ಆ್ಯಪ್ನಗರ

ನೆಗಡಿಯನ್ನು ದೂರವಿಡಲು ಸುಲಭ ಸೂತ್ರ

ಶೀತ ಕಾಡದಂತೆ ನೋಡಿಕೊಳ್ಳಲು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ.

Agencies 15 Jun 2019, 8:17 am
ಇದು ಎಲ್ಲರಿಗೂ ಶೀತ, ಕೆಮ್ಮು ಬಾಧಿಸುವ ಸಮಯ. ಕಚೇರಿಯಲ್ಲಂತೂ ಅಕ್ಕಪಕ್ಕದಲ್ಲಿ ಕೂರುವವರಿಂದಲೇ ಶೀತ ಹರಡಿಬಿಡಬಹುದು. ಒಮ್ಮೆ ಶೀತ ಬಾಧಿಸಿತೆಂದರೆ ವಾರವಿಡೀ ಅದರ ಉಪಟಳ ಇದ್ದೇ ಇರುತ್ತದೆ. ಇದು ನಿತ್ಯದ ಬದುಕಿನ ಹದವನ್ನೇ ತಪ್ಪಿಸುವಷ್ಟು ಕಿರಿಕಿರಿಯನ್ನೂ ಉಂಟು ಮಾಡಬಹುದು. ಹೀಗಾಗಿ, ಶೀತ ಕಾಡದಂತೆ ನೋಡಿಕೊಳ್ಳಲು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ.
Vijaya Karnataka Web Cold


ಕೈ ತೊಳೆದುಕೊಳ್ಳಿ: ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ಊಟ ಮಾಡುವ ಮುನ್ನ, ಹೊರಗಿನಿಂದ ಬಂದಾಕ್ಷಣ, ಫೈಲುಗಳನ್ನು ಮುಟ್ಟಿದ ಬಳಿಕ ಇಪ್ಪತ್ತು ಸೆಕೆಂಡ್‌ ಕಾಲ ಚೆನ್ನಾಗಿ ತೊಳೆದುಕೊಂಡರೆ ಕೀಟಾಣುಗಳು ಕೈಗಳ ಮೂಲಕ ನಿಮ್ಮನ್ನು ಪ್ರವೇಶ ಮಾಡಲಾರವು.

ಸಾಕಷ್ಟು ನಿದ್ರೆ: ಪ್ರೌಢರಾದರೂ ಅವರಿಗೆ ದಿನಕ್ಕೆ ಕನಿಷ್ಠ ಆರು ಗಂಟೆ ನಿದ್ರೆ ಅಗತ್ಯವಿರುತ್ತದೆ. ಇದಕ್ಕಿಂತ ಕಡಿಮೆಯಾದಲ್ಲಿ ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಬೇಗನೇ ಅನಾರೋಗ್ಯಕ್ಕೆ ತುತ್ತಾಗುವ ಅಪಾಯವಿದೆ.

ಕೆಲಸದ ಮಧ್ಯೆ ಬ್ರೇಕ್‌: ಒಂದೇ ಸಮನೆ ಕುಳಿತು ಕೆಲಸ ಮಾಡುವಾಗ ಮಧ್ಯದಲ್ಲಿ ಒಂದೆರಡು ಬಾರಿ ಬ್ರೇಕ್‌ ತೆಗೆದುಕೊಳ್ಳಿ. ಬಿಡುವಿಲ್ಲದಂತೆ ಕೆಲಸ ಮಾಡಿದರೆ ಸ್ಟ್ರೆಸ್‌ ಹಾರ್ಮೋನ್‌ 'ಕಾರ್ಟಿಸೋಲ್‌' ಹೆಚ್ಚಾಗಿ ಉತ್ಪತ್ತಿಯಾಗಿ ದೇಹವು ಬೇಗನೇ ಶೀತಕ್ಕೆ ಒಳಗಾಗಬಹುದು.

ನೀರು ಕುಡಿಯಿರಿ: ಸಾಕಷ್ಟು ನೀರು ಕುಡಿಯಿರಿ. ಇದು ಮಳೆಗಾಲವಿದ್ದು ನೀರು ಕುಡಿಯಬೇಕು ಅನಿಸದಿದ್ದರೂ ನೆನಪು ಮಾಡಿಕೊಂಡು ಕುಡಿಯಿರಿ, ದೇಹವನ್ನು ಹೈಡ್ರೇಟೆಡ್‌ ಆಗಿರಿಸಿಕೊಳ್ಳಿ.

ಕಾಫಿಯ ಬದಲು ಗ್ರೀನ್‌ ಟೀ: ದಿನದ ಆರಂಭದಲ್ಲಿ ಕಾಫಿ ಕುಡಿದರೆ ಚುರುಕಾಗಿ ಕೆಲಸ ಮಾಡಬಹುದು ಎಂಬ ಭಾವನೆ ನಿಮ್ಮಲ್ಲಿರಬಹುದು. ಆದರೆ, ಕಾಫಿಯ ಬದಲು ಗ್ರೀನ್‌ ಟೀ ಕುಡಿಯಿರಿ. ಗ್ರೀನ್‌ ಟೀಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ಗಳು ದೇಹವನ್ನು ಇನ್ನಷ್ಟು ಆರೋಗ್ಯವಾಗಿಡುತ್ತವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ