ಆ್ಯಪ್ನಗರ

ದೇಹವನ್ನು ಡಿಟಾಕ್ಸ್‌ ಮಾಡಿಕೊಳ್ಳಿ

ಮಾನಸಿಕ- ದೈಹಿಕ ಒತ್ತಡದ ಅನುಭವಗಳು, ದೈಹಿಕ ಅನಾರೋಗ್ಯ ಆಗಾಗ ಕಾಡುತ್ತಿದ್ದರೆ ನೀವು ಡಿಟಾಕ್ಸ್‌ ಮಾಡಿಕೊಳ್ಳಬೇಕೆಂದು ಅರ್ಥ.

Vijaya Karnataka Web 5 Apr 2019, 6:12 pm
ದೇಹದಲ್ಲಿ ವಿಷಕಾರಿ ಅಂಶಗಳು ಹೆಚ್ಚಾಗಿ ಶೇಖರಗೊಂಡಾಗ ಡಿಟಾಕ್ಸಿಫಿಕೇಶನ್‌ ಮಾಡಿಕೊಳ್ಳುವುದು ಅಗತ್ಯ. ಇದಕ್ಕಾಗಿ ಯೋಗ, ಆರೋಗ್ಯಕರ ಆಹಾರ ಸೇವನೆಯನ್ನೂ ಮಾಡಬೇಕು.
Vijaya Karnataka Web fruit


ಮಾನಸಿಕ- ದೈಹಿಕ ಒತ್ತಡದ ಅನುಭವಗಳು, ದೈಹಿಕ ಅನಾರೋಗ್ಯ ಆಗಾಗ ಕಾಡುತ್ತಿದ್ದರೆ ನೀವು ಡಿಟಾಕ್ಸ್‌ ಮಾಡಿಕೊಳ್ಳಬೇಕೆಂದು ಅರ್ಥ. ದೇಹ ನೀಡುವ ಕೆಲವು ಸೂಚನೆಗಳನ್ನು ಅನುಸರಿಸಿ ನೀವು ಇದಕ್ಕೆ ಮುಂದಾಗಬಹುದು.

ದೇಹ ನೀಡುವ ಕೆಲವು ಡಿಟಾಕ್ಸಿಫಿಕೇಶನ್‌ ಸೂಚನೆಗಳು ಇವು:
ಸದಾ ಆಯಾಸ:
ಪ್ರತಿದಿನವೂ ಸದಾ ಆಯಾಸಗೊಂಡಿರುತ್ತೀರಾ? ಅಂದರೆ ನಿಮ್ಮ ದೇಹ ಒತ್ತಡದಲ್ಲಿದೆ ಎಂದರ್ಥ. ಸ್ಟ್ರೆಸ್‌ ಅನ್ನು ನಿಭಾಯಿಸಲು ಬೇಕಾದ ಹಾರ್ಮೋನ್‌ ಅನ್ನು ನಿಮ್ಮ ದೇಹದ ಅಡ್ರನಾಲಿನ್‌ ಗ್ರಂಥಿಯು ಬಿಡುಗಡೆ ಮಾಡುತ್ತದೆ. ದೇಹ ಅತಿಯಾಗಿ ಒತ್ತಡಕ್ಕೆ ಒಳಗಾದಾಗ ಈ ಹಾರ್ಮೋನ್‌ ಮಟ್ಟ ಸಾಕಾಗುವುದಿಲ್ಲ. ಅಂದರೆ, ನಿಮ್ಮ ದೇಹವನ್ನು ಒತ್ತಡದಿಂದ ಮುಕ್ತಗೊಳಿಸಬೇಕೆಂದು ಅರ್ಥ. ನಿಮ್ಮ ಧಾವಂತದ ದಿನಚರಿಯಿಂದ ಕೊಂಚ ಹಿಂದಕ್ಕೆ ಬನ್ನಿ.

ಆಗಾಗ ಅನಾರೋಗ್ಯ: ಪದೇಪದೆ ಕಾಯಿಲೆ ಬೀಳುತ್ತಿದ್ದರೆ ನಿಮ್ಮ ಇಮ್ಯೂನಿಟಿ ಪವರ್‌ ಕಡಿಮೆಯಾಗಿದೆ ಎಂದರ್ಥ. ಹೀಗಾಗಿಯೇ ವೈರಸ್‌, ಬ್ಯಾಕ್ಟೀರಿಯಾಗಳಿಂದ ಆಗಾಗ ಸೋಂಕಿಗೊಳಗಾಗುತ್ತೀರಿ. ಇದಕ್ಕಾಗಿ ಆರೋಗ್ಯಕರ ಆಹಾರ ಸೇವನೆಯನ್ನು ರೂಢಿಸಿಕೊಳ್ಳಿ. ಜಂಕ್‌ ಫುಡ್‌ ಸೇವನೆಯಿಂದ ದೂರವಿರಿ. ಮನೆಯಲ್ಲಿಯೇ ಮಾಡಿದ ಆಹಾರ, ಹಣ್ಣು, ತರಕಾರಿಗಳ ಸೇವನೆ ಉತ್ತಮ.

ಬದಲಾಗುವ ಮೂಡ್‌: ಅಧಿಕ ಕೆಲಸದ ಒತ್ತಡವಿದ್ದರೆ ದೇಹ, ಮನಸ್ಸುಗಳಿಗೆ ಕಿರಿಕಿರಿಯಾಗುತ್ತದೆ. ಇದರ ಜತೆಗೆ ಮೂಡ್‌ ಕೂಡ ಬದಲಾದರೆ ಬಹಳ ಕಷ್ಟ. ದೇಹಕ್ಕೆ ಖುಷಿಯ ಭಾವನೆಯನ್ನು ನೀಡುವ ಡೊಪಾಮೈನ್‌ ಹಾರ್ಮೋನ್‌ ಬಿಡುಗಡೆಯಾಗುವುದು ನಿಲ್ಲುವುದರಿಂದಲೇ ಈ ರೀತಿಯ ಮೂಡ್‌ನಲ್ಲಿನ ಏರಿಳಿತ ಕಾಣಬಹುದು. ದೇಹ ಒತ್ತಡಕ್ಕೆ ಒಳಗಾದಾಗ ಈ ಹಾರ್ಮೋನ್‌ ಬಿಡುಗಡೆಯಾಗುವುದು ನಿಂತುಬಿಡುತ್ತದೆ. ಇದನ್ನು ಸರಿಪಡಿಸಿಕೊಳ್ಳದಿದ್ದರೆ ಮನಸ್ಸು ಡಿಪ್ರೆಷನ್‌ಗೆ ಒಳಗಾಗಲೂಬಹುದು.

ನೆನಪಿರುವುದಿಲ್ಲ: ವಯಸ್ಸಾದಂತೆ ನೆನಪಿನ ಶಕ್ತಿ ಕ್ಷೀಣವಾಗುತ್ತ ಹೋಗುವುದು ಸಹಜ. ಆದರೆ, ದೇಹವು ಒತ್ತಡದಲ್ಲಿರುವಾಗ ಅದು ಲಿವರ್‌ನ ಮೇಲೆ ಪ್ರಭಾವ ಬೀರುತ್ತದೆ. ಇದರಿಂದ ರಕ್ತದಲ್ಲಿ ವಿಷಕಾರಿ ಅಂಶವು ಹೆಚ್ಚಿ ಅದು ಮಿದುಳನ್ನು ತಲುಪುತ್ತದೆ. ಇದರಿಂದ ಮಿದುಳು ಸಮರ್ಪಕವಾಗಿ ಕೆಲಸ ಮಾಡುವುದಿಲ್ಲ. ಮರೆವಿನ ಮೂಲಕವೂ ಇದು ವ್ಯಕ್ತವಾಗಬಹುದು. ಇಂತಹ ಸಂದರ್ಭದಲ್ಲಿ ನಿಮ್ಮ ಒತ್ತಡಗಳನ್ನು ನಿವಾರಿಸಿಕೊಂಡು ನೆಮ್ಮದಿಯ ಬದುಕನ್ನು ಕಂಡುಕೊಳ್ಳುವುದು ಮುಖ್ಯ.

ನಿದ್ರಾಹೀನತೆ: ರಾತ್ರೆ ಹೊತ್ತು ನಿದ್ರೆ ಬರದಿದ್ದರೆ ಅದಕ್ಕೂ ದೇಹದಲ್ಲಿ ಅತಿಯಾದ ವಿಷಕಾರಿ ಅಂಶ ಕಾರಣವಾಗಿರಬಹುದು. ಟಾಕ್ಸಿಕ್‌ ಅಂಶಗಳು ಹೆಚ್ಚಾದಾಗ ಅದು ದೇಹದ ಇಪ್ಪತ್ತನಾಲ್ಕು ಗಂಟೆಯ ಸೈಕಲ್‌ ಮೇಲೆ ಪ್ರಭಾವ ಬೀರುತ್ತದೆ. ಇದರಿಂದಾಗಿ ನಿದ್ರೆ ಬಾರದೇ ಇರಬಹುದು. ಇದನ್ನು ಸರಿಪಡಿಸಿಕೊಳ್ಳು ಡಿಟಾಕ್ಸಿಫೈ ಆಗಲೇಬೇಕು.

ಚರ್ಮದ ಸೋಂಕು: ಅಲರ್ಜಿಗಳು, ಚರ್ಮದ ಸೋಂಕು ಕಾಣಿಸಿಕೊಳ್ಳುವುದು ಕೂಡ ವಿಷಕಾರಿ ಅಂಶ ಹೆಚ್ಚಾದಾಗಲೇ. ಸಣ್ಣದೊಂದು ಪಿಂಪಲ್‌ ಕೂಡ ಈ ಸಂದರ್ಭದಲ್ಲಿ ಬಹಳ ಕಾಟ ಕೊಡಬಹುದು. ಇದಕ್ಕಾಗಿ ಆರೋಗ್ಯಕರ ಆಹಾರ ಪಾಲನೆ ಅತ್ಯಗತ್ಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ