ಆ್ಯಪ್ನಗರ

ಬಾಣಂತಿಯರು ತಿನ್ನಬೇಕಾದ 6 ಆಹಾರಗಳು

ಬಾಣಂತಿ ಆರೈಕೆಯಲ್ಲಿ ಆಹಾರಕ್ರಮ ಬಹುಮುಖ್ಯ. ತಾಯಿ ಹಾಗೂ ಮಗುವಿನ ಆರೋಗ್ಯ ದೃಷ್ಟಿಯಿಂದ ಕೆಲವೊಂದು ತಿನ್ನಬೇಕಾದ ಆಹಾರಗಳ ಪಟ್ಟಿ ಇಲ್ಲಿ ನೀಡಲಾಗಿದೆ. ಈ ಆಹಾರಗಳು ಎದೆಹಾಲನ್ನು ಹೆಚ್ಚಿಸುತ್ತದೆ ಹಾಗೂ ದೇಹ ಬೇಗನೆ ಚೇತರಿಸಿಕೊಳ್ಳುವಲ್ಲಿ ಸಹಕಾರಿ.

Vijaya Karnataka Web 12 Aug 2020, 5:30 pm
ಹೆರಿಗೆಯ ನಂತರ ಆಹಾರಕ್ರಮದ ಕಡೆ ತುಂಬಾ ಎಚ್ಚರಿಕೆವಹಿಸಬೇಕು. ಆದ್ದರಿಂದಲೇ ಬಾಣಂತಿ ಆರೈಕೆಗಾಗಿಯೇ ಹಲವು ಬಗೆಯ ಆಹಾರವನ್ನು ತಯಾರಿಸಲಾಗುವುದು. ಸಹಜ ಹೆರಿಗೆಯಾಗಿರಲಿ, ಸಿ ಸೆಕ್ಷನ್ ಆಗಿರಲಿ ಬೇಗನೆ ಚೇತರಿಸಿಕೊಳ್ಳುವಲ್ಲಿ ಆಹಾರ ಬಹುಮುಖ್ಯ ಪಾತ್ರವಹಿಸುತ್ತದೆ.
Vijaya Karnataka Web new mom


ಆರೋಗ್ಯಕರ ಕೊಬ್ಬಿನಂಶ, ಕಾರ್ಬೋಹೈಡ್ರೇಟ್ಸ್, ಪ್ರೊಟೀನ್ ಇವೆಲ್ಲಾ ಆಹಾರದಲ್ಲಿದ್ದರೆ ಒಳ್ಳೆಯದು. ಇನ್ನು ಎದೆ ಹಾಲು ಹೆಚ್ಚಿಸಲು ಸಬ್ಬಸಿಗೆ, ನುಗ್ಗೆಸೊಪ್ಪು ಇವೆಲ್ಲಾ ಸಹಕಾರಿ. ಪಾಲಾಕ್, ಇತರ ಹಸಿರು ತರಕಾರಿಗಳು ನಿಮ್ಮ ಡಯಟ್‌ನಲ್ಲಿರಲಿ.

ಇಲ್ಲಿ 6 ಆಹಾರದ ಬಗ್ಗೆ ಹೇಳಿದ್ದೇವೆ. ಇದನ್ನು ಬಾಣಂತಿ ಆರೈಕೆಗೆ ಆಹಾರಕ್ರಮದಲ್ಲಿ ಸೇರಿಸುವುದು ಒಳ್ಳೆಯದು:

1. ನುಗ್ಗೆಕಾಯಿ ಸೊಪ್ಪು
ಇದನ್ನು ಒಂದು ಹೊತ್ತಿನ ಊಟದಲ್ಲಿ ತಪ್ಪದೆ ಸೇರಿಸಿ, ಇದರಿಂದ ಎದೆಹಾಲು ಹೆಚ್ಚಾಗುವುದು, ಹಾಗೂ ಇದರಲ್ಲಿರುವ ವಿಟಮಿನ್ ಸಿ, ಎ ಮತ್ತು ಡಿ, ಫಾಲಿಕ್ ಆಮ್ಲ, ಕಬ್ಬಿಣದಂಶ, ರಂಜಕದಂಶ ದೇಹ ಬೇಗನೆ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.

ನುಗ್ಗೆಕಾಯಿ ಮಹಿಮೆ ತಿಳಿದರೆ ಇಷ್ಟಪಟ್ಟು ದಿನಾ ತಿನ್ನುವಿರಿ!

2. ಬಾದಾಮಿ
ಬಾದಾಮಿಯನ್ನು ಬಾಣಂತಿಯಲ್ಲಿ ಹಾಗೂ ಹೆರಿಗೆಯ ನಂತರ ಕೂಡ ತಿನ್ನಿ. ಇದು ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ. ಇದನ್ನು ರಾತ್ರಿ ನೆನೆ ಹಾಕಿ ಬೆಳಗ್ಗೆ ತಿನ್ನಿ.

3. ಸೋರೆಕಾಯಿ
ಬಾಣಂತಿಯರು ತಿನ್ನಬೇಕಾದ ಮತ್ತೊಂದು ಆಹಾರವೆಂದರೆ ಸೋರೆಕಾಯಿ. ಇದರಲ್ಲಿ ವಿಟಮಿನ್ ಸಿ, ಮೆಗ್ನಿಷಿಯಂ, ಫೋಲೆಟ್ ಇದ್ದು ದೇಹದಲ್ಲಿ ನೀರಿನಂಶ ಕಾಪಾಡುವಲ್ಲಿ ಸೋರೆಕಾಯಿ ತುಂಬಾ ಸಹಕಾರಿಯಾಗಿದೆ.

ನಂಬುತ್ತೀರೋ ಬಿಡುತ್ತೀರೋ, 'ಸೋರೆಕಾಯಿ ಜ್ಯೂಸ್' ಮಾತ್ರ ತುಂಬಾನೇ ಆರೋಗ್ಯಕಾರಿ

4. ಬೆಳ್ಳುಳ್ಳಿ
ಬೆಳ್ಳುಳ್ಳಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರಿಂದ ಇದನ್ನು ಅಡುಗೆಯಲ್ಲಿ ತಪ್ಪದೆ ಸೇರಿಸಿ. ಬೆಳ್ಳುಳ್ಳಿ ದೇಹದ ಆರೈಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

5. ಮೆಂತೆ

ಮೆಂತೆಯ ಉಂಡೆ ಹೆರಿಗೆಯ ನಂತರ ತೂಕ ಇಳಿಕೆಯಲ್ಲಿ ಸಹಕಾರಿ. ಬಾಣಂತಿಯರಿಗೆ ಶಕ್ತಿವರ್ಧಕ ಆಹಾರಗಳ ಅವಶ್ಯಕತೆ ತುಂಬಾ ಇರುತ್ತದೆ. ಈ ಆಹಾರ ಸೊಂಟಕ್ಕೆ ಬಲ ನೀಡುವುದು. ಈ ಸಮಯದಲ್ಲಿ ಮೆಂತೆ ಗಂಜಿ ಮಾಡಿ ಕುಡಿಯುವುದು ಒಳ್ಳೆಯದು. ಮೆಂತೆ ಎದೆಹಾಲು ಹೆಚ್ಚಿಸುವಲ್ಲಿ ಕೂಡ ಸಹಕಾರಿ.

ನೆನೆಸಿಟ್ಟ ಮೆಂತೆ ಕಾಳಿನ ನೀರು ಮಧುಮೇಹಿಗಳಿಗೆ ತುಂಬಾನೇ ಒಳ್ಳೆಯದು

6. ರಾಗಿ
ರಾಗಿ ಮಾಲ್ಟ್, ರಾಗಿ ಮುದ್ದೆ, ರೊಟ್ಟಿ ಇವೆಲ್ಲಾ ಉತ್ತಮ ಬಾಣಂತಿ ಆರೈಕೆಯ ಆಹಾರಗಳಾಗಿವೆ. ಇದರಲ್ಲಿ ಕ್ಯಾಲ್ಸಿಯಂ, ಕಬ್ಬಿಣದಂಶ, ಮೆಗ್ನಿಷಿಯಂ ಇದ್ದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಇನ್ನು ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಗ್ಯಾಸ್‌ ಉಂಟು ಮಾಡುವ ಪದಾರ್ಥಗಳನ್ನು ತಿನ್ನದಿರುವುದು ಒಳ್ಳೆಯದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ