ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಿರಪ್!
ಯಾವುದೇ ಬಗೆಯ ವಾತಾವರಣಕ್ಕೂ ಹೆದರದ ಜನ ಚಳಿಗಾಲ ಬಂತೆಂದರೆ ಒಂದು ಕ್ಷಣ ಅವಾಕ್ಕಾಗಿ ಬಿಡುತ್ತಾರೆ. ಇದಕ್ಕೆ ಕಾರಣ ಚಳಿಗಾಲದಲ್ಲಿ ರೋಗ ಕಾರುವ ಬ್ಯಾಕ್ಟೀರಿಯಾಗಳು ಮತ್ತು ವೈರಾಣುಗಳು ಪ್ರಬಲವಾಗಿ ಜೀವ ಪಡೆದುಕೊಂಡು ಅನೇಕ ಬಗೆಯ ಮಾರಕ ಕಾಯಿಲೆಗಳಿಗೆ ಕಾರಣವಾಗುತ್ತವೆ
Agencies 13 Dec 2019, 11:22 am
ಬೇರೆ ಎಲ್ಲಾ ಕಾಲಗಳಿಗಿಂತ ಚಳಿಗಾಲ ಕೊಡುವ ಕಾಟ ಜೀವನದಲ್ಲಿ ನೆನಪಿನಲ್ಲಿಡಬೇಕಾದ ಒಂದು ಕ್ಷಣವಾಗಿ ಮಾರ್ಪಟ್ಟಿರುತ್ತದೆ. ಮನುಷ್ಯನ ದೇಹ ಸಂಪೂರ್ಣವಾಗಿ ಅವನ ಸುತ್ತ ಮುತ್ತಲಿನ ವಾತಾವರಣಕ್ಕೆ ಹೊಂದಿ ಕೊಂಡೇ ಪ್ರತಿ ದಿನ ಜೀವನ ಸಾಗಿಸುತ್ತಿರುತ್ತದೆ. ಇಷ್ಟು ದಿನ ಬಿಸಿಲು ಮಳೆ ಗಾಳಿಗೆ ಹೊಂದಿಕೊಂಡಿದ್ದ ದೇಹ ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಎದುರಾಗುವ ಮೈ ಕೊರೆಯುವ ಚಳಿಗೆ ಹೊಂದಿಕೊಳ್ಳಲೇಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗುತ್ತದೆ.
ಎಂತಹ ಘಟಾನುಘಟಿ ದೇಹಗಳನ್ನು ನಡುಗಿಸುವ ಶಕ್ತಿ ಈ ಚಳಿಗಾಲಕ್ಕೆ ಇದೆ. ಅಷ್ಟೇ ಅಲ್ಲದೆ ಆರೋಗ್ಯದಲ್ಲಿ ಕೂಡ ಅನೇಕ ಬಗೆಯ ಏರುಪೇರುಗಳನ್ನು ಉಂಟು ಮಾಡಿ ಒಂದು ಕ್ಷಣ ಜೀವನವೇ ತಟಸ್ಥವಾಗುವಂತೆ ಮಾಡಿ ಬಿಡುತ್ತದೆ. ಯಾವುದೇ ಬಗೆಯ ವಾತಾವರಣಕ್ಕೂ ಹೆದರದ ಜನ ಚಳಿಗಾಲ ಬಂತೆಂದರೆ ಒಂದು ಕ್ಷಣ ಅವಾಕ್ಕಾಗಿ ಬಿಡುತ್ತಾರೆ. ಇದಕ್ಕೆ ಕಾರಣ ಚಳಿಗಾಲದಲ್ಲಿ ರೋಗ ಕಾರುವ ಬ್ಯಾಕ್ಟೀರಿಯಾಗಳು ಮತ್ತು ವೈರಾಣುಗಳು ಪ್ರಬಲವಾಗಿ ಜೀವ ಪಡೆದುಕೊಂಡು ಅನೇಕ ಬಗೆಯ ಮಾರಕ ಕಾಯಿಲೆಗಳಿಗೆ ಕಾರಣವಾಗುತ್ತವೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸುವ 6 ಜ್ಯೂಸ್
ನಾವು ತಿನ್ನುವ ಆಹಾರಗಳಲ್ಲಿ ನಾವು ಎಷ್ಟೇ ಬಗೆಯ ಮುತುವರ್ಜಿ ವಹಿಸಿದರೂ ಸೂಕ್ಷ್ಮಾಣುಗಳಿಂದ ತಪ್ಪಿಸಿಕೊಂಡರೂ ಗಾಳಿಯಲ್ಲಿ ಹರಡುವ ವೈರಸ್ ಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದಕ್ಕೆ ಪರಿಹಾರವೆಂದರೆ ವೈರಸ್ ಗಳಿಂದ ಕಾಯಿಲೆ ಪಡೆದುಕೊಂಡಿರುವ ರೋಗಿಗಳಿಂದ ಸ್ವಲ್ಪ ದೂರ ಉಳಿಯುವುದು. ಇಲ್ಲವೇ ನಿಮ್ಮ ದೇಹದ ಆಂತರಿಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು.
ಯಾರು ನಿಜವಾಗಲೂ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದುಕೊಳ್ಳುವುದು ಸ್ವಲ್ಪ ಕಷ್ಟದ ಕೆಲಸ. ಆದರೆ ಇನ್ನೊಬ್ಬರನ್ನು ಪರೀಕ್ಷಿಸುವ ಮೊದಲು ನಿಮ್ಮ ದೇಹವನ್ನು ಬಲ ಪಡಿಸಿಕೊಳ್ಳುವ ಬಗ್ಗೆ ಯೋಚಿ ಸುವುದು ಉತ್ತಮವಲ್ಲವೇ? ಹಾಗಾಗಿ ಯಾವುದೇ ಸಪ್ಲಿಮೆಂಟ್ ಗಳಿಲ್ಲದೆ ಕೇವಲ ನೈಸರ್ಗಿಕ ವಸ್ತುಗಳಿಂದ ತಯಾರಾಗುವಂತಹ ಈ ಒಂದು ಸಿರಪ್ ನಿಮ್ಮ ದೇಹವನ್ನು ಗಡಗಡನೆ ನಡುಗಿಸುವ ಚಳಿಯಿಂದ ಮತ್ತು ಚಳಿಯಿಂದ ಉಂಟಾಗುವ ಕಾಯಿಲೆಗಳಿಂದ ಕಾಪಾಡಬಲ್ಲದು.
ದೇಹದ ರೋಗ ನಿರೋಧಕ ಶಕ್ತಿಯನ್ನು ಏಕೆ ಬಲ ಪಡಿಸಿಕೊಳ್ಳಬೇಕು?
ಸಾಮಾನ್ಯವಾಗಿ ಮನುಷ್ಯನ ದೇಹದ ರೋಗ ನಿರೋಧಕ ಶಕ್ತಿ ತನ್ನಲ್ಲಿರುವ ಆಂಟಿ ಆಕ್ಸಿಡೆಂಟ್ ಗಳ, ಬಿಳಿ ರಕ್ತ ಕಣಗಳ, ಮತ್ತು ಹಲವು ಬಗೆಯ ಆಂಟಿ ಬಾಡಿ ಗಳ ಸಹಾಯದಿಂದ ಮನುಷ್ಯನ ದೇಹಕ್ಕೆ ಕಾಲಕಾಲಕ್ಕೆ ಎದುರಾಗುವ ಸಣ್ಣ ಪುಟ್ಟ ರೋಗಗಳಿಂದ ರಕ್ಷಣೆ ಮಾಡುತ್ತದೆ. ಒಂದು ವೇಳೆ ನೀವು ದುರ್ಬಲ ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದರೆ, ಜ್ವರ, ಶೀತ, ಕೆಮ್ಮು ನಂತಹ ಕಾಯಿಲೆಗಳಿಂದ ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆಗಾಗ ಹಾಸಿಗೆ ಹಿಡಿಯಬೇಕಾಗುತ್ತದೆ.
ಹಾಗಾಗಿ ನಮ್ಮ ಸಲಹೆ ಇಷ್ಟೇ. ಕಾಯಿಲೆ ಬಂದಾಗ ಕಷ್ಟ ಪಡುವುದಕ್ಕಿಂತ ಬರದ ಹಾಗೆ ಮೊದಲೇ ಮುನ್ನೆಚ್ಚರಿಕೆ ತೆಗೆದುಕೊಂಡು ನಿಮ್ಮ ದೇಹವನ್ನು ಕಾಯಿಲೆ ತರುವ ವೈರಸ್ ಗಳ ವಿರುದ್ಧ ಹೋರಾಡುವಂತೆ ಸಿದ್ಧಪಡಿಸಿಕೊಂಡಿದ್ದರೆ ಬಹಳ ಚೆನ್ನ. ನಿಮ್ಮ ಆಹಾರ ಪದ್ಧತಿಯಲ್ಲಿ ಕೆಲವೊಂದು ಆಹಾರ ಪದಾರ್ಥಗಳು ಸೇರಿಕೊಂಡರೆ ಸ್ವಾಭಾವಿಕವಾಗಿ ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ಉತ್ತಮಗೊಳ್ಳುತ್ತದೆ. ನದೇಹದ ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸಲು ಈ ಸಿರಪ್ನ ಉಪಯೋಗ ಪಡೆದುಕೊಳ್ಳಿ.
ಸಿರಪ್ ತಯಾರಿಸಲು ಬೇಕಾಗಿರುವ ಸಾಮಗ್ರಿಗಳು
ಸಿರಪ್ ನ ತಯಾರಿಯ ಬಗೆ ಹೇಗೆ?
ಈ ಪಾನೀಯವನ್ನು ತಯಾರು ಮಾಡಲು ಮೊದಲಿಗೆ ಎಲ್ಲಾ ಗಿಡಮೂಲಿಕೆಗಳನ್ನು ಮತ್ತು ಮಸಾಲೆ ಪದಾರ್ಥಗಳನ್ನು ಎರಡು ಗ್ಲಾಸ್ ನೀರು ಹೊಂದಿರುವ ಒಂದು ಪಾನ್ ನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ನಂತರ ಸ್ವಲ್ಪ ಹೊತ್ತು ತಣ್ಣಗಾಗಲು ಬಿಡಿ. ಸಂಪೂರ್ಣವಾಗಿ ಬಿಸಿ ಆರಿದ ನಂತರ ಸ್ವಲ್ಪ ಗಟ್ಟಿಯಾದ ಈ ಮಿಶ್ರಣಕ್ಕೆ ನೀರಿನಲ್ಲಿ ಬೆರೆಸಿದ ಆಪಲ್ ಸೈಡರ್ ವಿನಿಗರ್ ಅನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ಚಳಿಗಾಲದ ಶೀತ, ಕೆಮ್ಮು, ಜ್ವರ ಓಡಿಸುವ ಮನೆ ಔಷಧಿಗಳು
ಈ ಸಮಯದಲ್ಲಿ ಜೇನು ತುಪ್ಪವನ್ನು ಈ ಮಿಶ್ರಣಕ್ಕೆ ಸೇರಿಸಿ ಮತ್ತೆ ಚೆನ್ನಾಗಿ ಕಲಸಿ. ನೀವು ಹಾಕುವ ಜೇನು ತುಪ್ಪದ ಪ್ರಮಾಣ ನೀವು ತೆಗೆದುಕೊಂಡ ಆಪಲ್ ಸೈಡರ್ ವಿನೆಗರ್ ನ ಪ್ರಮಾಣದಲ್ಲಿ ಅರ್ಧದಷ್ಟು ಇದ್ದರೆ ಸಾಕು. ಕೇವಲ 20 ನಿಮಿಷಗಳಲ್ಲಿ ನಿಮಗಾಗಿ ಈ ಸಿರಪ್ ತಯಾರಾಗುತ್ತದೆ. ಶಾಖ ಅಥವಾ ಬಿಸಿಲಿನಿಂದ ನೀವು ಈ ಸಿರಪ್ ಅನ್ನು ರಕ್ಷಿಸಿದರೆ ಸುಮಾರು ಒಂದು ವರ್ಷಗಳ ಕಾಲ ಇದನ್ನು ಯಾವುದೇ ಅಪಾಯವಿಲ್ಲದೆ ಶೇಖರಿಸಿಡಬಹುದು!!
ಈ ಸಿರಪ್ ನ ಪ್ರಮುಖ ಉಪಯೋಗಗಳು
ನೀವೇ ಸ್ವತಃ ಮನೆಯಲ್ಲಿ ತಯಾರು ಮಾಡಿದ ಈ ಪಾನೀಯದ ಸೇವನೆಯಿಂದ ನಿಮ್ಮ ದೇಹಕ್ಕೆ ಮತ್ತು ನಿಮ್ಮ ದೇಹದ ಆರೋಗ್ಯಕ್ಕೆ ಬಹಳ ಉಪಯೋಗಗಳಿವೆ. ಏಕೆಂದರೆ ಈ ಪಾನೀಯದಲ್ಲಿ ಬಳಕೆಯಾಗಿರುವ ಪ್ರತಿಯೊಂದು ಗಿಡಮೂಲಿಕೆ ಸಹ ನಮ್ಮ ಪ್ರಾಚೀನ ಆರೋಗ್ಯ ಪಂಡಿತರು ಉಪಯೋಗಿಸಿ ಅನೇಕ ಬಗೆಯ ಕಾಯಿಲೆಗಳನ್ನು ಗುಣ ಪಡಿಸಿದ ಉದಾಹರಣೆಗಳಿವೆ.
ಅದರಲ್ಲೂ ಮೆಣಸು ಮತ್ತು ಅರಿಶಿಣ ತನ್ನಲ್ಲಿ ಹೇರಳವಾಗಿ ಆಂಟಿ - ಆಕ್ಸಿಡೆಂಟ್ ಗಳನ್ನು ಹೊಂದಿದ್ದು ಆಂಟಿ ಇಂಪ್ಲಾ ಮೇಟರಿ ಗುಣ ಲಕ್ಷಣಗಳನ್ನು ತಮ್ಮಲ್ಲಿ ಹೊಂದಿವೆ. ಇನ್ನು ಕಿತ್ತಳೆ ಹಣ್ಣಿನ ಸಿಪ್ಪೆಗಳನ್ನು ಮತ್ತು ಫ್ಲೇವನಾಯ್ಡ್ ಅಂಶ ಹೊಂದಿರುವ ಎಲ್ಡರ್ ಬೆರಿ ಗಳನ್ನು ಇದರಲ್ಲಿ ಸೇರಿಸಿರುವ ಕಾರಣ ಈ ಸಿರಪ್ ನ ಸೇವನೆ ನಿಮ್ಮ ದೇಹವನ್ನು ಚಳಿಗಾಲದ ಸಮಯದಲ್ಲಿ ಉತ್ತಮ ರೋಗ ನಿರೋಧಕ ಶಕ್ತಿಯೊಂದಿಗೆ ನಡುಗುವಿಕೆಯಿಂದ ದೂರ ಮಾಡಿ ಸದಾ ಬಿಸಿಯಾಗಿರುವಂತೆ ನೋಡಿಕೊಳ್ಳುತ್ತದೆ. ಈ ಪಾನೀಯವನ್ನು ದೊಡ್ಡವರು ಮತ್ತು ಮಕ್ಕಳು ಯಾವುದೇ ಅನುಮಾನವಿಲ್ಲದೆ ಸೇವಿಸಬಹುದು.
ಹಾರ್ಸ್ ಮೂಲಂಗಿ ನೈಸರ್ಗಿಕವಾಗಿ ಶಾಖದ ಗುಣ ಹೊಂದಿದ್ದು, ಈ ಆಹಾರ ಪದಾರ್ಥ ತನ್ನಲ್ಲಿ ಹೆಚ್ಚಾಗಿ ಸಲ್ಫರ್ ಅಂಶವನ್ನು ಹೊಂದಿದೆ. ಇದು ಮನುಷ್ಯನ ದೇಹದಲ್ಲಿ ನೈಸರ್ಗಿಕವಾದ ಆಂಟಿ ಬಯೋಟಿಕ್ ನ ರೀತಿಯಲ್ಲಿ ಕೆಲಸ ಮಾಡಿ ಮೂಗಿನ ಹೊಳ್ಳೆಗಳಲ್ಲಿ ಮತ್ತು ಎದೆ ಭಾಗದಲ್ಲಿ ಸ್ಥಾಪಿತವಾಗಿರುವ ಸಿಂಬಳದ ಮೇಲೆ ತನ್ನ ಪ್ರಭಾವ ಬೀರುತ್ತದೆ. ಅಂದರೆ ಸಿಂಬಳವನ್ನು ಕರಗಿಸಿ ಕೆಮ್ಮಿನ ಸಮಸ್ಯೆ ಮತ್ತು ಗಂಟಲಿನ ಸೋಂಕಿನ ಸಮಸ್ಯೆಗೆ ಸಹ ಇದು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತದೆ. ಚಳಿಗಾಲದ ಸಮಯದಲ್ಲಿ ದೇಹಕ್ಕೆ ಕಿರಿಕಿರಿ ಉಂಟು ಮಾಡುವ ಕೆಲವೊಂದು ಅಂಶಗಳ ವಿರುದ್ಧ ಹೋರಾಡುವ ಕೆಲಸ ಜೇನು ತುಪ್ಪ ತನ್ನಲ್ಲಿನ ನೈಸರ್ಗಿಕ ರೋಗ ನಿರೋಧಕ ಉತ್ತೇಜಕ ಗುಣ ಲಕ್ಷಣಗಳಿಂದ ಮಾಡುತ್ತದೆ.
ಈ ಕಾರಣದಿಂದಲೇ ಜೇನು ತುಪ್ಪವನ್ನು ಮೂಗು ಅಥವಾ ಗಂಟಲಿಗೆ ಸಂಬಂಧಪಟ್ಟ ಸೋಂಕುಗಳಿಗೆ ಆಯುರ್ವೇದ ಪದ್ಧತಿಯಲ್ಲಿ ಮೊಟ್ಟ ಮೊದಲನೇ ಔಷಧಿಯಾಗಿ ಬಹಳ ಹಿಂದಿನಿಂದಲೂ ಉಪಯೋಗಿಸಿದ್ದಾರೆ. ಶುಂಠಿ ಮತ್ತು ಬೆಳ್ಳುಳ್ಳಿ ಸಹ ಮನುಷ್ಯನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಚಳಿಗಾಲದ ಸಮಯದಲ್ಲಿ ನೆಗಡಿಯಿಂದ ಮೂಗು ಕಟ್ಟುವಿಕೆಯನ್ನು ಗುಣಪಡಿಸಿ ಸೋಂಕನ್ನು ಕಡಿಮೆ ಮಾಡುತ್ತವೆ.
ಖತರ್ನಾಕ್ ಕಾಯಿಲೆಗಳನ್ನು ಓಡಿಸುವ ಶಕ್ತಿ ಮೆಂತ್ಯ ಸೊಪ್ಪಿಗಿದೆ
ಮನುಷ್ಯನಿಗೆ ಜ್ವರ ಬಂದು ಹೋದ ನಂತರ ವಿಪರೀತ ಬಾಯಿ ಕೆಟ್ಟು ಹೋಗಿರುತ್ತದೆ. ಎಂತಹ ಪಂಚಭಕ್ಷ ಪರಮಾನ್ನಗಳನ್ನು ಸೇವಿಸಿದರೂ ಸಹ ಬಾಯಿಗೆ ರುಚಿಸುವುದಿಲ್ಲ. ತಿಂದ ಆಹಾರ ಸರಿಯಾಗಿ ಜೀರ್ಣ ವಾಗುವುದಿಲ್ಲ. ವಾಕರಿಕೆ ವಾಂತಿ ಸರ್ವೇಸಾಮಾನ್ಯವಾಗಿ ಬಿಟ್ಟಿರುತ್ತದೆ. ಅಂತಹ ಸಮಯದಲ್ಲಿ ಈ ಗಿಡಮೂಲಿಕೆಗಳ ಸಿರಪ್ ನ ಮನೆ ಮದ್ದು ಬಾಯಿ ರುಚಿಯನ್ನು ಹೆಚ್ಚಿಸುವುದಲ್ಲದೆ ದೇಹದಲ್ಲಿ ಜೀರ್ಣ ಶಕ್ತಿಯನ್ನು ಮತ್ತು ಪಚನ ಕ್ರಿಯೆಯನ್ನು ಸರಿಯಾದ ರೀತಿಯಲ್ಲಿ ತೆಗೆದುಕೊಂಡು ಹೋಗಲು ಸಹಾಯ ಮಾಡುತ್ತದೆ. ನೀವು ಕೂಡ ಒಮ್ಮೆ ಈ ಚಳಿಗಾಲದಲ್ಲಿ ಈ ಸಿರಪ್ನ ಉಪಯೋಗ ಪಡೆಯುತ್ತೀರಾ ಅಲ್ಲವೇ?
ಎಂತಹ ಘಟಾನುಘಟಿ ದೇಹಗಳನ್ನು ನಡುಗಿಸುವ ಶಕ್ತಿ ಈ ಚಳಿಗಾಲಕ್ಕೆ ಇದೆ. ಅಷ್ಟೇ ಅಲ್ಲದೆ ಆರೋಗ್ಯದಲ್ಲಿ ಕೂಡ ಅನೇಕ ಬಗೆಯ ಏರುಪೇರುಗಳನ್ನು ಉಂಟು ಮಾಡಿ ಒಂದು ಕ್ಷಣ ಜೀವನವೇ ತಟಸ್ಥವಾಗುವಂತೆ ಮಾಡಿ ಬಿಡುತ್ತದೆ. ಯಾವುದೇ ಬಗೆಯ ವಾತಾವರಣಕ್ಕೂ ಹೆದರದ ಜನ ಚಳಿಗಾಲ ಬಂತೆಂದರೆ ಒಂದು ಕ್ಷಣ ಅವಾಕ್ಕಾಗಿ ಬಿಡುತ್ತಾರೆ. ಇದಕ್ಕೆ ಕಾರಣ ಚಳಿಗಾಲದಲ್ಲಿ ರೋಗ ಕಾರುವ ಬ್ಯಾಕ್ಟೀರಿಯಾಗಳು ಮತ್ತು ವೈರಾಣುಗಳು ಪ್ರಬಲವಾಗಿ ಜೀವ ಪಡೆದುಕೊಂಡು ಅನೇಕ ಬಗೆಯ ಮಾರಕ ಕಾಯಿಲೆಗಳಿಗೆ ಕಾರಣವಾಗುತ್ತವೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸುವ 6 ಜ್ಯೂಸ್
ನಾವು ತಿನ್ನುವ ಆಹಾರಗಳಲ್ಲಿ ನಾವು ಎಷ್ಟೇ ಬಗೆಯ ಮುತುವರ್ಜಿ ವಹಿಸಿದರೂ ಸೂಕ್ಷ್ಮಾಣುಗಳಿಂದ ತಪ್ಪಿಸಿಕೊಂಡರೂ ಗಾಳಿಯಲ್ಲಿ ಹರಡುವ ವೈರಸ್ ಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದಕ್ಕೆ ಪರಿಹಾರವೆಂದರೆ ವೈರಸ್ ಗಳಿಂದ ಕಾಯಿಲೆ ಪಡೆದುಕೊಂಡಿರುವ ರೋಗಿಗಳಿಂದ ಸ್ವಲ್ಪ ದೂರ ಉಳಿಯುವುದು. ಇಲ್ಲವೇ ನಿಮ್ಮ ದೇಹದ ಆಂತರಿಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು.
ಯಾರು ನಿಜವಾಗಲೂ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದುಕೊಳ್ಳುವುದು ಸ್ವಲ್ಪ ಕಷ್ಟದ ಕೆಲಸ. ಆದರೆ ಇನ್ನೊಬ್ಬರನ್ನು ಪರೀಕ್ಷಿಸುವ ಮೊದಲು ನಿಮ್ಮ ದೇಹವನ್ನು ಬಲ ಪಡಿಸಿಕೊಳ್ಳುವ ಬಗ್ಗೆ ಯೋಚಿ ಸುವುದು ಉತ್ತಮವಲ್ಲವೇ? ಹಾಗಾಗಿ ಯಾವುದೇ ಸಪ್ಲಿಮೆಂಟ್ ಗಳಿಲ್ಲದೆ ಕೇವಲ ನೈಸರ್ಗಿಕ ವಸ್ತುಗಳಿಂದ ತಯಾರಾಗುವಂತಹ ಈ ಒಂದು ಸಿರಪ್ ನಿಮ್ಮ ದೇಹವನ್ನು ಗಡಗಡನೆ ನಡುಗಿಸುವ ಚಳಿಯಿಂದ ಮತ್ತು ಚಳಿಯಿಂದ ಉಂಟಾಗುವ ಕಾಯಿಲೆಗಳಿಂದ ಕಾಪಾಡಬಲ್ಲದು.
ದೇಹದ ರೋಗ ನಿರೋಧಕ ಶಕ್ತಿಯನ್ನು ಏಕೆ ಬಲ ಪಡಿಸಿಕೊಳ್ಳಬೇಕು?
ಸಾಮಾನ್ಯವಾಗಿ ಮನುಷ್ಯನ ದೇಹದ ರೋಗ ನಿರೋಧಕ ಶಕ್ತಿ ತನ್ನಲ್ಲಿರುವ ಆಂಟಿ ಆಕ್ಸಿಡೆಂಟ್ ಗಳ, ಬಿಳಿ ರಕ್ತ ಕಣಗಳ, ಮತ್ತು ಹಲವು ಬಗೆಯ ಆಂಟಿ ಬಾಡಿ ಗಳ ಸಹಾಯದಿಂದ ಮನುಷ್ಯನ ದೇಹಕ್ಕೆ ಕಾಲಕಾಲಕ್ಕೆ ಎದುರಾಗುವ ಸಣ್ಣ ಪುಟ್ಟ ರೋಗಗಳಿಂದ ರಕ್ಷಣೆ ಮಾಡುತ್ತದೆ. ಒಂದು ವೇಳೆ ನೀವು ದುರ್ಬಲ ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದರೆ, ಜ್ವರ, ಶೀತ, ಕೆಮ್ಮು ನಂತಹ ಕಾಯಿಲೆಗಳಿಂದ ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆಗಾಗ ಹಾಸಿಗೆ ಹಿಡಿಯಬೇಕಾಗುತ್ತದೆ.
ಹಾಗಾಗಿ ನಮ್ಮ ಸಲಹೆ ಇಷ್ಟೇ. ಕಾಯಿಲೆ ಬಂದಾಗ ಕಷ್ಟ ಪಡುವುದಕ್ಕಿಂತ ಬರದ ಹಾಗೆ ಮೊದಲೇ ಮುನ್ನೆಚ್ಚರಿಕೆ ತೆಗೆದುಕೊಂಡು ನಿಮ್ಮ ದೇಹವನ್ನು ಕಾಯಿಲೆ ತರುವ ವೈರಸ್ ಗಳ ವಿರುದ್ಧ ಹೋರಾಡುವಂತೆ ಸಿದ್ಧಪಡಿಸಿಕೊಂಡಿದ್ದರೆ ಬಹಳ ಚೆನ್ನ. ನಿಮ್ಮ ಆಹಾರ ಪದ್ಧತಿಯಲ್ಲಿ ಕೆಲವೊಂದು ಆಹಾರ ಪದಾರ್ಥಗಳು ಸೇರಿಕೊಂಡರೆ ಸ್ವಾಭಾವಿಕವಾಗಿ ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ಉತ್ತಮಗೊಳ್ಳುತ್ತದೆ. ನದೇಹದ ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸಲು ಈ ಸಿರಪ್ನ ಉಪಯೋಗ ಪಡೆದುಕೊಳ್ಳಿ.
ಸಿರಪ್ ತಯಾರಿಸಲು ಬೇಕಾಗಿರುವ ಸಾಮಗ್ರಿಗಳು
- ಹಾರ್ಸ್ ಮೂಲಂಗಿ ಬೇರು ( 1 ಬೇರು )
- ನೀರಿನಲ್ಲಿ ಸಾರಗುಂದಿಸಿದ ಆಪಲ್ ಸೈಡರ್ ವಿನೆಗರ್ ( 1 ಕಪ್ )
- ಅರಿಶಿನ ಪುಡಿ ( 1 ಟೇಬಲ್ ಸ್ಪೂನ್ )
- ಕಪ್ಪು ಮೆಣಸು ( 5 - 6 ಅಥವಾ ಬೆರಳುಗಳ ತುಂಬಾ )
- ಸೋಂಪು ಕಾಳುಗಳು ( 1 ಟೇಬಲ್ ಸ್ಪೂನ್ )
- ಲವಂಗ ( 1-2 )
- ಹಸಿ ಶುಂಠಿ ( ಸುಮಾರು ಅರ್ಧ ಇಂಚು )
- ಕಿತ್ತಳೆ ಹಣ್ಣಿನ ಸಿಪ್ಪೆ ( 1/2 ಕಪ್ )
- ಒಣಗಿದ ಎಲ್ಡರ್ ಬೆರಿ ಹಣ್ಣುಗಳು ( 1 ಟೇಬಲ್ ಸ್ಪೂನ್ )
- ಜೇನು ತುಪ್ಪ ( ರುಚಿಯನ್ನು ಹೆಚ್ಚಿಸಲು )
ಸಿರಪ್ ನ ತಯಾರಿಯ ಬಗೆ ಹೇಗೆ?
ಈ ಪಾನೀಯವನ್ನು ತಯಾರು ಮಾಡಲು ಮೊದಲಿಗೆ ಎಲ್ಲಾ ಗಿಡಮೂಲಿಕೆಗಳನ್ನು ಮತ್ತು ಮಸಾಲೆ ಪದಾರ್ಥಗಳನ್ನು ಎರಡು ಗ್ಲಾಸ್ ನೀರು ಹೊಂದಿರುವ ಒಂದು ಪಾನ್ ನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ನಂತರ ಸ್ವಲ್ಪ ಹೊತ್ತು ತಣ್ಣಗಾಗಲು ಬಿಡಿ. ಸಂಪೂರ್ಣವಾಗಿ ಬಿಸಿ ಆರಿದ ನಂತರ ಸ್ವಲ್ಪ ಗಟ್ಟಿಯಾದ ಈ ಮಿಶ್ರಣಕ್ಕೆ ನೀರಿನಲ್ಲಿ ಬೆರೆಸಿದ ಆಪಲ್ ಸೈಡರ್ ವಿನಿಗರ್ ಅನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ಚಳಿಗಾಲದ ಶೀತ, ಕೆಮ್ಮು, ಜ್ವರ ಓಡಿಸುವ ಮನೆ ಔಷಧಿಗಳು
ಈ ಸಮಯದಲ್ಲಿ ಜೇನು ತುಪ್ಪವನ್ನು ಈ ಮಿಶ್ರಣಕ್ಕೆ ಸೇರಿಸಿ ಮತ್ತೆ ಚೆನ್ನಾಗಿ ಕಲಸಿ. ನೀವು ಹಾಕುವ ಜೇನು ತುಪ್ಪದ ಪ್ರಮಾಣ ನೀವು ತೆಗೆದುಕೊಂಡ ಆಪಲ್ ಸೈಡರ್ ವಿನೆಗರ್ ನ ಪ್ರಮಾಣದಲ್ಲಿ ಅರ್ಧದಷ್ಟು ಇದ್ದರೆ ಸಾಕು. ಕೇವಲ 20 ನಿಮಿಷಗಳಲ್ಲಿ ನಿಮಗಾಗಿ ಈ ಸಿರಪ್ ತಯಾರಾಗುತ್ತದೆ. ಶಾಖ ಅಥವಾ ಬಿಸಿಲಿನಿಂದ ನೀವು ಈ ಸಿರಪ್ ಅನ್ನು ರಕ್ಷಿಸಿದರೆ ಸುಮಾರು ಒಂದು ವರ್ಷಗಳ ಕಾಲ ಇದನ್ನು ಯಾವುದೇ ಅಪಾಯವಿಲ್ಲದೆ ಶೇಖರಿಸಿಡಬಹುದು!!
ಈ ಸಿರಪ್ ನ ಪ್ರಮುಖ ಉಪಯೋಗಗಳು
ನೀವೇ ಸ್ವತಃ ಮನೆಯಲ್ಲಿ ತಯಾರು ಮಾಡಿದ ಈ ಪಾನೀಯದ ಸೇವನೆಯಿಂದ ನಿಮ್ಮ ದೇಹಕ್ಕೆ ಮತ್ತು ನಿಮ್ಮ ದೇಹದ ಆರೋಗ್ಯಕ್ಕೆ ಬಹಳ ಉಪಯೋಗಗಳಿವೆ. ಏಕೆಂದರೆ ಈ ಪಾನೀಯದಲ್ಲಿ ಬಳಕೆಯಾಗಿರುವ ಪ್ರತಿಯೊಂದು ಗಿಡಮೂಲಿಕೆ ಸಹ ನಮ್ಮ ಪ್ರಾಚೀನ ಆರೋಗ್ಯ ಪಂಡಿತರು ಉಪಯೋಗಿಸಿ ಅನೇಕ ಬಗೆಯ ಕಾಯಿಲೆಗಳನ್ನು ಗುಣ ಪಡಿಸಿದ ಉದಾಹರಣೆಗಳಿವೆ.
ಅದರಲ್ಲೂ ಮೆಣಸು ಮತ್ತು ಅರಿಶಿಣ ತನ್ನಲ್ಲಿ ಹೇರಳವಾಗಿ ಆಂಟಿ - ಆಕ್ಸಿಡೆಂಟ್ ಗಳನ್ನು ಹೊಂದಿದ್ದು ಆಂಟಿ ಇಂಪ್ಲಾ ಮೇಟರಿ ಗುಣ ಲಕ್ಷಣಗಳನ್ನು ತಮ್ಮಲ್ಲಿ ಹೊಂದಿವೆ. ಇನ್ನು ಕಿತ್ತಳೆ ಹಣ್ಣಿನ ಸಿಪ್ಪೆಗಳನ್ನು ಮತ್ತು ಫ್ಲೇವನಾಯ್ಡ್ ಅಂಶ ಹೊಂದಿರುವ ಎಲ್ಡರ್ ಬೆರಿ ಗಳನ್ನು ಇದರಲ್ಲಿ ಸೇರಿಸಿರುವ ಕಾರಣ ಈ ಸಿರಪ್ ನ ಸೇವನೆ ನಿಮ್ಮ ದೇಹವನ್ನು ಚಳಿಗಾಲದ ಸಮಯದಲ್ಲಿ ಉತ್ತಮ ರೋಗ ನಿರೋಧಕ ಶಕ್ತಿಯೊಂದಿಗೆ ನಡುಗುವಿಕೆಯಿಂದ ದೂರ ಮಾಡಿ ಸದಾ ಬಿಸಿಯಾಗಿರುವಂತೆ ನೋಡಿಕೊಳ್ಳುತ್ತದೆ. ಈ ಪಾನೀಯವನ್ನು ದೊಡ್ಡವರು ಮತ್ತು ಮಕ್ಕಳು ಯಾವುದೇ ಅನುಮಾನವಿಲ್ಲದೆ ಸೇವಿಸಬಹುದು.
ಹಾರ್ಸ್ ಮೂಲಂಗಿ ನೈಸರ್ಗಿಕವಾಗಿ ಶಾಖದ ಗುಣ ಹೊಂದಿದ್ದು, ಈ ಆಹಾರ ಪದಾರ್ಥ ತನ್ನಲ್ಲಿ ಹೆಚ್ಚಾಗಿ ಸಲ್ಫರ್ ಅಂಶವನ್ನು ಹೊಂದಿದೆ. ಇದು ಮನುಷ್ಯನ ದೇಹದಲ್ಲಿ ನೈಸರ್ಗಿಕವಾದ ಆಂಟಿ ಬಯೋಟಿಕ್ ನ ರೀತಿಯಲ್ಲಿ ಕೆಲಸ ಮಾಡಿ ಮೂಗಿನ ಹೊಳ್ಳೆಗಳಲ್ಲಿ ಮತ್ತು ಎದೆ ಭಾಗದಲ್ಲಿ ಸ್ಥಾಪಿತವಾಗಿರುವ ಸಿಂಬಳದ ಮೇಲೆ ತನ್ನ ಪ್ರಭಾವ ಬೀರುತ್ತದೆ. ಅಂದರೆ ಸಿಂಬಳವನ್ನು ಕರಗಿಸಿ ಕೆಮ್ಮಿನ ಸಮಸ್ಯೆ ಮತ್ತು ಗಂಟಲಿನ ಸೋಂಕಿನ ಸಮಸ್ಯೆಗೆ ಸಹ ಇದು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತದೆ. ಚಳಿಗಾಲದ ಸಮಯದಲ್ಲಿ ದೇಹಕ್ಕೆ ಕಿರಿಕಿರಿ ಉಂಟು ಮಾಡುವ ಕೆಲವೊಂದು ಅಂಶಗಳ ವಿರುದ್ಧ ಹೋರಾಡುವ ಕೆಲಸ ಜೇನು ತುಪ್ಪ ತನ್ನಲ್ಲಿನ ನೈಸರ್ಗಿಕ ರೋಗ ನಿರೋಧಕ ಉತ್ತೇಜಕ ಗುಣ ಲಕ್ಷಣಗಳಿಂದ ಮಾಡುತ್ತದೆ.
ಖತರ್ನಾಕ್ ಕಾಯಿಲೆಗಳನ್ನು ಓಡಿಸುವ ಶಕ್ತಿ ಮೆಂತ್ಯ ಸೊಪ್ಪಿಗಿದೆ
ಮನುಷ್ಯನಿಗೆ ಜ್ವರ ಬಂದು ಹೋದ ನಂತರ ವಿಪರೀತ ಬಾಯಿ ಕೆಟ್ಟು ಹೋಗಿರುತ್ತದೆ. ಎಂತಹ ಪಂಚಭಕ್ಷ ಪರಮಾನ್ನಗಳನ್ನು ಸೇವಿಸಿದರೂ ಸಹ ಬಾಯಿಗೆ ರುಚಿಸುವುದಿಲ್ಲ. ತಿಂದ ಆಹಾರ ಸರಿಯಾಗಿ ಜೀರ್ಣ ವಾಗುವುದಿಲ್ಲ. ವಾಕರಿಕೆ ವಾಂತಿ ಸರ್ವೇಸಾಮಾನ್ಯವಾಗಿ ಬಿಟ್ಟಿರುತ್ತದೆ. ಅಂತಹ ಸಮಯದಲ್ಲಿ ಈ ಗಿಡಮೂಲಿಕೆಗಳ ಸಿರಪ್ ನ ಮನೆ ಮದ್ದು ಬಾಯಿ ರುಚಿಯನ್ನು ಹೆಚ್ಚಿಸುವುದಲ್ಲದೆ ದೇಹದಲ್ಲಿ ಜೀರ್ಣ ಶಕ್ತಿಯನ್ನು ಮತ್ತು ಪಚನ ಕ್ರಿಯೆಯನ್ನು ಸರಿಯಾದ ರೀತಿಯಲ್ಲಿ ತೆಗೆದುಕೊಂಡು ಹೋಗಲು ಸಹಾಯ ಮಾಡುತ್ತದೆ. ನೀವು ಕೂಡ ಒಮ್ಮೆ ಈ ಚಳಿಗಾಲದಲ್ಲಿ ಈ ಸಿರಪ್ನ ಉಪಯೋಗ ಪಡೆಯುತ್ತೀರಾ ಅಲ್ಲವೇ?