ಮಾತ್ರೆಗಳ ಬದಲು ಕಷಾಯ ಸೇವನೆ
ರೋಗ ನಿರೋಧಕ ಶಕ್ತಿ ಮತ್ತು ತ್ರಾಣವನ್ನು ಹೆಚ್ಚಿಸಲು ಜನರು ಮಾತ್ರೆಗಳ ಬದಲು ವಿವಿಧ ಮನೆ ಮದ್ದುಗಳಾದ ಕಷಾಯ, ಗಿಡಮೂಲಿಕೆ ಚಹಾ, ಅರಿಶಿನದ ಹಾಲನ್ನು ಅವಲಂಬಿಸುತ್ತಿದ್ದಾರೆ. ಹೌದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅನೇಕರ ಮನೆಯಲ್ಲಿ ಗಿಡಮೂಲಿಕೆ ಚಹಾ, ಕಷಾಯವನ್ನು ಜನರು ಸೇವಿಸುತ್ತಿದ್ದಾರೆ. ಅನೇಕ ಸಂದರ್ಭಗಳಲ್ಲಿ ಇದರಿಂದ ಉತ್ತಮ ಫಲಿತಾಂಶವೂ ದೊರೆತಿದೆ. ಸದ್ಯ ಭಾರತೀಯರು ಅನುಸರಿಸುತ್ತಿರುವ ಮನೆಮದ್ದು ಎಂದರೆ ಕಷಾಯ. ಇದನ್ನು ಕೊರೊನಾ ಕಷಾಯ ಎಂದೇ ಕರೆಯಲಾಗುತ್ತದೆ.
ಯಕೃತ್ತು ಹಾನಿಯಾಗುವುದಿಲ್ಲ
ಕಷಾಯವನ್ನು ಸಾಮಾನ್ಯವಾಗಿ ಹಲವಾರು ಸಾಂಪ್ರದಾಯಿಕ ಗಿಡಮೂಲಿಕೆಗಳು ಮತ್ತು ಮಸಾಲೆಗಳ ಮಿಶ್ರಣದಿಂದ ತಯಾರಿಸಲಾಗುತ್ತದೆ. ಇದು ರೋಗನಿರೋಧಕ ಶಕ್ತಿ ಮತ್ತು ಒಟ್ಟಾರೆ ಆರೋಗ್ಯವನ್ನು ಉತ್ತೇಜಿಸುತ್ತದೆ. ಕೊರೊನಾ ರೋಗ ಪ್ರಾರಂಭವಾದಗಿನಿಂದಲೂ, ಅಸಂಖ್ಯಾತ ಜನರು ದಿನಕ್ಕೆ ಹಲವು ಬಾರಿ ಕಷಾಯವನ್ನು ಸೇವಿಸಲು ಪ್ರಾರಂಭಿಸಿದ್ದಾರೆ. ಆದರೆ ಪಾನೀಯವನ್ನು ಹೆಚ್ಚು ಸೇವಿಸುವುದರಿಂದ ಯಕೃತ್ತು ಹಾನಿಯಾಗುತ್ತದೆ ಎಂದು ಅನೇಕ ಅಧ್ಯಯನಗಳು ಹೇಳುತ್ತವೆ. ಆದರೆ, ಆಯುಷ್ ಸಚಿವಾಲಯವು ಈ ವದಂತಿಯನ್ನು ತಳ್ಳಿಹಾಕಿದ್ದು, ಇದು ತಪ್ಪು ಕಲ್ಪನೆ ಎಂದು ಸಚಿವಾಲಯ ಘೋಷಿಸಿದೆ. ಕಷಾಯದಲ್ಲಿ ಬಳಸುವ ಪದಾರ್ಥಗಳು ಆರೋಗ್ಯಕರವಾಗಿದ್ದು, ಇವುಗಳು ಅನೇಕ ಭಾರತೀಯರ ಮನೆಗಳಲ್ಲಿ ಕಂಡುಬರುತ್ತವೆ ಎಂದು ಹೇಳಿದೆ. ಈ ಪಾನೀಯವನ್ನು ಹೆಚ್ಚಾಗಿ ಕುಡಿಯುವುದರಿಂದ ಉಸಿರಾಟದ ವ್ಯವಸ್ಥೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಸಹ ಸಚಿವಾಲಯ ಹೇಳಿಕೊಂಡಿದೆ.
ಆಪಲ್ ಸೈಡರ್ ವಿನೆಗರ್ ಬಳಸುವುದರಿಂದ ಮಹಿಳೆಯರಿಗೆ ಎಷ್ಟೆಲ್ಲಾ ಪ್ರಯೋಜನಗಳಿವೆ
ವೈದ್ಯರು ಹೇಳಿದ್ದೇನು?
ಸುದ್ದಿ ಸಂಸ್ಥೆಯೊಂದರ ಜೊತೆ ಮಾತನಾಡಿರುವ ಆಯುಷ್ ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೋಟೆಚಾ, "ಇದು (ಕಷಾಯ) ಯಕೃತ್ತನ್ನು ಹಾನಿಗೊಳಿಸುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಇದು ತಪ್ಪು ಕಲ್ಪನೆ. ಏಕೆಂದರೆ ಕಷಾಯಕ್ಕೆ ಅಡುಗೆ ಮನೆಯಲ್ಲಿ ಬಳಸುವ ಪದಾರ್ಥಗಳನ್ನೇ ಬಳಸಲಾಗುತ್ತದೆ. ಇದು ಕೋವಿಡ್ 19 ಕೂಡ ಹೋಗಲಾಡಿಸಬಹುದೇ ಎಂಬುದನ್ನು ತಿಳಿಯಲು ಇನ್ನು ಸಂಶೋಧನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಮಾರ್ಚ್ ಮಾರ್ಗಸೂಚಿಯಲ್ಲಿ ಏನಿತ್ತು?
ಆಯುಷ್ ಸಚಿವಾಲಯವು ಮಾರ್ಚ್’ನಲ್ಲಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಕೆಲವು ಸ್ವ-ಆರೈಕೆ ಮಾರ್ಗಸೂಚಿಗಳನ್ನು ಹೊರಡಿಸಿತು. ತುಳಸಿ, ದಾಲ್ಚಿನ್ನಿ, ಕರಿಮೆಣಸು, ಒಣ ಶುಂಠಿ ಮತ್ತು ಒಣದ್ರಾಕ್ಷಿ ಮುಂತಾದ ಪದಾರ್ಥಗಳಿಂದ ತಯಾರಿಸಿದ ಕಷಾಯವನ್ನು ದಿನಕ್ಕೆ ಎರಡು ಬಾರಿ ಸೇವಿಸುವಂತೆ ಮಾರ್ಗಸೂಚಿ ಸೂಚಿಸಿತು. ಇದಲ್ಲದೆ, ಸಚಿವಾಲಯವು ಕೊರೊನಾ ವೈರಸ್ ನಿರ್ವಹಣೆಗಾಗಿ ಇತ್ತೀಚೆಗೆ ಆಯುರ್ವೇದ ಮತ್ತು ಯೋಗವನ್ನು ಆಧರಿಸಿದ 'ನ್ಯಾಷನಲ್ ಕ್ಲಿನಿಕಲ್ ಮ್ಯಾನೇಜ್ಮೆಂಟ್ ಪ್ರೊಟೊಕಾಲ್' ಅನ್ನು ಹೊರತಂದಿದೆ.
ನೋವು ನಿವಾರಕವಾಗಿ ಕೆಲಸ ಮಾಡುವ ಅಕ್ಯುಪಂಕ್ಚರ್ನಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
ನಿಮ್ಮ ಜೀವನಶೈಲಿ ಹೀಗಿರಲಿ
ಕೋವಿಡ್ 19 ಇರುವಾಗ ಮತ್ತು ಕೋವಿಡ್ 19 ನಂತರದ ನಿರ್ವಹಣೆಗಾಗಿ ಅಶ್ವಗಂಧ, ಗುಡುಚಿ, ಪಿಪ್ಪಾಲಿ, ಚವಾನ್ಪ್ರಶ್ ಇತ್ಯಾದಿಗಳನ್ನು ಆಯುಷ್ ಸಚಿವಾಲಯವು ಪಟ್ಟಿ ಮಾಡುತ್ತಿದೆ. ಇದು ಶ್ವಾಸಕೋಶದ ತೊಂದರೆಗಳು ಮತ್ತು ಆಯಾಸವನ್ನು ತಡೆಯಲು ಸಹ ಸಹಾಯ ಮಾಡುತ್ತದೆ. ಬೆಚ್ಚಗಿನ ನೀರಿನ ಜೊತೆ ಶುಂಠಿ, ಕೊತ್ತಂಬರಿ, ತುಳಸಿ, ಜೀರಿಗೆ ಇತ್ಯಾದಿ ಗಿಡಮೂಲಿಕೆಗಳನ್ನು ಸೇವಿಸುವಂತೆಯೂ ಅಥವಾ ರಾತ್ರಿ 150 ಮಿಲಿ ಬಿಸಿ ಹಾಲಿನಲ್ಲಿ ಅರ್ಧ ಟೀ ಚಮಚ ಅರಿಶಿನ ಪುಡಿ ಸೇರಿಸಿ ಅರಿಶಿನದ ಹಾಲನ್ನು ದಿನಕ್ಕೆ ಒಂದು ಬಾರಿ ಸೇವಿಸುವಂತೆಯೂ ಸಚಿವಾಲಯ ಶಿಫಾರಸ್ಸು ಮಾಡಿದೆ. ಆದರೆ ಅಜೀರ್ಣ ಸಮಸ್ಯೆಯಿರುವವರು ಹಳದಿ ಹಾಲನ್ನು ಸೇವಿಸಬೇಡಿ. ಇದಿಷ್ಟೇ ಅಲ್ಲದೆ, ಆರೋಗ್ಯಕರ ಜೀವನಶೈಲಿ ಅಭ್ಯಾಸವನ್ನು ರೂಢಿಸಿಕೊಳ್ಳುವಂತೆ ಸಲಹೆ ನೀಡಿರುವ ಸಚಿವಾಲಯವು, ಬೆಚ್ಚಗಿನ ನೀರಿಗೆ ಒಂದು ಚಿಟಿಕೆ ಅರಿಶಿನ ಮತ್ತು ಉಪ್ಪನ್ನು ಹಾಕಿ ಮುಕ್ಕಳಿಸುವಂತೆಯೂ, ನಿಯಮಿತ ಯೋಗಾಭ್ಯಾಸ ಮಾಡುವಂತೆಯೂ, ಓಂ ಕಾಳಿನ ಸ್ಟೀಮ್ ತೆಗೆದುಕೊಳ್ಳುವಂತೆಯೂ, ಪುದೀನಾ ಮತ್ತು ಇತರವುಗಳನ್ನು ಪ್ರತಿ ನಿತ್ಯ ಆಹಾರದಲ್ಲಿ ಸೇರಿಸಿ ಸೇವಿಸುವಂತೆಯೂ ಸೂಚಿಸಿದೆ.
To read in English Click: AYUSH ministry suggest that Kadha has no negative effect on liver health