ಆ್ಯಪ್ನಗರ

ಆತಂಕ, ಒತ್ತಡ ನಿವಾರಣೆ ಮಾಡುವ ಗಿಡಮೂಲಿಕೆಗಳು

ಪ್ರಕೃತಿಯಲ್ಲಿ ಸಿಗುವಂತಹ ಗಿಡಮೂಲಿಕೆಗಳು ಔಷಧಿಯ ಆಗರವಾಗಿದ್ದು, ಪ್ರತಿಯೊಂದು ಸಮಸ್ಯೆಗೂ ಇದು ಪರಿಹಾರ ನೀಡುವುದು. ಇಂದಿನ ದಿನಗಳಲ್ಲಿ ಸಾಮಾನ್ಯವಾದ ಒತ್ತಡ ಹಾಗೂ ಆತಂಕ ನಿವಾರಣೆಗೆ ಕೆಲವು ಗಿಡಮೂಲಿಕೆಗಳನ್ನು ನಿಮ್ಮ ಮುಂದಿಡಲಾಗಿದೆ.

Vijaya Karnataka Web 19 Jun 2020, 6:54 pm
ಆತಂಕ ಹಾಗೂ ಒತ್ತಡದ ಜೀವನ ಸಾಗಿಸುವುದು ಅನಿವಾರ್ಯ ಎನ್ನುವಂತಾಗಿದೆ. ವೃತ್ತಿ ಹಾಗೂ ವೈಯಕ್ತಿಕ ಜೀವನದ ಮಧ್ಯೆ ಹಗ್ಗದ ಮೇಲಿನ ನಡಿಗೆಯಂತೆ ನಾವು ಜೀವಿಸುತ್ತಿದ್ದೇವೆ. ಎರಡನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವ ವೇಳೆ ಇದು ನಮ್ಮಲ್ಲಿ ಒತ್ತಡ ಹಾಗೂ ಆತಂಕ ಉಂಟಾಗುವುದು. ಅದರಲ್ಲೂ ವೃತ್ತಿ ಜೀವನದಲ್ಲಿ ಅತಿಯಾದ ಒತ್ತಡದಿಂದಾಗಿ ಕೆಲವರು ತಮ್ಮ ವೈಯಕ್ತಿಕ ಜೀವನವನ್ನೇ ಮರೆತು ಬಿಡುವಂತಹ ಪರಿಸ್ಥಿತಿಗೆ ಬಂದು ಬಿಡುತ್ತಾರೆ. ಅತಿಯಾದ ಒತ್ತಡ ಹಾಗೂ ಆತಂಕವು ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದು.
Vijaya Karnataka Web ಆತಂಕ, ಒತ್ತಡ ನಿವಾರಣೆ ಮಾಡುವ ಗಿಡಮೂಲಿಕೆಗಳು


ಹೀಗಾಗಿ ಒತ್ತಡ ಹಾಗೂ ಆತಂಕ ಕಡಿಮೆ ಮಾಡುವುದು ಅತೀ ಅಗತ್ಯ. ಇಲ್ಲವಾದಲ್ಲಿ ಒತ್ತಡವು ಹೀಗೆ ಮುಂದುವರಿದರೆ ಅದರಿಂದ ಜೀವಿತಾವಧಿ ಮೇಲೆ ಕೂಡ ಪರಿಣಾಮ ಬೀರಬಹುದು. ಅತಿಯಾದ ಒತ್ತಡದಿಂದ ಖಿನ್ನತೆ ಕೂಡ ಆವರಿಸಬಹುದು. ಇದಕ್ಕಾಗಿ ಔಷಧಿ ಹಾಗೂ ಮಾತ್ರೆಗಳನ್ನು ಸೇವಿಸುವಂತಹ ಪರಿಸ್ಥಿತಿಯು ಬರಬಹುದು. ಇದು ಖಿನ್ನತೆ ಕಡಿಮೆ ಮಾಡಬಹುದಾದರೂ ಬೇರೆ ರೀತಿಯಲ್ಲಿ ಅಡ್ಡ ಪರಿಣಾಮ ಬೀರಬಹುದು. ಇದನ್ನು ತಡೆಯಲು ಕೆಲವು ಗಿಡಮೂಲಿಕೆಗಳು ಒತ್ತಡ ಹಾಗೂ ಆತಂಕ ಕಡಿಮೆ ಮಾಡಲು ಸಹಕಾರಿ ಆಗಿರುವುದು. ಈ ಗಿಡಮೂಲಿಕೆಗಳು ತುಂಬಾ ಸುರಕ್ಷಿತ, ನೈಸರ್ಗಿಕವಾಗಿ ಲಭ್ಯವಿರುವ ಕಾರಣ ಯಾವುದೇ ಅಡ್ಡಪರಿಣಾಮಗಳು ಇರದು. ಒತ್ತಡ ಹಾಗೂ ಆತಂಕಕ್ಕೆ ನೀವು ಬಳಸಬಹುದಾದ ಐದು ಗಿಡಮೂಲಿಕೆಗಳು ಇಲ್ಲಿವೆ.


ಅಶ್ವಗಂಧ
ಎರಡು ಸಾವಿರ ವರ್ಷಗಳಿಗೂ ಹಿಂದಿನಿಂದಲೂ ಆಯುರ್ವೇದದಲ್ಲಿ ಅಶ್ವಗಂಧವನ್ನು ಪುನರ್ಶ್ಚೇತನ ಔಷಧಿಯಾಗಿ ಬಳಸಿಕೊಂಡು ಬರಲಾಗುತ್ತಾ ಇದೆ. ಅಶ್ವಗಂಧವು ಒತ್ತಡಕ್ಕೆ ಕಾರಣವಾಗುವಂತಹ ಹಾರ್ಮೋನ್ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡಲು ನೆರವಾಗುವುದು ಎಂದು ಇಂಡಿಯನ್ ಜರ್ನಲ್ ಆಫ್ ಸೈಕಲಾಜಿಕಲ್ ಮೆಡಿಸಿನ್ ನಲ್ಲಿ ಪ್ರಕಟವಾಗಿರುವಂತಹ ಅಧ್ಯಯನ ವರದಿಯು ಹೇಳಿದೆ. ನಿಯಮಿತವಾಗಿ ಅಶ್ವಗಂಧ ಸೇವಿಸಿದರೆ ಅದರಿಂದ ಒತ್ತಡ, ಆತಂಕ, ಖಿನ್ನತೆ ಮತ್ತು ನಿದ್ರಾಹೀನತೆ ನಿವಾರಣೆ ಮಾಡಬಹುದು.


ಬ್ರಾಹ್ಮಿ
ಬ್ರಾಹ್ಮಿಯನ್ನು ಹಿಂದಿನಿಂದಲೂ ಆಯುರ್ವೇದದಲ್ಲಿ ಔಷಧಿಯಾಗಿ ಬಳಸಿಕೊಂಡು ಬರಲಾಗುತ್ತಿದೆ. ಇದು ನೆನಪಿನ ಶಕ್ತಿ ವೃದ್ಧಿಸಲು, ಆತಂಕ ಕಡಿಮೆ ಮಾಡಲು ಮತ್ತು ಇತರ ಕೆಲವು ಆರೋಗ್ಯ ಸಮಸ್ಯೆ ನಿವಾರಿಸಲು ನೆರವಾಗುವುದು. ಬ್ರಾಹ್ಮೀಯಿಂದ ಮೆದುಳಿನ ಚಟುವಟಿಕೆ ಹೆಚ್ಚಿಸಲು ನೆರವಾಗುವುದು ಎಂದು ಕೆಲವು ಅಧ್ಯಯನಗಳು ಹೇಳಿವೆ. ಈ ರೀತಿಯಾಗಿ ಆತಂಕ ಮತ್ತು ಒತ್ತಡವು ಕಡಿಮೆ ಆಗುವುದು. ಇದರ ಹೊರತಾಗಿ ಇದರಲ್ಲಿ ಇರುವಂತಹ ಪ್ರಬಲ ಆ್ಯಂಟಿಆಕ್ಸಿಡೆಂಟ್ ಗಳು ದೀರ್ಘಕಾಲಿಕ ಸಮಸ್ಯೆಯಾಗಿರುವ ಮಧುಮೇಹ ಮತ್ತು ಕ್ಯಾನ್ಸರ್ ನಿವಾರಣೆಗೆ ನೆರವಾಗುವುದು.


ತುಳಸಿ
ಪ್ರತಿಯೊಂದು ಭಾರತೀಯ ಮನೆಯಲ್ಲೂ ಕಂಡುಬರುವಂತಹ ತುಳಸಿಯು ಹಲವಾರು ರೀತಿಯ ಔಷಧೀಯ ಗುಣ ಹೊಂದಿದೆ. ಈ ಗಿಡಮೂಲಿಕೆಯು ಪ್ರಬಲ ಆ್ಯಂಟಿಆಕ್ಸಿಡೆಂಟ್ ಹೊಂದಿದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಕೂಡ ಇದು ನೆರವಾಗುತ್ತದೆ. ಪವಿತ್ರವೆಂದು ಪರಿಗಣಿಸಲಾಗಿರುವ ತುಳಸಿಯು ಮನಸ್ಸಿಗೆ ಶಾಂತಿ ನೀಡುವುದು. ಆತಂಕ ಮತ್ತು ಒತ್ತಡ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುವುದು. ತುಳಸಿ ಚಾ ಪ್ರತಿನಿತ್ಯವೂ ಕುಡಿದರೆ ಆಗ ಸಮಸ್ಯೆ ನಿವಾರಣೆ ಆಗುವುದು. ತುಳಸಿಯು ಪ್ರತಿರೋಧಕ ಶಕ್ತಿ ಹೆಚ್ಚಿಸುವುದು. ಇದು ಶೀತ ಹಾಗೂ ಜ್ವರವನ್ನು ದೂರವಿಡುವುದು.

ತುಳಸಿ ಚಹಾ ಕುಡಿದ್ರೆ, ಯಾವುದೇ ಸೈಡ್ ಎಫೆಕ್ಟ್ ಇಲ್ಲದೇ ತೂಕ ಇಳಿಸಬಹುದು

ಲೆಮನ್ ಮಲಾಮ್
ಇದು ಪುದೀನಾ ರೀತಿಯ ಗಿಡಮೂಲಿಕೆಯಾಗಿದೆ ಮತ್ತು ಲಿಂಬೆಯಂತಹ ಸುವಾಸನೆ ನೀಡುವುದು. ಇದು ಆರಾಮ ನೀಡುವುದು ಮತ್ತು ಮನಸ್ಥಿತಿ ಸುಧಾರಿಸುವ ಪ್ರಮುಖ ಗಿಡಮೂಲಿಕೆ ಆಗಿದೆ. ಲೆಮನ್ ಮಲಾಮ್ ನಲ್ಲಿ ಶಮನಕಾರಿ ಗುಣಗಳು ಮತ್ತು ಆತಂಕ ವಿರೋಧಿ ಗುಣಗಳು ಇವೆ ಎಂದು ಹಲವಾರು ಅಧ್ಯಯನಗಳು ಹೇಳಿವೆ. ನಿದ್ರಾಹೀನತೆ, ಅಜೀರ್ಣ, ಬುದ್ಧಿಮಾಂದ್ಯತೆ ಮತ್ತು ಆಲ್ಝೈಮರ್ ನಿವಾರಣೆಗೆ ಪರಿಣಾಮಕಾರಿ ಆಗಿರುವುದು.

ಭೃಂಗರಾಜ್
ಭೃಂಗರಾಜ್ ಚಾ ಕುಡಿದರೆ ಅದರಿಂದ ಮನಸ್ಸು ಶಾಂತವಾಗುವುದು ಮತ್ತು ದೇಹಕ್ಕೆ ಆರಾಮ ಸಿಗುವುದು. ಈ ಗಿಡಮೂಲಿಕೆಯಲ್ಲಿ ಇರುವಂತಹ ಕೆಲವೊಂದು ಅಂಶಗಳು ಮೆದುಳಿಗೆ ಶಕ್ತಿ ನೀಡುವುದು ಮತ್ತು ರಕ್ತ ಸಂಚಾರವನ್ನು ಹೆಚ್ಚಿಸುವುದು. ಇದರಿಂದಾಗಿ ಮನಸ್ಸು ಹಾಗೂ ದೇಹವು ಉಲ್ಲಾಸಿತವಾಗುವುದು. ರಾತ್ರಿ ವೇಳೆ ಸರಿಯಾಗಿ ನಿದ್ರೆ ಬರಲು ಇದು ನೆರವಾಗುವುದು.

ಮುನ್ನೆಚ್ಚರಿಕೆ
ಈ ಎಲ್ಲಾ ಗಿಡಮೂಲಿಕೆಗಳು ತುಂಬಾ ಆರೋಗ್ಯಕಾರಿ ಮತ್ತು ಸುರಕ್ಷಿತವಾಗಿದ್ದರೂ ಗರ್ಭಿಣಿಯರು ಅಥವಾ ಬಾಣಂತಿಯರು ಇದನ್ನು ಬಳಕೆ ಮಾಡಬಾರದು. ಆಟೋ ಇಮ್ಯೂನ್ ಕಾಯಿಲೆಯಿಂದ ಬಳಲುತ್ತಿರುವ ಜನರು ಕೂಡ ಈ ಗಿಡಮೂಲಿಕೆಗಳನ್ನು ಬಳಕೆ ಮಾಡಬಾರದು ಎಂದು ಸಲಹೆ ನೀಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ