ಆ್ಯಪ್ನಗರ

ತಾಮ್ರದ ಪಾತ್ರೆಯಲ್ಲಿ ಶೇಖರಿಸಿದ ನೀರು ಕುಡಿದರೆ, ಲಾಭಗಳು ಒಂದಾ ಎರಡಾ...?

ನೀರನ್ನು ತಾಮ್ರದ ಪಾತ್ರೆಯಲ್ಲಿ ಹಾಕಿಟ್ಟು ಕುಡಿದರೆ ಅದರಿಂದ ದೇಹದ ಆರೋಗ್ಯಕ್ಕೆ ಲಾಭಕಾರಿ.

Vijaya Karnataka Web 30 Jun 2021, 1:56 pm
ನಮ್ಮ ಹಿರಿಯರು ತಾಮ್ರದ ಪಾತ್ರೆಗಳನ್ನು ಹಿಂದೆ ನಿತ್ಯ ಜೀವನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುತ್ತಲಿದ್ದರು. ಆದರೆ ಕಾಲಕ್ರಮೇಣ ಇದರ ಬಳಕೆಯು ತುಂಬಾ ಕಡಿಮೆ ಆಗುತ್ತಾ ಹೋಯಿತು ಮತ್ತು ಇದರ ಬದಲಿಗೆ ಸ್ಟೀಲ್ ಮತ್ತು ಅಲ್ಯೂಮಿನಿಯಂ ಪಾತ್ರೆಗಳ ಬಳಕೆ ಹೆಚ್ಚಾಗುತ್ತಾ ಬಂತು.
Vijaya Karnataka Web reasons why you must drink water from a copper vessel
ತಾಮ್ರದ ಪಾತ್ರೆಯಲ್ಲಿ ಶೇಖರಿಸಿದ ನೀರು ಕುಡಿದರೆ, ಲಾಭಗಳು ಒಂದಾ ಎರಡಾ...?


ಆದರೆ ತಾಮ್ರದ ಪಾತ್ರೆಯಲ್ಲಿರುವಂತಹ ಕೆಲವೊಂದು ಅಂಶಗಳು ದೇಹಕ್ಕೆ ತುಂಬಾ ಒಳ್ಳೆಯದು. ಹೀಗಾಗಿ ಇಂದಿನ ದಿನಗಳಲ್ಲಿ ಮತ್ತೆ ತಾಮ್ರದ ಪಾತ್ರೆಗಳು ಪ್ರಚಲಿತಕ್ಕೆ ಬರುತ್ತಲಿದೆ. ಇದನ್ನು ಬಳಕೆ ಮಾಡಿದರೆ, ಅದರಿಂದ ದೇಹಕ್ಕೆ ಹಲವಾರು ರೀತಿಯ ಆರೋಗ್ಯ ಲಾಭಗಳು ಸಿಗುವುದು. ಇದರ ಪಾತ್ರೆಯಲ್ಲಿ ಹಾಕಿಟ್ಟ ನೀರಿನಿಂದ ಯಾವೆಲ್ಲಾ ಲಾಭಗಳು ಸಿಗುವುದು ಎಂದು ತಿಳಿಯುವ.

​ತಾಮ್ರದ ಪಾತ್ರೆಯಿಂದ ಯಾಕೆ ನೀರು ಕುಡಿಯಬೇಕು?

  • ದೇಹದಲ್ಲಿ ಹೆಚ್ಚಿನ ಪ್ರಮಾಣದ ನೀರಿನಾಂಶವು ಇರುವ ಕಾರಣದಿಂದಾಗಿ ನೀರು ಸೇವನೆಯು ಅತೀ ಅಗತ್ಯ. ನಳ್ಳಿಯಲ್ಲಿ ಬರುವಂತಹ ನೀರಿನಲ್ಲಿ ಹೆಚ್ಚಿನ ಮಟ್ಟದ ಕಲ್ಮಶವು ಇರುವ ಕಾರಣದಿಂದಾಗಿ ನೀರನ್ನು ಶುದ್ಧೀಕರಿಸಿ ಕುಡಿಯಬೇಕು.
  • ತಾಮ್ರದ ಪಾತ್ರೆಯಲ್ಲಿ ಹಾಕಿಟ್ಟುಕೊಂಡಿರುವಂತಹ ನೀರನ್ನು ಕುಡಿದರೆ ಅದು ತುಂಬಾ ಲಾಭಕಾರಿ ಎಂದು ಆಯುರ್ವೇದವು ಹೇಳಿದೆ.

​ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡುವುದು

  • ಕ್ಯಾನ್ಸರ್ ಎನ್ನುವುದು ಮಾರಣಾಂತಿಕವಾಗಿ ಕಾಡುವಂತಹ ಕಾಯಿಲೆ. ತಾಮ್ರದಲ್ಲಿ ಹೆಚ್ಚಿನ ಪ್ರಮಾಣದ ಆಂಟಿಆಕ್ಸಿಡೆಂಟ್ ಗಳಿದ್ದು, ಇದು ದೇಹದಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುವುದು.
  • ಆದರೆ ಕ್ಯಾನ್ಸರ್ ಗೆ ತಾಮ್ರದ ಪಾತ್ರೆಯಲ್ಲಿಟ್ಟ ನೀರು ಶೇ.100ರಷ್ಟು ಪರಿಣಾಮಕಾರಿಯೇ ಎಂದು ಅಧ್ಯಯನಗಳು ಹೇಳಿಲ್ಲ. ಆದರೆ ತಾಮ್ರದಲ್ಲಿ ಕ್ಯಾನ್ಸರ್ ವಿರೋಧಿ ಅಂಶಗಳು ಇವೆ.

ಧೂಮಪಾನ-ತಂಬಾಕು ಸೇವನೆಯಿಂದ ದೂರವಿರಿ, ಇಲ್ಲಾಂದ್ರೆ ಕ್ಯಾನ್ಸರ್ ಪಕ್ಕಾ!

​ಉರಿಯೂತ ಮತ್ತು ಸಂಧಿವಾತ ತಗ್ಗಿಸಲು

ಸಂಧಿವಾತ ಇರುವವರಿಗೆ ಗಂಟುಗಳಲ್ಲಿ ಇರುವಂತಹ ಉರಿಯೂತವನ್ನು ತಾಮ್ರವು ಕಡಿಮೆ ಮಾಡುವುದು. ದುರ್ಬಲ ಮೂಳೆಗಳು ಮತ್ತು ಪ್ರತಿರೋಧಕ ವ್ಯವಸ್ಥೆಯು ಸಂಧಿವಾತ ಉಂಟು ಮಾಡುವುದು. ಹೀಗಾಗಿ ತಾಮ್ರದ ಪಾತ್ರೆಗಳಲ್ಲಿ ಹಾಕಿಟ್ಟುಕೊಂಡಿರುವ ನೀರು ಕುಡಿದರೆ, ಅದು ಸ್ವಲ್ಪ ಮಟ್ಟಿನ ಪರಿಹಾರ ಕೊಡುವುದು.

ತಾಮ್ರದಲ್ಲಿ ಉರಿಯೂತ ಶಮನಕಾರಿ, ಬ್ಯಾಕ್ಟೀರಿಯಾ ವಿರೋಧಿ ಮತ್ತು ವೈರಲ್ ವಿರೋಧಿ ಗುಣಗಳು ಇವೆ. ತಾಮ್ರವು ಗಾಯವನ್ನು ಬೇಗನೆ ಗುಣಪಡಿಸುವುದು. ಪ್ರತಿರೋಧಕ ಶಕ್ತಿ ವೃದ್ಧಿ ಮಾಡುವ ಜತೆಗೆ ಇದು ಹೊಸ ಅಂಗಾಂಶಗಳನ್ನು ಉತ್ಪತ್ತಿ ಮಾಡಲು ನೆರವಾಗುವುದು. ತಾಮ್ರವು ದೇಹವನ್ನು ಒಳಗಿನಿಂದ ಗುಣಪಡಿಸುವುದು.

ಈ ಪುಟ್ಟ ಸಾಸಿವೆ ಕಾಳುಗಳಲ್ಲಿದೆ ಸಂಧಿವಾತ ಸಮಸ್ಯೆ ದೂರ ಮಾಡುವ ಪವರ್!

​ಮೂರ್ಛೆ ರೋಗ ವಿರುದ್ಧ ಹೋರಾಡುವುದು

  • ಮೆದುಳಿನಲ್ಲಿ ಉತ್ತಮ ಪ್ರಮಾಣದ ನ್ಯೂರಾನ್ ಗಳಿದ್ದು, ಇದನ್ನು ಮೈಲಿನ್ ರಕ್ಷಿಸುವುದು. ತಾಮ್ರದಲ್ಲಿ ಇರುವಂತಹ ಪ್ರಮುಖ ರಾಸಾಯನಿಕ ಅಂಶವಾಗಿರುವಂತಹ ಫಾಸ್ಪೋಲಿಪಿಡ್ಸ್ ಅಂಶವು ಮೈಲಿನ್ ಉತ್ಪತ್ತಿಗೆ ನೆರವಾಗುವುದು.
  • ಹೀಗಾಗಿ ತಾಮ್ರದ ಪಾತ್ರೆಯಲ್ಲಿ ಇಟ್ಟ ನೀರನ್ನು ಕುಡಿದರೆ, ಮೆದುಳು ತುಂಬಾ ವೇಗ ಹಾಗೂ ಪರಿಣಾಮಕಾರಿ ಆಗಿ ಕೆಲಸ ಮಾಡುವುದು. ಇದು ಮೂರ್ಛೆ ರೋಗ ತಡೆಯಲು ತುಂಬಾ ಸಹಕಾರಿ.

ತಾಮ್ರದ ಪಾತ್ರೆಯಲ್ಲಿ ಶೇಖರಿಸಿದ 'ನೀರು ಕುಡಿದರೆ' ಆರೋಗ್ಯವಾಗಿರುವಿರಿ

​ಬಳಸುವುದು ಹೇಗೆ?

ಒಳ್ಳೆಯ ಗುಣಮಟ್ಟದ ಮತ್ತು ಪರಿಶುದ್ಧ ತಾಮ್ರದ ಪಾತ್ರೆಗಳನ್ನು ಖರೀದಿ ಮಾಡಿ. ಇದನ್ನು ರಾತ್ರಿ ಹಾಕಿಟ್ಟುಕೊಂಡ ನೀರನ್ನು ಬೆಳಗ್ಗೆ ಸೇವನೆ ಮಾಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ