ಆ್ಯಪ್ನಗರ

ದೈಹಿಕ, ಮಾನಸಿಕ ಆರೋಗ್ಯಕ್ಕೆ ಸೇವಿಸಿ ಹಸಿ ತರಕಾರಿ

ಸಾತ್ವಿಕ ಎನ್ನಿಸುವ ಹಸಿ ತರಕಾರಿ ಸೇವಿಸಿದವರನ್ನು ಉತ್ಸಾಹಭರಿತರನ್ನಾಗಿ ಇರಿಸುತ್ತದೆ.

Vijaya Karnataka Web 7 Apr 2019, 3:54 pm
ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಬೇಯಿಸಿದ ತರಕಾರಿಗಿಂತಲೂ ಹಸಿ ತರಕಾರಿ ಹಾಗೂ ಹಣ್ಣುಗಳು ಸಹಕಾರಿ ಎಂದಿದೆ ಇತ್ತೀಚಿನ ಸಂಶೋಧನೆ. ಆದ್ದರಿಂದ ಸಾಧ್ಯವಾದಷ್ಟು ಹಸಿ ತರಕಾರಿ ಹಾಗೂ ಹಣ್ಣುಗಳನ್ನು ಸೇವಿಸುವ ಅಭ್ಯಾಸ ರೂಢಿಸಿಕೊಳ್ಳಿ.
Vijaya Karnataka Web Vegitables


ಹಸಿರು ಕಾಯಿಪಲ್ಲೆಗಳಲ್ಲಿ ಜೀವಸತ್ವಗಳ ಜತೆ ಶರೀರ ಪೋಷಣೆಗೆ ಅಗತ್ಯವಾದ ಖನಿಜಾಂಶಗಳು, ಕೆರೋಟಿನ್ ಹಾಗೂ ಪಿಷ್ಠಾಂಶಗಳು ಹೆಚ್ಚಾಗಿವೆ. ಇವುಗಳ ದಿನನಿತ್ಯದ ಸೇವನೆಯಿಂದ ವ್ಯವಸ್ಥಿತ ರೀತಿಯಲ್ಲಿ ದೈಹಿಕ ಬೆಳವಣಿಗೆ ಉಂಟಾಗುತ್ತದೆ. ಮಲಬದ್ಧತೆ ನಿವಾರಣೆಯ ಹಾಗೂ ಪಚನಕ್ರಿಯೆ ಹೆಚ್ಚಿಸುವಲ್ಲಿ ಇದು ಸಹಕಾರಿ. ಹಸಿ ತರಕಾರಿಗಳು ಕೋಶಗಳ ರಚನೆಗೂ ಅವಶ್ಯ.

ಹಣ್ಣುಗಳಲ್ಲಿರುವಂತೆ ತರಕಾರಿಗಳಲ್ಲೂ ಹೆಚ್ಚಿನ ಪ್ರಮಾಣದ ಔಷಧೀಯ ಗುಣಗಳಿರುತ್ತದೆ. ಹಸಿರು ತರಕಾರಿ ಹಾಗೂ ಸೊಪ್ಪುಗಳನ್ನು ಕತ್ತರಿಸಿ ಅಥವಾ ರಸದ ರೂಪದಲ್ಲಿ ಹೆಚ್ಚಾಗಿ ಬಳಸುತ್ತಿರುತ್ತೇವೆ. ದೇಹಾರೋಗ್ಯದ ದೃಷ್ಟಿಯಿಂದ ಹಸಿರು ತರಕಾರಿ ಹಾಗೂ ಸೊಪ್ಪುಗಳು ದಿನನಿತ್ಯದ ಸೇವನೆಗೆ ಬಹು ಉಪಯುಕ್ತ ಎನಿಸಿವೆ.

ಸಾತ್ವಿಕ ಎನ್ನಿಸುವ ಹಸಿ ತರಕಾರಿ ಸೇವಿಸಿದವರನ್ನು ಉತ್ಸಾಹಭರಿತರನ್ನಾಗಿ ಇರಿಸುತ್ತದೆ.

ಮಧುಮೇಹ ಸಮಸ್ಯೆ ಇರುವವರು ಜ್ಯೂಸ್‌ ಕುಡಿಯಲು ಹಿಂದೇಟು ಹಾಕುತ್ತಾರೆ. ಇನ್ನು ಕೆಲವರು ಜ್ಯೂಸ್‌ ಸೇವನೆಯಿಂದ ಮಧುಮೇಹ ಬರುತ್ತದೆ ಎಂದು ಭಾವಿಸುತ್ತಾರೆ. ಆದರೆ ಶೇ. ನೂರರಷ್ಟು ಹಣ್ಣುಗಳಿಂದ ತಯಾರಾದ ಜ್ಯೂಸ್‌ ಮಧುಮೇಹದ ಮೇಲೆ ತಟಸ್ಥ ಪರಿಣಾಮ ಬೀರುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ. ಆದ್ದರಿಂದ ಕೆಲವು ಬಗೆಯ ಮಧುಮೇಹದ ಮೇಲೆ ಕೇವಲ ಹಣ್ಣಿನಿಂದ ತಯಾರಾದ ಜ್ಯೂಸ್‌ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ