ಪುರುಷರಲ್ಲಿ ಹರ್ನಿಯಾ ಉಂಟಾದಾಗ ಸಾಮಾನ್ಯವಾಗಿ ತೊಡೆ ಸಂದುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ ಹಾಗೂ ಮಹಿಳೆಯರಲ್ಲಿ ಹೊಕ್ಕಳಿನ ಜಾಗದಲ್ಲಿ ನೋವಾಗಬಹುದು. ಕೆಲವೊಂದು ಬಾರಿ ಅತಿಯಾದ ತೂಕ ಅಥವಾ ಹೆಚ್ಚಾದ ಕೆಮ್ಮು ಇದ್ದಾಗ ನಿಮ್ಮ ಹೊಟ್ಟೆಯ ಭಾಗಕ್ಕೆ ಬಹಳಷ್ಟು ಒತ್ತಡ ಬೀಳುತ್ತದೆ ಹಾಗೂ ಇದು ಹೊಕ್ಕಳು ಬಳ್ಳಿಯ ಹರ್ನಿಯಾವನ್ನು ಉಂಟುಮಾಡುತ್ತದೆ. ಇದನ್ನು ಹೇಗೆ ನಿಭಾಯಿಸಬಹುದು ಎಂಬ ಪ್ರಶ್ನೆ ಇದೆಯೇ? ಹಾಗಿದ್ದರೆ ಈ ಲೇಖನವನ್ನು ನಾವು ನಿಮಗಾಗಿ ತಂದಿದ್ದೇವೆ. ಹರ್ನಿಯಾ ಬಗ್ಗೆ ಬಹಳಷ್ಟು ವಿಷಯಗಳನ್ನು ನಾವು ತಿಳಿದುಕೊಳ್ಳೋಣ, ಬನ್ನಿ.
ಹರ್ನಿಯಾ ಏಕೆ ಉಂಟಾಗುತ್ತದೆ?
ಪ್ರತಿಯೊಂದು ಹರ್ನಿಯಾ ಕೂಡ ಒತ್ತಡ ಹಾಗೂ ಸ್ನಾಯುಗಳ ಸೆಳೆತದಿಂದ ಉಂಟಾಗಬಹುದು. ಯಾವುದೇ ಜಾಗದಲ್ಲಿ ಒತ್ತಡ ಬಿದ್ದಾಗ ಅದು ಅಂಗಗಳನ್ನು ಹಾಗೂ ಅಂಗಾಂಶಗಳನ್ನು ಬಹಳ ಮೃದುವಾಗಿರುವ ಅಥವಾ ದುರ್ಬಲವಾಗಿರುವ ಜಾಗಕ್ಕೆ ತಳ್ಳುತ್ತವೆ. ಕೆಲವೊಬ್ಬರಿಗೆ ಸ್ನಾಯುಗಳ ದುರ್ಬಲತೆ ಹುಟ್ಟಿದಾಗಿನಿಂದಲೂ ಇರುತ್ತದೆ, ಅಂತಹ ವ್ಯಕ್ತಿಗಳಿಗೆ ಮುಂದೆ ತಮ್ಮ ಜೀವನದಲ್ಲಿ ಹರ್ನಿಯಾ ಸಮಸ್ಯೆ ಉಂಟಾಗಬಹುದು.
ಹೊಟ್ಟೆಯ ಭಾಗದಲ್ಲಿ ಉಂಟಾಗುವ ಯಾವುದೇ ಒತ್ತಡವಿದ್ದರೂ ಹರ್ನಿಯಾ ಉಂಟಾಗಬಹುದು. ಈ ಒತ್ತಡಗಳು ಯಾವುವು ಎಂದರೆ,
ಪದೇಪದೇ ಕೆಮ್ಮುವುದು ಅಥವಾ ಸೀನುವುದು
ಹೊಟ್ಟೆಯ ಸ್ನಾಯುಗಳು ದುರ್ಬಲವಾಗಿ ಇದ್ದಾಗ ಅಥವಾ ಯಾವುದಾದರೂ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ ಅತಿ ಹೆಚ್ಚು ಭಾರವಾದ ವಸ್ತುಗಳನ್ನು ಎತ್ತುವುದು
ಬಹಳ ಸಾಮಾನ್ಯವಾಗಿರುವ ಹರ್ನಿಯಾದ ವಿಧಗಳು
ಹೊಟ್ಟೆಯ ಭಾಗದಲ್ಲಿ ಉಂಟಾಗುವ ಬಹಳಷ್ಟು ಹರ್ನಿಯಾ ಗಳು ಹೊಟ್ಟೆಯ ಸ್ನಾಯುಗಳಲ್ಲಿ ಉಂಟಾಗುತ್ತದೆ, ಎದೆ ಭಾಗ ಹಾಗೂ ಸೊಂಟದ ಮೂಳೆಗಳ ಮಧ್ಯೆ ಉಂಟಾಗುತ್ತದೆ. ಬಹಳಷ್ಟು ಸಾಮಾನ್ಯವಾದ ಹರ್ನಿಯಾ ವಿಧಗಳೆಂದರೆ ತೊಡೆಸಂದು ಗಳ ಹರ್ನಿಯಾ, ಹೊಟ್ಟೆಯ ವಿಭಾಗದ ಹರ್ನಿಯಾ.
ಹರ್ನಿಯಾದ ಗುಣಲಕ್ಷಣಗಳು ಯಾವುವು?
ಸಾಮಾನ್ಯವಾಗಿ ಹರ್ನಿಯಾ ದೇಹದ ಯಾವುದೇ ಭಾಗದಲ್ಲಿ ಉಂಟಾದರೂ ಸಾಮಾನ್ಯವಾಗಿ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಅದೇ ರೀತಿ ಹೊಟ್ಟೆ ಅಥವಾ ತೊಡೆ ಸಂದುಗಳಲ್ಲಿ ಉಂಟಾಗುವ ಹರ್ನಿಯಾ ಗಂಟು ಅಥವಾ ದಪ್ಪವಾದ ಮಾಂಸದ ಮುದ್ದೆಯನ್ನು ಹೊಂದಿರುತ್ತದೆ, ಸಾಮಾನ್ಯವಾಗಿ ಮಲಗಿದಾಗ ಇದು ಕಾಣಿಸುವುದಿಲ್ಲ. ಇದರಲ್ಲಿರುವ ಇನ್ನಷ್ಟು ಸಾಮಾನ್ಯವಾದ ಗುಣಲಕ್ಷಣಗಳು ಎಂದರೆ,
ತೊಡೆ ಸಂದುಗಳಲ್ಲಿ ಊದಿಕೊಳ್ಳುವುದು, ಊದಿಕೊಂಡಿರುವ ಜಾಗದಲ್ಲಿ ಬಹಳಷ್ಟು ನೋವು ತುಂಬಿರುವುದು , ಏನಾದರೂ ಭಾರ ಎತ್ತುವಾಗ ನೋವಾಗುವುದು, ಗಂಟು ಅಥವಾ ಮಾಂಸದ ಮುದ್ದೆ ಸಮಯ ಕಳೆದಂತೆಲ್ಲ ತನ್ನ ಗಾತ್ರವನ್ನು ಹೆಚ್ಚಿಸಿಕೊಳ್ಳುವುದು, ಮೂತ್ರ ವಿಸರ್ಜನೆ ಸರಿಯಾಗಿ ಆಗದಿರುವುದು, ಯಾವಾಗಲೂ ಪದೇ-ಪದೇ ಮೂತ್ರ ವಿಸರ್ಜನೆಯ ಭಾವನೆ ಉಂಟಾಗುವುದು.
ಪುರುಷರ ಫಲವತ್ತತೆಯಿಂದ ಹಿಡಿದು ನೆನಪಿನಶಕ್ತಿ ವೃದ್ಧಿಸುವವರೆಗೆ ಈ ಗಿಡಮೂಲಿಕೆಗಳಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ?
ಹರ್ನಿಯಾಗೆ ಮನೆಮದ್ದುಗಳು
ಹರ್ನಿಯಾ ಸಮಸ್ಯೆಗೆ ಸೂಕ್ತ ಔಷಧಗಳು ಹಾಗೂ ವೈದ್ಯರ ಸಲಹೆ ಅತ್ಯಗತ್ಯ. ವೈದ್ಯರ ಸಲಹೆಯ ನಂತರ ಯಾವುದಾದರೂ ಮನೆಮದ್ದುಗಳನ್ನು ನೀವು ಉಪಯೋಗಿಸಬೇಕು ಎಂದುಕೊಂಡಿದ್ದರೆ ಈ ಕೆಳಗೆ ತಿಳಿಸಿದ್ದೇವೆ.
ಮಂಜುಗಡ್ಡೆಯ ಪ್ಯಾಕ್
ದೇಹದ ಯಾವುದೇ ಭಾಗದಲ್ಲಿ ನೋವು ಉಂಟಾದಾಗ ಸಾಮಾನ್ಯವಾಗಿ ಉರಿಯೂತಗಳು ಹಾಗೂ ನೋವು ಇರುವ ಜಾಗದಲ್ಲಿ ಕೆಂಪಾಗುವಿಕೆ ಸಾಮಾನ್ಯವಾದ ಲಕ್ಷಣ. ಆದರೆ ಇಂತಹ ಜಾಗಗಳಿಗೆ ಮಂಜುಗಡ್ಡೆಯ ಇಟ್ಟುಕೊಂಡಾಗ ನೋವು ಊತಗಳು ಕಡಿಮೆಯಾಗುತ್ತದೆ.
ಅಲೋವೆರಾ ಜ್ಯೂಸ್
ಅಲೋವೆರಾ ಉರಿಯುತ ಗಳನ್ನು ಕಡಿಮೆ ಮಾಡಬಲ್ಲ ಗುಣಗಳನ್ನು ಹೊಂದಿದೆ. ಹರ್ನಿಯಾಗೆ ಕೂಡ ಇದೊಂದು ಸೂಕ್ತ ಮನೆಮದ್ದು ಎಂದಲೇ ಹೇಳಲಾಗುತ್ತದೆ. ಇದನ್ನು ಕುಡಿಯುವುದರಿಂದ ನೋವು ಕಡಿಮೆಯಾಗುತ್ತದೆ ಹಾಗಾಗಿ ಅಲೋವೆರ ಜ್ಯೂಸನ್ನು ನಿಯಮಿತವಾಗಿ ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ.
ಹರಳೆಣ್ಣೆ
ಹರಳೆಣ್ಣೆಯನ್ನು ಬಹಳ ಹಿಂದೆ ನಮ್ಮ ಹಿರಿಯರು ಮನೆಯಲ್ಲೇ ತಯಾರಿಸಿಕೊಳ್ಳುತ್ತಿದ್ದರು. ಹೊಟ್ಟೆಯ ಯಾವುದೇ ಸಮಸ್ಯೆಗಳಿದ್ದರೂ ಕೂಡ ಹರಳೆಣ್ಣೆಯನ್ನು ಉಪಯೋಗಿಸಿಕೊಳ್ಳುತ್ತಿದ್ದರು. ಅದೇ ರೀತಿ ಯಾವುದೇ ನೋವನ್ನು ನಿವಾರಿಸಿಕೊಳ್ಳಲು ಹರಳೆಣ್ಣೆಯನ್ನು ಬಳಸಿಕೊಳ್ಳಬಹುದು. ನಿಮಗೆ ಈ ಮಾತನ್ನು ಕೇಳಿ ಆಶ್ಚರ್ಯವಾಗುತ್ತಿರುವುದು. ತುಂಬಾ ನೋವಿರುವ ಜಾಗದಲ್ಲಿ ಹರಳೆಣ್ಣೆಯನ್ನು ಹಚ್ಚಿ ಸ್ವಲ್ಪ ಸಮಯ ಬಿಟ್ಟು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಂಡರೆ ಆಯಿತು, ನಿಮಗೆ ಸ್ವಲ್ಪ ಆರಾಮ ನೀಡಬಲ್ಲದು.
ಕಪ್ಪು ಮೆಣಸಿನಕಾಳಿನ ಪುಡಿ : ಹೊಟ್ಟೆ ಸಂಬಂಧಿ ತೊಂದರೆಗಳಿಗೆ ಹಾಗೂ ಕರುಳಿನ ಉರಿಯೂತಗಳಿಗೆ ಮೆಣಸಿನಪುಡಿ ನಿಮಗೆ ಸಹಾಯ ಮಾಡುತ್ತದೆ.
ಹರಳೆಣ್ಣೆ ನಿತ್ಯ ಬಳಸಿದರೆ ಈ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತಂತೆ!
ಮಸಾಲೆಯುಕ್ತ ಪದಾರ್ಥಗಳನ್ನು ಸೇವಿಸಬೇಡಿ
ಬಹಳಷ್ಟು ಮಸಾಲೆ ತುಂಬಿದ, ಖಾರವಿರುವ ಆಹಾರ ಪದಾರ್ಥಗಳನ್ನು ಇಂತಹ ಸಂದರ್ಭಗಳಲ್ಲಿ ಸೇವಿಸಬಾರದು. ಆಸಿಡ್ ಅಂಶ ಹೆಚ್ಚಾಗಿರುವ ಅಥವಾ ಬಹಳಷ್ಟು ಮಸಾಲೆ ಇರುವ ಆಹಾರ ಪದಾರ್ಥಗಳನ್ನು ಜೀರ್ಣಿಸಿಕೊಳ್ಳಲು ನಿಮಗೆ ಕಷ್ಟವಾಗಬಹುದು. ಇದಷ್ಟೇ ಅಲ್ಲದೆ ನಿಮ್ಮ ಹೊಟ್ಟೆಯನ್ನು ಹಾಳು ಮಾಡಲು ಮಸಾಲೆಯುಕ್ತ ಪದಾರ್ಥಗಳೇ ಕಾರಣ.
ಈ ಮನೆ ಮದ್ದುಗಳ ಜೊತೆಗೆ ಕೆಲವೊಂದು ವ್ಯಾಯಾಮಗಳ ಮುಖಾಂತರವೂ ನೋವನ್ನು ಕಡಿಮೆ ಮಾಡಿಕೊಳ್ಳಬಹುದು. ಅವುಗಳೆಂದರೆ ಸೈಕ್ಲಿಂಗ್, 30 ನಿಮಿಷಗಳ ನಡಿಗೆ, ನಿಯಮಿತವಾಗಿ ಹಾಗೂ ಪ್ರತಿದಿನವೂ ಯೋಗಾಭ್ಯಾಸ ಮಾಡುವುದು, ಈಜುವ ಕೆಲವು ವ್ಯಾಯಾಮಗಳನ್ನು ರೂಢಿಸಿಕೊಳ್ಳುವುದರಿಂದ ನಿಮಗೆ ನೋವು ಸ್ವಲ್ಪವಾದರೂ ಕಡಿಮೆಯಾಗಬಹುದು.
ಎಚ್ಚರಿಕೆ
ಹರ್ನಿಯಾವನ್ನು ಸರಿಯಾಗಿ ಗುಣ ಮಾಡಿಕೊಳ್ಳದೆ ಇದ್ದಲ್ಲಿ ನಿಮ್ಮ ನೋವು ಹೆಚ್ಚಾಗಬಹುದು, ತಡೆದುಕೊಳ್ಳಲು ಆಗದ ಪರಿಸ್ಥಿತಿಯನ್ನು ನೀವು ಮುಟ್ಟಬಹುದು. ಗುಣ ಮಾಡದ ಹರ್ನಿಯಾ ಹೊಟ್ಟೆಯ ಭಾಗದ ತೆಳುವಾದ ಪದರವನ್ನು ಕೂಡ ಹಾಳು ಮಾಡುತ್ತದೆ, ಇದರಿಂದ ಬಹಳಷ್ಟು ನೋವು, ವಾಕರಿಕೆ, ಮಲಬದ್ಧತೆ ಉಂಟಾಗಬಹುದು. ಹೊಟ್ಟೆಯ ಸ್ನಾಯುಗಳ ಪಕ್ಕದಲ್ಲಿರುವ ಹಲವು ಸ್ನಾಯುಗಳಿಗೂ ಕೂಡ ಹರ್ನಿಯಾ ಒತ್ತಡವನ್ನು ಹಾಕುತ್ತದೆ.
ಅಕ್ಕಪಕ್ಕ ಇರುವ ಅಂಗಗಳಿಗೆ ಸರಿಯಾದ ರಕ್ತಪರಿಚಲನೆ ಉಂಟಾಗುವುದಿಲ್ಲ, ಕೆಲವೊಮ್ಮೆ ಇದು ಮಾರಕವಾಗುತ್ತದೆ ಹಾಗೂ ಜೀವವನ್ನು ಕೂಡ ಕಳೆದುಕೊಳ್ಳಬಹುದು. ಆದ್ದರಿಂದ ಯಾವುದೇ ಆರೋಗ್ಯ ಸಮಸ್ಯೆಗಳು ಕಂಡು ಬಂದಾಗ ವೈದ್ಯರ ಸಲಹೆ ಚಿಕಿತ್ಸೆ ಅತ್ಯಗತ್ಯ.