Please enable javascript.ಹೃದಯಾಘಾತದ ಲಕ್ಷಣಗಳು,ಕ್ರಿಕೆಟ್ ಆಡುವಾಗಲೇ ಟಕ್ಕಿಗೆ ಹಾರ್ಟ್ ಅಟ್ಯಾಕ್, ಅಲ್ಲೇ ಸಾವು! ವಯಸ್ಸು ಇನ್ನೂ 34-ವಿಡಿಯೋ ನೋಡಿ... - noida software engineer dies of heart attack at just 34! - Vijay Karnataka

ಕ್ರಿಕೆಟ್ ಆಡುವಾಗಲೇ ಟಕ್ಕಿಗೆ ಹಾರ್ಟ್ ಅಟ್ಯಾಕ್, ಅಲ್ಲೇ ಸಾವು! ವಯಸ್ಸು ಇನ್ನೂ 34-ವಿಡಿಯೋ ನೋಡಿ...

Produced byಮನೋಹರ್ ಶೆಟ್ಟಿ | Vijaya Karnataka Web 11 Jan 2024, 10:51 am
Subscribe

ಕ್ರಿಕೆಟ್ ಆಟ ನೋಡುವವರಿಗೆ ಮನಸ್ಸಿಗೆ ಮುದ ನೀಡುತ್ತದೆ. ಆದರೆ ಇಲ್ಲೊಂದು ಮೈದಾನದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಮನಸ್ಸಿಗೆ ದೊಡ್ಡ ಆಘಾತ ನೀಡಿದೆ. ಏಕೆಂದರೆ ಭಾನುವಾರದಂದು ಅಲ್ಲಿ ನಡೆಯಬಾರದ್ದು ನಡೆದುಹೋಗಿದೆ.

noida software engineer dies of heart attack at just 34
ಕ್ರಿಕೆಟ್ ಆಡುವಾಗಲೇ ಟಕ್ಕಿಗೆ ಹಾರ್ಟ್ ಅಟ್ಯಾಕ್, ಅಲ್ಲೇ ಸಾವು! ವಯಸ್ಸು ಇನ್ನೂ 34-ವಿಡಿಯೋ ನೋಡಿ...
ಹೆಸರು ವಿಕಾಸ್ ನೇಗಿ, ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್. ಭಾನುವಾರದ ಬಿಡುವಿನ ಸಮಯದಲ್ಲಿ ಗೆಳೆಯರ ಜೊತೆ ಮೈದಾನದಲ್ಲಿ ಕ್ರಿಕೆಟ್ ಆಡುವಾಗ ಇದ್ದಕ್ಕಿ ದ್ದಂತೆ ಆದಂತಹ ಹಾರ್ಟ್ ಅಟ್ಯಾಕ್ ನಿಂದ ಇವರ ಪ್ರಾಣ ಪಕ್ಷಿ ಹಾರಿಹೋಗಿದೆ. ಬಹುಶಹ ಮೈದಾನದಲ್ಲಿ ಯಾರು ಸಹ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಇಷ್ಟು ಚಿಕ್ಕ ವಯಸ್ಸಿಗೆ ಈ ರೀತಿ ಆಗುತ್ತದೆ ಎಂದು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ....

ಯುವ ಜನತೆಯರಲ್ಲಿ ಹೆಚ್ಚಾಗಿ ಹಾರ್ಟ್ ಅಟ್ಯಾಕ್ ಕಾಣಿಸಿಕೊಳ್ಳುತ್ತಿದೆ...

ಯುವ ಜನತೆಯರಲ್ಲಿ ಹೆಚ್ಚಾಗಿ ಹಾರ್ಟ್ ಅಟ್ಯಾಕ್ ಕಾಣಿಸಿಕೊಳ್ಳುತ್ತಿದೆ...

ಯುವ ಜನತೆಯನ್ನು ಬಿಟ್ಟುಬಿಡದಂತೆ ಕಾಡುತ್ತಿರುವ ಹಾರ್ಟ್ ಅಟ್ಯಾಕ್ ಸಮಸ್ಯೆ ನೋಡಿದರೆ ಮನುಷ್ಯನ ಆಯಸ್ಸು 100 ವರ್ಷದಿಂದ 40 ವರ್ಷಕ್ಕೆ ಬಂದು ನಿಂತಿತೇ ಎನಿಸುತ್ತದೆ. ಇಷ್ಟು ಚಿಕ್ಕ ವಯಸ್ಸಿಗೆ ಹೀಗಾಗಲು ಕಾರಣವಾದರೂ ಏನು? ಏಕೆ ಯುವ ಜನರಿಗೆ ಈ ರೀತಿಯ ಹೃದಯದ ತೊಂದರೆಗಳು ಸಾಲು ಸಾಲಾಗಿ ಎದುರಾಗುತ್ತಿವೆ ಎಂಬ ಗೊಂದಲ, ಆತಂಕ ಎಲ್ಲರಲ್ಲೂ ಸೃಷ್ಟಿಯಾಗಿದೆ.

ಕ್ರಿಕೆಟ್ ಆಡುವಾಗಲೇ ಟಕ್ಕಿಗೆ ಹಾರ್ಟ್ ಅಟ್ಯಾಕ್, ಸೋಷಿಯಲ್ ಮಿಡಿಯಾದಲ್ಲಿ ವಿಡಿಯೋ ವೈರಲ್

ವಿಡಿಯೋದಲ್ಲಿ ಇರುವ ಹಾಗೆ...

ವಿಡಿಯೋದಲ್ಲಿ ಇರುವ ಹಾಗೆ...
  • ಈ ವಿಡಿಯೋದ ತುಣುಕಿನಲ್ಲಿ ಕಾಣುವ ಹಾಗೆ ಆ ವ್ಯಕ್ತಿ ತಾನಿದ್ದ ಸ್ಥಳ ದಿಂದ ಕೇವಲ ಐದಾರು ಹೆಜ್ಜೆ ಮುಂದೆ ಹೋಗಿರುತ್ತಾರೆ ಮತ್ತು ಅಲ್ಲೇ ಸ್ವಲ್ಪ ಹೊತ್ತಿನಲ್ಲಿ ಕುಸಿದು ಬೀಳುತ್ತಾರೆ. ಇದನ್ನು ಕಂಡ ವಿಕೆಟ್ ಕೀಪರ್ ಅವರ ಹತ್ತಿರ ಓಡಿ ಬರುತ್ತಾರೆ.
  • ನಂತರ ಎಲ್ಲರೂ ಸಹ ಅವರನ್ನು ಆಸ್ಪತ್ರೆಗೆ ದಾಖಲಿಸುತ್ತಾರೆ. ಆದರೆ ಅಷ್ಟು ಹೊತ್ತಿಗಾಗಲೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿರುತ್ತದೆ. ಪೋಸ್ಟ್ ಮಾರ್ಟಂ ಮಾಡಿದ ನಂತರದಲ್ಲಿ ವೈದ್ಯರು ದೃಢಪಡಿಸುವ ವಿಚಾರ ಎಂದರೆ ಇವರಿಗೆ ದೊಡ್ಡ ಮಟ್ಟದಲ್ಲಿ ಹೃದಯಾಘಾತವಾಗಿದೆ ಎಂದು.​

ಯುವ ಜನತೆಗೆ ಏಕೆ ಹೃದಯದ ಈ ಶಾಪ?

ಯುವ ಜನತೆಗೆ ಏಕೆ ಹೃದಯದ ಈ ಶಾಪ?
  • ಕೋವಿಡ್ ಬಂದು ಹೋದ ನಂತರದಲ್ಲಿ ಈ ಪ್ರಪಂಚದಲ್ಲಿ ಏನೋ ಸರಿ ಇಲ್ಲ ಎನಿಸುತ್ತಿದೆ. ಆನಂತರದಲ್ಲಿ ಹೃದಯಘಾತದ ಪ್ರಕಾರಗಳು ಸಾಕಷ್ಟು ಹೆಚ್ಚಾಗುತ್ತಿವೆ. ಪ್ರಮುಖವಾಗಿ ಯುವಜನತೆ ಇದಕ್ಕೆ ಗುರಿಯಾಗುತ್ತಿರುವುದು ಅರಗಿಸಿ ಕೊಳ್ಳಲಾಗದ ನೋವಾಗಿದೆ.
  • ಕುಳಿತವರು ಕುಳಿತಲ್ಲೇ, ನಿಂತವರು ನಿಂತಲ್ಲೇ, ಮಲಗಿದವರು ಮಲಗಿ ದಲ್ಲೇ ಪ್ರಾಣ ಬಿಡುತ್ತಿರುವುದು ಗಾಬರಿ ಹುಟ್ಟಿಸಿದೆ. ಕೆಲವರು ಜಿಮ್ ಮಾಡುತ್ತಿರುವಾಗ ಪ್ರಾಣ ಬಿಟ್ಟರೆ, ಇನ್ನು ಕೆಲವರು ಡ್ಯಾನ್ಸ್ ಮಾಡು ವಾಗ, ಆಟ ಆಡುವಾಗ, ಸುಮ್ಮನೆ ಮಲಗಿದ್ದಾಗ, ನಡೆದುಕೊಂಡು ಹೋಗುತ್ತಿರುವಾಗ ಹೃದಯ ಘಾತದಿಂದ ಪ್ರಾಣ ಬಿಟ್ಟಿದ್ದಾರೆ.​

ವೈದ್ಯರು ಹೇಳುವ ಹಾಗೆ...

ವೈದ್ಯರು ಹೇಳುವ ಹಾಗೆ...
  • ವೈದ್ಯರು ಈ ಬಗ್ಗೆ ಹೇಳುವುದು ಒಂದೇ. ಈಗಿನ ಜೀವನ ಶೈಲಿ ಮತ್ತು ಆಹಾರ ಪದ್ಧತಿ ಈ ರೀತಿಯ ಹೃದಯದ ತೊಂದರೆಗಳು ಹೆಚ್ಚಾಗಲು ಕಾರಣವಾಗಿದೆ ಎಂದು.
  • ಹಿಂದಿನ ಕಾಲದಲ್ಲಿ ಕೇವಲ ವಯಸ್ಸಾದವರಿಗೆ ಮಾತ್ರ ಅಲ್ಲೊಂದು ಇಲ್ಲೊಂದು ಹೃದಯಾಘಾತದ ಸುದ್ದಿಗಳನ್ನು ನಾವು ಕೇಳುತ್ತಿದ್ದೆವು. ಆದರೆ ಈಗ ಇದು ಬಹಳಷ್ಟು ಬದಲಾಗಿದೆ. ಕೇವಲ 30 ರಿಂದ 40 ವರ್ಷದ ಒಳಗಿನ ಜನರು ಹೃದಯಾಘಾತದ ಸಮಸ್ಯೆಗೆ ಗುರಿಯಾಗುತ್ತಿದ್ದಾರೆ ಎಂದು ಅಪೊಲೊ ಹಾಸ್ಪಿಟಲ್ ನಲ್ಲಿ ವೈದ್ಯರಾಗಿರುವ ಡಾ. ಧೀಮನ್ ಬ್ಯಾನರ್ಜಿ TheHealthSite.com ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.​

ಹೃದಯಘಾತ ಆಗುವ ಮುಂಚೆ ಎದುರಾಗುವ ಈ ಸೂಚನೆಗಳು

ಹೃದಯಘಾತ ಆಗುವ ಮುಂಚೆ ಎದುರಾಗುವ ಈ ಸೂಚನೆಗಳು
  • ಯಾವುದೇ ವ್ಯಕ್ತಿಗೆ ಹೃದಯಘಾತ ಆಗುವ ಮುಂಚೆ ಈ ಸೂಚನೆಗಳು ಕಾಣಿಸುತ್ತವೆ.
  • ಎದೆ ನೋವು
  • ಎದೆ ಹಿಡಿದುಕೊಂಡಂತೆ ಆಗುವುದು
  • ವಿಪರೀತ ಮೈ ಬೆವರು
  • ವಿಪರೀತ ಸುಸ್ತು
  • ಕಣ್ಣು ಮಂಜಾಗುವುದು
  • ಉಸಿರಾಡಲು ಕಷ್ಟವಾಗುವುದು
  • ಉಸಿರು ನಿಂತು ಹೋದಂತೆ ಅನುಭವವಾಗುವುದು
  • ಮೇಲ್ಭಾಗದ ದೇಹ ನೋವು ಮತ್ತು ಅಸ್ವಸ್ಥತೆ
  • ಈ ರೀತಿಯ ಸೂಚನೆಗಳು ಒಂದು ವೇಳೆ ನಿಮಗೆ ಕಂಡು ಬಂದರೆ ನೀವು ಯಾವುದೇ ಕಾರಣಕ್ಕೂ ಇವುಗಳನ್ನು ನಿರ್ಲಕ್ಷ್ಯ ಮಾಡ ಲೇಬೇಡಿ.

ಇದೆಲ್ಲಾ ಹಾರ್ಟ್ ಅಟ್ಯಾಕ್ ಲಕ್ಷಣಗಳು! ತಪ್ಪಿಯೂ ನಿರ್ಲಕ್ಷ್ಯ ಮಾಡಬೇಡಿ!

ನಿಮ್ಮ ಹೃದಯದ ರಕ್ಷಣೆ ಹೀಗಿರಲಿ

ನಿಮ್ಮ ಹೃದಯದ ರಕ್ಷಣೆ ಹೀಗಿರಲಿ

ನಿಮ್ಮ ದೇಹದಲ್ಲಿ ಎಲ್ಲಾ ಪ್ರಕ್ರಿಯೆಗಳು ಸರಿಯಾಗಿ ನಡೆಯಬೇಕು ಎಂದರೆ ನಿಮ್ಮ ಹೃದಯ ಚೆನ್ನಾಗಿ ಕೆಲಸ ಮಾಡಬೇಕು. ಹೀಗಾಗಿ ನಿಮ್ಮ ಹೃದಯವನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳುವುದು ನಿಮ್ಮ ಹೊಣೆ. ಅದಕ್ಕಾಗಿ ಈ ಟಿಪ್ಸ್ ಗಳನ್ನು ಅನುಸರಿಸಿ

ಹೃದಯದ ಆರೋಗ್ಯಕ್ಕೆ ಸಲಹೆಗಳು

ಹೃದಯದ ಆರೋಗ್ಯಕ್ಕೆ ಸಲಹೆಗಳು
  • ಆರೋಗ್ಯಕರವಾದ ಜೀವನ ಶೈಲಿ ಬಹಳ ಮುಖ್ಯ
  • ದೇಹಕ್ಕೆ ಆಗಾಗ ವ್ಯಾಯಾಮ ಮತ್ತು ಚಟುವಟಿಕೆ ನೀಡಿ
  • ನಿಮ್ಮ ಮಾನಸಿಕ ಆರೋಗ್ಯದ ಕಡೆಗೆ ಗಮನ ಕೊಡಿ
  • ಆರೋಗ್ಯದಲ್ಲಿ ಎದುರಾಗುತ್ತಿರುವ ತೊಂದರೆಗಳನ್ನು ಗಂಭೀರವಾಗಿ ತೆಗೆದುಕೊಂಡು ವೈದ್ಯರ ಬಳಿ ತೋರಿಸಿಕೊಳ್ಳಿ
  • ಧೂಮಪಾನ ಬೇಡ
  • ಮಧ್ಯಪಾನ ಬೇಡವೇ ಬೇಡ. ​

ಇದನ್ನೂ ಓದಿ:ಚಳಿಗಾಲದಲ್ಲಿ ಇಂತಹ ಆಹಾರಗಳನ್ನು ತಿನ್ನಬಾರದು, ಇಲ್ಲಾಂದ್ರೆ ಹಾರ್ಟ್ ಅಟ್ಯಾಕ್ ಬರಬಹುದು!

ಮನೋಹರ್ ಶೆಟ್ಟಿ
ಲೇಖಕರ ಬಗ್ಗೆ
ಮನೋಹರ್ ಶೆಟ್ಟಿ
"ಕನ್ನಡದ ಲೇಖನ ಬರವಣಿಗೆಯಲ್ಲಿ 9 ವರ್ಷಗಳ ಸುದೀರ್ಘ ವೃತ್ತಿಪರ ಅನುಭವದೊಂದಿಗೆ ಭಾಷೆಯ ಅನುವಾದದೊಂದಿಗೆ ಪ್ರಾರಂಭಿಸಿ ಇಂದಿಗೆ ವಿವಿಧ ವಿಭಾಗಗಳಲ್ಲಿ ಅಂದರೆ ಜೀವನಶೈಲಿ, ಆರೋಗ್ಯ, ಸೌಂದರ್ಯ, ಸಂಬಂಧ, ಜಾಹೀರಾತು ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸಿದ ಹೆಮ್ಮೆ ನನ್ನದು. ಭಾಷೆಯ ಬಗೆಗಿನ ಹಿಡಿತ, ವಿಚಾರದ ಕುರಿತಾದ ಜ್ಞಾನಾಸಕ್ತಿಯೊಂದಿಗೆ ಓದುಗರಿಗೆ ಅತ್ಯುತ್ತಮ ವಿಷಯಗಳನ್ನೊಳಗೊಂಡ ಲೇಖನಗಳನ್ನು ನೀಡುವಲ್ಲಿ ನನಗೆ ತೃಪ್ತಿಯಿದೆ. ಅದು ವಿಚಾರವಿರುವ ಲೇಖನವಾದರೂ ಅಥವಾ ಸಾಧಾರಣ ಮುಖ್ಯಾಂಶವಾದರೂ ಸಾಧ್ಯವಾದಷ್ಟು ಉತ್ತಮ ಗುಣಮಟ್ಟದ ಬರವಣಿಗೆಯನ್ನು ತರಲು ನಾನು ಪ್ರಯತ್ನಿಸುತ್ತೇನೆ. ಸದ್ಯದ ಡಿಜಿಟಲ್ ವಿದ್ಯಮಾನಗಳ ಬಗ್ಗೆ ನನ್ನನ್ನು ನಾನು ಕ್ರೂಢೀಕರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುವ ಇತರ ಲೇಖಕರ ವಿಷಯಗಳನ್ನು, ವಿಚಾರಗಳನ್ನು ಅನುಸರಿಸಿ ನನ್ನ ಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಳ್ಳುತ್ತಾ ನನ್ನ ಬರವಣಿಗೆಯ ಗುಣಮಟ್ಟವನ್ನು ಈಗಿನ ಓದುಗರ ಆಸಕ್ತಿಗೆ ತಕ್ಕಂತೆ ಕಾಪಾಡಿಕೊಳ್ಳುತ್ತೇನೆ. ಬಿಡುವಿನ ಸಮಯದಲ್ಲಿ ನನ್ನ ಕುಟುಂಬದ ಜೊತೆ ಗುಣಮಟ್ಟದ ಸಮಯ ಕಳೆಯುವ ಮೂಲಕ ಉತ್ತಮ ವೃತ್ತಿಪರತೆಗಾಗಿ ನನ್ನನ್ನು ನಾನು ಚೈತನ್ಯದಿಂದ ಕೂಡಿರುವಂತೆ ನೋಡಿಕೊಳ್ಳುತ್ತೇನೆ."... ಇನ್ನಷ್ಟು ಓದಿ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ