ಆ್ಯಪ್ನಗರ

ಮಧ್ಯಾಹ್ನದ ನಿದ್ರೆಗೆ ಕಾರಣವೇನು ಗೊತ್ತೇ?

ಮಧ್ಯಾಹ್ನ ಕೆಲವರಿಗೆ ಸ್ವಲ್ಪ ಹೊತ್ತು ಸಿಹಿ ನಿದ್ರೆ ಮಾಡಲೇಬೇಕು. ಅದಿಲ್ಲದೆ ಅವರಿಗೆ ಆಗಲ್ಲ.

Vijaya Karnataka Web 10 Aug 2021, 5:06 pm
ಮಧ್ಯಾಹ್ನದ ಊಟದ ಬಳಿಕ ಸಾಮಾನ್ಯವಾಗಿ ನಿದ್ರೆ ಬರುವುದು ಇದೆ. ಕಚೇರಿಯಾಗಲಿ, ಶಾಲೆ ಕಾಲೇಜುಗಳಾಗಲಿ, ಊಟವಾದ ಬಳಿಕ ಆಕಳಿಕೆ ಆರಂಭವಾಗುವುದು. ಇನ್ನೇನು ಕೆಲಸ ಮಾಡಲು ಸಾಧ್ಯವೇ ಇಲ್ಲ ಎನ್ನುವಂತಹ ನಿದ್ರೆಯು ಬರುವುದು.
Vijaya Karnataka Web reasons why some people most of us feel sleepy in the afternoon
ಮಧ್ಯಾಹ್ನದ ನಿದ್ರೆಗೆ ಕಾರಣವೇನು ಗೊತ್ತೇ?


ಕೆಲವರಿಗೆ ಮಧ್ಯಾಹ್ನ ಮನೆಯಲ್ಲಿ ಮಲಗುವಂತಹ ಅಭ್ಯಾಸವು ಇದೆ. ಆದರೆ ಕಚೇರಿಯಲ್ಲಿ ಇದನ್ನು ಪಾಲಿಸಿಕೊಂಡು ಹೋಗಲು ಆಗಲ್ಲ. ಹೀಗಾಗಿ ನಿದ್ರೆ ಬಂದರೆ ತುಂಬಾ ಕಷ್ಟಪಡಬೇಕಾಗುತ್ತದೆ. ಆದರೆ 15 ನಿಮಿಷಗಳ ಕಾಲ ಮಲಗಿದರೆ, ಅದರಿಂದ ದೇಹಕ್ಕೆ ಮತ್ತೆ ಉಲ್ಲಾಸ ಹಾಗೂ ಚೈತನ್ಯವು ಸಿಗುವುದು ಎಂದು ಹೇಳಲಾಗುತ್ತದೆ.

​ಮರುಕಳಿಸುವ ಲಯ ಎಂದರೇನು?

  • ಪ್ರಕೃತಿಯಲ್ಲಿ ಸೂರ್ಯ ಚಂದ್ರರು ಪ್ರತನಿತ್ಯವೂ ಉದಯಿಸುವಂತೆ ನಮ್ಮ ದೇಹದಲ್ಲಿ ಕೂಡ ಲಯಬದ್ಧವಾಗಿ ಕೆಲವೊಂದು ಕಾರ್ಯಗಳು ನಡೆಯುವುದು.
  • ಪ್ರತಿನಿತ್ಯವೂ ಒಂದೇ ಸಮಯದಲ್ಲಿ ನಡೆಯುವಂತಹ ಜೈವಿಕ ಕಾರ್ಯವನ್ನು ಮರುಕಳಿಸುವ ಲಯ ಎಂದು ಕರೆಯಲಾಗುತ್ತದೆ. ಒಂದೇ ಸಮಯಕ್ಕೆ ಶೌಚಾಲಯಕ್ಕೆ ಹೋಗುವುದು, ದಿನದ ಒಂದೇ ಸಮಯದಲ್ಲಿ ತುಂಬಾ ಖಿನ್ನತೆಗೆ ಒಳಗಾಗುವುದು, ಟೆಸ್ಟೋಸ್ಟೆರಾನ್ ಮಟ್ಟದಲ್ಲಿ ಏರು ಪೇರು ಆಗುವುದು ಕೂಡ ಮರುಕಳಿಸುವ ಲಯದ ಒಂದು ಭಾಗ.

ಮಧ್ಯಾಹ್ನದಲ್ಲಿ ಮಲಗಿ ಗಡದ್ದಾಗಿ ನಿದ್ದೆ ಮಾಡುವ ಮಹಿಳೆಯರೇ ಇಲ್ಲಿ ಕೇಳಿ !!

​ಮಧ್ಯಾಹ್ನ 3-5ರ ಮಧ್ಯೆ ನಿದ್ರೆ ಬರುವುವುದು ಯಾಕೆ?

  • ನಿಮಗೆ ಮಧ್ಯಾಹ್ನ 3-5 ಗಂಟೆಯ ಮಧ್ಯೆ ನಿದ್ರೆ ಬಂದಂತೆ ಆಗುವುದು ಮತ್ತು ದೇಹದಲ್ಲಿ ಉಲ್ಲಾಸವು ಕಳೆದುಹೋದರೆ, ಆಗ ಇದಕ್ಕೆ ಮರುಕಳಿಸುವ ಲಯವು ಪ್ರಮುಖ ಕಾರಣವಾಗಿದೆ.
  • ರಾತ್ರಿ ವೇಳೆ ಸರಿಯಾಗಿ ನಿದ್ರೆಯು ಆಗದೆ ಇದ್ದರೆ, ಆಗ ಮಧ್ಯಾಹ್ನ ನಿದ್ರೆ ಬರುವುದು ಹೆಚ್ಚು. ಸರಿಯಾಗಿ ರಾತ್ರಿ ನಿದ್ರೆ ಮಾಡಿದರೆ, ಆಗ ಮಧ್ಯಾಹ್ನ ವೇಳೆ ನಿದ್ರೆ ಬರುವುದು ತಪ್ಪುವುದು.

​ಮಧ್ಯಾಹ್ನದ ನಿದ್ರೆ ತಪ್ಪಿಸಲು ಏನು ಮಾಡಬಹುದು?

ಮಧ್ಯಾಹ್ನ ನಿದ್ರೆ ಬರುವ ವೇಳೆ ಜನರು ಹೆಚ್ಚಾಗಿ ಕಾಫಿ ಅಥವಾ ಏನಾದರೂ ಸಕ್ಕರೆಯ ಪೇಯವನ್ನು ಸೇವನೆ ಮಾಡುವರು. ಆದರೆ ಇದು ಒಳ್ಳೆಯ ನಿರ್ಧಾರವಲ್ಲ, ಯಾಕೆಂದರೆ ದಿನದ ಅಂತ್ಯದಲ್ಲಿ ನಿಮ್ಮ ಶಕ್ತಿಯು ಮತ್ತಷ್ಟು ಕುಂದಬಹುದು.

​ಈ ಟಿಪ್ಸ ಫಾಲೋ ಮಾಡಿ...

  • ಮಧ್ಯಾಹ್ನ ವೇಳೆ ನಿದ್ರೆ ಬರುವುದನ್ನು ತಪ್ಪಿಸಲು ನೀವು ಕೆಲವೊಂದು ಆರೋಗ್ಯಕಾರಿ ಕ್ರಮಗಳನ್ನು ಅನುಸರಿಸಿಕೊಂಡು ಹೋಗಬಹುದು.
  • ಬಿಸಿಲಿನಲ್ಲಿ 5 ನಿಮಿಷ ಕಾಲ ನಡೆಯಿರಿ.
  • ಸ್ನೇಹಿತರಿಗೆ ಕರೆ ಮಾಡಿ ಹಾಗೆ ಮಾತನಾಡಿ
  • ದಿನವಿಡಿ ನೀರಿನಾಂಶ ಸೇವನೆ ಮಾಡಿ.
  • ಮಧ್ಯಾಹ್ನ ಕಾರ್ಬೋಹೈಡ್ರೇಟ್ಸ್ ಹೆಚ್ಚಾಗಿರುವ ಆಹಾರ ಸೇವನೆ ಮಾಡಬೇಡಿ. ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವಂತಹ ಆಹಾರ ಸೇವನೆ ಮಾಡಿದರೆ ಒಳ್ಳೆಯದು.
  • ಎಲ್ಲವೂ ವಿಫಲವಾದರೆ, ಆಗ ನೀವು 20 ನಿಮಿಷ ಕಾಲ ಹಾಗೆ ನಿದ್ರೆ ಮಾಡಿ. ಕೇವಲ 20 ನಿಮಿಷಗಳ ನಿದ್ರೆಯು ನಿಮ್ಮಲ್ಲಿ ಜಾಗೃತಿ ಉಂಟು ಮಾಡುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ