ಆ್ಯಪ್ನಗರ

ಮಹಿಳೆಯರಿಗೆ ಆ ಭಾಗದಲ್ಲಿ ದದ್ದು, ತುರಿಕೆ, ಉರಿ ಜಾಸ್ತಿ ಇದ್ದರೆ ಅದು ಮಧುಮೇಹದ ಲಕ್ಷಣ!!

ಮಧುಮೇಹ ಇರುವ ಮಹಿಳೆಯರು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ ಮಾಡಿಕೊಳ್ಳಬೇಕು. ಒಂದು ವೇಳೆ ಇದರಲ್ಲಿ ಏರುಪೇರಾದರೆ, ಕೊನೆಗೆ ಇದರಿಂದಾಗಿ ಖಾಸಗಿ ಅಂಗಾಂಗಗಳ ಭಾಗದಲ್ಲಿ ಸೋಂಕು ಉಂಟಾಗಿ, ಸಮಸ್ಯೆ ಎದುರಿಸುವಂತಾಗುತ್ತದೆ.

Produced byಮನೋಹರ್ ಶೆಟ್ಟಿ | Vijaya Karnataka Web 19 Jul 2023, 4:53 pm
ಇಂದಿನ ದಿನಗಳಲ್ಲಿ ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಎನ್ನುವ ಸೈಲೆಂಟ್ ಕಿಲ್ಲರ್, ಕಾಯಿಲೆ ವಿಶ್ವ ಮಟ್ಟದಲ್ಲಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಸಣ್ಣವರಿಂದ ಹಿಡಿದು ಹಿರಿಯರವರೆಗೂ ಕೂಡ, ಈ ಕಾಯಿಲೆ ಬೆನ್ನು ಬಿಡದೇ ಕಾಡುತ್ತಿರುವುದು ನಿಜಕ್ಕೂ ಆಘಾತಕಾರಿ ವಿಷ್ಯವಾಗಿದೆ. ಪ್ರಮುಖವಾಗಿ ಈ ಕಾಯಿಲೆಯ ಲಕ್ಷಣಗಳು, ಏನೆಂದರೆ, ರಕ್ತದಲ್ಲಿನ ಸಕ್ಕರೆ ಮಟ್ಟವು ಏರುಪೇರಾಗುವುದು!
Vijaya Karnataka Web international womens day 2023 vaginal yeast infections in women its symptoms of type 2 diabetes
ಮಹಿಳೆಯರಿಗೆ ಆ ಭಾಗದಲ್ಲಿ ದದ್ದು, ತುರಿಕೆ, ಉರಿ ಜಾಸ್ತಿ ಇದ್ದರೆ ಅದು ಮಧುಮೇಹದ ಲಕ್ಷಣ!!


ಇದರಿಂದ ದೇಹದಲ್ಲಿ ಸರಿಯಾಗಿ ಇನ್ಸುಲಿನ್ ಬಿಡುಗಡೆ ಆಗದೇ ಇರುವುದು ಅಥವಾ ಇನ್ಸುಲಿನ್‌ನ್ನು ನಮ್ಮ ದೇಹವು ಸರಿಯಾಗಿ ಬಳಸದೆ ಇರುವ ಪರಿಣಾಮವಾಗಿ ಈ ಕಾಯಿಲೆ ಕಾಣಿಸಿಕೊಳ್ಳಲು ಶುರುವಾಗುತ್ತದೆ. ನಮಗೆಲ್ಲಾ ಗೊತ್ತೇ ಇರುವ ಹಾಗೆ ಸಕ್ಕರೆ ಕಾಯಿಲೆ ಬರುವವರಿಗೆ ಜೀವನ ಒಂದು ರೀತಿ ಇರುತ್ತದೆ. ಆಬಳಿಕ ಮತ್ತೊಂದು ರೀತಿ ಬದಲಾಗುತ್ತದೆ.

ಅಂದ್ರೆ ಈ ಕಾಯಿಲೆ ಕಾಣಿಸಿಕೊಂಡ ಬಳಿಕ, ಹಲವು ರೀತಿಯಲ್ಲಿ ಆರೋಗ್ಯದ ಅಸ್ವಸ್ಥತೆಗಳು ಕಾಡಲು ಶರುವಾ ಗುತ್ತದೆ. ಉದಾಹರಣೆಗೆ ಹೇಳುವು ದಾದರೆ, ಮಹಿಳೆಯರಲ್ಲಿ ಈ ಕಾಯಿಲೆ ಕಾಣಿಸಿಕೊಂಡ ಬಳಿಕ ಅಂಗಾಂಗಗಳ ಭಾಗದಲ್ಲಿ ಸೋಂಕು ಉಂಟಾಗಿ, ಯಾರಲ್ಲೂ ಹೇಳಿಕೊಳ್ಳಲಾಗದ ಸಮಸ್ಯೆಯನ್ನು ಎದುರಿಸುತ್ತಾರೆ. ಬನ್ನಿ ಇಂದಿನ ಲೇಖನದಲ್ಲಿ, ಮಹಿಳೆಯರಲ್ಲಿ ಮಧುಮೇಹದ ಲಕ್ಷಣಗಳು ಕಾಣಿಸಿಕೊಂಡರೆ, ಏನೆಲ್ಲಾ ಸಮಸ್ಯೆ ಗಳು ಕಾಣಿಸಿ ಕೊಳ್ಳುತ್ತದೆ ಎನ್ನುವ ಬಗ್ಗೆ ನೋಡೋಣ...

ಟೈಪ್-2 ಮಧುಮೇಹ ಇರಬಹುದು!

  • ಅಧ್ಯಯನಗಳು ಹೇಳುವ ಹಾಗೆ, ಸಕ್ಕರೆಕಾಯಿಲೆ ಇರುವ ಮಹಿಳೆ ಯರಲ್ಲಿ ರಕ್ತದಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಣ ತಪ್ಪಿದರೆ, ಅಂತಹವರಿಗೆ ಯೋನಿಯ ಭಾಗದಲ್ಲಿ ವಿಪರೀತ ತುರಿಕೆಯ ಸಮಸ್ಯೆ ಎದುರಾಗುತ್ತದೆ.
  • ಪ್ರಮುಖವಾಗಿ ಈ ಸಮಸ್ಯೆ ಟೈಪ್-2 ಮಧುಮೇಹದ ಇರು ವವರಲ್ಲಿ ಪ್ರಮುಖವಾಗಿ ಕಂಡು ಬರುತ್ತದೆ.

ಯೋನಿಯಲ್ಲಿ ತುರಿಕೆ ಯಾಕೆ ಕಂಡು ಬರುತ್ತದೆ?

  • ಸಕ್ಕರೆಕಾಯಿಲೆ ಇರುವ ಮಹಿಳೆಯರ, ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಅಥವಾ ಸಕ್ಕರೆ ಮಟ್ಟ ಮಿತಿ ಮೀರಿ ದ್ದರೆ, ಮಹಿಳೆಯರ ಯೋನಿಯ ಭಾಗದಲ್ಲಿ ಈಸ್ಟ್ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ತಜ್ಞರು ಹೇಳುತ್ತಾರೆ.
  • ಅಷ್ಟೇ ಅಲ್ಲದೆ, ಇಂತಹ ಸಂದರ್ಭದಲ್ಲಿ ಖಾಸಗಿ ಅಂಗಾಂ ಗದ ಭಾಗದಲ್ಲಿ, ವಿಪರೀತ ತುರಿಕೆ, ಕೆರೆತ, ಉರಿ, ದದ್ದುಗಳು ಕೂಡ ಕಾಣಿಸಿಕೊಳ್ಳುವ ಸಾಧ್ಯತೆ ಕೂಡ ಹೆಚ್ಚಿರುತ್ತದೆ.
  • ಇದಕ್ಕೆಲ್ಲಾ ಪ್ರಮುಖ ಕಾರಣ, ರಕ್ತದಲ್ಲಿ ಹೆಚ್ಚುವರಿ ಗ್ಲುಕೋಸ್ ಅಥವಾ ಸಕ್ಕರೆ ಮಟ್ದ, ಹೆಚ್ಚಾಗುತ್ತಾ ಹೋದ ಹಾಗೆ, ಬ್ಯಾಕ್ಟೀರಿಯಗಳ ಬೆಳವಣಿಗೆ ಯೂ ಕೂಡ ಹೆಚ್ಚಾ ಗುತ್ತದೆ, ಇದರಿಂದಾಗಿ, ಮಹಿಳೆಯರಿಗೆ ಯೋನಿಯ ಭಾಗದಲ್ಲಿ ಸೊಂಕು ಕಾಣಿಸಿಕೊಳ್ಳಲು ಶುರುವಾಗುತ್ತದೆ. ​

ಯೋನಿ ಸೋಂಕು ಮತ್ತೆ ಮತ್ತೆ ಸಂಭವಿಸುವುದಕ್ಕೆ ಕಾರಣಗಳೇನು?

ಮಹಿಳೆಯರಲ್ಲಿ ಮಧುಮೇಹ..

  • ಸಾಮಾನ್ಯವಾಗಿ ಮಧುಮೇಹದ ರೋಗ ಲಕ್ಷಣಗಳು ನಿಧಾನವಾಗಿ, ಮನುಷ್ಯನ ಅಂಗಾಂಗಳ ಮೇಲೆ ಅಟ್ಯಾಕ್ ಮಾಡುತ್ತವೆ.
  • ವಿಶೇಷವಾಗಿ ಮಹಿಳೆಯರಲ್ಲಿ ತಟ್ಟನೆ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಏರಿಕೆ ಮಾಡುವುದರ ಜೊತೆಗೆ ಖಾಸಗಿ ಅಂಗಾಂಗದ ಭಾಗದಲ್ಲಿ, ವಿಪರೀತ ತುರಿಕೆ, ಕರೆತ, ಉರಿಯುವಿಕೆ ಸಮಸ್ಯೆಗೆ ಕಾರಣವಾಗುತ್ತದೆ.
  • ಅದರಲ್ಲೂ ಯಾವ ಮಹಿಳೆಯರಲ್ಲಿ ಟೈಪ್ 2 ಮಧು ಮೇಹ ಸಮಸ್ಯೆ, ಕಂಡು ಬರುತ್ತದೆಯೋ, ಅಂತಹವರಿಗೆ, ಯೋನಿಯ ಭಾಗದಲ್ಲಿ ಈ ರೀತಿಯ ಸೋಂಕು ಉಂಟಾ ಗುವುದು ಸಹಜ ಎಂದು ಹೇಳಲಾಗುತ್ತದೆ.​

ಹಾಗಾದ್ರೆ ಇದಕ್ಕೆ ಪರಿಹಾರ ಹೇಗೆ?

  • ಇದಕ್ಕೆ ತಕ್ಕಮಟ್ಟಿಗೆ ಪರಿಹಾರ ಏನೆಂದರೆ, ಕಟ್ಟುನಿಟ್ಟಿನ ಆಹಾರ ಪದ್ಧತಿಯನ್ನು ಅನುಸರಿಸುವುದು, ರಕ್ತದಲ್ಲಿನ ಸಕ್ಕರೆ ಪ್ರಮಾಣ ಏರಿಕೆ ಆಗದಂತೆ ನಿಯಂತ್ರಣ ಮಾಡಿ ಕೊಳ್ಳುವುದು ಹಾಗೂ
  • ವೈದ್ಯರು ನೀಡಿರುವ ಔಷಧೀಯಯನ್ನು ಸರಿಯಾಗಿ ತೆಗೆದು ಕೊಳ್ಳುವುದರ ಜೊತೆಗೆ, ತುರಿಕೆ ಕಂಡು ಬರುವ ಜಾಗಕ್ಕೆ ಆಂಟಿ ಫಂಗಲ್ ಕ್ರೀಂ ಹಚ್ಚುವ ಮೂಲಕ ಈ ತೊಂದರೆಯನ್ನು ಕ್ರಮೇಣವಾಗಿ ಪರಿಹಾರ ಮಾಡಿ ಕೊಳ್ಳಬಹುದು.​

ಕೊನೆಯ ಮಾತು

  • ಮಹಿಳೆಯರಲ್ಲಿ ಮಧುಮೇಹ ಮಿತಿಮೀರಿ ಹೋದ ಕೂಡಲೇ, ಅವರಲ್ಲಿ ಅತೀ ಮುಖ್ಯವಾಗಿ ಕಾಡುವ ಸಮಸ್ಯೆ ಯೆಂದರೆ ಅದು ಅವರ ಯೋನಿ ಭಾಗದಲ್ಲಿ ಈಸ್ಟ್‌ನ ಬೆಳವಣಿಗೆಗಳು. ಉದಾಹರಣೆಗೆ ಯೋನಿಯ ಭಾಗದಲ್ಲಿ ಕೆರೆತ, ಊತ, ಅನಿಯಮಿತ ಮುಟ್ಟಿನ ಸಮಸ್ಯೆ ಮತ್ತು ಅತೃಪ್ತಿಕರ ಲೈಂಗಿಕ ಕ್ರಿಯೆಯ ಸಮಸ್ಯೆಗಳು ಕಂಡು ಬರುತ್ತದೆ.
  • ಮಧುಮೇಹ ಮಹಿಳೆಯರಲ್ಲಿ ಕೈಮೀರಿ ಹೋದರೆ, ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚು ಕಡಿಮೆ ಯಾಗುವುದು ಮಾತ್ರವಲ್ಲದೆ, ಹೆಚ್ಚು ಹೆಚ್ಚು ನೀರು ಕುಡಿಯುವ ಹಂಬಲ ಶುರುವಾಗುತ್ತದೆ. ಅಷ್ಟೇ ಅಲ್ಲದೆ ದಪ್ಪಗಿರುವವರು ಕೂಡ, ದಿನಕಳೆದಂತೆ ಸಣ್ಣಗೆ ಆಗುತ್ತಾ ಹೋಗುತ್ತಾರೆ. All Images Source: Istock
ಲೇಖಕರ ಬಗ್ಗೆ
ಮನೋಹರ್ ಶೆಟ್ಟಿ
"ಕನ್ನಡದ ಲೇಖನ ಬರವಣಿಗೆಯಲ್ಲಿ 9 ವರ್ಷಗಳ ಸುದೀರ್ಘ ವೃತ್ತಿಪರ ಅನುಭವದೊಂದಿಗೆ ಭಾಷೆಯ ಅನುವಾದದೊಂದಿಗೆ ಪ್ರಾರಂಭಿಸಿ ಇಂದಿಗೆ ವಿವಿಧ ವಿಭಾಗಗಳಲ್ಲಿ ಅಂದರೆ ಜೀವನಶೈಲಿ, ಆರೋಗ್ಯ, ಸೌಂದರ್ಯ, ಸಂಬಂಧ, ಜಾಹೀರಾತು ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸಿದ ಹೆಮ್ಮೆ ನನ್ನದು. ಭಾಷೆಯ ಬಗೆಗಿನ ಹಿಡಿತ, ವಿಚಾರದ ಕುರಿತಾದ ಜ್ಞಾನಾಸಕ್ತಿಯೊಂದಿಗೆ ಓದುಗರಿಗೆ ಅತ್ಯುತ್ತಮ ವಿಷಯಗಳನ್ನೊಳಗೊಂಡ ಲೇಖನಗಳನ್ನು ನೀಡುವಲ್ಲಿ ನನಗೆ ತೃಪ್ತಿಯಿದೆ. ಅದು ವಿಚಾರವಿರುವ ಲೇಖನವಾದರೂ ಅಥವಾ ಸಾಧಾರಣ ಮುಖ್ಯಾಂಶವಾದರೂ ಸಾಧ್ಯವಾದಷ್ಟು ಉತ್ತಮ ಗುಣಮಟ್ಟದ ಬರವಣಿಗೆಯನ್ನು ತರಲು ನಾನು ಪ್ರಯತ್ನಿಸುತ್ತೇನೆ. ಸದ್ಯದ ಡಿಜಿಟಲ್ ವಿದ್ಯಮಾನಗಳ ಬಗ್ಗೆ ನನ್ನನ್ನು ನಾನು ಕ್ರೂಢೀಕರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುವ ಇತರ ಲೇಖಕರ ವಿಷಯಗಳನ್ನು, ವಿಚಾರಗಳನ್ನು ಅನುಸರಿಸಿ ನನ್ನ ಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಳ್ಳುತ್ತಾ ನನ್ನ ಬರವಣಿಗೆಯ ಗುಣಮಟ್ಟವನ್ನು ಈಗಿನ ಓದುಗರ ಆಸಕ್ತಿಗೆ ತಕ್ಕಂತೆ ಕಾಪಾಡಿಕೊಳ್ಳುತ್ತೇನೆ. ಬಿಡುವಿನ ಸಮಯದಲ್ಲಿ ನನ್ನ ಕುಟುಂಬದ ಜೊತೆ ಗುಣಮಟ್ಟದ ಸಮಯ ಕಳೆಯುವ ಮೂಲಕ ಉತ್ತಮ ವೃತ್ತಿಪರತೆಗಾಗಿ ನನ್ನನ್ನು ನಾನು ಚೈತನ್ಯದಿಂದ ಕೂಡಿರುವಂತೆ ನೋಡಿಕೊಳ್ಳುತ್ತೇನೆ."... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ