ಹೊಸದಿಲ್ಲಿ: ಭಾರತದಲ್ಲಿ ರಕ್ತದೊತ್ತಡದ ಸಮಸ್ಯೆ ತೀವ್ರವಾಗಿದೆ. ಆದರೆ, ಶೇಕಡಾ 55 ಜನರಿಗೆ ತಾವು ಈ ಸಮಸ್ಯೆಯಿಂದ ಬಳಲುತ್ತಿರುವ ಅರಿವೇ ಇಲ್ಲ!
ಇದು ರಾಷ್ಟ್ರೀಯ ಆರೋಗ್ಯ ಮತ್ತು ಕೌಟುಂಬಿಕ ಸರ್ವೇ (ಎನ್ಎಫ್ಎಚ್ಎಸ್-4) 2015-16ರ ವರದಿಯಲ್ಲಿ ಉಲ್ಲೇಖಿತವಾದ ಗಂಭೀರ ಅಂಶ.
ದೇಶದ 29 ಜಿಲ್ಲೆ, 7 ಕೇಂದ್ರಾಡಳಿತ ಪ್ರದೇಶಗಳಲ್ಲಿ 15ರಿಂದ 49 ವರ್ಷ ವಯಸ್ಸಿನ ಸುಮಾರು 7.31 ಲಕ್ಷ ಮಂದಿ ಮಾಹಿತಿ ಕಲೆ ಹಾಕಿ ಸಿದ್ಧಪಡಿಸಿದ ವರದಿ ಇದಾಗಿದ್ದು, ಕೇವಲ ಶೇಕಡಾ 45 ಮಂದಿಗೆ ಮಾತ್ರ ತಾವು ಸಮಸ್ಯೆಯಿಂದ ಬಳಲುತ್ತಿರುವುದರ ಅರಿವಿದೆ ಎನ್ನುತ್ತದೆ.
ಮುಖ್ಯಾಂಶಗಳು
* ರಕ್ತದೊತ್ತಡ ಇರುವ ನಾಲ್ಕರಲ್ಲಿ ಮೂರು ಮಂದಿ, ಎಷ್ಟಿದೆ ಎಂದು ತಿಳಿದೇ ಇಲ್ಲ.
* 45% ಮಂದಿ ಮಾತ್ರ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.
* 13% ಮಂದಿ ಮಾತ್ರ ಸದ್ಯಕ್ಕೆ ಔಷಧ ತೆಗೆದುಕೊಳ್ಳುತ್ತಿದ್ದಾರೆ.
* 8% ಮಂದಿ ರಕ್ತದೊತ್ತಡ ನಿಯಂತ್ರಣದಲ್ಲಿದೆ ಎನ್ನುತ್ತಿದ್ದಾರೆ.
ಪುದುಚೆರಿ ಜಾಗೃತ
ಪುದುಚೆರಿಯಲ್ಲಿ ಶೇ. 80.5 ಮಂದಿಯಲ್ಲಿ ರಕ್ತದೊತ್ತಡದ ಬಗ್ಗೆ ಜಾಗೃತಿ ಇದೆ. ಜಾಗೃತಿ ವಿಷಯದಲ್ಲಿ ಛತ್ತೀಸ್ಗಢ ಕೊನೆಯ ಸ್ಥಾನದಲ್ಲಿದೆ. ಇಲ್ಲಿ ಕೇವಲ ಶೇಕಡಾ 22.1 ಮಂದಿ ಮಾತ್ರ ಬಿ.ಪಿ ಚೆಕ್ ಮಾಡಿಸಿಕೊಂಡಿದ್ದಾರೆ.
ಇದು ರಾಷ್ಟ್ರೀಯ ಆರೋಗ್ಯ ಮತ್ತು ಕೌಟುಂಬಿಕ ಸರ್ವೇ (ಎನ್ಎಫ್ಎಚ್ಎಸ್-4) 2015-16ರ ವರದಿಯಲ್ಲಿ ಉಲ್ಲೇಖಿತವಾದ ಗಂಭೀರ ಅಂಶ.
ದೇಶದ 29 ಜಿಲ್ಲೆ, 7 ಕೇಂದ್ರಾಡಳಿತ ಪ್ರದೇಶಗಳಲ್ಲಿ 15ರಿಂದ 49 ವರ್ಷ ವಯಸ್ಸಿನ ಸುಮಾರು 7.31 ಲಕ್ಷ ಮಂದಿ ಮಾಹಿತಿ ಕಲೆ ಹಾಕಿ ಸಿದ್ಧಪಡಿಸಿದ ವರದಿ ಇದಾಗಿದ್ದು, ಕೇವಲ ಶೇಕಡಾ 45 ಮಂದಿಗೆ ಮಾತ್ರ ತಾವು ಸಮಸ್ಯೆಯಿಂದ ಬಳಲುತ್ತಿರುವುದರ ಅರಿವಿದೆ ಎನ್ನುತ್ತದೆ.
ಮುಖ್ಯಾಂಶಗಳು
* ರಕ್ತದೊತ್ತಡ ಇರುವ ನಾಲ್ಕರಲ್ಲಿ ಮೂರು ಮಂದಿ, ಎಷ್ಟಿದೆ ಎಂದು ತಿಳಿದೇ ಇಲ್ಲ.
* 45% ಮಂದಿ ಮಾತ್ರ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.
* 13% ಮಂದಿ ಮಾತ್ರ ಸದ್ಯಕ್ಕೆ ಔಷಧ ತೆಗೆದುಕೊಳ್ಳುತ್ತಿದ್ದಾರೆ.
* 8% ಮಂದಿ ರಕ್ತದೊತ್ತಡ ನಿಯಂತ್ರಣದಲ್ಲಿದೆ ಎನ್ನುತ್ತಿದ್ದಾರೆ.
ಪುದುಚೆರಿ ಜಾಗೃತ
ಪುದುಚೆರಿಯಲ್ಲಿ ಶೇ. 80.5 ಮಂದಿಯಲ್ಲಿ ರಕ್ತದೊತ್ತಡದ ಬಗ್ಗೆ ಜಾಗೃತಿ ಇದೆ. ಜಾಗೃತಿ ವಿಷಯದಲ್ಲಿ ಛತ್ತೀಸ್ಗಢ ಕೊನೆಯ ಸ್ಥಾನದಲ್ಲಿದೆ. ಇಲ್ಲಿ ಕೇವಲ ಶೇಕಡಾ 22.1 ಮಂದಿ ಮಾತ್ರ ಬಿ.ಪಿ ಚೆಕ್ ಮಾಡಿಸಿಕೊಂಡಿದ್ದಾರೆ.