ಅಪೌಷ್ಟಿಕ ಆಹಾರದಿಂದ ಕ್ಯಾನ್ಸರ್
ಪೋಷಕಾಂಶ ರಹಿತ ಆಹಾರ ಸೇವನೆಯು ಮಾರಕ ಕಾಯಿಲೆ ಕಾನ್ಯರ್ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಇತ್ತೀಚಿನ ಅಧ್ಯಯನವೊಂದು ಬಹಿರಂಗ ಪಡಿಸಿದೆ.
Agencies 31 May 2019, 6:43 pm
ಮಾರಣಾಂತಿಕ ರೋಗ ಕ್ಯಾನ್ಸರ್ ಇತ್ತೀಚಿನ ವರ್ಷಗಳಲ್ಲಿ ಅತಿಯಾಗಿ ವ್ಯಾಪಿಸುತ್ತಿದ್ದು, ಪ್ರತಿ ವರ್ಷ ಲಕ್ಷಾಂತರ ಜನರು ಇದಕ್ಕೆ ಬಲಿಯಾಗುತ್ತಿದ್ದಾರೆ. ಪಿಡುಗಿನಂತೆ ಬೆಳೆಯುತ್ತಿರುವ ಇದ ಬರುವುದಕ್ಕಿಂತ ಮುಂಚೆಯೇ ಎಚ್ಚರಿಕೆ ವಹಿಸುವುದು ಒಳಿತು ಎನ್ನುತ್ತಾರೆ ವೈದ್ಯರು.
ಪೋಷಕಾಂಶ ರಹಿತ ಆಹಾರ ಸೇವನೆಯು ಮಾರಕ ಕಾಯಿಲೆ ಕಾನ್ಯರ್ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಇತ್ತೀಚಿನ ಅಧ್ಯಯನವೊಂದು ಬಹಿರಂಗ ಪಡಿಸಿದೆ.
ಅಧ್ಯಯನದ ಪ್ರಕಾರ 5% ಕಾನ್ಸರ್ ಪ್ರಕರಣಗಳ ಮೂಲ ಅಪೌಷ್ಟಿಕ ಆಹಾರ.
ಇನ್ನೊಂದು ಸಂಶೋಧನೆಯ ಪ್ರಕಾರ ಬದಲಾಗಿರುವ ಜೀವನ ಶೈಲಿಯೇ ಕ್ಯಾನ್ಸರ್ಗೆ ಕಾರಣ. ಈ ಸಂಶೋಧನೆಯ ಪ್ರಕಾರ ಕಲಬೆರಕೆ , ತಿನ್ನಬಾರದ ಆಹಾರ ಸೇವಿಸುವುದು ಸಹ ಕ್ಯಾನ್ಸರ್ಗೆ ಕಾರಣವಂತೆ. ಅಂದರೆ ಪೌಷ್ಟಿಕ ಆಹಾರವನ್ನು ದೂರ ಮಾಡಿಕೊಂಡಿರುವುದೇ ಕ್ಯಾನ್ಸರ್ಗೆ ರಹದಾರಿಯಾಗಿದೆ.
ಸಾಮಾನ್ಯವಾಗಿ ಕಡಿಮೆ ಪ್ರಮಾಣದಲ್ಲಿ ಹಣ್ಣು, ತರಕಾರಿ ಸೇವನೆ, ಆಹಾರದಲ್ಲಿ ಬೇಳೆಕಾಳುಗಳು ಇಲ್ಲದಿರುವಿಕೆ. ಸಕ್ಕರೆ ಅಂಶ ಇರುವ ಪಾನೀಯಗಳನ್ನು ಹೆಚ್ಚು ಸೇವಿಸುವಂತದ್ದು ಅಪಾಯಕಾರಿ ಕ್ಯಾನ್ಸರ್ಗೆ ಕಾರಣವಾಗುವ ಸಾಧ್ಯತೆಗಳಿವೆ.
ಸಾಮಾನ್ಯವಾಗಿ ಪೌಷ್ಟಿಕ ಆಹಾರಗಳ ಕನಿಷ್ಠ ಅಗತ್ಯ ದೇಶದಿಂದ ದೇಶಕ್ಕೆ ವ್ಯತ್ಯಾಸಗೊಳ್ಳುತ್ತದೆ. ಆದರೂ ಎಲ್ಲಾ ದೇಶಗಳಲ್ಲಿರುವ ಕೆಲವು ಸಾಮ್ಯತೆಗಳೆಂದರೆ ಎಲ್ಲರೂ ಯಥೇಚ್ಛ ಹಣ್ಣು, ತರಕಾರಿ ಮತ್ತು ಉಪ್ಪಿನಲ್ಲಿರುವ ಸೋಡಿಯಂ ಸೇವಿಸುವ ಅಗತ್ಯ ಹೆಚ್ಚಿದೆ. ಆಹಾರದಲ್ಲಿ ಕೇವಲ ಸಕ್ಕರೆ, ಉಪ್ಪು, ಕೊಬ್ಬಿನ ಪ್ರಮಾಣ ಕಡಿಮೆಗೊಳಿಸುವುದಕ್ಕಿಂತ ಪರ್ಯಾಯ ಆರೋಗ್ಯಕರ ಆಹಾರದ ಬಗ್ಗೆ ಅರಿವು ಮೂಡಿಸುವುದು ಉತ್ತಮ.
ಪೋಷಕಾಂಶ ರಹಿತ ಆಹಾರ ಸೇವನೆಯು ಮಾರಕ ಕಾಯಿಲೆ ಕಾನ್ಯರ್ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಇತ್ತೀಚಿನ ಅಧ್ಯಯನವೊಂದು ಬಹಿರಂಗ ಪಡಿಸಿದೆ.
ಅಧ್ಯಯನದ ಪ್ರಕಾರ 5% ಕಾನ್ಸರ್ ಪ್ರಕರಣಗಳ ಮೂಲ ಅಪೌಷ್ಟಿಕ ಆಹಾರ.
ಇನ್ನೊಂದು ಸಂಶೋಧನೆಯ ಪ್ರಕಾರ ಬದಲಾಗಿರುವ ಜೀವನ ಶೈಲಿಯೇ ಕ್ಯಾನ್ಸರ್ಗೆ ಕಾರಣ. ಈ ಸಂಶೋಧನೆಯ ಪ್ರಕಾರ ಕಲಬೆರಕೆ , ತಿನ್ನಬಾರದ ಆಹಾರ ಸೇವಿಸುವುದು ಸಹ ಕ್ಯಾನ್ಸರ್ಗೆ ಕಾರಣವಂತೆ. ಅಂದರೆ ಪೌಷ್ಟಿಕ ಆಹಾರವನ್ನು ದೂರ ಮಾಡಿಕೊಂಡಿರುವುದೇ ಕ್ಯಾನ್ಸರ್ಗೆ ರಹದಾರಿಯಾಗಿದೆ.
ಸಾಮಾನ್ಯವಾಗಿ ಕಡಿಮೆ ಪ್ರಮಾಣದಲ್ಲಿ ಹಣ್ಣು, ತರಕಾರಿ ಸೇವನೆ, ಆಹಾರದಲ್ಲಿ ಬೇಳೆಕಾಳುಗಳು ಇಲ್ಲದಿರುವಿಕೆ. ಸಕ್ಕರೆ ಅಂಶ ಇರುವ ಪಾನೀಯಗಳನ್ನು ಹೆಚ್ಚು ಸೇವಿಸುವಂತದ್ದು ಅಪಾಯಕಾರಿ ಕ್ಯಾನ್ಸರ್ಗೆ ಕಾರಣವಾಗುವ ಸಾಧ್ಯತೆಗಳಿವೆ.
ಸಾಮಾನ್ಯವಾಗಿ ಪೌಷ್ಟಿಕ ಆಹಾರಗಳ ಕನಿಷ್ಠ ಅಗತ್ಯ ದೇಶದಿಂದ ದೇಶಕ್ಕೆ ವ್ಯತ್ಯಾಸಗೊಳ್ಳುತ್ತದೆ. ಆದರೂ ಎಲ್ಲಾ ದೇಶಗಳಲ್ಲಿರುವ ಕೆಲವು ಸಾಮ್ಯತೆಗಳೆಂದರೆ ಎಲ್ಲರೂ ಯಥೇಚ್ಛ ಹಣ್ಣು, ತರಕಾರಿ ಮತ್ತು ಉಪ್ಪಿನಲ್ಲಿರುವ ಸೋಡಿಯಂ ಸೇವಿಸುವ ಅಗತ್ಯ ಹೆಚ್ಚಿದೆ. ಆಹಾರದಲ್ಲಿ ಕೇವಲ ಸಕ್ಕರೆ, ಉಪ್ಪು, ಕೊಬ್ಬಿನ ಪ್ರಮಾಣ ಕಡಿಮೆಗೊಳಿಸುವುದಕ್ಕಿಂತ ಪರ್ಯಾಯ ಆರೋಗ್ಯಕರ ಆಹಾರದ ಬಗ್ಗೆ ಅರಿವು ಮೂಡಿಸುವುದು ಉತ್ತಮ.