ಆ್ಯಪ್ನಗರ

ಮೆದುಳಿನ ಆರೋಗ್ಯಕ್ಕೆ ಪೂರಕ ವಿಟಮಿನ್, ಮಿನರಲ್ಸ್‌ಗಳು

ಚಿಂತನೆಯಲ್ಲಿ ಸ್ಪಷ್ಟತೆ, ಸೃಜನಶೀಲತೆ, ಜಾಗರೂಕತೆ, ಗಮನ, ಏಕಾಗ್ರತೆ, ನೆನಪು ಮತ್ತು ಚಿತ್ತಸ್ಥಿತಿಯನ್ನು ಉತ್ತಮ ಪಡಿಸಲು ಮೆದುಳಿನ ಕಾರ್ಯ ನಿರ್ವಹಣೆಯನ್ನು ಹೆಚ್ಚಿಸುವುದವಶ್ಯ. ಇದಕ್ಕೆ ಪೂರಕ ಆಹಾರ ಮತ್ತು ವಿಟಾಮಿನ್‌ಗಳ ಅವಶ್ಯಕತೆ ಇದೆ.

Agencies 6 May 2019, 12:32 pm
ಮೆದುಳು ನಮ್ಮ ದೇಹದಲ್ಲಿನ ಪ್ರಮುಖ ಭಾಗ. ದೇಹಗಳ ಕಾರ್ಯಗಳ ಮುಖ್ಯ ನಿಯಂತ್ರಕ. ಮೆದುಳು ಆರೋಗ್ಯವಿದ್ದರೆ ಮಾತ್ರ ನಮ್ಮ ಮಾನಸಿಕ, ದೈಹಿಕ ಆರೋಗ್ಯ ಸಮತೋಲನದಲ್ಲಿರಲು ಸಾಧ್ಯ. ಹೆಚ್ಚಿನ ಒತ್ತಡ ಮೆದುಳಿನ ಕಾರ್ಯ ನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಮೆದುಳಿನಲ್ಲಿನ ಬದಲಾವಣೆಗಳಿಗೆ ಒತ್ತಡವು ಸಾಮಾನ್ಯ ಕಾರಣವಾಗಿದೆ ಮತ್ತು ದೀರ್ಘಕಾಲದ ಒತ್ತಡವು ಮೆದುಳಿನ ಶಾಶ್ವತ ಹಾನಿಗೆ ಕಾರಣವಾಗಬಹುದು ಎಂದು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.
Vijaya Karnataka Web Brain Health


ಚಿಂತನೆಯಲ್ಲಿ ಸ್ಪಷ್ಟತೆ, ಸೃಜನಶೀಲತೆ, ಜಾಗರೂಕತೆ, ಗಮನ, ಏಕಾಗ್ರತೆ, ನೆನಪು ಮತ್ತು ಚಿತ್ತಸ್ಥಿತಿಯನ್ನು ಉತ್ತಮ ಪಡಿಸಲು ಮೆದುಳಿನ ಕಾರ್ಯ ನಿರ್ವಹಣೆಯನ್ನು ಹೆಚ್ಚಿಸುವುದವಶ್ಯ. ಇದಕ್ಕೆ ಪೂರಕ ಆಹಾರ ಮತ್ತು ವಿಟಾಮಿನ್‌ಗಳ ಅವಶ್ಯಕತೆ ಇದೆ.

ಇಂದಿನ ಒತ್ತಡದ ಕಾಲದಲ್ಲಿ ಉತ್ತಮ ಜೀವನಕ್ಕಾಗಿ ಮೆದುಳನ್ನು ಸುಧಾರಿಸಲು ನಾವು ತೆಗೆದುಕೊಳ್ಳಬಹುದಾದ ಅತ್ಯುತ್ತಮ ಪೂರಕ ಯಾವುವು?

ಮೀನಿನೆಣ್ಣೆ

ಒಮೆಗಾ 3 ಕೊಬ್ಬಿನಾಮ್ಲಗಳು ಮೆದುಳಿನ ವಿವಿಧ ಮೂಲಭೂತ ಕಾರ್ಯಗಳಿಗೆ ಅವಶ್ಯ ಮತ್ತು ಮೆದುಳಿನ ಅನಾರೋಗ್ಯವನ್ನು ತಡೆಯುತ್ತವೆ. "ಮೆದುಳಿನ ಆಹಾರ" ಎಂದು ಕರೆಯಲ್ಪಡುವ ಇದು ಕೆಲವು ವಿಧದ ಮೀನುಗಳಲ್ಲಿ ಕಂಡುಬರುತ್ತದೆ.

ಮೀನಿನೆಣ್ಣೆ ಸೇವನೆಯಲ್ಲಿ ಏರಿಕೆ ಮಾಡಿದವರಲ್ಲಿ ಎಪಿಸೋಡಿಕ್ ಮೆಮೊರಿ, ಪ್ರತಿಕ್ರಿಯೆಯ ಸಮಯದಲ್ಲಿ ಗಮನಾರ್ಹ ಬೆಳವಣಿಗೆ ಮತ್ತು ಕಚೇರಿ ಕೆಲಸಗಳಲ್ಲಿ ಉತ್ತಮ ನಿರ್ವಹಣೆ ಕಂಡು ಬಂದಿದೆ.

ಫೋಲಿಕ್ ಆಮ್ಲ, ವಿಟಮಿನ್ ಬಿ 6 ಮತ್ತು ಬಿ 12


ಈ ವಿಟಮಿನ್ ಪೂರಕಗಳು ಕುಸಿತದಿಂದ ಮಿದುಳನ್ನು ರಕ್ಷಿಸುತ್ತವೆ ಮತ್ತು ಮಿದುಳಿನ ಕ್ಷೀಣತೆಯನ್ನು ತಗ್ಗಿಸುತ್ತವೆ. ಮೆದುಳಿನ ಅರಿವಿನ ಕ್ರಿಯೆಯ ಮೇಲೆ ನಿರ್ದಿಷ್ಟ ಪರಿಣಾಮವನ್ನು ಬೀರುತ್ತದೆ. ಫೋಲಿಕ್ ಆಮ್ಲ, ವಿಟಮಿನ್ ಬಿ 6 ಮತ್ತು ಬಿ 12 ಉತ್ತಮ ಆಹಾರ ಮೂಲಗಳಲ್ಲಿ ಧಾನ್ಯಗಳು, ಬೀನ್ಸ್ ಮತ್ತು ಹಣ್ಣುಗಳು ಸೇರಿವೆ.

ವಿಟಮಿನ್ ಡಿ ಪೂರಕಗಳು

ವಿಟಮಿನ್ ಡಿ ಆರಂಭಿಕ ಜೀವನದ ಮಿದುಳಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ವಿಟಮಿನ್ ಕೊರತೆಯು ಪಾರ್ಕಿನ್ಸನ್ ಕಾಯಿಲೆ ಮತ್ತು ಆಟಿಸಂ ಮುಂತಾದ ಮಿದುಳಿನ-ಸಂಬಂಧಿತ ಅಸ್ವಸ್ಥತೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ವಿಟಮಿನ್ ಆರಂಭಿಕ ಜೀವನದಲ್ಲಿ ಮಿದುಳಿನ ವಿಕಾಸದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಮೆದುಳಿನ ಕ್ರಿಯೆಯನ್ನು ಬೆಂಬಲಿಸುತ್ತದೆ.

ಮೆದುಳಿನ ಆರೋಗ್ಯ ಹೆಚ್ಚಿಸಲು ಅವರು ಅತ್ಯುತ್ತಮ ಆಹಾರಗಳು

ಬ್ಲ್ಯೂ ಬೆರ್ರಿ ಹಣ್ಣುಗಳು
ಕೊಬ್ಬಿನ ಮೀನು
ಅರಿಶಿಣ
ಬ್ರೊಕೊಲಿ
ಕಾಫಿ
ಡಾರ್ಕ್ ಚಾಕೊಲೇಟ್
ಬೀಜಗಳು
ಮೊಟ್ಟೆಗಳು

ದೇಹಕ್ಕೆ ಯಾವುದು ಉತ್ತಮವೋ, ಅವು ಮೆದುಳಿಗೆ ಸಹ ಉತ್ತಮವಾಗಿರುತ್ತವೆ. ಸೂಕ್ತ ಜೀವಸತ್ವಗಳು ಮತ್ತು ಪೂರಕಗಳು ನಿಮ್ಮ ಅರಿವಿನ ಸಾಮರ್ಥ್ಯ, ಸ್ಮೃತಿ ಮತ್ತು ಮನಸ್ಥಿತಿ ಸುಧಾರಣೆಗೆ ಅತ್ಯವಶ್ಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ