ಆ್ಯಪ್ನಗರ

ಈ ಮನೆಮದ್ದುಗಳು ಮೈ ಕೈ ನೋವನ್ನು ಖಂಡಿತ ಕಡಿಮೆ ಮಾಡಬಲ್ಲದು

ದೇಹದಲ್ಲಿ ನೋವು ಕಾಣಿಸಿಕೊಳ್ಳಲು ಅನೇಕ ಕಾರಣಗಳಿವೆ. ಆದರೆ ಈ ನೋವಿನ ನಿವಾರಣೆಗೆ ನಿಮಗೆ ಮನೆಯಲ್ಲಿ ವಿಶ್ರಾಂತಿ ಮತ್ತು ಸ್ವಲ್ಪ ಚಿಕಿತ್ಸೆ ಬೇಕಾಗಬಹುದು. ಕೆಲವು ನೋವು ದೀರ್ಘಕಾಲ ಇರುತ್ತದೆ. ಆಗ ನೀವು ವೈದ್ಯರನ್ನು ಸಂಪರ್ಕಿಸಿ. ಮಾಮೂಲಿ ನೋವಾಗಿದ್ದರೆ ಈ ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ.

Vijaya Karnataka Web 26 Sep 2020, 1:21 pm
ಇತ್ತೀಚಿನ ದಿನಗಳಲ್ಲಿ ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರ ತನಕ ಪ್ರತಿಯೊಬ್ಬರಲ್ಲೂ ದೇಹದ ನೋವು ಕಾಣಿಸಿಕೊಳ್ಳುತ್ತದೆ. ತಜ್ಞರ ಪ್ರಕಾರ ಇದು ವಿವಿಧ ಕಾರಣಗಳಿಂದ ಉಂಟಾಗುವ ಸಾಮಾನ್ಯ ಸಮಸ್ಯೆಯಾಗಿದೆ. ಆಯಾಸ, ನಿಮ್ಮ ಕೆಲಸದ ಮೇಜಿನ ಬಳಿ ಹೆಚ್ಚು ಹೊತ್ತು ಕುಳಿತುಕೊಳ್ಳುವುದು ಅಥವಾ ಕೆಲವು ಆರೋಗ್ಯ ಸಮಸ್ಯೆಗಳ ಕಾರಣದಿಂದಾಗಿರಬಹುದು. ದೀರ್ಘಕಾಲದ ದೈಹಿಕ ಚಟುವಟಿಕೆಯು ದೇಹದ ನೋವು ಮತ್ತು ಒತ್ತಡಕ್ಕೆ ಕಾರಣವಾಗಬಹುದು. ನಿರ್ಜಲೀಕರಣ ಮತ್ತು ನಿದ್ರೆಯ ಕೊರತೆಯು ದೇಹದ ನೋವನ್ನು ಇನ್ನಷ್ಟು ಹದಗೆಡಿಸುತ್ತದೆ. ನೋವು ನಿವಾರಕವನ್ನು ತೆಗೆದುಕೊಳ್ಳುವುದರಿಂದ ದೇಹದ ನೋವಿಗೆ ನಿಮಗೆ ತಕ್ಷಣ ಪರಿಹಾರ ಸಿಗಬಹುದು. ಆದರೆ ಇದು ನಿಮಗೆ ಕೆಲವು ದಿನಗಳವರೆಗೆ ಮಾತ್ರ ಸಹಾಯ ಮಾಡುತ್ತದೆ.
Vijaya Karnataka Web home remedies to relieve body pain
ಈ ಮನೆಮದ್ದುಗಳು ಮೈ ಕೈ ನೋವನ್ನು ಖಂಡಿತ ಕಡಿಮೆ ಮಾಡಬಲ್ಲದು


ವಿಶೇಷವಾಗಿ ನಿಮಗೆ ಆಗಾಗ್ಗೆ ದೇಹದ ನೋವು ಕಾಣಿಸಿಕೊಳ್ಳುತ್ತಿದ್ದರೆ ಪರಿಹಾರ ಪಡೆಯಲು ನೋವಿನ ಮೂಲ ಕಾರಣವನ್ನು ಕಂಡುಹಿಡಿಯುವುದು ಉತ್ತಮ. ಒಂದು ವೇಳೆ ನೋವು ಹದಗೆಡುತ್ತಿರುವಂತೆ ತೋರುತ್ತಿದ್ದರೆ ಬೇಗನೆ ವೈದ್ಯರನ್ನು ಭೇಟಿ ಮಾಡುವುದು ಸೂಕ್ತ. ಅಂದಹಾಗೆ ಇಲ್ಲಿ ದೇಹದ ನೋವಿಗೆ ಪರಿಹಾರ ನೀಡುವ ಕೆಲವು ಮನೆಮದ್ದುಗಳನ್ನು ಕೊಡಲಾಗಿದೆ. ಇವು ನಿಮ್ಮ ದೇಹದ ನೋವನ್ನು ಖಂಡಿತ ಕಡಿಮೆ ಮಾಡಬಲ್ಲದು.

​ಉಪ್ಪು ಮತ್ತು ಬಿಸಿ ನೀರು

ಉಪ್ಪುನೀರು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಸ್ನಾಯುಗಳ ನೋವಿನಿಂದ ಪರಿಹಾರ ನೀಡುತ್ತದೆ. ಬೆಚ್ಚಗಿನ ನೀರು ಸ್ನಾಯುಗಳ ಒತ್ತಡವನ್ನು ಬಿಡುಗಡೆ ಮಾಡುತ್ತದೆ. ಆದ್ದರಿಂದ ಇದು ತಾಲೀಮು ಅಥವಾ ದೈಹಿಕ ಚಟುವಟಿಕೆಯಿಂದ ಉಂಟಾಗುವ ದೇಹದ ನೋವನ್ನು ಕಡಿಮೆ ಮಾಡಲು ಒಳ್ಳೆಯದು. ಹಾಗಾದರೆ ದೇಹದ ನೋವಿಗೆ ಉಪ್ಪು ಮತ್ತು ಬಿಸಿ ನೀರನ್ನು ನೀವು ಹೇಗೆ ಬಳಸಬಹುದು ಎಂದು ಇಲ್ಲಿ ಕೊಡಲಾಗಿದೆ ನೋಡಿ. ಮೊದಲಿಗೆ ಬೆಚ್ಚಗಿನ ನೀರನ್ನು ಟಬ್‌’ನಲ್ಲಿ ತುಂಬಿಸಿ. ನಂತರ ಇದಕ್ಕೆ 1 ಕಪ್ ಉಪ್ಪು ಮಿಶ್ರಣ ಮಾಡಿ. ನೋವಿರುವ ದೇಹದ ಭಾಗವನ್ನು ಈ ನೀರಿನಲ್ಲಿ 15-20 ನಿಮಿಷ ನೆನೆಸಿಡಿ ಅಥವಾ ನೀವು ಟಬ್‌ನಲ್ಲಿ 15 ನಿಮಿಷಗಳ ಕಾಲ ಕುಳಿತುಕೊಳ್ಳಬಹುದು ಅಥವಾ ಟವೆಲ್ ಅನ್ನು ಈ ಉಪ್ಪುಸಹಿತ ನೀರಿನಲ್ಲಿ ನೆನೆಸಿ ನೋವಿರುವ ಜಾಗದ ಮೇಲೆ ಇಡಿ.

ಚಿಕ್ಕ ವಯಸ್ಸಿನಲ್ಲಿಯೇ ಅಧಿಕ ಕೊಲೆಸ್ಟ್ರಾಲ್ ಹೆಚ್ಚು ಅಪಾಯಕರ

​ಸಾಸಿವೆ ಎಣ್ಣೆ ಮಸಾಜ್

ಬಹುಶಃ ದೇಹದ ನೋವು ಮತ್ತು ಇತರ ನೋವುಗಳನ್ನು ನಿವಾರಿಸಲು ಮಸಾಜ್ ಉತ್ತಮ ಮಾರ್ಗವಾಗಿದೆ. ಸರಿಯಾಗಿ ಮಸಾಜ್ ಮಾಡಿದಾಗ ಮಸಾಜ್ ಅಂಗಾಂಶಗಳ ವಿಶ್ರಾಂತಿಯನ್ನು ಉತ್ತೇಜಿಸುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ನರಗಳ ಸಂಕೋಚನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೀಗಾಗಿ ನೋವಿನಿಂದ ಪರಿಹಾರ ನೀಡುತ್ತದೆ. ಈಗ ನೀವು ಮಾಡಬೇಕಾಗಿರುವುದು ಇಷ್ಟೇ. ಬೆಚ್ಚಗಿನ ಸಾಸಿವೆ ಎಣ್ಣೆಯಿಂದ ಮಸಾಜ್ ಮಾಡಿ. ಈ ಎಣ್ಣೆಯು ಉರಿಯೂತದ ಗುಣಗಳನ್ನು ಹೊಂದಿರುವುದರಿಂದ ದೇಹದ ನೋವಿನ ವಿರುದ್ಧ ಹೋರಾಡಲು ಪರಿಣಾಮಕಾರಿಯಾಗಿದೆ ಎಂದು ಸೂಚಿಸಲಾಗಿದೆ. ನೀವು ಮಸಾಜ್ ಥೆರಪಿಸ್ಟ್ ಅನ್ನು ನೇಮಿಸಿಕೊಳ್ಳಬಹುದು ಅಥವಾ ಕುಟುಂಬದ ಸದಸ್ಯರ ಬಳಿ ಮಾಡಿಸಿಕೊಳ್ಳಬಹುದು. ಇಲ್ಲವಾದಲ್ಲಿ ನೋವಿರುವ ಜಾಗಕ್ಕೆ ನೀವೇ ನಿಧಾನವಾಗಿ ಮಸಾಜ್ ಮಾಡಬಹುದು.

​ಬಿಸಿ ನೀರಿನಲ್ಲಿ ಒದ್ದೆ ಮಾಡಿದ ಟವೆಲ್

ಸ್ನಾಯುಗಳ ಬಿಗಿತವನ್ನು ಕಡಿಮೆ ಮಾಡಲು ಮತ್ತು ರಕ್ತದ ಹರಿವನ್ನು ಸುಧಾರಿಸಲು ಹಾಟ್ ಕಂಪ್ರೆಸ್ ಉತ್ತಮ ಮಾರ್ಗವಾಗಿದೆ. ಇದು ಗಟ್ಟಿಯಾದ ಸ್ನಾಯುಗಳಿಗೆ ವಿಶೇಷವಾಗಿ ಪರಿಣಾಮಕಾರಿಯಾಗಿದೆ. ಆದರೆ ಗಾಯದಿಂದಾಗಿ ನೋವು ಉಂಟಾದರೆ ಅದನ್ನು ಬಳಸಬಾರದು. ನೋವಿರುವ ಜಾಗದಲ್ಲಿ ಹಾಟ್ ಕಾಂಪ್ರೆಸ್ ಅಥವಾ ಬೆಚ್ಚಗಿನ ನೀರಿನಲ್ಲಿ ಟವೆಲ್ ಅದ್ದಿ ಪ್ರೆಸ್ ಮಾಡಲು ನೀವು ಪ್ರಯತ್ನಿಸಬಹುದು. ಹೀಟಿಂಗ್ ಪ್ಯಾಡ್ ಅಥವಾ ಡ್ಯಾಂಪ್ ಟವೆಲ್ ತುಂಬಾ ಬಿಸಿಯಾಗಿರಬಾರದು. ಏಕೆಂದರೆ ಅದು ನಿಮ್ಮ ಚರ್ಮವನ್ನು ಸುಡುತ್ತದೆ.

​ಐಸ್ ಪ್ಯಾಕ್

ಸ್ನಾಯು ಉಳುಕಿನಿಂದ ಉಂಟಾಗುವ ನೋವು ಮತ್ತು ಊತಕ್ಕೆ ಐಸ್ ಪ್ಯಾಕ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇದು ಪ್ರದೇಶವನ್ನು ನಿಶ್ಚೇಷ್ಟಗೊಳಿಸುತ್ತದೆ ಮತ್ತು ರಕ್ತಸ್ರಾವವನ್ನು ಕಡಿಮೆ ಮಾಡುತ್ತದೆ. ನೀವು ಈ ರೀತಿಯಲ್ಲಿ ಐಸ್ ಪ್ಯಾಕ್ ತಯಾರಿಸಬಹುದು ಮತ್ತು ಬಳಸಬಹುದು. ಮೊದಲಿಗೆ ಪ್ಲಾಸ್ಟಿಕ್ ಚೀಲದಲ್ಲಿ ಕೆಲವು ಐಸ್ ಕ್ಯೂಬ್ ತೆಗೆದುಕೊಳ್ಳಿ. ಆ ನಂತರ ಚೀಲವನ್ನು ನೀರಿನಿಂದ ತುಂಬಿಸಿ ಮತ್ತು ಅದನ್ನು ಗಾಳಿಯಾಡದಂತೆ ಬಿಗಿಯಾಗಿ ಮುಚ್ಚಿ. ಈ ಚೀಲವನ್ನು ಟವೆಲ್‌ನಲ್ಲಿ ಕಟ್ಟಿಕೊಳ್ಳಿ. ಕೆಲವು ಸೆಕೆಂಡುಗಳ ಕಾಲ ನೋವಿರುವ ಜಾಗದ ಮೇಲೆ ಇರಿಸಿ. ಐಸ್ ಅನ್ನು ಒಂದೇ ಬಾರಿಗೆ ದೀರ್ಘಕಾಲ ಇಟ್ಟುಕೊಳ್ಳಬೇಡಿ. ಇದನ್ನು ದಿನಕ್ಕೆ ಎರಡು ಬಾರಿ ಪುನರಾವರ್ತಿಸಿ.

ಕಾಮಾಲೆ ರೋಗದಿಂದ ಬೇಗ ಗುಣಮುಖರಾಗಬೇಕೆಂದರೆ ಈ ಆಹಾರ ಸೇವಿಸಿ

​ಶುಂಠಿ ಮತ್ತು ಬಿಸಿ ನೀರು

ಶುಂಠಿ ನೋವು ನಿವಾರಕ ಮತ್ತು ಉರಿಯೂತದ ಸಂಯುಕ್ತಗಳಿಂದ ಕೂಡಿದೆ. ನೋವು ಕಡಿಮೆ ಮಾಡುವಲ್ಲಿ ಶುಂಠಿ ಐಬುಪ್ರೊಫೇನ್ ನಂತೆ ಪರಿಣಾಮಕಾರಿ ಎಂದು ಸಂಶೋಧನಾ ಅಧ್ಯಯನಗಳು ಸೂಚಿಸುತ್ತವೆ. ಶುಂಠಿಯನ್ನು ಸೇವಿಸಲು ಉತ್ತಮ ಮಾರ್ಗವೆಂದರೆ ಬೆಚ್ಚಗಿನ ನೀರು. ತಯಾರಿಸುವ ವಿಧಾನ ಇಲ್ಲಿದೆ ನೋಡಿ. ಒಂದು ಇಂಚು ಶುಂಠಿಯನ್ನು ತೆಗೆದುಕೊಳ್ಳಿ. ಈಗ ಒಂದು ಕಪ್ ನೀರು ಹಾಕಿ ಬಾಣಲೆಯಲ್ಲಿ ಕುದಿಸಿ. ಈ ದ್ರಾವಣವನ್ನು ಸೋಸಿ , ಸಾಕಷ್ಟು ತಣ್ಣಗಾದಾಗ ಕುಡಿಯಿರಿ. ಈ ಪಾನೀಯ ಸಿಹಿಯಾಗಬೇಕೆಂದರೆ ನೀವು ಜೇನುತುಪ್ಪವನ್ನು ಸೇರಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ