ಮಲೇರಿಯಾ ಜ್ವರಕ್ಕೆ ಸೂಕ್ತ ಮನೆಮದ್ದುಗಳ ಚಿಕಿತ್ಸೆ
ಸೋಂಕು ಹೊಂದಿದ ಅನಾಫಿಲಿಸ್ ಸೊಳ್ಳೆ ಮನುಷ್ಯನಿಗೆ ಕಚ್ಚಿದಾಗ ಅದರಲ್ಲಿರುವ ಪ್ಲಾಸ್ಮೋಡಿಯಂ ಎಂಬ ಪರಾವಲಂಬಿ ವ್ಯಕ್ತಿಯ ರಕ್ತ ಸಂಚಾರದಲ್ಲಿ ಬೆರೆತು ಮಲೇರಿಯಾ ಜ್ವರ ಉಂಟಾಗುವಂತೆ ಮಾಡುತ್ತದೆ.
Lipi 25 Apr 2020, 1:10 pm
ಮಲೇರಿಯಾ ಜ್ವರ ಸೊಳ್ಳೆಯಿಂದ ಮನುಷ್ಯನಿಗೆ ಹರಡುವ ರೋಗ. ಸೋಂಕು ಹೊಂದಿದ ಅನಾಫಿಲಿಸ್ ಸೊಳ್ಳೆ ಮನುಷ್ಯನಿಗೆ ಕಚ್ಚಿದಾಗ ಅದರಲ್ಲಿರುವ ಪ್ಲಾಸ್ಮೋಡಿಯಂ ಎಂಬ ಪರಾವಲಂಬಿ ವ್ಯಕ್ತಿಯ ರಕ್ತ ಸಂಚಾರದಲ್ಲಿ ಬೆರೆತು ಮಲೇರಿಯಾ ಜ್ವರ ಉಂಟಾಗುವಂತೆ ಮಾಡುತ್ತದೆ. ಅಷ್ಟೇ ಅಲ್ಲದೆ ಕೇವಲ ಅನಾಫಿಲಿಸ್ ಜಾತಿಗೆ ಸೇರಿದ ಸೊಳ್ಳೆ ಮಾತ್ರ ಸೋಂಕಿತ ವ್ಯಕ್ತಿಯಿಂದ ಮತ್ತೊಮ್ಮೆ ಪರಾವಲಂಬಿ ಜೀವಿಯನ್ನು ಹಿಡಿದು ಇನ್ನೊಬ್ಬ ಮನುಷ್ಯನಿಗೆ ಕಚ್ಚಿ ಮಲೇರಿಯಾ ಜ್ವರವನ್ನು ಹರಡುವ ಗುಣ ಲಕ್ಷಣ ಹೊಂದಿರುತ್ತದೆ.
ಮಲೇರಿಯಾ ಜ್ವರವನ್ನು ಹೊಂದಿದ ವ್ಯಕ್ತಿಗಳು ತೀವ್ರ ಅನಾರೋಗ್ಯದಿಂದ ಬಳಲುತ್ತಿರುತ್ತಾರೆ. ವಿಪರೀತ ಜ್ವರ, ಹಲ್ಲು ಕಚ್ಚಿಕೊಳ್ಳುವಷ್ಟು ಚಳಿ ಜೊತೆಗೆ ಮೈ ಕೈನೋವು ಇವರಿಗೆ ಸಾಮಾನ್ಯ ಸಮಸ್ಯೆಗಳಾಗಿ ಕಾಡುತ್ತವೆ. ಮೊದಲೇ ಇವುಗಳ ಬಗ್ಗೆ ಅರಿತು ಚಿಕಿತ್ಸೆ ಒದಗಿಸಿದರೆ ವಿಪರೀತ ಕಾಯಿಲೆ ಬಿದ್ದು ಹಾಸಿಗೆ ಹಿಡಿದು ಕೊನೆಗೆ ಸಾವು ಸಂಭವಿಸುವುದನ್ನು ಪರಿಣಾಮಕಾರಿಯಾಗಿ ತಪ್ಪಿಸಬಹುದು.
ಸೊಳ್ಳೆ ಕಚ್ಚಿದರೆ ಮಲೇರಿಯ ಜ್ವರ ಹೇಗೆ ಬರುತ್ತದೆ?
ಮನುಷ್ಯನಿಗೆ ಮಲೇರಿಯಾ ಜ್ವರ ಅನಾಫಿಲಿಸ್ ಹೆಣ್ಣು ಸೊಳ್ಳೆಯಿಂದ ಬರುತ್ತದೆ. ಇದು ತನ್ನ ಎಂಜಲಿನಲ್ಲಿರುವ ಪ್ಲಾಸ್ಮೊಡಿಯಂ ಎಂಬ ಪರಾವಲಂಬಿ ಜೀವಿಗಳನ್ನು ಮನುಷ್ಯನ ರಕ್ತ ಕಣಗಳಿಗೆ ಹರಿ ಬಿಡುತ್ತದೆ. ಒಮ್ಮೆ ಇವುಗಳು ಮನುಷ್ಯನ ದೇಹ ಸೇರಿದ ನಂತರ ನೇರವಾಗಿ ಲಿವರ್ ಇರುವ ಜಾಗಕ್ಕೆ ಹೋಗಿ ಅಲ್ಲಿ ತಮ್ಮ ಸಂಖ್ಯೆಗಳನ್ನು ಹೆಚ್ಚು ಮಾಡಿಕೊಳ್ಳುತ್ತವೆ.
ಮಲೇರಿಯಾ ಜ್ವರ ಕಂಟ್ರೋಲ್ ಮಾಡುವ ಶಕ್ತಿ 'ತುಳಸಿ ಎಲೆ'ಗಳಿಗಿದೆ
ಕೇವಲ 48 ರಿಂದ 72 ಗಂಟೆಗಳ ಒಳಗಾಗಿ ಕೆಂಪು ರಕ್ತ ಕಣಗಳನ್ನು ಸೇರಿ ದ್ವಿಗುಣಗೊಂಡು ಸೋಂಕಿತ ಕೋಶಗಳನ್ನು ಒಡೆದುಕೊಳ್ಳುವಂತೆ ಮಾಡಿ ಇಡೀ ದೇಹದ ತುಂಬಾ ಹಬ್ಬುತ್ತವೆ. ಆಗ ವ್ಯಕ್ತಿ ಸಂಪೂರ್ಣವಾಗಿ ಸೋಂಕಿತನಾಗಿ ಮಾಂಸ ಖಂಡಗಳ ನೋವು, ಚಳಿ ಮತ್ತು ಜ್ವರದಿಂದ ಜರ್ಜರಿತನಾಗುತ್ತಾನೆ.
ಮಲೇರಿಯಾ ಜ್ವರದ ರೋಗ ಲಕ್ಷಣಗಳು
ದೇಹದಲ್ಲಿ ಜ್ವರ ಹೆಚ್ಚಾದಂತೆ ಈ ಕೆಳಗಿನ ರೋಗ ಲಕ್ಷಣಗಳು ಕಾಣಿಸುತ್ತವೆ. ಮೂತ್ರ ಪಿಂಡಗಳ ಹಾನಿ, ತಲೆ ನೋವು, ಭೇದಿ, ಮೈಕೈ ನೋವು, ವಿಪರೀತ ಆಯಾಸ, ಅತಿವ ಜ್ವರ, ವಾಕರಿಕೆ ಮತ್ತು ವಾಂತಿ, ಮೈ ಬೆವರುವುದು, ಮೈ ನಡುಗಿಸುವ ಚಳಿ, ಕೈ ಕಾಲುಗಳು ಹಿಡಿದುಕೊಂಡಂತೆ ಆಗುವುದು, ಅನಿಮಿಯಾ, ಮಲದಲ್ಲಿ ರಕ್ತ ಮತ್ತು ಸೆಳೆತ.
ಮಲೇರಿಯಾ ರೋಗಕ್ಕೆ ಕಾರಣ, ಲಕ್ಷಣಗಳು, ಹಾಗೂ ಮನೆಮದ್ದುಗಳು
ಮಲೇರಿಯಾ ಜ್ವರಕ್ಕೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸುಲಭವಾಗಿ ದೊರೆಯುತ್ತದೆ. ಆದರೂ ತಕ್ಷಣಕ್ಕೆ ಅಥವಾ ಆಸ್ಪತ್ರೆಗೆ ಹೋಗಲು ಸಾಧ್ಯವಾಗದೇ ಇದ್ದರೆ ಈ ಕೆಳಗಿನ ಮನೆಮದ್ದುಗಳನ್ನು ಒಮ್ಮೆ ಪ್ರಯತ್ನಿಸಿ. ಇವುಗಳು ಆರಂಭಿಕ ಹಂತದಲ್ಲಿರುವ ಮಲೇರಿಯ ಜ್ವರವನ್ನು ಅತ್ಯಂತ ಪರಿಣಾಮಕಾರಿಯಾಗಿ ಕಡಿಮೆ ಮಾಡಬಲ್ಲವು ಎಂದು ಈಗಾಗಲೇ ಸಾಬೀತಾಗಿದೆ.
ಆಪಲ್ ಸೈಡರ್ ವಿನೆಗರ್
ಸಾಧಾರಣವಾಗಿ ಆಪಲ್ ಸೈಡರ್ ವಿನೆಗರ್ ಜ್ವರವನ್ನು ಕಡಿಮೆ ಮಾಡಿ ದೇಹದ ತಾಪಮಾನವನ್ನು ತಗ್ಗಿಸುವ ಕೆಲಸ ಮಾಡುತ್ತದೆ. ದೇಹದಲ್ಲಿ ರೋಗ ನಿರೋಧಕ ವ್ಯವಸ್ಥೆಯನ್ನು ಬಲಗೊಳಿಸಿ ಮನುಷ್ಯನ ದೇಹವನ್ನು ಜ್ವರದ ಬಳಲಿಕೆಯಿಂದ ಆದಷ್ಟು ಬೇಗನೆ ಹುಷಾರು ಮಾಡುತ್ತದೆ.
ಆಪಲ್ ಸೈಡರ್ ವಿನೆಗರ್ ತನ್ನ ಆಂಟಿ - ಮೈಕ್ರೋಬಿಯಲ್ ಕಾರ್ಯ ಚಟುವಟಿಕೆಯಿಂದ ದೇಹದಲ್ಲಿರುವ ಬ್ಯಾಕ್ಟೀರಿಯಾಗಳನ್ನು ಕೊಂದು ಮಲೇರಿಯಾ ಜ್ವರದಿಂದ ಮುಕ್ತಿ ಕೊಡುತ್ತದೆ.
ನೀವು ಮಾಡಬೇಕಾದದು ಇಷ್ಟೇ
ಅಡುಗೆಯ ಸ್ವಾದವನ್ನು ಬಾಯಿಯ ರುಚಿಗೆ ತಕ್ಕಂತೆ ಪರಿವರ್ತಿಸುವ ಗುಣ ಲಕ್ಷಣ ಹೊಂದಿರುವ ದಾಲ್ಚಿನ್ನಿ ಮಲೇರಿಯ ಜ್ವರದ ವಿಷಯದಲ್ಲಿ ತನ್ನ ಪ್ರಾಮಾಣಿಕತೆಯನ್ನು ತೋರುತ್ತದೆ.
ಅರಿಶಿನ
ಮೆಂತ್ಯ ಕಾಳುಗಳು
ಚೆನ್ನಾಗಿ ಆರೋಗ್ಯವಾಗಿ ತಿಂದು ಉಂಡು ಸಂತೋಷವಾಗಿ ಜೀವನ ಸಾಗಿಸುತ್ತಿದ್ದ ವ್ಯಕ್ತಿಗೆ ಇದ್ದಕ್ಕಿದ್ದಂತೆ ವಿಪರೀತ ಜ್ವರ ಕಂಡು ಬಂದರೆ ಮೊದಲು ಅದರ ಪ್ರಭಾವ ಎದುರಾಗುವುದು ಆತನ ಹೊಟ್ಟೆಯ ಮೇಲೆ. ಅಂದರೆ ಹೊಟ್ಟೆ ಹಸಿವು ತೀವ್ರತರದಲ್ಲಿ ಕಡಿಮೆಯಾಗುತ್ತದೆ. ಎಂತಹ ಮೃಷ್ಟಾನ್ನ ಭೋಜನ ಕೊಟ್ಟರೂ ತಿನ್ನಲು ಮನಸ್ಸು ಬರುವುದಿಲ್ಲ.
ಹಾಗಾಗಿ ದೇಹಕ್ಕೆ ಅಗತ್ಯ ಪೌಷ್ಟಿಕ ಸತ್ವಗಳ ಲಭ್ಯತೆ ಇಲ್ಲದೆ ದಿನೇ ದಿನೇ ದೇಹ ಕುಗ್ಗುತ್ತದೆ. ಆದರೆ ದೇಹಕ್ಕೆ ಈ ಸಮಯದಲ್ಲಿ ಗಣನೀಯ ಮಟ್ಟದಲ್ಲಿ ಕ್ಯಾಲೊರಿಗಳ ಅವಶ್ಯಕತೆ ಇರುತ್ತದೆ. ವಿಪರೀತ ಸುಸ್ತು ಇರುವ ಕಾರಣ ಆಹಾರ ಸೇವನೆ ಮಾಡಿದ ನಂತರ ಅದು ತುಂಬಾ ಹೊತ್ತಿನ ಕಾಲ ಹೊಟ್ಟೆಯಲ್ಲಿ ಜೀರ್ಣವಾಗಿ ದೇಹಕ್ಕೆ ಶಕ್ತಿಯನ್ನು ಒದಗಿಸುವ ಸಂದರ್ಭ ಇಲ್ಲಿ ಬೇಕಾಗುವುದಿಲ್ಲ. ಅದರ ಬದಲು ತಕ್ಷಣಕ್ಕೆ ದೇಹವನ್ನು ಪುನಶ್ಚೇತನ ಮಾಡುವ ಆಹಾರಗಳನ್ನು ಸೇವನೆ ಮಾಡಬೇಕು. ಅಂದರೆ ಗ್ಲುಕೋಸ್ ವಾಟರ್, ಹಣ್ಣುಗಳ ರಸ, ಕಬ್ಬಿನ ರಸ, ಎಳನೀರು, ಎಲೆಕ್ಟ್ರೋಲೈಟ್ ಪಾನೀಯಗಳು ಇತ್ಯಾದಿ.
ಪ್ರೋಟೀನ್ ಅಂಶದ ಆಹಾರಗಳು
ಮಲೇರಿಯಾ ಸೋಂಕಿತ ವ್ಯಕ್ತಿಗೆ ದೇಹದಲ್ಲಿ ನೀರಿನಂಶ ಕಡಿಮೆಯಾಗಿ ಜೊತೆಗೆ ಎಲೆಕ್ಟ್ರೋಲೈಟ್ ಅಂಶಗಳು ಇಲ್ಲದಂತಾಗಿ ದೇಹ ನಿರ್ಜಲೀಕರಣದ ಸಮಸ್ಯೆಗೆ ಗುರಿಯಾಗುವುದು ಸಾಮಾನ್ಯ ಸಂಗತಿ. ಆದ್ದರಿಂದ ಆತ ಹಣ್ಣಿನ ರಸಗಳು, ಸೂಪ್, ಅಕ್ಕಿ ಗಂಜಿ, ಎಳನೀರು, ಬೇಳೆ ಬೇಯಿಸಿದ ನೀರು ಕುಡಿದರೆ ಉತ್ತಮ.
ಮಲೇರಿಯಾ ರೋಗ ನಿಯಂತ್ರಿಸುವ ಆಯುರ್ವೇದ ಔಷಧಿಗಳು
ವಿಟಮಿನ್ ' ಎ ' ಮತ್ತು ವಿಟಮಿನ್ ' ಸಿ ' ಆಹಾರಗಳುಮಲೇರಿಯಾ ಜ್ವರ ಹೊಂದಿದ ವ್ಯಕ್ತಿ ವಿಟಮಿನ್ ' ಎ ' ಮತ್ತು ವಿಟಮಿನ್ ' ಸಿ ' ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು ಅಂದರೆ ಬೀಟ್ರೂಟ್, ಕ್ಯಾರೆಟ್, ಪರಂಗಿ ಹಣ್ಣು, ಕಿತ್ತಳೆ ಹಣ್ಣು, ಮೋಸಂಬಿ ಹಣ್ಣು, ದ್ರಾಕ್ಷಿ ಹಣ್ಣುಗಳು, ಪೈನಾಪಲ್ ಹಣ್ಣು, ಬೆರ್ರಿ ಹಣ್ಣುಗಳು, ನಿಂಬೆ ಹಣ್ಣು ಇತ್ಯಾದಿಗಳನ್ನು ಸೇವಿಸಬೇಕು. ಜೊತೆಗೆ ಆತನ ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಬಲಗೊಳಿಸುವ ವಿಟಮಿನ್ ಬಿ - ಕಾಂಪ್ಲೆಕ್ಸ್ ಸೇವನೆಗೂ ಮುಂದಾಗಬೇಕು.
ಮಲೇರಿಯಾ ಜ್ವರವನ್ನು ಹೊಂದಿದ ವ್ಯಕ್ತಿಗಳು ತೀವ್ರ ಅನಾರೋಗ್ಯದಿಂದ ಬಳಲುತ್ತಿರುತ್ತಾರೆ. ವಿಪರೀತ ಜ್ವರ, ಹಲ್ಲು ಕಚ್ಚಿಕೊಳ್ಳುವಷ್ಟು ಚಳಿ ಜೊತೆಗೆ ಮೈ ಕೈನೋವು ಇವರಿಗೆ ಸಾಮಾನ್ಯ ಸಮಸ್ಯೆಗಳಾಗಿ ಕಾಡುತ್ತವೆ. ಮೊದಲೇ ಇವುಗಳ ಬಗ್ಗೆ ಅರಿತು ಚಿಕಿತ್ಸೆ ಒದಗಿಸಿದರೆ ವಿಪರೀತ ಕಾಯಿಲೆ ಬಿದ್ದು ಹಾಸಿಗೆ ಹಿಡಿದು ಕೊನೆಗೆ ಸಾವು ಸಂಭವಿಸುವುದನ್ನು ಪರಿಣಾಮಕಾರಿಯಾಗಿ ತಪ್ಪಿಸಬಹುದು.
ಸೊಳ್ಳೆ ಕಚ್ಚಿದರೆ ಮಲೇರಿಯ ಜ್ವರ ಹೇಗೆ ಬರುತ್ತದೆ?
ಮನುಷ್ಯನಿಗೆ ಮಲೇರಿಯಾ ಜ್ವರ ಅನಾಫಿಲಿಸ್ ಹೆಣ್ಣು ಸೊಳ್ಳೆಯಿಂದ ಬರುತ್ತದೆ. ಇದು ತನ್ನ ಎಂಜಲಿನಲ್ಲಿರುವ ಪ್ಲಾಸ್ಮೊಡಿಯಂ ಎಂಬ ಪರಾವಲಂಬಿ ಜೀವಿಗಳನ್ನು ಮನುಷ್ಯನ ರಕ್ತ ಕಣಗಳಿಗೆ ಹರಿ ಬಿಡುತ್ತದೆ. ಒಮ್ಮೆ ಇವುಗಳು ಮನುಷ್ಯನ ದೇಹ ಸೇರಿದ ನಂತರ ನೇರವಾಗಿ ಲಿವರ್ ಇರುವ ಜಾಗಕ್ಕೆ ಹೋಗಿ ಅಲ್ಲಿ ತಮ್ಮ ಸಂಖ್ಯೆಗಳನ್ನು ಹೆಚ್ಚು ಮಾಡಿಕೊಳ್ಳುತ್ತವೆ.
ಮಲೇರಿಯಾ ಜ್ವರ ಕಂಟ್ರೋಲ್ ಮಾಡುವ ಶಕ್ತಿ 'ತುಳಸಿ ಎಲೆ'ಗಳಿಗಿದೆ
ಕೇವಲ 48 ರಿಂದ 72 ಗಂಟೆಗಳ ಒಳಗಾಗಿ ಕೆಂಪು ರಕ್ತ ಕಣಗಳನ್ನು ಸೇರಿ ದ್ವಿಗುಣಗೊಂಡು ಸೋಂಕಿತ ಕೋಶಗಳನ್ನು ಒಡೆದುಕೊಳ್ಳುವಂತೆ ಮಾಡಿ ಇಡೀ ದೇಹದ ತುಂಬಾ ಹಬ್ಬುತ್ತವೆ. ಆಗ ವ್ಯಕ್ತಿ ಸಂಪೂರ್ಣವಾಗಿ ಸೋಂಕಿತನಾಗಿ ಮಾಂಸ ಖಂಡಗಳ ನೋವು, ಚಳಿ ಮತ್ತು ಜ್ವರದಿಂದ ಜರ್ಜರಿತನಾಗುತ್ತಾನೆ.
ಮಲೇರಿಯಾ ಜ್ವರದ ರೋಗ ಲಕ್ಷಣಗಳು
ದೇಹದಲ್ಲಿ ಜ್ವರ ಹೆಚ್ಚಾದಂತೆ ಈ ಕೆಳಗಿನ ರೋಗ ಲಕ್ಷಣಗಳು ಕಾಣಿಸುತ್ತವೆ. ಮೂತ್ರ ಪಿಂಡಗಳ ಹಾನಿ, ತಲೆ ನೋವು, ಭೇದಿ, ಮೈಕೈ ನೋವು, ವಿಪರೀತ ಆಯಾಸ, ಅತಿವ ಜ್ವರ, ವಾಕರಿಕೆ ಮತ್ತು ವಾಂತಿ, ಮೈ ಬೆವರುವುದು, ಮೈ ನಡುಗಿಸುವ ಚಳಿ, ಕೈ ಕಾಲುಗಳು ಹಿಡಿದುಕೊಂಡಂತೆ ಆಗುವುದು, ಅನಿಮಿಯಾ, ಮಲದಲ್ಲಿ ರಕ್ತ ಮತ್ತು ಸೆಳೆತ.
ಮಲೇರಿಯಾ ರೋಗಕ್ಕೆ ಕಾರಣ, ಲಕ್ಷಣಗಳು, ಹಾಗೂ ಮನೆಮದ್ದುಗಳು
ಮಲೇರಿಯಾ ಜ್ವರಕ್ಕೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸುಲಭವಾಗಿ ದೊರೆಯುತ್ತದೆ. ಆದರೂ ತಕ್ಷಣಕ್ಕೆ ಅಥವಾ ಆಸ್ಪತ್ರೆಗೆ ಹೋಗಲು ಸಾಧ್ಯವಾಗದೇ ಇದ್ದರೆ ಈ ಕೆಳಗಿನ ಮನೆಮದ್ದುಗಳನ್ನು ಒಮ್ಮೆ ಪ್ರಯತ್ನಿಸಿ. ಇವುಗಳು ಆರಂಭಿಕ ಹಂತದಲ್ಲಿರುವ ಮಲೇರಿಯ ಜ್ವರವನ್ನು ಅತ್ಯಂತ ಪರಿಣಾಮಕಾರಿಯಾಗಿ ಕಡಿಮೆ ಮಾಡಬಲ್ಲವು ಎಂದು ಈಗಾಗಲೇ ಸಾಬೀತಾಗಿದೆ.
ಆಪಲ್ ಸೈಡರ್ ವಿನೆಗರ್
ಸಾಧಾರಣವಾಗಿ ಆಪಲ್ ಸೈಡರ್ ವಿನೆಗರ್ ಜ್ವರವನ್ನು ಕಡಿಮೆ ಮಾಡಿ ದೇಹದ ತಾಪಮಾನವನ್ನು ತಗ್ಗಿಸುವ ಕೆಲಸ ಮಾಡುತ್ತದೆ. ದೇಹದಲ್ಲಿ ರೋಗ ನಿರೋಧಕ ವ್ಯವಸ್ಥೆಯನ್ನು ಬಲಗೊಳಿಸಿ ಮನುಷ್ಯನ ದೇಹವನ್ನು ಜ್ವರದ ಬಳಲಿಕೆಯಿಂದ ಆದಷ್ಟು ಬೇಗನೆ ಹುಷಾರು ಮಾಡುತ್ತದೆ.
ಆಪಲ್ ಸೈಡರ್ ವಿನೆಗರ್ ತನ್ನ ಆಂಟಿ - ಮೈಕ್ರೋಬಿಯಲ್ ಕಾರ್ಯ ಚಟುವಟಿಕೆಯಿಂದ ದೇಹದಲ್ಲಿರುವ ಬ್ಯಾಕ್ಟೀರಿಯಾಗಳನ್ನು ಕೊಂದು ಮಲೇರಿಯಾ ಜ್ವರದಿಂದ ಮುಕ್ತಿ ಕೊಡುತ್ತದೆ.
ನೀವು ಮಾಡಬೇಕಾದದು ಇಷ್ಟೇ
- ಒಂದು ಬಟ್ಟಲು ತೆಗೆದುಕೊಂಡು ಅದಕ್ಕೆ ನೀರು ಹಾಕಿ ಅರ್ಧ ಕಪ್ ಆಪಲ್ ಸೈಡರ್ ವಿನೆಗರ್ ಸೇರಿಸಿ.
- ಒಂದು ಶುದ್ಧವಾದ ಹತ್ತಿ ಬಟ್ಟೆಯನ್ನು ತೆಗೆದುಕೊಂಡು ಅದರಲ್ಲಿ ನೆನೆಸಿ ಹಣೆಯ ಮೇಲೆ ಹತ್ತು ನಿಮಿಷಗಳ ಕಾಲ ಇಟ್ಟುಕೊಳ್ಳಿ.
- ಜ್ವರ ಕಡಿಮೆ ಆಗುವವರೆಗೂ ಇದೇ ರೀತಿ ಮಾಡಿ.
ಅಡುಗೆಯ ಸ್ವಾದವನ್ನು ಬಾಯಿಯ ರುಚಿಗೆ ತಕ್ಕಂತೆ ಪರಿವರ್ತಿಸುವ ಗುಣ ಲಕ್ಷಣ ಹೊಂದಿರುವ ದಾಲ್ಚಿನ್ನಿ ಮಲೇರಿಯ ಜ್ವರದ ವಿಷಯದಲ್ಲಿ ತನ್ನ ಪ್ರಾಮಾಣಿಕತೆಯನ್ನು ತೋರುತ್ತದೆ.
- ಕೆಲವು ನಿಮಿಷಗಳ ಕಾಲ ದಾಲ್ಚಿನ್ನಿ ಅಥವಾ ಚಕ್ಕೆ ಪುಡಿಯನ್ನು ಒಂದು ಚಮಚದಷ್ಟು ತೆಗೆದುಕೊಂಡು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ನಂತರ ಸೋಸಿ ದಿನಕ್ಕೆ ಎರಡು ಬಾರಿ ಸೇವಿಸಿ.
- ಎರಡರಿಂದ ಮೂರು ದಿನಗಳಲ್ಲಿ ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ.
ಅರಿಶಿನ
- ಅರಿಶಿನ ಕೇವಲ ಅಡುಗೆಯ ಬಣ್ಣ ಹೆಚ್ಚು ಮಾಡಲು ಮಾತ್ರ ಉಪಯೋಗಕ್ಕೆ ಬರುವುದಿಲ್ಲ. ಬದಲಿಗೆ ಆರೋಗ್ಯದ ವಿಷಯದಲ್ಲಿ ಆಯುರ್ವೇದ ಪದ್ಧತಿಯಲ್ಲಿ ಹಲವಾರು ವರ್ಷಗಳ ಇತಿಹಾಸ ಹೊಂದಿರುವ ಅರಿಶಿನ ತನ್ನಲ್ಲಿರುವ ' ಕರ್ಕ್ಯುಮಿನ್ ' ಎಂಬ ಅಂಶದಿಂದ ಅತ್ಯಂತ ಶಕ್ತಿಶಾಲಿ ಔಷಧೀಯ ಗುಣಗಳನ್ನು ಹೊಂದಿದೆ.
- ಮಲೇರಿಯಾ ಜ್ವರದ ಲಕ್ಷಣಗಳಿಂದ ಬಳಲುತ್ತಿರುವವರು ಒಂದು ಗ್ಲಾಸ್ ನೀರಿಗೆ ಒಂದು ಟೀ ಚಮಚದಷ್ಟು ಅರಿಶಿನ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಿ ಸ್ವಲ್ಪ ತಣ್ಣಗಾದ ಮೇಲೆ ಪ್ರತಿ ರಾತ್ರಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು.
ಮೆಂತ್ಯ ಕಾಳುಗಳು
- ಮಲೇರಿಯ ಜ್ವರವನ್ನು ಹೋಗಲಾಡಿಸುವ ಇನ್ನೊಂದು ನೈಸರ್ಗಿಕ ಮನೆ ಮದ್ದು ಎಂದರೆ ಅದು ಪ್ರತಿಯೊಬ್ಬರ ಮನೆಯಲ್ಲಿ ಇರುವ ಮೆಂತ್ಯ ಕಾಳುಗಳು. ಇದು ಮಲೇರಿಯಾ ಸೋಂಕಿತ ವ್ಯಕ್ತಿಯ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಪ್ಲಾಸ್ಮೊಡಿಯಂ ಫಾಲ್ಸಿಪಾರಂ ಎಂಬ ಪರಾವಲಂಬಿ ಜೀವಿಯ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.
- ಆರಂಭಿಕ ಹಂತದಲ್ಲಿ ಮಲೇರಿಯಾ ಜ್ವರವನ್ನು ಹೊಂದಿರುವವರು 5 ಗ್ರಾಂ ನಷ್ಟು ಮೆಂತ್ಯ ಕಾಳುಗಳನ್ನು ಇಡೀ ರಾತ್ರಿ ನೀರಿನಲ್ಲಿ ನೆನೆಹಾಕಿ ಬೆಳಗಿನ ಖಾಲಿ ಹೊಟ್ಟೆಯಲ್ಲಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಉತ್ತಮ.
ಚೆನ್ನಾಗಿ ಆರೋಗ್ಯವಾಗಿ ತಿಂದು ಉಂಡು ಸಂತೋಷವಾಗಿ ಜೀವನ ಸಾಗಿಸುತ್ತಿದ್ದ ವ್ಯಕ್ತಿಗೆ ಇದ್ದಕ್ಕಿದ್ದಂತೆ ವಿಪರೀತ ಜ್ವರ ಕಂಡು ಬಂದರೆ ಮೊದಲು ಅದರ ಪ್ರಭಾವ ಎದುರಾಗುವುದು ಆತನ ಹೊಟ್ಟೆಯ ಮೇಲೆ. ಅಂದರೆ ಹೊಟ್ಟೆ ಹಸಿವು ತೀವ್ರತರದಲ್ಲಿ ಕಡಿಮೆಯಾಗುತ್ತದೆ. ಎಂತಹ ಮೃಷ್ಟಾನ್ನ ಭೋಜನ ಕೊಟ್ಟರೂ ತಿನ್ನಲು ಮನಸ್ಸು ಬರುವುದಿಲ್ಲ.
ಪ್ರೋಟೀನ್ ಅಂಶದ ಆಹಾರಗಳು
- ಒಬ್ಬ ಮಲೇರಿಯಾ ರೋಗಿ ತನ್ನ ದೇಹದಲ್ಲಿ ಪ್ರಪ್ರಥಮವಾಗಿ ಅನುಭವಿಸುವ ಒಂದು ಲಕ್ಷಣ ಎಂದರೆ ಅಂಗಾಂಶಗಳ ನಷ್ಟ. ಇದಕ್ಕೆ ಕಾರಣ ಆತನು ಸರಿಯಾದ ಆಹಾರ ಸೇವಿಸಲಾಗದೆ ಆತನ ದೇಹ ಕುಗುತ್ತಾ ಸಾಗುತ್ತಿರುತ್ತದೆ.
- ಆದ್ದರಿಂದ ಆತನ ದೇಹವನ್ನು ಮತ್ತೊಮ್ಮೆ ಸಮಸ್ಥಿತಿಗೆ ತರಲು ಹೆಚ್ಚಿನ ಪ್ರೋಟೀನ್ ಮತ್ತು ಹೆಚ್ಚಿನ ಕಾರ್ಬೋಹೈಡ್ರೇಟ್ ಅಂಶಗಳನ್ನು ಒಳಗೊಂಡಿರುವ ಆಹಾರಗಳ ಅವಶ್ಯಕತೆ ಇರುತ್ತದೆ. ಅಂದರೆ ಮಲೇರಿಯಾ ಜ್ವರದಿಂದ ಬಳಲುತ್ತಿರುವ ವ್ಯಕ್ತಿ ಹಾಲು, ಮೊಸರು, ಮಜ್ಜಿಗೆ, ಮೀನು, ಲಸ್ಸಿ, ಚಿಕನ್ ಸೂಪ್, ಕೋಳಿ ಮೊಟ್ಟೆಗಳು ಇತ್ಯಾದಿ ಆಹಾರಗಳನ್ನು ಸೇವಿಸಬೇಕು.
ಮಲೇರಿಯಾ ಸೋಂಕಿತ ವ್ಯಕ್ತಿಗೆ ದೇಹದಲ್ಲಿ ನೀರಿನಂಶ ಕಡಿಮೆಯಾಗಿ ಜೊತೆಗೆ ಎಲೆಕ್ಟ್ರೋಲೈಟ್ ಅಂಶಗಳು ಇಲ್ಲದಂತಾಗಿ ದೇಹ ನಿರ್ಜಲೀಕರಣದ ಸಮಸ್ಯೆಗೆ ಗುರಿಯಾಗುವುದು ಸಾಮಾನ್ಯ ಸಂಗತಿ. ಆದ್ದರಿಂದ ಆತ ಹಣ್ಣಿನ ರಸಗಳು, ಸೂಪ್, ಅಕ್ಕಿ ಗಂಜಿ, ಎಳನೀರು, ಬೇಳೆ ಬೇಯಿಸಿದ ನೀರು ಕುಡಿದರೆ ಉತ್ತಮ.
ಮಲೇರಿಯಾ ರೋಗ ನಿಯಂತ್ರಿಸುವ ಆಯುರ್ವೇದ ಔಷಧಿಗಳು
ವಿಟಮಿನ್ ' ಎ ' ಮತ್ತು ವಿಟಮಿನ್ ' ಸಿ ' ಆಹಾರಗಳುಮಲೇರಿಯಾ ಜ್ವರ ಹೊಂದಿದ ವ್ಯಕ್ತಿ ವಿಟಮಿನ್ ' ಎ ' ಮತ್ತು ವಿಟಮಿನ್ ' ಸಿ ' ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು ಅಂದರೆ ಬೀಟ್ರೂಟ್, ಕ್ಯಾರೆಟ್, ಪರಂಗಿ ಹಣ್ಣು, ಕಿತ್ತಳೆ ಹಣ್ಣು, ಮೋಸಂಬಿ ಹಣ್ಣು, ದ್ರಾಕ್ಷಿ ಹಣ್ಣುಗಳು, ಪೈನಾಪಲ್ ಹಣ್ಣು, ಬೆರ್ರಿ ಹಣ್ಣುಗಳು, ನಿಂಬೆ ಹಣ್ಣು ಇತ್ಯಾದಿಗಳನ್ನು ಸೇವಿಸಬೇಕು. ಜೊತೆಗೆ ಆತನ ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಬಲಗೊಳಿಸುವ ವಿಟಮಿನ್ ಬಿ - ಕಾಂಪ್ಲೆಕ್ಸ್ ಸೇವನೆಗೂ ಮುಂದಾಗಬೇಕು.