ಆ್ಯಪ್ನಗರ

ತಂಪು ಪಾನಿಯಗಳನ್ನು ಬಿಡಿ, ಎಳನೀರು ಕುಡಿಯಿರಿ

ಪ್ರತಿ ಊರಿನಲ್ಲಿಯೂ ಬಹುತೇಕ ವರ್ಷವಿಡಿ ದೊರೆಯುವ ಆರೋಗ್ಯ ವರ್ಧಕ ಎಳನೀರಿನಿಂದ ಎಷ್ಟು ಪ್ರಯೋಜನವಿದೆ ಗೊತ್ತೇ?

Vijaya Karnataka Web 27 Mar 2019, 3:31 pm
ಬೇಸಿಗೆ ಶುರುವಾಯಿತೆಂದರೆ ಸಾಕು ಗಂಟೆಗೆಷ್ಟು ಸಲ ನೀರು, ತಂಪು ಪಾನೀಯ, ಹಣ್ಣಿನ ರಸ ಕುಡಿಯುತ್ತೇವೆಂದು ಲೆಕ್ಕವೇ ಇರುವುದಿಲ್ಲ. ಆಧುನಿಕ ಜೀವನಶೈಲಿಗೆ ಮಾರು ಹೋಗಿರುವವರಂತೂ ತಂಪು ಪಾನೀಯಗಳಿಗೆ ಮೊರೆ ಹೋಗುವುದು ಹೆಚ್ಚು. ಅದು ದೇಹಕ್ಕೆ ಸ್ವಲ್ಪ ಸ್ವಲ್ಪ ವಿಷ ಹಾಕಿದಂತೆ. ಅದರ ಬದಲು ನೈಸರ್ಗಿತ ಆದ ಎಳನೀರು ಕುಡಿದು ನೋಡಿ. ಆರೋಗ್ಯಕ್ಕೂ ಅದು ಅಮೃತ ಸಮಾನ
Vijaya Karnataka Web ಎಳನೀರು


ಪ್ರತಿ ಊರಿನಲ್ಲಿಯೂ ಬಹುತೇಕ ವರ್ಷವಿಡಿ ದೊರೆಯುವ ಆರೋಗ್ಯ ವರ್ಧಕ ಎಳನೀರಿನಿಂದ ಎಷ್ಟು ಪ್ರಯೋಜನವಿದೆ ಗೊತ್ತೇ?

ಎಳನೀರು ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹಕ್ಕೆ ಅಗತ್ಯವಾದ ಬಹಳಷ್ಟು ಪೋಷಕಾಂಶಗಳನ್ನು ಒದಗಿಸುತ್ತದೆ. ಈ ಪೋಷಕಾಂಶಗಳನ್ನು ಪಡೆದ ದೇಹ ಶೀಘ್ರ ತನ್ನ ಚಟುವಟಿಕೆಗಳನ್ನು ಪೂರ್ಣ ಕ್ಷಮತೆಯಲ್ಲಿ ನಿರ್ವಹಿಸಲು ತಯಾರಾಗುತ್ತದೆ. ಅಂದರೆ ಸುಸ್ತನ್ನು ಬಹುಬೇಗ ಶಮನ ಮಾಡುತ್ತದೆ.

ದೇಹಕ್ಕೆ ನಿಧಾನವಾಗಿ ಶಕ್ತಿ ಪೂರೈಸುತ್ತ ಹೋಗುವುದರಿಂದ ಇಡೀ ದಿನ ದೈಹಿಕ ಕೆಲಸವನ್ನು ಹೆಚ್ಚಿನ ಆಯಾಸವಿಲ್ಲದೇ ನಿರ್ವಹಿಸಲು ಸಾಧ್ಯವಾಗುತ್ತದೆ.

ದೇಹದ ಹೊರಭಾಗಗಳಾದ ಚರ್ಮ ಮತ್ತು ಕೂದಲ ಆರೋಗ್ಯಕ್ಕೂ ಉತ್ತಮ. ಇದು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಚರ್ಮ ಸುಕ್ಕು ಗಟ್ಟುವಿಕೆಯನ್ನು ತಡೆಯುತ್ತದೆ.
ಕೂದಲು ಉದುರುವುದನ್ನು ತಪ್ಪಿಸುತ್ತದೆ.

ಕ್ಯಾಲ್ಸಿಯಂ ಭರಿತವಾಗಿರುವುದರಿಂದ ಮೂಳೆ, ಸ್ನಾಯು ಮತ್ತು ಅಂಗಾಂಶಗಳು ಗಟ್ಟಿಯಾಗುತ್ತವೆ

ರಕ್ತದೊತ್ತಡ ಸಮಸ್ಯೆಯನ್ನು ನಿವಾರಿಸುತ್ತದೆ.

ನಿರ್ಜಲೀಕರಣ ಸಮಸ್ಯೆ ದೂರವಿಡುತ್ತದೆ.

ಮೂತ್ರಪಿಂಡಗಳಲ್ಲಿರುವ ಕಲ್ಲುಗಳನ್ನು ಕರಗಿಸುತ್ತದೆ

ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಶಕ್ತಿಯನ್ನು ವರ್ಧಿಸುತ್ತದೆ.

ಮಲಬದ್ಧತೆ ತಡೆಯುತ್ತದೆ.

ಮೂಳೆಗಳಿಗೆ ಶಕ್ತಿ ನೀಡುತ್ತದೆ.

ತೂಕ ಇಳಿಕೆಗೆ ಅನುಕೂಲಕರ.

ಮೂತ್ರದ ಸಮಸ್ಯೆಯನ್ನು ಪರಿಹರಿಸುತ್ತದೆ.

ಮಧುಮೇಹವನ್ನು ನಿಯಂತ್ರಿಸುತ್ತದೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ