್ರಾಕ್ಷಿಯು ಜ್ವರ, ಸೋಂಕು ಮತ್ತು ಇತರ ಹಲವಾರು ಸಮಸ್ಯೆಗಳಿಂದ ರಕ್ಷಣೆ ನೀಡುವುದು.

ಪ್ರತಿರೋಧಕ ಶಕ್ತಿ ವೃದ್ಧಿಸುವ ನ್ಯಾಚುರಲ್ ಆಹಾರಗಳು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ