ಆ್ಯಪ್ನಗರ

ಊಟ ಮಾಡುವಾಗ ಯಾವುದೇ ಕಾರಣಕ್ಕೂ ನೀರು ಕುಡಿಯಬಾರದು! ಯಾಕೆ ಗೊತ್ತಾ?

ನಾವು ತಿನ್ನುವ ಆಹಾರಕ್ಕೆ ಒಂದು ಕ್ರಮವಿದೆ. ಅದು ನಮ್ಮ ಜೀರ್ಣ ಶಕ್ತಿಯ ಮೇಲೆ ಅವಲಂಬಿತ ವಾಗಿರುತ್ತದೆ. ಆಹಾರದ ಮಧ್ಯೆ ಆಗಾಗ ನೀರು ಕುಡಿಯುವ ಅಭ್ಯಾಸ ಬೇಡ.

Vijaya Karnataka Web 11 Aug 2022, 10:45 am
ಕೆಲವರು ಆರೋಗ್ಯಕರವಾಗಿ ಜೀವನ ನಡೆಸಿ ಆರೋಗ್ಯಕರವಾದ ಆಹಾರ ಪದಾರ್ಥಗಳನ್ನು ತಿನ್ನುತ್ತಿದ್ದರು ಕೂಡ ದೇಹದ ತೂಕದ ಮೇಲೆ ಮಾತ್ರ ನಿಯಂತ್ರಣ ಹೊಂದಿರುವುದಿಲ್ಲ. ಇದಕ್ಕೆ ಪ್ರಮುಖ ಕಾರಣವೆಂದರೆ ಅವರು ಆಹಾರ ತಿನ್ನುವಾಗ ಮಧ್ಯಮಧ್ಯ ನೀರು ಕುಡಿಯುವುದು.
Vijaya Karnataka Web health tips never drink water between meals
ಊಟ ಮಾಡುವಾಗ ಯಾವುದೇ ಕಾರಣಕ್ಕೂ ನೀರು ಕುಡಿಯಬಾರದು! ಯಾಕೆ ಗೊತ್ತಾ?


ಆರೋಗ್ಯ ತಜ್ಞರನ್ನು ಕೇಳಿದರೆ ಇದು ಒಂದು ಕೆಟ್ಟ ಅಭ್ಯಾಸ ಎಂದು ಹೇಳುತ್ತಾರೆ. ನಾವು ಚಿಕ್ಕಮಕ್ಕಳಿಂದ ಇದೊಂದು ಅಭ್ಯಾಸ ಮಾಡಿಕೊಂಡು ಬಿಟ್ಟಿರುತ್ತೇವೆ. ಈಗ ಬಿಡಲು ಕಷ್ಟವಾಗುತ್ತದೆ. ಆದರೆ ಬಿಡದೆ ಬೇರೆ ದಾರಿಯಿಲ್ಲ. ಏಕೆಂದರೆ ಈ ಒಂದು ಅಭ್ಯಾಸದಿಂದ ಹಲವಾರು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಮತ್ತು ಈ ಲೇಖನದಲ್ಲಿ ಅವುಗಳ ಬಗ್ಗೆ ತಿಳಿಸಿಕೊಡುವ ಪ್ರಯತ್ನ ಮಾಡಿದ್ದೇವೆ.

ಬಾಯಲ್ಲಿ ಬರುವ ಎಂಜಲು ಕಡಿಮೆಯಾಗುತ್ತದೆ

  • ನೀವು ಯಾವುದೇ ಆಹಾರ ಪದಾರ್ಥವನ್ನು ಸೇವನೆ ಮಾಡಿದರು ಅದು ಜೀರ್ಣವಾಗಲು ಅಗತ್ಯವಾಗಿ ಬೇಕಾಗಿರುವುದು ಹೆಚ್ಚಿನ ಪ್ರಮಾಣದ ಎಂಜಲು. ಏಕೆಂದರೆ ಅದರಲ್ಲಿ ಆಹಾರವನ್ನು ಪೂರ್ಣ ಪ್ರಮಾಣದಲ್ಲಿ ಜೀರ್ಣ ಮಾಡುವ ಶಕ್ತಿ ಇರುತ್ತದೆ.
  • ಜೊತೆಗೆ ಹೊಟ್ಟೆಯ ಭಾಗದಲ್ಲಿ ಕೂಡ ಜೀರ್ಣರಸಗಳನ್ನು ಉತ್ಪತ್ತಿ ಮಾಡುವ ಗುಣವಿದೆ. ಆದರೆ ನೀರು ಕುಡಿಯುವುದರಿಂದ ಇದು ನಡೆಯುವುದಿಲ್ಲ. ಹೊಟ್ಟೆಯಲ್ಲಿ ಜೀರ್ಣ ಶಕ್ತಿ ಕುಂಠಿತವಾಗುತ್ತದೆ ಮತ್ತು ಆಹಾರಪದಾರ್ಥ ಸರಿಯಾಗಿ ಜೀರ್ಣವಾಗುವುದಿಲ್ಲ.

ಹೊಟ್ಟೆಯ ಭಾಗದಲ್ಲಿ ಆಮ್ಲೀಯತೆ ಹೆಚ್ಚುತ್ತದೆ

  • ಅತಿಯಾದ ಆಮ್ಲೀಯತೆ ಆರೋಗ್ಯಕರವಲ್ಲ. ಆದರೆ ಊಟದ ಮಧ್ಯದಲ್ಲಿ ನೀರು ಕುಡಿಯುವು ದರಿಂದ ಮನುಷ್ಯನಿಗೆ ಗ್ಯಾಸ್ಟ್ರಿಕ್ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ. ನಾವು ಸೇವನೆ ಮಾಡುವ ಆಹಾರವನ್ನು ಯಾವ ಪ್ರಮಾಣದಲ್ಲಿ ಜೀರ್ಣ ಮಾಡಲು ಅಗತ್ಯವಾದ ಜೀರ್ಣರಸಗಳು ಬೇಕಾಗಿ ರುತ್ತದೆ ಅಷ್ಟು ಪ್ರಮಾಣದಲ್ಲಿ ಅದು ಉತ್ಪತ್ತಿ ಆಗದೇ ಹೋದರೆ ಅದರಿಂದ ತೊಂದರೆ ಹೆಚ್ಚಾಗುತ್ತದೆ.
  • ಇದು ಮಲಬದ್ಧತೆಗೆ ಕಾರಣವಾಗುತ್ತದೆ ಎಂದು ಹೇಳುತ್ತಾರೆ. ಏಕೆಂದರೆ ಸಂಪೂರ್ಣ ಪ್ರಮಾಣದಲ್ಲಿ ಸೇವನೆ ಮಾಡಿದ ಆಹಾರ ಜೀರ್ಣ ಆಗಿರುವುದಿಲ್ಲ ಜೊತೆಗೆ ಹೊಟ್ಟೆಯಲ್ಲಿ ಆಮ್ಲಿಯ ಪ್ರಮಾಣದಿಂದ ಎದೆಯುರಿ ಕೂಡ ಉಂಟಾಗಬಹುದು.

ದೇಹದಲ್ಲಿ ಇನ್ಸುಲಿನ್ ಹೆಚ್ಚಾಗುತ್ತದೆ!

  • ಆರೋಗ್ಯ ತಜ್ಞರು ಹೇಳುವ ಹಾಗೆ ಸಾಕಷ್ಟು ಜನರಲ್ಲಿ ಮಧುಮೇಹ ಸಮಸ್ಯೆ ಕಂಡು ಬರಲು ಇದು ಕೂಡ ಒಂದು ಕಾರಣವಾಗುತ್ತದೆ. ಊಟದ ಮಧ್ಯೆ ಆಗಾಗ ನೀರು ಕುಡಿಯುವುದರಿಂದ ದೇಹದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚಾಗುತ್ತದೆ ಮತ್ತು ಊಟ ಮಾಡಿದ ನಂತರದಲ್ಲಿ ಇದ್ದಕ್ಕಿದ್ದಂತೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಏರಿಕೆ ಆಗುತ್ತದೆ.
  • ಸರಿಯಾಗಿ ಆಹಾರ ಜೀರ್ಣ ಆಗದೆ ಇರುವ ಕಾರಣಕ್ಕೆ ಆಹಾರದಲ್ಲಿ ಸಕ್ಕರೆ ಪ್ರಮಾಣ ಹಾಗೆ ಇರುತ್ತದೆ. ಇದು ಗ್ಲುಕೋಸ್ ಅಂಶ ಹೆಚ್ಚಾಗಲು ಕಾರಣವಾಗುತ್ತದೆ. ಪ್ರತಿಯೊಂದು ಜೀವಕೋಶಗಳಲ್ಲಿ ಇದು ಕೊಬ್ಬಿನ ಅಂಶದ ರೂಪದಲ್ಲಿ ಶೇಖರಣೆಯಾಗುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುವ ಹಾಗೆ ಮಾಡುತ್ತದೆ.

ದೇಹದ ತೂಕ ಹೆಚ್ಚಾಗಬಹುದು

  • ಊಟದ ಮಧ್ಯೆ ನೀರು ಕುಡಿಯುವುದರಿಂದ ಕೆಲವರಿಗೆ ದೇಹದಲ್ಲಿ ತೂಕ ಹೆಚ್ಚಾಗಬಹುದು ಎಂದು ಹೇಳುತ್ತಾರೆ. ಅದು ನಿಜ ಕೂಡ. ಯಾಕೆಂದರೆ ಮೊದಲೇ ಹೇಳಿದಂತೆ ಕೊಬ್ಬಿನ ಅಂಶಗಳು ಜೀವ ಕೋಶಗಳಲ್ಲಿ ಶೇಖರಣೆ ಆಗುತ್ತಾ ಹೋಗುತ್ತದೆ.
  • ಇದರಿಂದ ಸಹಜವಾಗಿ ಆಯುರ್ವೇದದ ಪ್ರಕಾರ ತೂಕ ಹೆಚ್ಚಾಗಬಹುದು. ಕೆಲವರಿಗೆ ವಾತ, ಕಫ, ಪಿತ್ತ ಇವುಗಳಲ್ಲಿ ಅಸಮತೋಲನ ಕಂಡುಬಂದು ಬೊಜ್ಜು ಸಹ ಉಂಟಾಗಬಹುದು. ಸಂಪೂರ್ಣ ವಾಗಿ ದೇಹದ ಪ್ರಕ್ರಿಯೆ ಬದಲಾಗಬಹುದು. ಇದಕ್ಕೆ ಆಹಾರ ಪದ್ಧತಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ತಂದುಕೊಳ್ಳುವುದು ಒಳ್ಳೆಯದು.

ಈ ಟಿಪ್ಸ್ ಫಾಲೋ ಮಾಡಿ...

  • ನೀವು ತಿನ್ನುವ ಆಹಾರದಲ್ಲಿ ಉಪ್ಪಿನ ಅಂಶವನ್ನು ಕಡಿಮೆ ಇರಿಸಿಕೊಳ್ಳಿ. ಇದು ಬಾಯಾರಿಕೆ ಕಡಿಮೆ ಯಾಗುವಂತೆ ಮಾಡುತ್ತದೆ.
  • ನೀವು ಆಹಾರ ಪದಾರ್ಥಗಳನ್ನು ತಿನ್ನುವಾಗ ಚೆನ್ನಾಗಿ ಜಗಿದು ತಿನ್ನಿ. ಅರ್ಧಂಬರ್ಧ ಜಗಿದು ಹಾಗೆ ತಿನ್ನಬೇಡಿ. ಏಕೆಂದರೆ ಇದು ಸರಿಯಾಗಿ ಜೀರ್ಣವಾಗುವುದಿಲ್ಲ. ಜೊತೆಗೆ ಆಹಾರದಲ್ಲಿ ಸಿಗುವಂತಹ ಪೌಷ್ಟಿಕ ಸತ್ವಗಳು ನಿಮಗೆ ಸಿಗುವುದಿಲ್ಲ.
  • ಊಟಕ್ಕೆ ಅರ್ಧ ಗಂಟೆ ಮುಂಚೆ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದು ನಿಮ್ಮ ದೇಹದಲ್ಲಿ ತಾಪಮಾನವನ್ನು ನಿರ್ವಹಣೆ ಮಾಡಲು ಅನುಕೂಲವಾಗುತ್ತದೆ. ಜೊತೆಗೆ ನಿಮ್ಮ ದೇಹದ ತೂಕ ಕೂಡ ಅಚ್ಚುಕಟ್ಟಾಗಿ ನಿರ್ವಹಣೆ ಆಗಬಲ್ಲದು. ಆರೋಗ್ಯಕರವಾದ ಮೆಟಬೋಲಿಸಂ ನಿಮ್ಮ ದಾಗುತ್ತದೆ. ಊಟದ ಮಧ್ಯೆ ಆಗಾಗ ನೀರು ಕುಡಿಯುವ ಅಭ್ಯಾಸವನ್ನು ಇದು ತಪ್ಪಿಸುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ