ಆ್ಯಪ್ನಗರ

ಈ ನ್ಯಾಚುರಲ್ ಪೌಡರ್, ನೀರಿಗೆ ಬೆರೆಸಿ ಕುಡಿದ್ರೆ, ಮಂಡಿ ನೋವು ನಿವಾರಿಸಬಹುದು

ಸರಿಯಾಗಿ ವ್ಯಾಯಾಮ, ಕ್ಯಾಲ್ಸಿಯಂ ಕೊರತೆ, ಕುಳಿತಲ್ಲಿಯೇ ಹೆಚ್ಚು ಸಮಯಗಳ ಕಾಲ ಕೆಲಸ ಮಾಡುವುದು, ವೃದ್ಧಾಪ್ಯ ಹೀಗೆ ಅನೇಕ ಕಾರಣಗಳಿಂದಾಗಿ ಮಂಡಿ ನೋವು ಅಥವಾ ಮೊಣಕಾಲು ನೋವು ಕಾಣಿಸಿಕೊಳ್ಳುವುದು.

Lipi 28 Apr 2020, 10:43 am
ಬಿಟ್ಟೂ ಬಿಡದೆ ಕಾಡುವ ಮಂಡಿ ನೋವಿಗೆ ಕೆಲವು ಸರಳ ಪರಿಹಾರಗಳುಇತ್ತೀಚಿನ ದಿನಗಳಲ್ಲಿ ಮೂಳೆಗೆ ಸಂಬಂಧಿಸಿದ ಅನೇಕ ಕಾಯಿಲೆಗಳು ಜನರನ್ನು ಬಾಧಿಸುತ್ತಿವೆ. ಅಂತಹ ಸಾಮಾನ್ಯ ಸಮಸ್ಯೆಗಳಲ್ಲಿ ಮಂಡಿ ನೋವು ಸಹ ಒಂದು. ಅನುಚಿತವಾದ ವ್ಯಾಯಾಮ, ಕ್ಯಾಲ್ಸಿಯಂ ಕೊರತೆ, ಕುಳಿತಲ್ಲಿಯೇ ಹೆಚ್ಚು ಸಮಯಗಳ ಕಾಲ ಕೆಲಸ ಮಾಡುವುದು, ವೃದ್ಧಾಪ್ಯ ಹೀಗೆ ಅನೇಕ ಕಾರಣಗಳಿಂದಾಗಿ ಮಂಡಿ ನೋವು ಅಥವಾ ಮೊಣಕಾಲು ನೋವು ಕಾಣಿಸಿಕೊಳ್ಳುವುದು.
Vijaya Karnataka Web Men Knee Pain


ಈ ರೀತಿಯ ಸಮಸ್ಯೆಗಳಿಗೆ ಪರಿಹಾರವಾಗಿ ಸಾಕಷ್ಟು ಮಾತ್ರೆಗಳು, ತೈಲ ಹಾಗೂ ಚಿಕಿತ್ಸೆಗಳಿರುವುದನ್ನು ಕಾಣಬಹುದು. ಅಂತಹ ಔಷಧಗಳಿಂದ ಕೆಲವೊಮ್ಮೆ ಅಡ್ಡ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹಾಗಾಗಿ ನೀವು ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದಾಗ ಔಷಧಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತಿದ್ದೇವೆ.

ಮಂಡಿನೋವಿಗೆ ಪರಿಣಾಮಕಾರಿ ಮನೆಮದ್ದು

ಮಂಡಿನೋವು ನಿವಾರಕ ಪಾನೀಯ
ಬೇಕಾಗುವ ಸಾಮಾಗ್ರಿಗಳು:
ಕಾಳು ಮೆಣಸು ಅಥವಾ ಕರಿಮೆಣಸು
ಜೀರಿಗೆ
ಮೆಂತ್ಯೆ ಕಾಳು

ತಯಾರಿಸುವ ವಿಧಾನ
  • ಮೊದಲಿಗೆ ಮೆಂತ್ಯೆಕಾಳನ್ನು ಮಿಕ್ಸರ್ ಪಾತ್ರೆಗೆ ವರ್ಗಾಯಿಸಿ, ರುಬ್ಬಿಕೊಳ್ಳಿ.
  • ರುಬ್ಬಿಕೊಂಡ ಪುಡಿಯನ್ನು ಜರಡಿ ಹಿಡಿದು, ಹಿಟ್ಟನ್ನು ತೆಗೆದುಕೊಳ್ಳಿ.
  • ನಂತರ ಕಾಳು ಮೆಣಸನ್ನು ಮಿಕ್ಸರ್ ಪಾತ್ರೆಗೆ ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಿ.
  • ಬಳಿಕ ಜರಡಿ ಹಿಡಿದು, ನುಣುಪಾದ ಹಿಟ್ಟನ್ನು ಬೇರ್ಪಡಿಸಿಕೊಳ್ಳಿ.
  • ಕೊನೆಯದಾಗಿ ಜೀರಿಗೆಯನ್ನು ಮಿಕ್ಸರ್ ಪಾತ್ರೆಗೆ ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಿ.
  • ನಂತರ ಜರಡಿ ಹಿಡಿದು ನುಣುಪಾದ ಪುಡಿಯನ್ನು ಬೇರ್ಪಡಿಸಿಕೊಳ್ಳಿ.
  • ಜರಡಿ ಹಿಡಿದು ಬೇರ್ಪಡಿಸಿಕೊಂಡ ನುಣುಪಾದ ಎಲ್ಲಾ ಹಿಟ್ಟನ್ನು ಒಟ್ಟಿಗೆ ಸೇರಿಸಿ, ಮಿಶ್ರಗೊಳಿಸಿ.
  • ಪುಡಿಯನ್ನು ಗಾಳಿಯಾಡದ ಡಬ್ಬಕ್ಕೆ ವರ್ಗಾಯಿಸಿ, ಶೇಖರಿಸಿಟ್ಟುಕೊಳ್ಳಿ.
  • ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಉಗುರು ಬೆಚ್ಚಗಿನ ನೀರು ಅಥವಾ ಸಾಮಾನ್ಯ ತಾಪಮಾನದ ನೀರನ್ನು ತೆಗೆದುಕೊಳ್ಳಬಹುದು.
  • ಒಂದು ಲೋಟ ನೀರಿಗೆ ಅರ್ಧ ಟೀ ಚಮಚ ಮಿಶ್ರಣದ ಪುಡಿಯನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.
  • ಈ ಪಾನೀಯವನ್ನು ರಾತ್ರಿ ಮಲಗುವ ಮುನ್ನ ಕುಡಿಯ ಬೇಕು.
  • ಅದ್ಭುತವಾದ ಫಲಿತಾಂಶವನ್ನು ಪಡೆಯಲು 20 ದಿನಗಳ ಕಾಲ ನಿರಂತರವಾಗಿ ಕುಡಿಯಬೇಕು.
  • ಅಧಿಕ ಮಂಡಿನೋವು ಹೊಂದಿರುವವರು 2 ತಿಂಗಳುಗಳ ಕಾಲ ನಿರಂತರವಾಗಿ ಸೇವಿಸಬೇಕು.
ಬಿಟ್ಟೂ ಬಿಡದೆ ಕಾಡುವ ಮಂಡಿ ನೋವಿಗೆ ಕೆಲವು ಸರಳ ಪರಿಹಾರಗಳು

ಉಪಯೋಗಗಳು
ಮಂಡಿನೋವು ನಿವಾರಕ ಪುಡಿಯಲ್ಲಿ ಆಯುರ್ವೇಧ ಔಷಧೀಯ ಗುಣವನ್ನು ಹೊಂದಿರುವ ನೈಸರ್ಗಿಕ ಉತ್ಪನ್ನವನ್ನು ಬಳಸಲಾಗಿವೆ. ಇವುಗಳಲ್ಲಿ ಕಬ್ಬಿಣ, ಕ್ಯಾಲ್ಸಿಯಂ ಹಾಗೂ ಅಧಿಕ ಪೋಷಕಾಂಶ ಗುಣಗಳು ಇರುವುದರಿಂದ ಅದ್ಭುತವದ ಔಷಧಿಯಾಗುವುದು.

ಜೊತೆಗೆ ಯಾವುದೇ ಅಡ್ಡ ಪರಿಣಾಮ ಬೀರದೆ ಆಳವಾದ ಆರೈಕೆಯನ್ನು ಮಾಡುವುದು. ಸಮಸ್ಯೆಗೆ ಅಧಿಕ ಹಣವನ್ನು ವ್ಯಯಿಸದೆ ಸುಲಭವಾಗಿ ಪರಿಹಾರ ಕಂಡುಕೊಳ್ಳಲು ಇದೊಂದು ಅದ್ಭುತವಾದ ವಿಧಾನವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ