ಆ್ಯಪ್ನಗರ

ಆಯುರ್ವೇದ ಪ್ರಕಾರ ಪಾಲಕ್-ಪನ್ನೀರ್‌ ಒಟ್ಟಿಗೆ ತಿನ್ನೋ ಹಾಗಿಲ್ಲ ಅಂತೆ!

ಇನ್ನು ಮುಂದೆ ಪಾಲಕ್ ಪನೀರ್ ತಿನ್ನುವ ಮುಂಚೆ ನೀವು ಯೋಚನೆ ಮಾಡಬೇಕು. ಏಕೆಂದರೆ ಇವೆರಡರ ಬಗ್ಗೆ ಡಾಕ್ಟರ್ ಏನೋ ಬೇರೆ ಹೇಳಿದ್ದಾರೆ. ಏನೆಂದು ನೋಡೋಣ ಬನ್ನಿ.

Produced byಮನೋಹರ್ ಶೆಟ್ಟಿ | Vijaya Karnataka Web 18 Jul 2023, 10:00 am
ಸಾಧ್ಯವಾದಷ್ಟು ಮನುಷ್ಯ ಹಸಿರು ಎಲೆ ತರಕಾರಿಗೆ ತನ್ನ ಆಹಾರ ಪದ್ಧತಿಯಲ್ಲಿ ವಿಶೇಷ ಸ್ಥಾನಮಾನ ನೀಡಬೇಕು ಎಂಬುದನ್ನು ವೈದ್ಯರಿಂದ ಕೇಳಿದ್ದೇವೆ. ಅಂದರೆ ಹಸಿರು ಸೊಪ್ಪು ಮನುಷ್ಯನ ಆರೋಗ್ಯಕ್ಕೆ ಅಷ್ಟು ಒಳ್ಳೆಯದು.
Vijaya Karnataka Web palak paneer is not so best food combination as per the ayurveda expert
ಆಯುರ್ವೇದ ಪ್ರಕಾರ ಪಾಲಕ್-ಪನ್ನೀರ್‌ ಒಟ್ಟಿಗೆ ತಿನ್ನೋ ಹಾಗಿಲ್ಲ ಅಂತೆ!


ತನ್ನದೇ ಆದ ವಿಶೇಷ ಪ್ರಯೋಜನಗಳ ಮೂಲಕ ಮತ್ತು ದೇಹಕ್ಕೆ ಪೌಷ್ಟಿಕಾಂಶಗಳನ್ನು ನೀಡುವ ಮೂಲಕ ನಾವು ಸೇವಿಸುವ ತರಕಾರಿಗಳಿಗಿಂತ ಒಂದು ಹೆಜ್ಜೆ ಮುಂದಿದೆ. ಇದರಲ್ಲಿ ಪ್ರಮುಖವಾಗಿ ಪಾಲಕ್ ಸೊಪ್ಪು ತುಂಬಾ ಜನರ ಆಯ್ಕೆಯಾಗಿರುತ್ತದೆ....

ತಜ್ಞರ ಪ್ರಕಾರ ಪಾಲಕ್​-ಪನ್ನೀರ್​ ಜೊತೆಗೆ ತಿನ್ನಬಾರದಂತೆ!

View this post on Instagram A post shared by Nmami (@nmamiagarwal)

ಪೌಷ್ಟಿಕಾಂಶ ತಜ್ಞರ ಪ್ರಕಾರ

  • ಮನುಷ್ಯನ ದೇಹಕ್ಕೆ ಪಾಲಕ್ ಮತ್ತು ಪನೀರ್ 2 ಸಹ ಆರೋಗ್ಯ ಕರ. ಆದರೆ ಪೌಷ್ಟಿಕಾಂಶ ತಜ್ಞರಾದ ಮಾಮಿ ಅಗ ರ್ವಾಲ್ ಹೇಳುವ ಪ್ರಕಾರ, ಇವೆರಡು ಒಟ್ಟಿಗೆ ದೇಹ ಸೇರಿದರೆ ಅಷ್ಟು ಆರೋಗ್ಯಕರ ವಲ್ಲವಂತೆ!
  • ತಮ್ಮ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ತಜ್ಞರು ಈ ವಿಚಾರ ವನ್ನು ಹಂಚಿಕೊಂಡಿದ್ದಾರೆ.

ಅವರು ಹೇಳುವ ಪ್ರಕಾರ

  • ಅವರು ಹೇಳುವ ಪ್ರಕಾರ ಕೆಲವೊಂದು ಆಹಾರ ಪದಾರ್ಥ ಗಳನ್ನು ಸಿಂಗಲ್ ಆಗಿ ಸೇವಿಸಬಹುದು.
  • ಆದರೆ ಬೇರೆ ಬೇರೆ ಆಹಾರ ಪದಾರ್ಥಗಳ ಜೊತೆ ಮಿಕ್ಸ್ ಮಾಡಿ ಸೇವಿಸುವುದರಿಂದ ಅವುಗಳ ಆರೋಗ್ಯ ಪ್ರಯೋಜ ನಗಳು ಹಾಳಾಗುತ್ತವೆ. ಆರೋಗ್ಯಕರವಾಗಿ ತಿನ್ನಬೇಕು ಎನ್ನುವುದು ನಿಜ. ಆದರೆ ಸರಿಯಾದ ಆಹಾರ ಮಾತ್ರ ತಿನ್ನಬೇಕು ಎಂದೇನಿಲ್ಲ.

ಆಹಾರದ ಸೀಕ್ರೆಟ್.........

  • ಸರಿಯಾದ ಆಹಾರಗಳನ್ನು ಅವುಗಳಿಗೆ ಹೊಂದಿ ಕೊಳ್ಳುವ ಇನ್ನಿತರ ಆಹಾರಗಳ ಜೊತೆಗೆ ಸೇವಿಸುವುದು ಒಳ್ಳೆಯದು.
  • ಪೌಷ್ಟಿಕ ತಜ್ಞರ ಪ್ರಕಾರ, ಪಾಲಕ್ ಮತ್ತು ಪನೀರ್ ಎರಡು ಸಹ ಒಟ್ಟಿಗೆ ಬೆರೆತಾಗ ಅವುಗಳ ಆರೋಗ್ಯ ಪ್ರಯೋಜನ ಗಳು ಹಾಳಾಗುತ್ತವೆ.
  • ಹಾಗಾಗಿ ಇವೆರಡು ಸಹ ಆರೋಗ್ಯಕರ ಆಹಾರದ ಕಾಂಬಿನೇಷನ್ ಎಂದು ಹೇಳಲು ಬರುವುದಿಲ್ಲ.
  • ಇದೇ ತರಹ ಬೇರೆ ಬೇರೆ ಆಹಾರಗಳ ಕಾಂಬಿನೇಷನ್ ಕೂಡ ಇದೆ. ಅವುಗಳನ್ನು ಒಟ್ಟಿಗೆ ಸೇವಿಸಿದಾಗ, ದೇಹದಲ್ಲಿ ಪೌಷ್ಟಿಕಾಂಶ ಹೀರಿಕೆ ಆಗುವುದನ್ನು ತಡೆಗಟ್ಟುತ್ತವೆ.

ಪಾಲಕ್ ಸೊಪ್ಪಿನ ಪೋಷಕಾಂಶ

  • ಸದ್ಯ ಪಾಲಕ್ ಮತ್ತು ಪನೀರ್ ಸೇವಿಸುವುದರಿಂದ ನಮ್ಮ ದೇಹಕ್ಕೆ ಕಬ್ಬಿಣ ಮತ್ತು ಕ್ಯಾಲ್ಸಿಯಂ ಸರಿಯಾಗಿ ಹೀರಿ ಕೊಳ್ಳಲು ಸಾಧ್ಯವಿರುವುದಿಲ್ಲ.
  • ಏಕೆಂದರೆ ಪಾಲಕ್ ಸೊಪ್ಪು ಕಬ್ಬಿಣದ ಅಂಶವನ್ನು ಹೆಚ್ಚಾಗಿ ಹೊಂದಿದೆ. ಪನೀರ್ ಕ್ಯಾಲ್ಸಿಯಂ ಪ್ರಮಾಣ ವನ್ನು ಅಪಾರವಾಗಿ ಹೊಂದಿದೆ. ಕ್ಯಾಲ್ಸಿಯಂ ನಮ್ಮ ದೇಹ ಕಬ್ಬಿಣದ ಅಂಶ ಹೀರಿ ಕೊಳ್ಳುವ ಸಾಧ್ಯತೆಯನ್ನು ನಿಯಂತ್ರಿಸುತ್ತದೆ.​

ಪನೀರ್‌ನಲ್ಲಿ ಏನಿದೆ?

  • ಅಷ್ಟೇ ಇಲ್ಲದೆ ಪನೀರ್ ತನ್ನಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಇತ್ಯಾದಿಗಳನ್ನು ಒಳಗೊಂಡಿದ್ದು, ಸಕ್ಕರೆ ಕಾಯಿಲೆ ಇರುವವರಿಗೆ ತುಂಬಾ ಒಳ್ಳೆಯದು.
  • ಹಸಿರು ಎಲೆ ತರಕಾರಿ ಅಂದರೆ ಪಾಲಕ್ ಸೊಪ್ಪು ತನ್ನಲ್ಲಿ ಕಬ್ಬಿಣ, ಫೋಲಿಕ್ ಆಮ್ಲ, ವಿಟಮಿನ್ ಎ, ವಿಟಮಿನ್ ಇ, ವಿಟಮಿನ್ ಕೆ ಹೆಚ್ಚಾಗಿ ಒಳಗೊಂಡಿದೆ. ಅದರ ಜೊತೆ ಒಮೆಗಾ 3 ಆಮ್ಲ ಕೂಡ ಇದರಲ್ಲಿದ್ದು, ಚರ್ಮದ ಕ್ಯಾನ್ಸರ್ ಸಮಸ್ಯೆಯಿಂದ ಪಾರು ಮಾಡುತ್ತದೆ.
  • ಆದರೆ ಪಾಲಕ್ ಮತ್ತು ಪನೀರ್ ಅನ್ನು ಒಟ್ಟಿಗೆ ಸೇವನೆ ಮಾಡುವುದರಿಂದ ಕ್ಯಾಲ್ಸಿಯಂ ಸಹಜವಾಗಿ ನಮ್ಮ ದೇಹ ಕಬ್ಬಿಣದ ಅಂಶವನ್ನು ಹೀರಿಕೊಳ್ಳುವ ಸಾಧ್ಯತೆ ಯನ್ನು ತಪ್ಪಿಸುತ್ತದೆ.​

ಇಮ್ಯೂನಿಟಿ ಪವರ್ ಹೆಚ್ಚಿಸುವ ಹಸಿರು ಸೊಪ್ಪಿನ ಕರಿ

ಏಕೆ ಪಾಲಕ್ ಮತ್ತು ಪನೀರ್ ಒಂದಕ್ಕೊಂದು ತದ್ವಿರುದ್ಧ?

  • ಇದರಿಂದ ನಮ್ಮ ದೇಹ ಕ್ರಮೇಣವಾಗಿ ಅನೀಮಿಯ ಸಮಸ್ಯೆಗೆ ಗುರಿಯಾಗಬಹುದು. ಇದಕ್ಕೆ ಕಾರಣವೆಂದರೆ ಪಾಲಕ್ ಸೊಪ್ಪಿನಲ್ಲಿ ಅಧಿಕ ಪ್ರಮಾಣದಲ್ಲಿ ಕಂಡುಬರುವ ಆಕ್ಸಲೆಟ್ ಎಂಬ ಆಂಟಿ ನ್ಯೂಟ್ರಿಯೆಂಟ್.
  • ಇದು ಕೆಲವೊಮ್ಮೆ ನಮ್ಮ ದೇಹ ಆಹಾರದಲ್ಲಿ ಸಿಗುವ ಕ್ಯಾಲ್ಸಿಯಂ ಪ್ರಮಾಣವನ್ನು ಸಹ ಹೀರಿಕೊಳ್ಳಲು ಬಿಡುವುದಿಲ್ಲ. ಆಯುರ್ವೇದ ಹೇಳುವ ಪ್ರಕಾರ ಇವೆರಡು ಆಹಾರಗಳು ವಿರುದ್ಧ ಆಹಾರಗಳಾಗಿವೆ. ಹಾಗಾಗಿ ಯಾವುದೇ ಕಾರಣಕ್ಕೂ ಇವುಗಳನ್ನು ಒಟ್ಟಿಗೆ ತಿನ್ನಬಾರದು.​

ಈ ಆಹಾರಗಳ ಬಗ್ಗೆಯೂ ಗಮನವಿರಲಿ...

  • ಇದರ ಜೊತೆಗೆ ಇನ್ನೂ ಕೆಲವು ಕಾಂಬಿನೇಷನ್, ವಿರುದ್ಧ ಆಹಾರ ಎಂಬ ಗುಂಪಿಗೆ ಸೇರಿರುತ್ತವೆ.
  • ಅವುಗಳೆಂದರೆ, ಬಾಳೆಹಣ್ಣು ಮತ್ತು ಹಾಲು, ಮೀನು ಮತ್ತು ಹಾಲು, ಹಸುವಿನ ತುಪ್ಪ ಹಾಗೂ ಜೇನುತುಪ್ಪ, ಮೊಸರು ಹಾಗೂ ಬೆಣ್ಣೆ ಇವುಗಳನ್ನು ಯಾವುದೇ ಕಾರಣಕ್ಕೂ ಒಟ್ಟಿಗೆ ತಿನ್ನಬಾರದು.
ಲೇಖಕರ ಬಗ್ಗೆ
ಮನೋಹರ್ ಶೆಟ್ಟಿ
"ಕನ್ನಡದ ಲೇಖನ ಬರವಣಿಗೆಯಲ್ಲಿ 9 ವರ್ಷಗಳ ಸುದೀರ್ಘ ವೃತ್ತಿಪರ ಅನುಭವದೊಂದಿಗೆ ಭಾಷೆಯ ಅನುವಾದದೊಂದಿಗೆ ಪ್ರಾರಂಭಿಸಿ ಇಂದಿಗೆ ವಿವಿಧ ವಿಭಾಗಗಳಲ್ಲಿ ಅಂದರೆ ಜೀವನಶೈಲಿ, ಆರೋಗ್ಯ, ಸೌಂದರ್ಯ, ಸಂಬಂಧ, ಜಾಹೀರಾತು ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸಿದ ಹೆಮ್ಮೆ ನನ್ನದು. ಭಾಷೆಯ ಬಗೆಗಿನ ಹಿಡಿತ, ವಿಚಾರದ ಕುರಿತಾದ ಜ್ಞಾನಾಸಕ್ತಿಯೊಂದಿಗೆ ಓದುಗರಿಗೆ ಅತ್ಯುತ್ತಮ ವಿಷಯಗಳನ್ನೊಳಗೊಂಡ ಲೇಖನಗಳನ್ನು ನೀಡುವಲ್ಲಿ ನನಗೆ ತೃಪ್ತಿಯಿದೆ. ಅದು ವಿಚಾರವಿರುವ ಲೇಖನವಾದರೂ ಅಥವಾ ಸಾಧಾರಣ ಮುಖ್ಯಾಂಶವಾದರೂ ಸಾಧ್ಯವಾದಷ್ಟು ಉತ್ತಮ ಗುಣಮಟ್ಟದ ಬರವಣಿಗೆಯನ್ನು ತರಲು ನಾನು ಪ್ರಯತ್ನಿಸುತ್ತೇನೆ. ಸದ್ಯದ ಡಿಜಿಟಲ್ ವಿದ್ಯಮಾನಗಳ ಬಗ್ಗೆ ನನ್ನನ್ನು ನಾನು ಕ್ರೂಢೀಕರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುವ ಇತರ ಲೇಖಕರ ವಿಷಯಗಳನ್ನು, ವಿಚಾರಗಳನ್ನು ಅನುಸರಿಸಿ ನನ್ನ ಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಳ್ಳುತ್ತಾ ನನ್ನ ಬರವಣಿಗೆಯ ಗುಣಮಟ್ಟವನ್ನು ಈಗಿನ ಓದುಗರ ಆಸಕ್ತಿಗೆ ತಕ್ಕಂತೆ ಕಾಪಾಡಿಕೊಳ್ಳುತ್ತೇನೆ. ಬಿಡುವಿನ ಸಮಯದಲ್ಲಿ ನನ್ನ ಕುಟುಂಬದ ಜೊತೆ ಗುಣಮಟ್ಟದ ಸಮಯ ಕಳೆಯುವ ಮೂಲಕ ಉತ್ತಮ ವೃತ್ತಿಪರತೆಗಾಗಿ ನನ್ನನ್ನು ನಾನು ಚೈತನ್ಯದಿಂದ ಕೂಡಿರುವಂತೆ ನೋಡಿಕೊಳ್ಳುತ್ತೇನೆ."... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ