ಡಾ. ಎಂ.ವಿ. ಜಾಲಿ
ಲೇಖಕರು: ಮಧುಮೇಹ ತಜ್ಞ
ಕರ್ನಾಟಕದಲ್ಲಿ ಮಧುಮೇಹ ವ್ಯಾಪಕವಾಗಿ ಹರಡುತ್ತಿದೆ ಎಂದಿದೆ ಇತ್ತೀಚಿನ ಅಧ್ಯಯನ.
ದೇಶದ ದಕ್ಷಿಣದ ರಾಜ್ಯಗಳಾದ ಕರ್ನಾಟಕ, ತಮಿಳನಾಡು, ಕೇರಳ ಮತ್ತು ಆಂಧ್ರಪ್ರದೇಶಗಳಲ್ಲಿ ಮಧುಮೇಹ ತೀವ್ರಗತಿಯಲ್ಲಿ ಹರಡುತ್ತದೆ ಎಂಬುದು ಅಧ್ಯಯನದಿಂದ ಬಹಿರಂಗವಾಗಿದೆ. ಈ ರಾಜ್ಯಗಳಲ್ಲಿ ನಗರ ಪ್ರದೇಶಗಳ ಶೇ.20ರಷ್ಟು ಜನರು ಮಧುಮೇಹ ರೋಗಗಳಿಂದ ಬಳಲುತ್ತಿದ್ದರೆ ಗ್ರಾಮೀಣ ಪ್ರದೇಶಗಳಲ್ಲಿ ಶೇ. 10ರಷ್ಟು ಜನರು ಈ ರೋಗಕ್ಕೆ ತುತ್ತಾಗಿದ್ದಾರೆ.
ಭಾರತದಲ್ಲಿ ಸುಮಾರು 75 ಮಿಲಿಯನ್ ಮಧುಮೇಹ ರೋಗಿಗಳಿದ್ದಾರೆ. 2025ರ ವೇಳೆಗೆ ಇದು ದ್ವಿಗುಣಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಈ ಪೈಕಿ ಶೇ. 46 ರಷ್ಟು ರೋಗಿಗಳಿಗೆ ತಮಗೆ ಮಧುಮೇಹ ರೋಗವಿದೆ ಎಂಬುದೇ ತಿಳಿದಿಲ್ಲ. ಈ ರೋಗಕ್ಕೆ ಪ್ರತಿ ವರ್ಷ ಒಂದು ಮಿಲಿಯನ್ ಜನರು ಬಲಿಯಾಗುತ್ತಿದ್ದಾರೆ. ಕಳೆದ ಮೂರು ದಶಕಗಳಲ್ಲಿ ಮಧುಮೇಹ ರೋಗಿಗಳ ಸಂಖ್ಯೆಯಲ್ಲಿ ಐದು ಪಟ್ಟು ಹೆಚ್ಚಳವಾಗಿದೆ.
ಪತ್ತೆ ಹಚ್ಚಿ
ಪದೇಪದೇ ಬಾಯಾರಿಕೆಯಾಗುವುದು, ಮೂತ್ರ ವಿಸರ್ಜನೆ, ಹಸಿವು ಹೆಚ್ಚಾಗುವುದು, ದೇಹದ ತೂಕ ಗಣನೀಯವಾಗಿ ಕಡಿಮೆಯಾಗುವುದು, ಆಯಾಸ, ಬಳಲಿಕೆ, ಸುಸ್ತು ಇತ್ಯಾದಿ. ಈ ಮೇಲಿನ ಲಕ್ಷ ಣಗಳು ಕಂಡುಬಂದಲ್ಲಿ ಖಂಡಿತ ನೀವು ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದೀರಿ ಎಂದರ್ಥ. ತಕ್ಷ ಣ ತಜ್ಞ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆಯಿರಿ.
ದುಷ್ಪರಿಣಾಮ
ಮಧುಮೇಹವನ್ನು ಸಕಾಲದಲ್ಲಿ ಪತ್ತೆ ಹಚ್ಚಿ ಅದಕ್ಕೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯದಿದ್ದರೆ ನಮ್ಮ ದೇಹದ ಅನೇಕ ಅಂಗಾಂಗಳ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಸಾವು ಸಂಭವಿಸಲೂಬಹುದು. ಮಧುಮೇಹಿ ರೋಗಿಗಳಲ್ಲಿ ಹೃದಯ ರಕ್ತನಾಳದ ಕಾಯಿಲೆ ಸಾಮಾನ್ಯ.
ನಾಲ್ಕು ಮಧುಮೇಹಿ ರೋಗಿಗಳ ಪೈಕಿ ಒಬ್ಬರು ಹೃದಯ ರಕ್ತನಾಳದ ಕಾಯಿಲೆಗೆ ತುತ್ತಾಗಿರುತ್ತಾರೆ. ಮಧುಮೇಹಿಗಳಲ್ಲಿ ಹೆಚ್ಚಿನವರು ರೆಟಿನೋಪತಿ ಕಣ್ಣಿನ ಸಮಸ್ಯೆಯನ್ನೂ ಎದುರಿಸುತ್ತಾರೆ. ಅಲ್ಲದೇ ಮಧುಮೇಹದಿಂದ ಬಳಲುತ್ತಿರುವವರಲ್ಲಿ ಮೂತ್ರಪಿಂಡ ರೋಗಕ್ಕೆ ತುತ್ತಾಗುತ್ತಿರುವವರ ಸಂಖ್ಯೆ ಹತ್ತು ಪಟ್ಟು ಹೆಚ್ಚಾಗಿದೆ. ಮಧುಮೇಹದಿಂದ ಬಳಲುತ್ತಿರುವ ಗರ್ಭಿಣಿ ಮಹಿಳೆಯರು ಭ್ರೂಣದ ಸಮಸ್ಯೆಗಳನ್ನು ಎದುರಿಸುತ್ತಾರೆ.
ಮಧುಮೇಹ ಕಾಯಿಲೆಯನ್ನು ನಿಯಂತ್ರಿಸದಿದ್ದರೆ ಅಂಥ ರೋಗಿಗಳು ಸಾಮಾನ್ಯವಾಗಿ ಹೃದಯಾಘಾತ, ಪಾಶ್ರ್ವವಾಯು, ಕುರುಡತನ, ಕಿಡ್ನಿ ಹಾಳಾಗುವುದು, ಗ್ಯಾಂಗರಿನ್, ರೋಗ ನಿರೋಧಕ ಶಕ್ತಿ ಕ್ಷೀಣಿಸುವಿಕೆ, ಲೈಂಗಿಕ ಸಮಸ್ಯೆಗಳು, ನರಗಳ ದುರ್ಬಲತೆ ಮತ್ತಿತರ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಆದರೆ ಆತಂಕಪಡುವ ಅಗತ್ಯವಿಲ್ಲ. ತಜ್ಞ ವೈದ್ಯರು ನೀಡುವ ಸಲಹೆ, ಸೂಚನೆ ಮಾರ್ಗದರ್ಶನ ಮತ್ತು ಔಷಧೋಪಚಾರಗಳನ್ನು ಚಾಚೂ ತಪ್ಪದೇ ಪಾಲಿಸಿದರೆ ನಿಮಗಿರುವ ಮಧುಮೇಹ ಕಾಯಿಲೆಯನ್ನು ಸಂಪೂರ್ಣವಾಗಿ ನಿಯಂತ್ರಿಸಿ ನೆಮ್ಮದಿಯ, ಸುಖಮಯ ಜೀವನ ನಡೆಸಲು ಸಾಧ್ಯವಿದೆ.
ಜೀವನಶೈಲಿ ಹೀಗಿರಲಿ
ಧೂಮಪಾನ ಮಾಡಬಾರದು.
ದೇಹದ ತೂಕ ಅತಿಯಾಗಿದ್ದರೆ ವೈದ್ಯರು ಸೂಚಿಸಿದ ಪ್ರಕಾರ ತೂಕ ಕಡಿಮೆ ಮಾಡಬೇಕು.
ರಕ್ತದೊತ್ತಡ ಸರಿಯಾದ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳಬೇಕು.
ನಿಯಮಿತವಾಗಿ ವ್ಯಾಯಾಮ ಮಾಡಬೇಕು.
ರಕ್ತದಲ್ಲಿಯ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಆರೋಗ್ಯಕರ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳಬೇಕು.
ಲೇಖಕರು: ಮಧುಮೇಹ ತಜ್ಞ
ಕರ್ನಾಟಕದಲ್ಲಿ ಮಧುಮೇಹ ವ್ಯಾಪಕವಾಗಿ ಹರಡುತ್ತಿದೆ ಎಂದಿದೆ ಇತ್ತೀಚಿನ ಅಧ್ಯಯನ.
ದೇಶದ ದಕ್ಷಿಣದ ರಾಜ್ಯಗಳಾದ ಕರ್ನಾಟಕ, ತಮಿಳನಾಡು, ಕೇರಳ ಮತ್ತು ಆಂಧ್ರಪ್ರದೇಶಗಳಲ್ಲಿ ಮಧುಮೇಹ ತೀವ್ರಗತಿಯಲ್ಲಿ ಹರಡುತ್ತದೆ ಎಂಬುದು ಅಧ್ಯಯನದಿಂದ ಬಹಿರಂಗವಾಗಿದೆ. ಈ ರಾಜ್ಯಗಳಲ್ಲಿ ನಗರ ಪ್ರದೇಶಗಳ ಶೇ.20ರಷ್ಟು ಜನರು ಮಧುಮೇಹ ರೋಗಗಳಿಂದ ಬಳಲುತ್ತಿದ್ದರೆ ಗ್ರಾಮೀಣ ಪ್ರದೇಶಗಳಲ್ಲಿ ಶೇ. 10ರಷ್ಟು ಜನರು ಈ ರೋಗಕ್ಕೆ ತುತ್ತಾಗಿದ್ದಾರೆ.
ಭಾರತದಲ್ಲಿ ಸುಮಾರು 75 ಮಿಲಿಯನ್ ಮಧುಮೇಹ ರೋಗಿಗಳಿದ್ದಾರೆ. 2025ರ ವೇಳೆಗೆ ಇದು ದ್ವಿಗುಣಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಈ ಪೈಕಿ ಶೇ. 46 ರಷ್ಟು ರೋಗಿಗಳಿಗೆ ತಮಗೆ ಮಧುಮೇಹ ರೋಗವಿದೆ ಎಂಬುದೇ ತಿಳಿದಿಲ್ಲ. ಈ ರೋಗಕ್ಕೆ ಪ್ರತಿ ವರ್ಷ ಒಂದು ಮಿಲಿಯನ್ ಜನರು ಬಲಿಯಾಗುತ್ತಿದ್ದಾರೆ. ಕಳೆದ ಮೂರು ದಶಕಗಳಲ್ಲಿ ಮಧುಮೇಹ ರೋಗಿಗಳ ಸಂಖ್ಯೆಯಲ್ಲಿ ಐದು ಪಟ್ಟು ಹೆಚ್ಚಳವಾಗಿದೆ.
ಪತ್ತೆ ಹಚ್ಚಿ
ಪದೇಪದೇ ಬಾಯಾರಿಕೆಯಾಗುವುದು, ಮೂತ್ರ ವಿಸರ್ಜನೆ, ಹಸಿವು ಹೆಚ್ಚಾಗುವುದು, ದೇಹದ ತೂಕ ಗಣನೀಯವಾಗಿ ಕಡಿಮೆಯಾಗುವುದು, ಆಯಾಸ, ಬಳಲಿಕೆ, ಸುಸ್ತು ಇತ್ಯಾದಿ. ಈ ಮೇಲಿನ ಲಕ್ಷ ಣಗಳು ಕಂಡುಬಂದಲ್ಲಿ ಖಂಡಿತ ನೀವು ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದೀರಿ ಎಂದರ್ಥ. ತಕ್ಷ ಣ ತಜ್ಞ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆಯಿರಿ.
ದುಷ್ಪರಿಣಾಮ
ಮಧುಮೇಹವನ್ನು ಸಕಾಲದಲ್ಲಿ ಪತ್ತೆ ಹಚ್ಚಿ ಅದಕ್ಕೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯದಿದ್ದರೆ ನಮ್ಮ ದೇಹದ ಅನೇಕ ಅಂಗಾಂಗಳ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಸಾವು ಸಂಭವಿಸಲೂಬಹುದು. ಮಧುಮೇಹಿ ರೋಗಿಗಳಲ್ಲಿ ಹೃದಯ ರಕ್ತನಾಳದ ಕಾಯಿಲೆ ಸಾಮಾನ್ಯ.
ನಾಲ್ಕು ಮಧುಮೇಹಿ ರೋಗಿಗಳ ಪೈಕಿ ಒಬ್ಬರು ಹೃದಯ ರಕ್ತನಾಳದ ಕಾಯಿಲೆಗೆ ತುತ್ತಾಗಿರುತ್ತಾರೆ. ಮಧುಮೇಹಿಗಳಲ್ಲಿ ಹೆಚ್ಚಿನವರು ರೆಟಿನೋಪತಿ ಕಣ್ಣಿನ ಸಮಸ್ಯೆಯನ್ನೂ ಎದುರಿಸುತ್ತಾರೆ. ಅಲ್ಲದೇ ಮಧುಮೇಹದಿಂದ ಬಳಲುತ್ತಿರುವವರಲ್ಲಿ ಮೂತ್ರಪಿಂಡ ರೋಗಕ್ಕೆ ತುತ್ತಾಗುತ್ತಿರುವವರ ಸಂಖ್ಯೆ ಹತ್ತು ಪಟ್ಟು ಹೆಚ್ಚಾಗಿದೆ. ಮಧುಮೇಹದಿಂದ ಬಳಲುತ್ತಿರುವ ಗರ್ಭಿಣಿ ಮಹಿಳೆಯರು ಭ್ರೂಣದ ಸಮಸ್ಯೆಗಳನ್ನು ಎದುರಿಸುತ್ತಾರೆ.
ಮಧುಮೇಹ ಕಾಯಿಲೆಯನ್ನು ನಿಯಂತ್ರಿಸದಿದ್ದರೆ ಅಂಥ ರೋಗಿಗಳು ಸಾಮಾನ್ಯವಾಗಿ ಹೃದಯಾಘಾತ, ಪಾಶ್ರ್ವವಾಯು, ಕುರುಡತನ, ಕಿಡ್ನಿ ಹಾಳಾಗುವುದು, ಗ್ಯಾಂಗರಿನ್, ರೋಗ ನಿರೋಧಕ ಶಕ್ತಿ ಕ್ಷೀಣಿಸುವಿಕೆ, ಲೈಂಗಿಕ ಸಮಸ್ಯೆಗಳು, ನರಗಳ ದುರ್ಬಲತೆ ಮತ್ತಿತರ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಆದರೆ ಆತಂಕಪಡುವ ಅಗತ್ಯವಿಲ್ಲ. ತಜ್ಞ ವೈದ್ಯರು ನೀಡುವ ಸಲಹೆ, ಸೂಚನೆ ಮಾರ್ಗದರ್ಶನ ಮತ್ತು ಔಷಧೋಪಚಾರಗಳನ್ನು ಚಾಚೂ ತಪ್ಪದೇ ಪಾಲಿಸಿದರೆ ನಿಮಗಿರುವ ಮಧುಮೇಹ ಕಾಯಿಲೆಯನ್ನು ಸಂಪೂರ್ಣವಾಗಿ ನಿಯಂತ್ರಿಸಿ ನೆಮ್ಮದಿಯ, ಸುಖಮಯ ಜೀವನ ನಡೆಸಲು ಸಾಧ್ಯವಿದೆ.
ಜೀವನಶೈಲಿ ಹೀಗಿರಲಿ
ಧೂಮಪಾನ ಮಾಡಬಾರದು.
ದೇಹದ ತೂಕ ಅತಿಯಾಗಿದ್ದರೆ ವೈದ್ಯರು ಸೂಚಿಸಿದ ಪ್ರಕಾರ ತೂಕ ಕಡಿಮೆ ಮಾಡಬೇಕು.
ರಕ್ತದೊತ್ತಡ ಸರಿಯಾದ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳಬೇಕು.
ನಿಯಮಿತವಾಗಿ ವ್ಯಾಯಾಮ ಮಾಡಬೇಕು.
ರಕ್ತದಲ್ಲಿಯ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಆರೋಗ್ಯಕರ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳಬೇಕು.