ಆ್ಯಪ್ನಗರ

ರೋಗನಿರೋಧಕ ಶಕ್ತಿ ಹೆಚ್ಚಿಸುವ ಪವರ್ ಈ ಆಯುರ್ವೇದ ಪದಾರ್ಥಗಳಲ್ಲಿದೆ

ಕೊರೊನಾದ ಸಂದರ್ಭ ಎದುರಾದ ನಂತರ ಜನರ ರೋಗ - ನಿರೋಧಕ ಶಕ್ತಿ ಒಂದು ದೊಡ್ಡ ಪ್ರಶ್ನೆಯಾಗಿ ಉಳಿದಿದೆ.

Lipi 26 Oct 2020, 12:58 pm
ಯಾರಿಗೆ ರೋಗ - ನಿರೋಧಕ ಶಕ್ತಿ ಈಗಾಗಲೇ ತುಂಬಾ ದುರ್ಬಲವಾಗಿದ್ದು, ಮತ್ತು ತಮ್ಮಲ್ಲಿ ಶ್ವಾಸಕೋಶಕ್ಕೆ ಸಂಬಂಧ ಪಟ್ಟಂತೆ ಕಾಯಿಲೆಗಳನ್ನು ಹೊಂದಿದ್ದರೆ, ಅಧಿಕ ರಕ್ತದ ಒತ್ತಡ ಮತ್ತು ಮಧುಮೇಹ ಸಮಸ್ಯೆಗೆ ಗುರಿಯಾಗಿದ್ದಾರೆ. ಅಂತಹವರಿಗೆ ಕೊರೋನಾ ಸಾಂಕ್ರಾಮಿಕ ರೋಗದ ಅಪಾಯ ಜಾಸ್ತಿ.
Vijaya Karnataka Web Carefree and free woman Istock


ಇತ್ತೀಚಿಗೆ ಬರುತ್ತಿರುವ ವೈದ್ಯಕೀಯ ಸಂಶೋಧನೆಗಳ ಪ್ರಕಾರ ಯಾರಿಗೆ ದೇಹದಲ್ಲಿ ರೋಗ - ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಅವರಿಗೆ ಕೊರೊನಾದ ಸಣ್ಣ-ಪುಟ್ಟ ರೋಗ ಲಕ್ಷಣಗಳು ಕಾಣಿಸಿಕೊಂಡು ಮತ್ತೆ ವಾಸಿಯಾದ ಉದಾಹರಣೆಗಳು ಸಿಗುತ್ತಿವೆ.

ಹಾಗಾಗಿ ಈಗ ಸಂಶೋಧಕರು ಹೇಳುತ್ತಿರುವ ವಿಚಾರ ಏನೆಂದರೆ ಜನರು ತಮ್ಮ ರೋಗ - ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿಕೊಳ್ಳಲು ಪ್ರಯತ್ನ ಪಡುವುದಕ್ಕಿಂತ ಕಾಲಕ್ಕೆ ತಕ್ಕಂತೆ ತಮ್ಮ ದೇಹದಲ್ಲಿ ಈಗಾಗಲೇ ಇರುವ ರೋಗ - ನಿರೋಧಕ ಶಕ್ತಿಯನ್ನು ಸಮತೋಲನಗೊಳಿಸಿಕೊಳ್ಳುವತ್ತ ಮನಸು ಮಾಡಬೇಕು ಎಂದು ತಿಳಿಸಿದ್ದಾರೆ.

ಹಾಗಾಗಿ ಈ ಕೆಳಗಿನ ಕೆಲವು ಆಯುರ್ವೇದ ಪದಾರ್ಥಗಳು ನಿಮ್ಮ ದೇಹದ ರೋಗ - ನಿರೋಧಕ ಶಕ್ತಿಯನ್ನು ಬಲಗೊಳಿಸುವುದು ಮಾತ್ರವಲ್ಲದೆ ಹೆಚ್ಚು ಸಮತೋಲನಕಾರಿಯಾಗಿ ಸೋಂಕಿನ ವಿರುದ್ಧ ಹೋರಾಡುವ ಶಕ್ತಿಯನ್ನು ನಿಮಗೆ ಕೊಡುತ್ತವೆ.

ಆರ್ಟಿಮಿಸಿಯಾ
  • ಇತ್ತೀಚೆಗೆ ನಡೆದ ಕೊರೊನಾ ವೈರಸ್ ಸಂಬಂಧಿತ ಸಂಶೋಧನೆಗಳಲ್ಲಿ ಸೋಂಕಿನ ವಿರುದ್ಧ ಆರ್ಟಿಮಿಸಿಯಾ ಆಂಟಿ - ವೈರಲ್ ಗುಣ ಲಕ್ಷಣಗಳನ್ನು ತೋರ್ಪಡಿಸುವ ಮೂಲಕ ನಿಮ್ಮನ್ನು ಹೆಚ್ಚು ಪ್ರಬಲರನ್ನಾಗಿ ಮಾಡಬಲ್ಲದು.
  • ಸಾಧಾರಣವಾಗಿ ಉತ್ತರ ಆಫ್ರಿಕಾ ಮತ್ತು ಉತ್ತರ ಅಮೇರಿಕ ದೇಶಗಳಲ್ಲಿ ಹೆಚ್ಚಾಗಿ ಕಂಡು ಬರುವ ಮತ್ತು ನೋಡಲು ಹಸಿರು ಬಣ್ಣದ ಗಿಡವಾಗಿರುವ ಆರ್ಟಿಮಿಸಿಯಾ ಗಿಡದ ಮೇಲೆ ಸಂಶೋಧಕರು ಎಥನಾಲ್ ಬಳಕೆ ಮಾಡಿ ಅದರ ಸಾರವನ್ನು ಹೊರ ತೆಗೆದು ಜನರ ಮೇಲೆ ಪ್ರಯೋಗಕ್ಕೆ ಮುಂದಾದಾಗ ಅವರ ದೇಹದಲ್ಲಿ ರೋಗ - ನಿರೋಧಕ ಶಕ್ತಿ ಕ್ರಮೇಣವಾಗಿ ಜಾಸ್ತಿಯಾಗತೊಡಗಿತು. ವೈದ್ಯರಿಗೆ ಹಾಗೂ ಸಂಶೋಧಕರಿಗೆ ಇದರಿಂದ ಸ್ವಲ್ಪ ಭರವಸೆ ಸಿಕ್ಕಂತಾಗಿದೆ.
ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸರಳ ಮನೆ ಮದ್ದುಗಳು

ಗಿಲಾಯ್
  • ಈಗಾಗಲೇ ಗಿಡ ಬಗ್ಗೆ ನಿಮಗೆ ಸಾಕಷ್ಟು ತಿಳಿದಿದೆ. ಕೇವಲ ಕೊರೋನಾಗೆ ಮಾತ್ರವಲ್ಲದೆ ಸಾಕಷ್ಟು ಕಾಯಿಲೆಗಳಿಗೆ ಇದೊಂದು ಮನೆ ಔಷಧ ಎಂದು ಈಗಾಗಲೇ ಹೆಸರು ಪಡೆದಿದೆ.
  • ಕೊರೊನಾ ಸಾಂಕ್ರಾಮಿಕ ವಿಶ್ವದಲ್ಲೆಡೆ ಹರಡಲು ಪ್ರಾರಂಭ ಮಾಡಿದ ನಂತರದಲ್ಲಿ ಸಂಶೋಧಕರು ಇದರ ಮೇಲೆ ತಮ್ಮ ಪ್ರಯೋಗ ಕೈಗೊಂಡು ಮನುಷ್ಯನ ದೇಹದ ಮೇಲೆ ಗಿಲಾಯಿ ಯಾವ ರೀತಿ ಕೆಲಸ ಮಾಡಬಲ್ಲದು ಎಂಬುದನ್ನು ಪತ್ತೆ ಹಚ್ಚಲು ಮುಂದಾದಾಗ ಮಾನವನ ದೇಹದಲ್ಲಿ ಹೊಟ್ಟೆಯ ಹಾಗೂ ಕರುಳಿನ ಭಾಗದಲ್ಲಿ ರೋಗ - ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವಂತಹ ಪ್ರಬಲಕಾರಿ ಗುಣ ಲಕ್ಷಣವನ್ನು ಗಿಲಾಯಿ ಹೊಂದಿದೆ ಎಂಬುದು ತಿಳಿದು ಬಂದಿತು.
  • ಡೆಂಗ್ಯೂ ಜ್ವರ ಹೊಂದಿದ ಜನರಲ್ಲಿ ಕಡಿಮೆಯಾಗಿರುವ ಪ್ಲೇಟ್ಲೆಟ್ ಗಳನ್ನು ಹೆಚ್ಚು ಮಾಡುವುದರ ಜೊತೆಗೆ ನಿಧಾನವಾಗಿ ಅವರ ದೇಹದ ರೋಗ - ನಿರೋಧಕ ಶಕ್ತಿಯನ್ನು ಗಿಲಾಯ್ ಬಲಪಡಿಸುತ್ತದೆ ಎಂದು ಹೇಳಿದ್ದಾರೆ.
ಎಚಿನೇಷಿಯಾ
ಕೆಲವು ಸಂಶೋಧನೆಗಳು ಎಚಿನೇಷಿಯಾ ಎಂಬ ಆಯುರ್ವೇದಿಕ ಪದಾರ್ಥದ ಮೇಲೆ ಸಂಶೋಧನೆ ಕೈಗೊಂಡು ಕೊರೋನಾ ಸಾಂಕ್ರಾಮಿಕ ವೈರಸ್ ಗಳ ಸಂತತಿಯನ್ನು ಮನುಷ್ಯನ ದೇಹದಲ್ಲಿ ಇದು ಕಡಿಮೆ ಮಾಡಬಲ್ಲದು ಎಂಬ ಬಗ್ಗೆ ತಿಳಿಯಲು ಮುಂದಾದಾಗ ಸಂಶೋಧಕರ ಶ್ರಮಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಎಚಿನೇಷಿಯಾದಿಂದ ಲಭ್ಯವಾಗಿದೆ.

ನಮ್ಮ ದೇಹದಲ್ಲಿ ರೋಗ - ನಿರೋಧಕ ಶಕ್ತಿಗೆ ಸಂಬಂಧಪಟ್ಟ ಜೀವ ಕೋಶಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಆರೋಗ್ಯಕರ ಜೀವಕೋಶಗಳ ಮೇಲೆ ಉಂಟಾಗುವ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಿ ಸೋಂಕಿನ ವಿರುದ್ಧ ನಮ್ಮನ್ನು ಆರೋಗ್ಯವಂತರಾಗಿ ಕಾಪಾಡುವ ಕೆಲಸ ಎಚಿನೇಷಿಯಾ ಮಾಡುತ್ತದೆ ಎಂಬುದು ತಿಳಿದು ಬಂದಿದೆ.

ಹರಿದ್ರ
ನಾವು ಪ್ರತಿ ದಿನ ಅಡುಗೆಗಾಗಿ ಬಳಕೆ ಮಾಡುವ ಅರಿಶಿನ ಕೊಂಬನ್ನು ಆಯುರ್ವೇದ ಭಾಷೆಯಲ್ಲಿ ಹರಿದ್ರ ಎಂದು ಕರೆಯುತ್ತಾರೆ. ಆರಂಭದಿಂದಲೂ ಸಂಶೋಧಕರು ಜನರ ರೋಗ - ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವಲ್ಲಿ ಅರಿಶಿನದ ಪ್ರಭಾವ ಹೇಗಿದೆ ಎಂಬುದನ್ನು ಹೇಳುತ್ತಲೇ ಬಂದಿದ್ದಾರೆ.

ನೈಸರ್ಗಿಕವಾದ ಅರಿಶಿನದ ನಿಯಮಿತವಾದ ಬಳಕೆಯಿಂದ ಸೋಂಕುಕಾರಕ ಸೂಕ್ಷ್ಮಾಣುಗಳ ವಿರುದ್ಧ ನಮ್ಮ ದೇಹದ ರೋಗ - ನಿರೋಧಕ ಶಕ್ತಿಯನ್ನು ಅತ್ಯಂತ ಸುಲಭವಾಗಿ ಬಲ ಪಡಿಸಿಕೊಳ್ಳಬಹುದು. ಪ್ರತಿ ರಾತ್ರಿ ಮಲಗುವ ಸಮಯದಲ್ಲಿ ಒಂದು ಲೋಟ ಹಾಲಿಗೆ ಅರಿಶಿನ ಪುಡಿಯನ್ನು ಮಿಶ್ರಣ ಮಾಡಿ ಕುಡಿಯುವ ಅಭ್ಯಾಸ ಇಟ್ಟುಕೊಳ್ಳಿ.

ತುಳಸಿ
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣು ಮಕ್ಕಳಿಂದ ಪೂಜಿಸಲ್ಪಡುವ ತುಳಸಿ ಗಿಡದಲ್ಲಿ ಔಷಧೀಯ ಗುಣಗಳು ಹೇರಳವಾಗಿವೆ. ಆಯುರ್ವೇದ ಪದ್ಧತಿಯಲ್ಲಿ ಬಹಳ ಹಿಂದಿನಿಂದಲೂ ತುಳಸಿ ಎಲೆಗಳಿಗೆ ವಿಶೇಷವಾದ ಸ್ಥಾನಮಾನವಿದೆ.

ಉಸಿರಾಟ ಸಂಬಂಧಿತ ಸಮಸ್ಯೆಯನ್ನು ಎದುರಿಸುತ್ತಿರುವವರಿಗೆ ತುಳಸಿ ಎಲೆಗಳ ಕಷಾಯ ತುಂಬಾ ಪರಿಣಾಮಕಾರಿಯಾದ ಪರಿಹಾರವನ್ನು ಒದಗಿಸುತ್ತದೆ. ತನ್ನ ನೈಸರ್ಗಿಕ ಗುಣ - ಲಕ್ಷಣಗಳಿಂದ ನಿಮ್ಮ ತ್ವಚೆಯ ಹಾಗೂ ಹಲ್ಲುಗಳ ರಕ್ಷಣೆಯನ್ನು ತುಳಸಿ ಎಲೆಗಳ ಸಾರ ಬಹಳ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತದೆ.

ಖಾಲಿ ಹೊಟ್ಟೆಗೆ 'ತುಳಸಿ ಎಲೆ'ಗಳನ್ನು ತಿಂದರೆ ಜನ್ಮದಲ್ಲಿ ಇಂತಹ ಕಾಯಿಲೆಗಳು ಬರಲ್ಲ

ರಸ್ನ
  • ತನ್ನ ಆಂಟಿ - ಇನ್ಫಾಮೇಟರಿ ಮತ್ತು ಆಂಟಿ - ಆಕ್ಸಿಡೆಂಟ್ ಗುಣ ಲಕ್ಷಣಗಳಿಂದ ಈಗಾಗಲೇ ಬಹಳಷ್ಟು ಬಗೆಯ ಸಾಂಕ್ರಾಮಿಕ ರೋಗಗಳ ವಿರುದ್ಧ ತನ್ನ ಪ್ರಾಬಲ್ಯವನ್ನು ಮೆರೆದಿರುವ ರಸ್ನ ಕೊರೊನ ವೈರಸ್ ಸೋಂಕಿನ ವಿರುದ್ಧ ತನ್ನ ರಕ್ಷಣೆಯನ್ನು ಜನರಿಗೆ ಒದಗಿಸುತ್ತದೆ.
  • ಈ ಮೇಲೆ ತಿಳಿಸಿರುವ ಆಯುರ್ವೇದ ಪದಾರ್ಥಗಳು ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ತುಂಬಾ ಪ್ರಯೋಜನಕಾರಿಯೆಂದು ತಿಳಿದು ಬಂದಿದೆ. ತುಳಸಿ ಎಲೆಗಳ ಕಷಾಯಕ್ಕೆ ಗಿಲಾಯ್ ಮಿಶ್ರಣ ಮಾಡಿ ಸ್ವಲ್ಪ ನಿಂಬೆ ಹಣ್ಣಿನ ರಸ ಮತ್ತು ಅರಿಶಿನ ಪುಡಿ ಬೆರೆಸಿ ಸೇವನೆ ಮಾಡುವ ಅಭ್ಯಾಸವನ್ನು ರೂಢಿ ಮಾಡಿಕೊಂಡರೆ ಈ ಸಾಂಕ್ರಾಮಿಕ ಸಂದರ್ಭದಲ್ಲಿ ಅತ್ಯಂತ ಆರೋಗ್ಯಕರ ದೇಹ ನಿಮ್ಮದಾಗುತ್ತದೆ.
  • ಇದರ ಜೊತೆಗೆ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಮಾಡುವುದು, ಬೇರೆಯವರ ಜೊತೆ ಅಂತರವನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯವಾಗಿದೆ. ಇದು ಕೇವಲ ಒಂದೆರಡು ದಿನಗಳ ಅಭ್ಯಾಸವಾಗಿ ನಂತರ ಕೈಬಿಡುವ ಪ್ರಕ್ರಿಯೆ ಆಗಬಾರದು.
  • ಪ್ರತಿ ದಿನವೂ ಗಿಡಮೂಲಿಕೆಗಳ ಕಷಾಯ ಸೇವನೆ ಮಾಡಿ ಮೇಲಿನ ನಿಯಮಗಳನ್ನು ಪಾಲಿಸುವುದರ ಮೂಲಕ ನಿಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ