ಆ್ಯಪ್ನಗರ

ಹೃದಯಾಘಾತ ಹೇಗೆ ಸಂಭವಿಸುತ್ತದೆ ? ಕಾರಣಗಳು ಮತ್ತು ಲಕ್ಷಣಗಳು

ನಿಮಗೆಲ್ಲ ತಿಳಿದಿರುವ ಹಾಗೆ ಹೃದಯಾಘಾತ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾದದ್ದು. ಹೃದಯಾಘಾತ ಎಂದರೆ ಹೃದಯ ತನ್ನ ಕೆಲಸವನ್ನು ನಿಲ್ಲಿಸುವುದು .

Vijaya Karnataka Web 29 Jun 2021, 5:25 pm
ನಮ್ಮ ದೈನಂದಿನ ಕೆಲಸಗಳ ಒತ್ತಡದಿಂದಾಗಿ ಹೃದಯದ ಮೇಲೆ ಅತಿಯಾದ ಒತ್ತಡ ಹಾಕುತ್ತೇವೆ. ಇದರಿಂದ ಹೃದಯದ ಸಮಸ್ಯೆಗಳು ಆಗಾಗ ಕಾಡುತ್ತಲೇ ಇರುತ್ತೆ. ಅದರಲ್ಲೂ ನಮ್ಮ ದಿನನಿತ್ಯದ ಜೀವನಶೈಲಿ ಹಾಗೂ ಆಹಾರ ಕ್ರಮದಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು ಸಣ್ಣ ವಯಸ್ಸಿನವರಿಂದ ಹಿಡಿದು ವಯಸ್ಸಾದವರ ತನಕ ಪ್ರತಿಯೊಬ್ಬರನ್ನೂ ಕಾಡುತ್ತೆ.
Vijaya Karnataka Web mini heart attack causes and symptoms
ಹೃದಯಾಘಾತ ಹೇಗೆ ಸಂಭವಿಸುತ್ತದೆ ? ಕಾರಣಗಳು ಮತ್ತು ಲಕ್ಷಣಗಳು


ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಇದು ಇನ್ನೂ ಹೆಚ್ಚಾಗಿದೆ. ಅದರಲ್ಲೂ ಸಣ್ಣ ವಯಸ್ಸಿನಲ್ಲಿ ಹೃದಯಾಘಾತ ಆಗುವ ಸಾಧ್ಯತೆ ಕೂಡ ಹೆಚ್ಚಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಹೇಳುವ ಹಾಗೆ ಪ್ರತೀ ವರ್ಷ ವಿಶ್ವದಾದ್ಯಂತ ಶೇಕಡ 30ರಷ್ಟು ಜನ ಹೃದಯಾಘಾತ ಸಂಬಂದಿ ಕಾಯಿಲೆಯಿಂದ ಸಾಯುತ್ತಿದ್ದಾರೆ. ಹಾಗಾದರೆ ಈ
ಹೃದಯಾಘಾತ ಎಂದರೆ ಏನು ? . ಇದು ಯಾವ ಕಾರಣದಿಂದ ಉಂಟಾಗುತ್ತದೆ ? ಇದರ ಲಕ್ಷಣಗಳೇನು ? ಇದನ್ನು ನಿರ್ಯಣಿಸುವ ಪರೀಕ್ಷೆಗಳು ಯಾವುವು? . ಇದರ ಬಗ್ಗೆ ಹೃದ್ರೋಗ ತಜ್ಞರು ತಿಳಿಸಿಕೊಟ್ಟಿರುವ ಮಾಹಿತಿಯನ್ನು ನೋಡೋಣ ಬನ್ನಿ.

Video-ಇದೆಲ್ಲಾ ಹೃದಯಾಘಾತ ಲಕ್ಷಣಗಳು, ತಪ್ಪಿಯೂ ನಿರ್ಲಕ್ಷಿಸಬೇಡಿ

​ಹೃದಯಾಘಾತ ಎಂದರೆ ಏನು ? ಅದು ಹೇಗೆ ಆಗುತ್ತೆ?

ಮನುಷ್ಯನ ದೇಹದ ಹೃದಯದಲ್ಲಿ ರಕ್ತನಾಳಗಳು ಅಥವಾ ಕೊರೊನರಿ ಅರ್ಟರೀಸ್ ಇರುತ್ತವೆ. ದೇಹದಲ್ಲಿ ಒಟ್ಟು 3 ಕೊರೊನರಿ ಅರ್ಟರೀಸ್ ಇರುತ್ತವೆ. ಇದು ಯಾವುದೆಂದರೆ ಲೆಫ್ಟ್ ಕೊರೋನರಿ ಆರ್ಟರಿ (LCA), ಸರ್ಕಮ್ ಫ್ಲೆಕ್ಸ್ ಆರ್ಟರಿ ಹಾಗು ರೈಟ್ ಕೊರೋನರಿ ಆರ್ಟರಿ (RCA). ಈ ಮೂರು ರಕ್ತನಾಳಗಳಿಂದ ಹೃದಯಕ್ಕೆ ರಕ್ತದ ಚಲನೆ ನಡೆಯುತ್ತಿರುತ್ತದೆ. ದೇಹದ ಇತರೆ ಸಮಸ್ಯೆಗಳಿಂದ ಕೂಡ ಹೃದಯಾಘಾತ ಆಗಬಹುದು .

ಬೇರೆಬೇರೆ ಸಮಸ್ಯೆಗಳಾದ ಸಕ್ಕರೆ ಕಾಯಿಲೆ, ಹೈ ಕೊಲೆಸ್ಟ್ರಾಲ್ ಅಥವಾ ಹೆಚ್ಚು ರಕ್ತದೊತ್ತಡ ಇನ್ನಿತರ ಕಾರಣಗಳಿಂದ ರಕ್ತನಾಳಗಳ ಒಳಗೆ ಬೊಜ್ಜು ಹಾಗೂ ಕ್ಯಾಲ್ಸಿಯಂ ಸೇರಿಕೊಂಡು ಕಾಲ ಕಳೆದಂತೆ ರಕ್ತನಾಳ ಕುಗ್ಗುತ್ತಾ ಹೋಗುತ್ತದೆ. ಇದರಿಂದ ರಕ್ತ ಚಲನೆಗೆ ಅಡ್ಡಿ ಉಂಟಾಗುತ್ತದೆ . ಈ ಅಡಚಣೆಯಾದ ಜಾಗದಲ್ಲಿ ರಕ್ತ ಹೆಪ್ಪುಗಟ್ಟಿ ಹೃದಯಕ್ಕೆ ರಕ್ತ ಚಲನೆ ನಿಂತುಹೋಗುತ್ತದೆ. ಈ ಸಮಸ್ಯೆಯನ್ನು ಹೃದಯಘಾತ ಅಥವಾ ಹಾರ್ಟ್ ಅಟ್ಯಾಕ್ ಎಂದು ಕರೆಯುತ್ತೇವೆ.

ಹೃದಯಾಘಾತ ಪ್ರಮಾಣವು ತೀವ್ರ ಪರಿಶ್ರಮದೊಂದಿಗೆ ಸಂಬಂಧಿಸಿರುತ್ತದೆ, ಅದು ಮಾನಸಿಕ ಒತ್ತಡ ಅಥವಾ ದೈಹಿಕ ಪರಿಶ್ರಮ ಯಾವುದೇ ಆಗಿರಲಿ, ವಿಶೇಷವಾಗಿ ವ್ಯಕ್ತಿಯು ಸಾಮಾನ್ಯವಾಗಿ ಪರಿಶ್ರಮ ನಿರ್ವಹಿಸುವುದಕ್ಕಿಂತ ಹೆಚ್ಚು ತೀವ್ರವಾಗಿದ್ದರೆ ಸಂಭವಿಸುವುದು ಹೆಚ್ಚು .

ಟೈಪ್ 2 ಡಯಾಬಿಟಿಸ್: ಇದು ಪುರುಷರು ಮತ್ತು ಮಹಿಳೆಯರಿಗೆ ಹೇಗೆ ಭಿನ್ನವಾಗಿದೆ?

​ಹೃದಯದ ಬಡಿತ ನಿಯಂತ್ರಣದಲ್ಲಿ ಇರದೆ ಇರುವುದು

ಹಾರ್ಟ್ ಒಂದು ಪಂಪ್ ಇದ್ದಹಾಗೆ. ಇದು ರಕ್ತವನ್ನು ದೇಹದ ಇತರ ಭಾಗಗಳಿಗೆ ಸರಬರಾಜು ಮಾಡುತ್ತದೆ. ಇದು ಶ್ವಾಸಕೋಶಕ್ಕೆ ತೆರಳಿ ಆಮ್ಲಜನಕ ಪಡೆದು ನಂತರ ಹೃದಯದಿಂದ ಒಳ್ಳೆ ರಕ್ತವು ಪಂಪ್ ಆಗಲ್ಪಡುತ್ತೆ . ಹೃದಯಾಘಾತ ಆದ ಸಂದರ್ಭಗಳಲ್ಲಿ ಹೃದಯಕ್ಕೆ ತೊಂದರೆಯಾಗಿ ಹೃದಯದ ಕೆಲಸ ನಿಂತುಹೋಗಿ ರಕ್ತ ಪೂರೈಕೆ ನಿಲ್ಲುತ್ತಾ ಹೋಗುತ್ತದೆ . ಹೃದಯದ ಬಡಿತ ನಿಯಂತ್ರಣದಲ್ಲಿ ಇರದೆ ಕೂಡಲೇ ಹೃದಯ ಕೆಲಸವನ್ನು ನಿಲ್ಲಿಸುತ್ತದೆ. ಇದೇ ಕಾರಣಕ್ಕಾಗಿಯೇ ಕೆಲವರು ಹಠಾತ್ ಆಗಿ ಸಾಯುವುದನ್ನು ನೀವು ನೋಡಿರುತ್ತೀರಿ ಅಥವಾ ಇನ್ನು ಕೆಲವರಿಗೆ ಎದೆ ನೋವು ಕಾಣಿಸಿಕೊಂಡು ನಂತರ ಆಸ್ಪತ್ರೆಯಲ್ಲಿ ದಾಖಲಾಗಿ ಟ್ರೀಟ್ಮೆಂಟ್ ಫಲಕಾರಿ ಆಗದೆ ಕೊನೆಯುಸಿರು ಎಳೆದಿರುವುದನ್ನು ಕೇಳಿರುತ್ತೀರಿ .

ಈ ಹೃದಯಾಘಾತದಿಂದ ಉಸಿರಾಡುವ ಸಮಸ್ಯೆ ಎದುರಾಗಬಹುದು. ಏಕೆಂದರೆ ಹೃದಯವು ಸರಿಯಾಗಿ ಕೆಲಸ ನಿರ್ವಹಿಸದೇ ಪಂಪ್ ಮಾಡದೆ ಇರುವ ಕಾರಣ ರಕ್ತವು ಶ್ವಾಸಕೋಶದಲ್ಲಿ ತುಂಬಿಕೊಂಡು ಉಸಿರಾಡಲು ಸಮಸ್ಯೆಯಾಗುತ್ತದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಪಲ್ಮನರಿ ಎಡಿಮಾ ಎಂದು ಕರೆಯುತ್ತಾರೆ. ಇದರಿಂದ ಉಸಿರಾಡಲು ಸಮಸ್ಯೆ ಉಂಟಾಗುತ್ತೆ .

ಸಾಮಾನ್ಯವಾಗಿ ಹೃದಯಾಘಾತವಾದಾಗ ಎದೆನೋವು ಕಾಣಿಸುತ್ತದೆ. ಮುಖ್ಯವಾಗಿ ಎದೆಯು ಬಿಗಿಯಾಗಿರುವಂತೆ, ಒತ್ತಿದಂತೆ ಅಥವಾ ಹಿಸುಕಿದಂತೆ ಅನುಭವವಾಗುತ್ತದೆ. ಇನ್ನೂ ಹೇಳಬೇಕೆಂದರೆ ಆನೆ ಎದೆ ಮೇಲೆ ಕೂತ ಹಾಗೆ ಅಥವಾ ಅತಿ ಭಾರದ ವಸ್ತು ಎದೆ ಮೇಲೆ ಆವರಿಸಿರುವ ಹಾಗೆ ಆಗುತ್ತದೆ. ಇನ್ನು ಕೆಲವರಿಗೆ ಕೈಯಲ್ಲಿ ಬೆನ್ನಿನಲ್ಲಿ ಅಥವಾ ಹೊಟ್ಟೆಯಲ್ಲಿ ಸಹ ಇದರಿಂದ ನೋವು ಕಾಣಿಸಿಕೊಳ್ಳುತ್ತದೆ . ಹಾಗು ಅದು ಭಾಳ ಅವಧಿಯವರೆಗೆ ಇರುತ್ತೆ ಹೃದಯಾಘಾತದಿಂದ ಸಂಭವಿಸುವ ಈ ನೋವು 15 ನಿಮಿಷ

ದಿಂದ ಒಂದು ಗಂಟೆಗಳ ಕಾಲ ಇರುವ ಸಂಭವ ಉಂಟು . ಇವೆಲ್ಲವೂ ಹೃದಯಾಘಾತದ ಚಿಹ್ನೆಗಳು .

ನಿಮ್ಮ ಜೀವನದ ಪ್ರತಿಯೊಂದು ಸಣ್ಣ ಸಮಸ್ಯೆಯ ಬಗ್ಗೆ ಯೋಚಿಸುವುದನ್ನು ನಿಲ್ಲಿಸುವುದು ಹೇಗೆ?

​ಹೃದಯಾಘಾತವನ್ನು ಯಾವ ಪರೀಕ್ಷೆಗಳು ಖಚಿತಪಡಿಸುತ್ತೆ ?

ECG(ಎಲೆಕ್ಟ್ರೊಕಾರ್ಡಿಯೊಗ್ರ್ಯಾಮ್) ಪರೀಕ್ಷೆಯ ಮೂಲಕ ಹೃದಯಾಘಾತ ಆಗಿದೆಯೇ ಇಲ್ಲವೇ ಎಂದು ತಿಳಿದುಕೊಳ್ಳಬಹುದು. ECG ಹೃದಯ ಸ್ನಾಯುವಿನ ಹಾನಿಗೊಳಗಾದ ಭಾಗವನ್ನು ಗುರುತಿಸಲು ಪ್ರಮುಖ ಸುಳಿವುಗಳನ್ನು ನೀಡುತ್ತದೆ. ಹೃದಯಾಘಾತವನ್ನು ಖಚಿತಪಡಿಸಲು ರಕ್ತ ಪರೀಕ್ಷೆಯನ್ನು ಸಹ ಮಾಡುವುದುಂಟು. ಈ ಪರೀಕ್ಷೆಯ ಮೂಲಕ ಎಂಜೈಮ್ಸ್ ಅಥವಾ ಕಿಣ್ವಗಳು ಜಾಸ್ತಿ ಇರುವುದು ತಿಳಿದು ಬಂದರೆ ಹೃದಯಾಘಾತವಾಗಿದೆ ಎಂದು ಖಚಿತ ಪಡಿಸುತ್ತಾರೆ.ಕೆಲವೊಮ್ಮೆ ಹಿಂದೆ ಯಾವಾಗಲೋ ಕೂಡ ಹೃದಯಾಘಾತ ಆಗಿರುವುದನ್ನು ಸಹ ಇದರ ಮೂಲಕ ತಿಳಿಯಬಹುದು .

​ರಕ್ತನಾಳದಲ್ಲಿ ಹೆಪ್ಪುಗಟ್ಟುವಿಕೆ

ಹೃದಯಾಘಾತಕ್ಕೆ ಮುಖ್ಯ ಕಾರಣ ರಕ್ತನಾಳದಲ್ಲಿ ಹೆಪ್ಪುಗಟ್ಟುವಿಕೆ ಆಗಿರುತ್ತೆ . ಆದ್ದರಿಂದ ಆದಷ್ಟು ಬೇಗ ರಕ್ತ ಹೆಪ್ಪುಗಟ್ಟುವುದನ್ನು ತಡೆದರೆ ಹೃದಯಾಘಾತದಿಂದ ಆಗುವ ದೊಡ್ಡ ಸಮಸ್ಯೆಯಿಂದ ಪಾರಾಗಬಹುದು. ಹಾಗಾಗಿ ಆದಷ್ಟು ಈ ಚಿಹ್ನೆಗಳು ಕಂಡುಬಂದಲ್ಲಿ ಕೂಡಲೇ ಆಸ್ಪತ್ರೆಗೆ ದಾಖಲಿಸವುದು ಉತ್ತಮ ಎನ್ನುತ್ತಾರೆ ಹೃದಯ ತಜ್ಞರು. ಈ ರಕ್ತನಾಳಗಳ ಹೆಪ್ಪುಗಟ್ಟುವಿಕೆ ಆಗಿ ಹೆಚ್ಚು ಸಮಯ ಕಳೆದಂತೆ ಹೆಚ್ಚು ತೊಂದರೆ ಹಾಗು ಹಾನಿ ಉಂಟಾಗುತ್ತೆ . ಹಾಗಾಗಿ ಈ ಯಾವುದೇ ಹೃದಯಾಘಾತದ ಚಿಹ್ನೆಗಳು ತಿಳಿದಾಗ ಎಷ್ಟು ಬೇಗ ಸಾಧ್ಯವಾಗುವುದೋ ಅಷ್ಟು ಬೇಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವುದರಿಂದ ಹೃದಯಾಘಾತದಿಂದ ಪಾರಾಗಲು ಸಾಧ್ಯವಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ