ಆ್ಯಪ್ನಗರ

6 ತಿಂಗಳಲ್ಲಿ ಮಹಿಳೆ 45 ಕೆಜಿ ತೂಕ ಇಳಿಸಿಕೊಂಡಿದ್ದು ಹೇಗೆ ಗೊತ್ತಾ? ಈ ಟಿಪ್ಸ್ ಓದಿ

ಗರ್ಭಿಣಿಯಾದ ಬಳಿಕ ಮಹಿಳೆ ಸಾಮಾನ್ಯವಾಗಿ ದಪ್ಪಗಾಗುತ್ತಾರೆ. ಬಳಿಕ, ಮೊದಲಿನ ಶೇಪ್‌ಗೆ ಬರಲು ಅವರು ಬಯಸುತ್ತಾರೆ. ಆದರೆ, ಅವರು ಅಂದುಕೊಂಡಂತೆ ತೆಳ್ಳಗಾಗುವುದು ಅದು ಕಷ್ಟಕರ. ತೂಕ ಹೆಚ್ಚಿಸಿಕೊಳ್ಳುವುದು ಸುಲಭ, ಆದರೆ ಪುನ: ಇಳಿಸಿಕೊಳ್ಳುವುದು ಕಷ್ಟ. ಆದರೆ, ಅರ್ಪಿತಾ ರಾಯ್ ಎನ್ನುವ ಮಹಿಳೆ 6 ತಿಂಗಳಲ್ಲಿ 45 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಅದು ಹೇಗೆ ಗೊತ್ತಾ?

TIMESOFINDIA.COM 12 Mar 2019, 7:15 pm
ಅರ್ಪಿತಾ ರಾಯ್ ಎನ್ನುವ ಮಹಿಳೆ ತಾಯಿಯಾದ ಬಳಿಕ ತೂಕ 110 ಕೆಜಿಗೆ ಹೆಚ್ಚಾಗಿದೆ. ಆದರೆ, ಅದರಿಂದ ಆಕೆಗೆ ಸುಲಭವಾದ ಕೆಲಸಗಳನ್ನು ಮಾಡುವುದು ಸಹ ತೀವ್ರ ಕಷ್ಟವಾಗಿ ಪರಿಣಮಿಸಿದೆ. ನಂತರ, ತೆಳ್ಳಗಾಗಲು ನಿರ್ಧರಿಸಿದ 29 ವರ್ಷದ ಅರ್ಪಿತಾ ರಾಯ್, 6 ತಿಂಗಳಲ್ಲಿ 45 ಕೆಜಿ ತೂಕ ಕಳೆದುಕೊಂಡಿದ್ದಾರೆ. ಆಕೆ ತೆಳ್ಳಗಾದ ರಹಸ್ಯ ಹೀಗಿದೆ ನೋಡಿ.
Vijaya Karnataka Web arpitha rai


ಟರ್ನಿಂಗ್ ಪಾಯಿಂಟ್: ಗರ್ಭಿಣಿಯಾದ ಬಳಿಕ ಹಾಗೂ ಮಗು ಹುಟ್ಟಿದ ನಂತರ, ತನ್ನ ತೂಕ ಬೇಗ ಹೆಚ್ಚಾಗುತ್ತಾ ಹೋಯಿತು. ಆದರೆ, ಅದರಿಂದ ತನಗೆ ಚಿಕ್ಕ ಕೆಲಸ ಮಾಡಲು ಹಾಗೂ ದೇಹ ಬಗ್ಗಿಸಲು ಸಹ ಕಷ್ಟವಾಗುತ್ತಿತ್ತು. ಅಲ್ಲದೆ, ಮಗುವಿನ ಜತೆ ಆಟವಾಡಲು ಅಥವಾ ನೋಡಿಕೊಳ್ಳಲು ಸಹ ಸಾಧ್ಯವಾಗುತ್ತಿರಲಿಲ್ಲ. ಆ ವೇಳೆ, ತನಗಾಗಿ ಹಾಗೂ ಮಗುವಿಗಾಗಿ ಸಣ್ಣದಾಗಲು ಪ್ರಾರ್ಥಿಸಿದೆ ಎಂದು ಆಕೆ ಹೇಳಿಕೊಂಡಿದ್ದಾರೆ.

ಬೆಳಗ್ಗಿನ ತಿಂಡಿ: ಒಂದು ಸೇಬು, ಒಂದು ಬಟ್ಟಲು ಓಟ್ಸ್‌ ಜತೆಗೆ ಕಡಿಮೆ ಕೊಬ್ಬು ಇರುವ ಹಾಲು

ಮಧ್ಯಾಹ್ನದ ಊಟ: ಎರಡು ಚಪಾತಿ, ಒಂದು ಬಟ್ಟಲು ದಾಲ್‌ ಹಾಗೂ ಸ್ವಲ್ಪ ಬೇಯಿಸಿದ ತರಕಾರಿ

ರಾತ್ರಿ ಊಟ: ಒಂದು ಚಪಾತಿ, ಸ್ವಲ್ಪ ದಾಲ್‌ ಜತೆಗೆ ತರಕಾರಿ. ಕೆಲ ದಿನಗಳು ಮಾತ್ರ ಮನೆಯಲ್ಲಿ ಬೇಯಿಸಿದ ರಾಜ್ಮಾ ತಿನ್ನುತ್ತಿದ್ದರು.

ವ್ಯಾಯಾಮ: ಬೆಳಗ್ಗಿನ ಹೊತ್ತು ವ್ಯಾಯಾಮ ಮಾಡುತ್ತಿದ್ದೆ. ಸುಮಾರು 45-50 ನಿಮಿಷಗಳ ಕಾಲ ಜೋರಾಗಿ ವಾಕಿಂಗ್ ಮಾಡುತ್ತಿದ್ದರು.

ತೆಳ್ಳಗಾಗಲು ಇಚ್ಛಿಸುವವರು ಕಡಿಮೆ ಕೊಬ್ಬಿನ ಪ್ರಮಾಣದ ಹಾಲಿನ ಜತೆಗೆ ಓಟ್ಸ್‌ ತಿನ್ನಬೇಕು, ಜತೆಗೆ ಸಕ್ಕರೆಯನ್ನು ತ್ಯಜಿಸಬೇಕು ಎನ್ನುವುದು ಅರ್ಪಿತಾ ರಾಯ್ ಸಲಹೆ. ಜತೆಗೆ, ತಾನು ದಪ್ಪಗಿರುವ ಫೋಟೋಗಳನ್ನು ನೋಡುತ್ತಾ ತೆಳ್ಳಗಾಗಲು ಹೆಚ್ಚು ಉತ್ತೇಜನ ಪಡೆಯುತ್ತಿದ್ದರು ಅರ್ಪಿತಾ. ಅಲ್ಲದೆ, ಕ್ಯಾಲೋರಿ ಪರೀಕ್ಷೆ ಮಾಡುವ ಆ್ಯಪ್‌ ಮೂಲಕ ತೆಳ್ಳಗಾಗಲು ಹೆಚ್ಚು ಪ್ರಯತ್ನ ಪಟ್ಟಿದ್ದಾರಂತೆ.

ಲೈಫ್‌ಸ್ಟೈಲ್‌ನಲ್ಲಿ ಮಾಡಿಕೊಂಡ ಬದಲಾವಣೆ:
ಮೊದಲಿಗೆ ಆಹಾರ ಪಥ್ಯದಲ್ಲಿ ಬದಲಾವಣೆ. ಹಾಗೆ, ಮೂರು ಎಸ್‌ ಗಳಾದ ಶುಗರ್( ಸಕ್ಕರೆ), ಸಾಲ್ಟ್( ಉಪ್ಪು) ಹಾಗೂ ಸ್ವೀಟ್‌(ಸಿಹಿ) ಯನ್ನು ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ತ್ಯಜಿಸುವುದು ಎಂದು ಆಕೆ ಹೇಳಿಕೊಂಡಿದ್ದಾರೆ.

ತೂಕ ಕಳೆದುಕೊಂಡ ಬಳಿಕ ಕಲಿತ ಪಾಠ: ಸಿಕ್ಸ್, ಪ್ಯಾಕ್, ಬೀಚ್ ಬಾಡಿ ಪಡೆದುಕೊಳ್ಳುವುದು ಮುಖ್ಯವಲ್ಲ. ಆದರೆ, ದೇಹವನ್ನು ಫಿಟ್‌ ಹಾಗೂ ಆರೋಗ್ಯಕರವಾಗಿ ಇಟ್ಟುಕೊಳ್ಳಬೇಕು ಎಂದು ಅರ್ಪಿತಾ ರಾಯ್ ಹೇಳಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ