ಆ್ಯಪ್ನಗರ

ಮಳೆಗಾಲದಲ್ಲಿ ಜೀವನಶೈಲಿ ಬದಲಿಸಿಕೊಳ್ಳಿ

ಮಳೆಗಾಲದಲ್ಲಿ ಆರೋಗ್ಯಪೂರ್ಣ ಜೀವನಶೈಲಿಯನ್ನು ಅನುಸರಿಸಬೇಕು.

Vijaya Karnataka 13 Jul 2019, 5:00 am
ಮಳೆಯೊಂದಿಗೆ ಜೀವನಶೈಲಿ ಬದಲಾಗುತ್ತದೆ. ಡೆಂಗೆ, ಚಿಕನ್‌ಗುನ್ಯಾದಂತಹ ಆರೋಗ್ಯ ಸಮಸ್ಯೆ ವ್ಯಾಪಕವಾಗಿದ್ದು, ಅದರಿಂದ ದೂರವಿರಲು ಮಳೆಗಾಲದಲ್ಲಿ ಆರೋಗ್ಯಪೂರ್ಣ ಜೀವನಶೈಲಿಯನ್ನು ಅನುಸರಿಸಬೇಕು. ಇದಕ್ಕಾಗಿ ಮೊದಲು ದೇಹದ ಹೊರಗಿನ ಮತ್ತು ಒಳಗಿನ ಪ್ರಕೃತಿಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಇದರಿಂದ ಸೊಳ್ಳೆ, ನೊಣಗಳು ಹರಡುವ ಸಾಂಕ್ರಾಮಿಕ ರೋಗಗಳಿಂದ ಬಚಾವ್‌ ಆಗಬಹುದು.
Vijaya Karnataka Web monsoon health tips
ಮಳೆಗಾಲದಲ್ಲಿ ಜೀವನಶೈಲಿ ಬದಲಿಸಿಕೊಳ್ಳಿ


1 ಆಹಾರ
ದಿನಕ್ಕೆ ಎರಡು ಬಾರಿ ಆಹಾರ ಸೇವಿಸುವುದರಿಂದ ಜೀರ್ಣಾಂಗ ವ್ಯೂಹಕ್ಕೆ ಸಾಕಷ್ಟು ಸಮಯ ದೊರೆತು ಆಹಾರ ಸಂಪೂರ್ಣವಾಗಿ ಜೀರ್ಣವಾಗುತ್ತದೆ. ಇದರಿಂದ ಜೀರ್ಣಾಂಗ ವ್ಯೂಹದ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ ಹಾಗೂ ಬೊಜ್ಜು ದೇಹಕ್ಕೆ ಸೇರುವುದಿಲ್ಲ. ನಾವು ತೆಗೆದುಕೊಳ್ಳುವ ದಿನನಿತ್ಯದ ಆಹಾರವು ಆದಷ್ಟು ಈ ಪದಾರ್ಥಗಳನ್ನು ಹೊಂದಿರಬೇಕು. ಅವುಗಳೆಂದರೆ ತರಕಾರಿ ಸಲಾಡ್‌, ಎಣ್ಣೆಯಿಲ್ಲದ ಚಪಾತಿ, ತರಕಾರಿ ಸೂಪ್‌, ಉಗಿಯಲ್ಲಿ ಬೇಯಿಸಿದ ಆಹಾರ, ಎಣ್ಣೆರಹಿತ ತಿನಿಸು, ಹಸಿ ತರಕಾರಿಗಳು ಈ ಪದಾರ್ಥಗಳು ಹೆಚ್ಚು ನೀರಿನಾಂಶ, ಕಡಿಮೆ ಕ್ಯಾಲರಿ ಮತ್ತು ಹೊಟ್ಟೆ ತುಂಬಿದ ಅನುಭವ ನೀಡುವುದಲ್ಲದೆ ಹೆಚ್ಚು ನಾರಿನಂಶದಿಂದ ಕೂಡಿದೆ. ಕಿತ್ತಳೆ, ಮೋಸಂಬಿ, ಅನಾನಸ್‌, ಚಕ್ಕೋತದಂತಹ ಹಣ್ಣುಗಳ ಸೇವನೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು.

2 ಶಿಸ್ತುಬದ್ಧ ದಿನಚರಿ
ಬೆಳಗ್ಗೆ 5 ಗಂಟೆಯೊಳಗೆ ಎದ್ದು 2 ರಿಂದ 4 ಲೋಟ ಕಾದಾರಿದ ನೀರನ್ನು ಕುಡಿಯಿರಿ. ನಂತರ ವ್ಯಾಯಾಮ ಅಥವಾ ಯೋಗ ಅಭ್ಯಾಸವನ್ನು ಮಾಡಬೇಕು. ಬೆಳಗ್ಗೆ 7 ಗಂಟೆ ಸುಮಾರಿಗೆ ಒಂದು ತಾಜಾ ತರಕಾರಿ ಅಥವಾ ಹಣ್ಣಿನ ರಸವನ್ನು ತೆಗೆದುಕೊಳ್ಳಬೇಕು. ಬೆಳಗ್ಗೆ 8 ಗಂಟೆಗೆ ಉಪಹಾರವನ್ನು ತೆಗೆದುಕೊಳ್ಳುವುದು ಸೂಕ್ತ.

3 ಪ್ರತಿದಿನ ಎರಡು ಬಾರಿ ಪ್ರಾರ್ಥನೆ
ದಿನಕ್ಕೆ ಒಂದು ಅಥವಾ ಎರಡು ಬಾರಿ ಪ್ರಾರ್ಥನೆ ಮಾಡುವುದರಿಂದ ನಮ್ಮ ಉದ್ವೇಗ, ಒತ್ತಡ, ಚಿಂತೆ ದೂರವಾಗಿ ಮನಸ್ಸಿನಲ್ಲಿ ಶಾಂತತೆ ನೆಲೆಯೂರುತ್ತದೆ. ಜತೆಗೆ ಮಾನಸಿಕ ಉದ್ವೇಗವನ್ನು ಶಮನಗೊಳಿಸುತ್ತದೆ. ಆಹಾರ ದೇಹಕ್ಕೆ ಶಕ್ತಿ ನೀಡಿದರೆ ಪ್ರಾರ್ಥನೆ ಮನಸ್ಸಿಗೆ ಶಕ್ತಿ ನೀಡುತ್ತದೆ. ಈ ಮಾನಸಿಕ ಶಕ್ತಿಯು ದೇಹದ ರೋಗ ನಿರೋಧಕ ಶಕ್ತಿಯನ್ನು ಕಾಪಾಡುವಲ್ಲಿ ಪಾತ್ರ ವಹಿಸುತ್ತದೆ.

4 ವಾರಕ್ಕೊಂದು ದಿನ ಉಪವಾಸ
ಆರೋಗ್ಯದ ದೃಷ್ಟಿಯಿಂದ ವಾರಕ್ಕೊಂದು ದಿನ ಉಪವಾಸ ಮಾಡುವುದರಿಂದ ಜೀರ್ಣಾಂಗ ವ್ಯೂಹಕ್ಕೆ ಸಂಪೂರ್ಣ ವಿಶ್ರಾಂತಿ ದೊರೆತು ತ್ಯಾಜ್ಯ ವಸ್ತುಗಳು ದೇಹದಿಂದ ಹೊರಹೋಗಲು ಪ್ರಚೋದನೆ ಸಿಗುತ್ತದೆ. ಈ ಉಪವಾಸದಲ್ಲಿ ಒಂದು ದಿನ ಘನ ಆಹಾರವನ್ನು ಸಂಪೂರ್ಣವಾಗಿ ತ್ಯಜಿಸಿ ಕೇವಲ ದ್ರವಾಹಾರವನ್ನು ಸೇವಿಸಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ