ಆ್ಯಪ್ನಗರ

ಪ್ರತಿರೋಧಕ ಶಕ್ತಿ ವೃದ್ಧಿಸಲು ಕೆಲವು ಆಯುಷ್ ಕ್ರಮಗಳು

ಕೇಂದ್ರ ಸರ್ಕಾರವು ಪ್ರತಿರೋಧಕ ಶಕ್ತಿ ವೃದ್ದಿಸಲು ಕೆಲವು ಆಯುಷ್ ಕ್ರಮಗಳನ್ನು ಹೇಳಿವೆ. ಅವುಗಳು ಇಲ್ಲಿದೆ.

Lipi 14 Apr 2020, 6:27 pm
ಸದ್ದಿಲ್ಲದೆ ಜನರ ದೇಹದೊಳಗೆ ಬಂದು ಕಾಡುವಂತಹ ಮದ್ದಿಲ್ಲದೆ ಇರುವಂತಹ ವೈರಸ್ ಕೊರೋನಾ ಇಂದು ವಿಶ್ವದೆಲ್ಲೆಡೆಯಲ್ಲಿ ಲಕ್ಷಾಂತರ ಜನರನ್ನು ಬಾಧಿಸಿದೆ. ಕೊರೋನಾಗೆ ಮದ್ದಿಲ್ಲದೆ ಇದ್ದರೂ ಇದರಿಂದ ಕೆಲವು ಗುಣಮುಖರಾಗಿ ಮನೆಗೆ ಸೇರುತ್ತಿದ್ದಾರೆ. ಹಾಗೆ ಇನ್ನು ಕೆಲವು ಮಂದಿ ಸೋಂಕಿತರ ಸಂಪರ್ಕದಲ್ಲಿದ್ದರೂ ಅವರಿಗೆ ಈ ಸೋಂಕು ಕಾಡಿಲ್ಲ. ವಯೋವೃದ್ಧರು ಮತ್ತು ದೀರ್ಘಾವಧಿಗೆ ಬೇರೆ ಕಾಯಿಲೆಗಳಾಗಿರುವಂತಹ ಮಧುಮೇಹ, ಅಧಿಕ ರಕ್ತದೊತ್ತಡ, ಶ್ವಾಸಕೋಶದ ಸಮಸ್ಯೆ ಮತ್ತು ಹೃದಯದ ಕಾಯಿಲೆಯಿಂದ ಬಳಲುತ್ತಿರುವ ಜನರು ಸಾವಿಗೊಳಗಾಗುತ್ತಿದ್ದಾರೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಚಾರವೆಂದರೆ ದೇಹದಲ್ಲಿ ಪ್ರತಿರೋಧಕ ವ್ಯವಸ್ಥೆಯು ಬಲಿಷ್ಠವಾಗಿದ್ದರೆ ಅಂತಹ ವ್ಯಕ್ತಿಗಳಿಗೆ ಸೋಂಕಿನ ಅಪಾಯವು ಕಡಿಮೆ ಇರುವುದು. ಆದರೆ ಇದರ ಬಗ್ಗೆ ವೈಜ್ಞಾನಿಕವಾಗಿ ಇನ್ನು ಸಾಬೀತು ಆಗಬೇಕಾಗಿದೆ.
Vijaya Karnataka Web Immunity boosting natural juice


ಕೊವಿಡ್-19 ಮತ್ತು ಅದಕ್ಕೆ ಸಂಬಂಧಿಸಿದಂತಹ ಚಿಕಿತ್ಸೆ ಬಗ್ಗೆ ಹರಿದಾಡುತ್ತಿರುವಂತಹ ಸುಳ್ಳು ಸುದ್ದಿಗಳ ಬಗ್ಗೆ ಕೇಂದ್ರ ಸರ್ಕಾರವು ಅಭಿಯಾನವನ್ನು ಆರಂಭಿಸಿದೆ. ದೇಹದಲ್ಲಿ ಪ್ರತಿರೋಧಕ ಶಕ್ತಿ ವೃದ್ಧಿಸಲು ಜನರು ಆರೋಗ್ಯಕಾರಿ ಜೀವನಶೈಲಿ ಅಳವಡಿಸಿಕೊಂಡು ಹೋಗಬೇಕು ಎಂದು ಹೇಳಿದೆ. ನಮ್ಮ ದೇಶದಲ್ಲಿ ಶತಮಾನದಿಂದಲೂ ಅಳವಡಿಸಿಕೊಂಡು ಬರಲಾಗಿರುವಂತಹ ಕೆಲವು ವಿಧಾನಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಉಲ್ಲೇಖಿಸಿದ್ದಾರೆ. ಕೇಂದ್ರ ಆಯುಷ್ ಸಚಿವಾಲಯವು ಆರೋಗ್ಯವಾಗಿ ಇರಲು ಕೆಲವು ಸಲಹೆಗಳಣ್ನು ನೀಡಿದೆ. ಇದನ್ನು ಆಯುರ್ವೇದ ಮತ್ತು ಯೋಗ ತಜ್ಞರು ಕೂಡ ಬೆಂಬಲಿಸಿದ್ದಾರೆ. ಆದರೆ ಇದನ್ನು ಕೊರೋನಾ ವೈರಸ್ ವಿರುದ್ಧ ಹೋರಾಡುವಂತಹ ಔಷಧಿ ಎಂದು ಖಂಡಿತವಾಗಿಯೂ ಭಾವಿಸಬಾರದು.

ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸರಳ ಮನೆ ಮದ್ದುಗಳು

ಸಾಮಾನ್ಯ ಸಲಹೆಗಳು
  • ದಿನವಿಡಿ ಬಿಸಿ ನೀರು ಕುಡಿಯಿರಿ. ಬೇಸಿಗೆ ಸಂದರ್ಭದಲ್ಲಿ ಕೂಡ.
  • ಪ್ರತಿನಿತ್ಯವೂ 30 ನಿಮಿಷ ಕಾಲ ಯೋಗಾಸನ, ಪ್ರಾಣಾಯಾಮ(ಉಸಿರಾಟದ ವ್ಯಾಯಾಮ) ಮತ್ತು ಧ್ಯಾನ ಮಾಡಿ.
  • ಅಡುಗೆಗೆ ಅರಶಿನ, ಜೀರಿಗೆ, ಕೊತ್ತಂಬರಿ ಮತ್ತು ಬೆಳ್ಳುಳ್ಳಿ ಹೆಚ್ಚಾಗಿ ಬಳಸಿ.
ಆಯುರ್ವೇದದ ಪ್ರಕಾರ ಪ್ರತಿರೋಧಕ ಶಕ್ತಿ ಹೆಚ್ಚಿಸಲು ಕೆಲವು ಸಲಹೆಗಳು
  • ಬೆಳಗ್ಗೆ 10 ಗ್ರಾಂ ಚ್ಯಾವನ್ಪ್ರಾಶ್ ಸೇವಿಸಿ. ಮಧುಮೇಹಿಗಳು ಸಕ್ಕರೆ ರಹಿತ ಚ್ಯಾವನ್ಪ್ರಾಶ್ ತಿನ್ನಿ.
  • ಗಿಡಮೂಲಿಕೆ ಚಾ ಅಥವಾ ಚಾಗೆ ಹಾಲು ಹಾಕದೆ ಕುಡಯಿರಿ. ತುಳಸಿ, ದಾಲ್ಚಿನಿ, ಕರಿಮೆಣಸು, ಶುಂಠಿ, ದ್ರಾಕ್ಷಿಯಿಂದ ಮಾಡಿದಂತಹ ಕಷಾಯ ದಿನದಲ್ಲಿ ಒಂದು ಅಥವಾ ಎರಡು ಸಲ ಸೇವಿಸಿ. ಇದಕ್ಕೆ ಬೆಲ್ಲ ಅಥವಾ ತಾಜಾ ಲಿಂಬೆ ರಸ ಬೆರೆಸಿಕೊಂಡು ಕುಡಿಯಬಹುದು.
  • ಬಂಗಾರದ ಹಾಲು-ಅರ್ಧ ಚಮಚ ಅರಶಿನವನ್ನು 150 ಮಿ.ಲೀ. ಬಿಸಿ ಹಾಲಿಗೆ ಹಾಕಿ ದಿನದಲ್ಲಿ ಒಂದು ಅಥವಾ ಎರಡು ಸಲ ಕುಡಿಯಿರಿ. ನಿರ್ವಿಷಗೊಳಿಸಲು ಅಥವಾ ಸೈನಸ್ ಗೆ ಆಯುರ್ವೇದಿಕ್ ನ ಕೆಲವು ವಿಧಾನಗಳು
ಮೂಗಿಗೆ ಎಣ್ಣೆ
ದಿನಾ ಬೆಳಗ್ಗೆ ಮತ್ತು ಸಂಜೆ ವೇಳೆ ಮೂಗಿಗೆ ತೆಂಗಿನೆಣ್ಣೆ ಅಥವಾ ಎಳ್ಳೆಣ್ಣೆಯನ್ನು ಹಚ್ಚಿಕೊಳ್ಳಿ. ಇದನ್ನು ಆಯುರ್ವೇದದಲ್ಲಿ ಪ್ರತಿಮಾರ್ಶ ನ್ಯಸ್ಯ ಎಂದು ಕರೆಯಲಾಗುತ್ತಿದೆ.

ಎಣ್ಣೆ ಚಿಕಿತ್ಸೆ
ಒಂದು ಚಮಚದಷ್ಟು ಎಳ್ಳೆಣ್ಣೆ ಅಥವಾ ತೆಂಗಿನೆಣ್ಣೆಯನ್ನು ಬಾಯಿಯಲ್ಲಿ ಹಾಕಿಕೊಳ್ಳಿ. ಇದನ್ನು ನೀವು ಬಾಯಿ ಮುಕ್ಕಳಿಸಲು ಬಳಸಬೇಡಿ. 2-3 ನಿಮಿಷ ಕಾಲ ಬಾಯಿ ಮುಕ್ಕಳಿಸಿ ಮತ್ತು ಇದರ ಬಳಿಕ ಬಿಸಿ ನೀರಿನಿಂದ ತೊಳೆಯಿರಿ. ದಿನದಲ್ಲಿ ಒಂದು ಅಥವಾ ಎರಡು ಸಲ ನೀವು ಇದನ್ನು ಬಳಸಬಹುದು.

ರೋಗ ನಿರೋಧಕ ವ್ಯವಸ್ಥೆಯನ್ನು ಹೆಚ್ಚಿಸುವ ಜ್ಯೂಸ್‌ಗಳು

ಒಣ ಕೆಮ್ಮು/ ಗಂಟಲು ಕೆರೆತಕ್ಕೆ
  • ದಿನದಲ್ಲಿ ಒಂದು ಸಲ ಪುದೀನಾ ಎಲೆಗಳು ಅಥವಾ ಓಮ ಕಾಳಿನ ಹಬೆಯನ್ನು ಉಸಿರಾಡಬೇಕು.
  • ಲವಂಗವದ ಹುಡಿಯನ್ನು ಬೆಲ್ಲ ಅಥವಾ ಜೇನುತುಪ್ಪದ ಜತೆಗೆ ಬೆರೆಸಿಕೊಂಡು ದಿನದಲ್ಲಿ 2-3 ಸಲ ಸೇವಿಸಿದರೆ ಕೆಮ್ಮು ಮತ್ತು ಗಂಟಲಿನ ಕೆರೆತ ಕಡಿಮೆ ಆಗುವುದು.
  • ಇದೆಲ್ಲವೂ ಸಾಮಾನ್ಯ ಕೆಮ್ಮು ಮತ್ತು ಗಂಟಲು ಕೆರೆತವನ್ನು ದೂರ ಮಾಡುತ್ತದೆ. ನಿಮಗೆ ಇಂತಹ ಸಮಸ್ಯೆಗಳು ಮತ್ತೆ ಮತ್ತೆ ಕಾಡುತ್ತಲಿದ್ದರೆ ಆಗ ನೀವು ವೈದ್ಯರನ್ನು ಸಂಪರ್ಕಿಸಿ. ಈ ವಿಧಾನಗಳನ್ನು ಸಾಧ್ಯವಾದಷ್ಟು ಮಟ್ಟಿಗೆ, ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಬಳಸಬಹು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ