ಆ್ಯಪ್ನಗರ

ಮಧುಮೇಹ ಹೊಂದಿರುವವರು ನೇರಳೆ ಹಣ್ಣು ತಿನ್ನಬೇಕು ಅಂತಾರಲ್ಲ, ಯಾಕೆ ಗೊತ್ತ?

ಮಧುಮೇಹ ಹೊಂದಿರುವವರು ನೇರಳೆ ಹಣ್ಣಿನ ಸೇವನೆ ಮಾಡಿದರೆ ಎಷ್ಟೆಲ್ಲಾ ಪ್ರಯೋಜನ ಪಡೆಯಬಹುದು ಗೊತ್ತ?

Vijaya Karnataka Web 27 Nov 2021, 12:07 pm
ಮಧುಮೇಹ ಮಾರಣಾಂತಿಕ ಕಾಯಿಲೆ ಅಲ್ಲದಿದ್ದರು, ಹಂತ ಹಂತವಾಗಿ ಹಲವು ರೋಗಗಳನ್ನು ಸೃಷ್ಟಿ ಮಾಡುತ್ತದೆ. ಈ ಅಪಾಯಕಾರಿ ಮಧುಮೇಹದಿಂದ ಪಾರಾಗಲು ನಮ್ಮ ಅನಾರೋಗ್ಯಕರವಾದ ಆಹಾರ ಶೈಲಿಯೂ ಕಾರಣವಿರಬಹುದು. ಹೀಗಾಗಿ ಸುಲಭವಾಗಿ ದೊರೆಯುವ ನೇರಳೆ ಹಣ್ಣಿನಿಂದ ನಿಮ್ಮ ಮಧುಮೇಹವನ್ನು ತಗ್ಗಿಸಿಕೊಳ್ಳಬಹುದು.
Vijaya Karnataka Web jamun fruit benefits for diabetes
ಮಧುಮೇಹ ಹೊಂದಿರುವವರು ನೇರಳೆ ಹಣ್ಣು ತಿನ್ನಬೇಕು ಅಂತಾರಲ್ಲ, ಯಾಕೆ ಗೊತ್ತ?


ನೇರಳೆ ಹಣ್ಣು ಮುಖ್ಯವಾಗಿ ನಿಮ್ಮ ದೇಹದಲ್ಲಿನ ಸಕ್ಕರೆಯ ಪ್ರಮಾಣವನ್ನು ಹಂತ ಹಂತವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೇರಳೆ ಹಣ್ಣು ಕೇವಲ ಪೋಷಕಾಂಶಗಳುಳ್ಳ ಹಣ್ಣು ಮಾತ್ರವಲ್ಲ, ಬದಲಾಗಿ ಅತ್ಯುತ್ತಮವಾದ ಔಷಧಿ ಕೂಡ ಆಗಿದೆ. ಕೆಲವು ಆರೋಗ್ಯ ತಜ್ಞರ ಪ್ರಕಾರ ಮಧುಮೇಹದ ನಿಯಂತ್ರಣಕ್ಕೆ ನೇರಳೆ ಹಣ್ಣು ಸಹಾಯಕವಾಗಿದೆ ಎಂದು ಹೇಳುತ್ತಾರೆ.

ಹಾಗಾದರೆ ಮಧುಮೇಹ ಹೊಂದಿರುವವರಿಗೆ ನೇರಳೆ ಹಣ್ಣು ಹೇಗೆಲ್ಲಾ ಪ್ರಯೋಜನಕಾರಿ ಎಂಬುದನ್ನು ಇಲ್ಲಿ ತಿಳಿಯಿರಿ.

​೧. ನೇರಳೆ ಹಣ್ಣು ತಿನ್ನುವುದರಿಂದ ಆಗುವ ಪ್ರಯೋಜನಗಳು

  • ಇದು ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ.
  • ವಿಟಮಿನ್ ಸಿ ಮತ್ತು ಕಬ್ಬಿಣದಿಂದ ಸಮೃದ್ಧವಾಗಿದ್ದು,
  • ಚರ್ಮ ಹಾಗು ಕಣ್ಣುಗಳ ಆರೋಗ್ಯವನ್ನು ಸುಧಾರಿಸುತ್ತದೆ.
  • ಆರೋಗ್ಯಕರವಾದ ಹೃದಯಕ್ಕೆ ನೇರಳೆ ಹಣ್ಣು ಸಹಾಯ ಮಾಡುತ್ತದೆ.
  • ಮಾರಣಾಂತಿಕ ಸೋಂಕಿನಿಂದ ರಕ್ಷಿಸುತ್ತದೆ. ಒಟ್ಟಾರೆ ಇದು ಮಧುಮೇಹಕ್ಕೆ ಚಿಕಿತ್ಸೆ ನೀಡುತ್ತದೆ.

​೨. ರಕ್ತವನ್ನು ಶುದ್ಧೀಕರಿಸುತ್ತದೆ

ವೈದ್ಯರ ಪ್ರಕಾರ ನೇರಳೆ ಹಣ್ಣು ನೈಸರ್ಗಿಕವಾದ ಸಂಕೋಚಕ ಗುಣವನ್ನು ಹೊಂದಿರುವುದರಿಂದ ತ್ವಚೆಯ ಮೇಲಿನ ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೇರಳೆ ಹಣ್ಣಿನ ಸೇವನೆಯು ಚರ್ಮವನ್ನು ತೆರವುಗೊಳಿಸುವುದಲ್ಲದೇ, ರಕ್ತವನ್ನು ಶುದ್ಧೀಕರಿಸುತ್ತದೆ. ಅಲ್ಲದೇ, ಕಣ್ಣಿನ ಸಮಸ್ಯೆಗಳಿಂದ ಪಾರು ಮಾಡುತ್ತದೆ. ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ತಗ್ಗಿಸಿಕೊಳ್ಳಲು ನೇರಳೆ ಹಣ್ಣಿನ ಸೇವನೆ ಸೂಕ್ತವಾಗಿದೆ.

​೩. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ

ಇತ್ತೀಚಿನ ಆಹಾರ ಪದ್ದತಿಗಳು ಅಥವಾ ಭಾರವಾದ ಆಹಾರಗಳಿಂದ ಜೀರ್ಣಕ್ರಿಯೆಯ ತೊಂದರೆಗಳು ಯುವ ವಯಸ್ಸಿನಲ್ಲಿಯೇ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಮುಖ್ಯವಾದ ಕಾರಣವೆಂದರೆ ಅನಾರೋಗ್ಯಕರವಾದ ಆಹಾರವೇ ಆಗಿದೆ. ನೇರಳೆ ಹಣ್ಣು ಕರುಳಿಗೆ ಸಂಬಂಧಿಸಿದಂತೆ ಅಂದರೆ, ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಏಕೆಂದರೆ ಇದರಲ್ಲಿ ಬ್ಯಾಕ್ಟೀರಿಯಾ ಗುಣವನ್ನು ಹೊಂದಿರುವುದರಿಂದ ಕರುಳಿನ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.

​೪. ಇದು ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ

ನೇರಳೆ ಹಣ್ಣಿನಲ್ಲಿರುವ ಪೌಷ್ಟಿಕ ಸತ್ವವು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಮಧುಮೇಹ ಹೊಂದಿರುವವರು ತಪ್ಪದೇ ತಮ್ಮ ದಿನನಿತ್ಯದ ಆಹಾರದಲ್ಲಿ ನಿಯಮಿತವಾಗಿ ನೇರಳೆ ಹಣ್ಣಿನ ಸೇವನೆ ಮಾಡುವುದರಿಂದ ಮುಂದೆ ಬರುವ ಅನೇಕ ರೋಗಗಳನ್ನು ಆರಂಭದಲ್ಲಿಯೇ ತಡೆಯಬಹುದು. ಕೇವಲ ಮಧುಮೇಹ ಹೊಂದಿರುವವರೇ ಅಲ್ಲದೇ, ಎಲ್ಲರೂ ಕೂಡ ಈ ಋತುವಿನಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ನೇರಳೆ ಹಣ್ಣನ್ನು ಸೇವಿಸಲೇಬೇಕು.

​೫. ಆರೋಗ್ಯಕರವಾದ ಹೃದಯ ನಮ್ಮದಾಗಿಸಿಕೊಳ್ಳಬಹುದು

ಮುಖ್ಯವಾಗಿ ನೇರಳೆ ಹಣ್ಣು ಹೆಚ್ಚಿನ ಪ್ರಮಾಣದಲ್ಲಿ ಪೊಟ್ಯಾಶಿಯಮ್ ಅನ್ನು ಹೊಂದಿದೆ. ಇದರಲ್ಲಿನ ಗುಣಗಳು ಹೃದಯಕ್ಕೆ ಸಂಬಂಧಿಸಿ ಕಾಯಿಲೆಗಳಿಂದ ದೂರವಿಡಲು ಪ್ರಯೋಜನಕಾರಿಯಾಗಿದೆ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ನೇರಳೆ ಹಣ್ಣು ಅದ್ಭುತವನ್ನೇ ಮಾಡುತ್ತದೆ. ಅಲ್ಲದೇ, ಪಾರ್ಶ್ವವಾಯು ಮತ್ತು ಹೃದಯ ಸ್ತಂಭನದಂತಹ ಅಪಾಯಕಾರಿ ರೋಗಗಳನ್ನು ತಡೆಯುತ್ತದೆ.

ಮಧುಮೇಹ, ಬಿಪಿ, ಹೊಟ್ಟೆಯ ಸಮಸ್ಯೆಗಳಿಗೆಲ್ಲಾ, ನೇರಳೆ ಹಣ್ಣಿನ ಬೀಜಗಳು ಬಹಳ ಒಳ್ಳೆಯದು

​೬. ತೂಕ ನಷ್ಟಕ್ಕೆ ಕಾರಣವಾಗುತ್ತದೆ

ರಸಭರಿತ ನೇರಳೆ ಹಣ್ಣಿನ ಸೇವನೆಯಿಂದ ನಿಮ್ಮ ತೂಕವನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು. ಇದರಲ್ಲಿ ಮುಖ್ಯವಾಗಿ ಕಡಿಮೆ ಕ್ಯಾಲೋರಿಗಳು ಮತ್ತು ಹೆಚ್ಚಿನ ಫೈಬರ್ ಇರುವ ಕಾರಣ ದೇಹದಲ್ಲಿನ ಕೊಬ್ಬನ್ನು ತಗ್ಗಿಸಲು ಸಹಾಯ ಮಾಡುತ್ತದೆ. ಔಷಧಿಯ ಗುಣ ಲಕ್ಷಣವುಳ್ಳ ನೇರಳೆ ಹಣ್ಣು ಜೀರ್ಣಕ್ರಿಯೆಯನ್ನು ಹೆಚ್ಚಿಸಿ, ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಹಸಿವಿನ ಪ್ರಮಾಣವನ್ನು ಕಡಿಮೆ ಮಾಡಿ, ಹೊಟ್ಟೆ ತುಂಬಿದ ಅನುಭವ ಉಂಟು ಮಾಡುತ್ತದೆ.

​೭. ಹಿಮೋಗ್ಲೋಬಿನ್ ಸಂಖ್ಯೆಯನ್ನು ಸುಧಾರಿಸುತ್ತದೆ

ನೇರಳೆ ಹಣ್ಣಿನಲ್ಲಿರುವ ವಿಟಮಿನ್ ಸಿ ಮತ್ತು ಕಬ್ಬಿಣವನ್ನು ಹೊಂದಿದೆ. ಮುಖ್ಯವಾಗಿ ದೇಹದಲ್ಲಿ ಕಬ್ಬಿಣವನ್ನು ಹೀರಿಕೊಳ್ಳಲು ವಿಟಮಿನ್ ಸಿ ಪ್ರಮುಖವಾದ ಪಾತ್ರ ವಹಿಸುತ್ತದೆ. ಹಾಗಾಗಿ ಯಾರೆಲ್ಲಾ ರಕ್ತಹೀನತೆಯಿಂದ ಬಳಲುತ್ತಿರುತ್ತಾರೆಯೋ ಅಂತಹವರಿಗೆ ನೇರಳೆ ಹಣ್ಣು ಅತ್ಯುತ್ತಮವಾದ ಔಷಧಿ ಎಂದೇ ಹೇಳಬಹುದು.

ಹಿಮೋಗ್ಲೋಬಿನ್ ಕಮ್ಮಿ ಇದೆ ಎಂದು ವೈದ್ಯರು ಹೇಳಿದ್ರಾ? ಹಾಗಾದ್ರೆ ಈ ಆಹಾರಗಳನ್ನು ಸೇವಿಸಿ

​೮. ಇದು ನೈಸರ್ಗಿಕವಾದ ಉತ್ಕರ್ಷಣ ನಿರೋಧಕವಾಗಿದೆ

ಸುಂದರವಾದ ತ್ವಚೆಯನ್ನು ಪಡೆಯಲು ಈಗ ಹೆಚ್ಚು ಕಷ್ಟ ಪಡಬೇಕಿಲ್ಲ. ಏಕೆಂದರೆ ನೇರಳೆ ಹಣ್ಣಿನಲ್ಲಿರುವ ವಿಟಮಿನ್ ಸಿ ತ್ವಚೆಯನ್ನು ಸ್ವಚ್ಚವಾಗಿರುವಂತೆ ಮಾಡುವುದಲ್ಲದೇ, ಸುಕ್ಕುಗಳನ್ನು ಶಮನ ಮಾಡಲು ಸಹಾಯ ಮಾಡುತ್ತದೆ. ಅಲ್ಲದೇ, ಇದು ಬಾಯಿಯ ದುರ್ಗಂಧವನ್ನು ಕೂಡ ಹೋಗಲಾಡಿಸುತ್ತದೆ. ನೇರಳೆ ಹಣ್ಣಿನ ಫೇಸ್ ಪ್ಯಾಕ್ ನಿಂದ ಸುಕ್ಕು ರಹಿತ ಸುಂದರವಾದ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಬಹುದು.

ನೇರಳೆ ಹಣ್ಣು ತಿಂದು ಬೀಜ ಬಿಸಾಡದಿರಿ, ಇದರಿಂದಲೂ ಹತ್ತಾರು ಪ್ರಯೋಜನಗಳಿವೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ