ಆ್ಯಪ್ನಗರ

ಎಳನೀರಿನ ಗಂಜಿ ಆರೋಗ್ಯದ ಮೇಲೆ ಪವಾಡದಂತೆ ಕೆಲಸ ನಿರ್ವಹಿಸುವುದು

ಎಳನೀರಿನಂತೆ ಅದರಲ್ಲಿ ಇರುವ ಗಂಜಿಯೂ ಸಹ ಸಾಕಷ್ಟು ಆರೋಗ್ಯಕರ ಗುಣಗಳಿಂದ ಕೂಡಿರುತ್ತದೆ.

Vijaya Karnataka Web 15 Jun 2021, 5:06 pm
ಎಳನೀರು ಒಂದು ಜೀವ ಸಂಜೀವಿನಿ. ಇದನ್ನು ಎಲ್ಲಾ ಸಮಯದಲ್ಲೂ ಸ್ವೀಕರಿಸುತ್ತೇವೆ. ದೇಹವನ್ನು ಉತ್ತಮ ಸ್ಥಿತಿಯಲ್ಲಿ ಇಡುವ ಈ ಪಾನೀಯದ ಜೊತೆಗೆ ಗಂಜಿಯಂತಹ ಕೊಬ್ಬರಿಯಿರುತ್ತದೆ. ಅದನ್ನು ಎಳನೀರಿನ ಗಂಜಿ/ ಮಲೈ ಎಂದು ಕರೆಯುತ್ತಾರೆ. ಕೆಲವರು ಅದನ್ನು ಸೇವಿಸುವುದಿಲ್ಲ. ಕೆಲವರು ಮಾತ್ರ ಅದನ್ನು ಸವಿಯುವುದರ ಜೊತೆಗೆ ಆಹ್ಲಾದವನ್ನು ಅನುಭವಿಸುತ್ತಾರೆ.
Vijaya Karnataka Web reasons why you must eat coconut flesh
ಎಳನೀರಿನ ಗಂಜಿ ಆರೋಗ್ಯದ ಮೇಲೆ ಪವಾಡದಂತೆ ಕೆಲಸ ನಿರ್ವಹಿಸುವುದು


ಇದನ್ನು ಸೇವಿಸಿದರೆ ಆರೋಗ್ಯದಲ್ಲಿ ಪವಾಡವನ್ನು ಮಾಡುವಂತಹ ಧನಾತ್ಮಕ ಬದಲಾವಣೆಗಳು ಉಂಟಾಗುತ್ತವೆ ಎಂದು ತಜ್ಞರು ಅಭಿಪ್ರಾಯಿಸುತ್ತಾರೆ.

​ಹೃದಯದ ಆರೋಗ್ಯಕ್ಕೆ ಒಳ್ಳೆಯದು

ಎಳನೀರಿನ ಗಂಜಿಯಲ್ಲಿ ಅಧಿಕ ಕೊಬ್ಬಿನಂಶ ಇರುತ್ತದೆ. ಇದು ಒಳ್ಳೆಯ ಸ್ಯಾಚುರೇಟೆಡ್ ಕೊಬ್ಬನ್ನು ಒಳಗೊಂಡಿದೆ. ಇದು ಒಂದು ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ದೇಹಕ್ಕೆ ನೀಡುತ್ತದೆ. ಅಂತೆಯೇ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುವುದು. ಜೊತೆಗೆ ಹೃದಯದ ಆರೋಗ್ಯವನ್ನು ಉತ್ತಮವಾಗಿಡಲು ಸಹಾಯ ಮಾಡುವುದು.

ಮಾವಿನ ಹಣ್ಣು ತಿಂದರೆ ಶುಗರ್ ಬರುತ್ತೆ ಅಂತ ಭಯಾನಾ? ಹಾಗಾದರೆ ಈ ರೀತಿ ತಿನ್ನಿ

​ತೂಕ ಇಳಿಸಲು ಸಹಾಯ ಮಾಡುವುದು

ಬಹುತೇಕ ಜನರು ಎಳನೀರಿನಲ್ಲಿ ಇರುವ ಗಂಜಿ ಅಧಿಕ ಕೊಬ್ಬಿನಂಶದಿಂದ ಕೂಡಿರುತ್ತದೆ. ಅದು ದೇಹದ ತೂಕವನ್ನು ಹೆಚ್ಚಿಸುವುದು ಎನ್ನುವ ತಪ್ಪು ಕಲ್ಪನೆಯನ್ನು ಹೊಂದಿದ್ದಾರೆ. ಸೂಕ್ತ ರೀತಿಯಲ್ಲಿ ಎಳನೀರಿನ ಗಂಜಿ ಸೇವಿಸುವುದರಿಂದ ದೇಹದ ಅಧಿಕ ತೂಕವನ್ನು ಸುಲಭವಾಗಿ ನಿಯಂತ್ರಿಸಬಹುದು. ಇದರಲ್ಲಿ ಹೆಚ್ಚು ಶಕ್ತಿ ಮತ್ತು ಹಸಿವನ್ನು ತಡೆಯುವ ಗುಣವಿರುವುದರಿಂದ ಪದೇ ಪದೇ ತಿನ್ನುವ ಅಭ್ಯಾಸವನ್ನು ಸುಲಭವಾಗಿ ತಪ್ಪಿಸಬಹುದು. ಇದರಲ್ಲಿ ಇರುವ ಉತ್ತಮ ಪ್ರಮಾಣದ ಪ್ರೋಟೀನ್ ದೇಹದ ತೂಕ ಇಳಿಕೆಗೆ ಸಹಾಯ ಮಾಡುವುದು.

​ಉತ್ತಮ ಜೀರ್ಣ ಕ್ರಿಯೆ

ಎಳನೀರಿನ ಗಂಜಿಯಲ್ಲಿ ಅಧಿಕ ಪ್ರಾಣದ ನಾರಿನಂಶ ಇದೆ. ಇದು ನಯವಾದ ಜೀರ್ಣ ಕ್ರಿಯೆಯನ್ನು ಉತ್ತೇಜಿಸುತ್ತದೆ. ಜೊತೆಗೆ ಕರುಳಿನ ಕ್ರಿಯೆಯನ್ನು ಉತ್ತಮಗೊಳಿಸುವುದು.

ನಿಮ್ಮ ಆಹಾರಕ್ರಮದಲ್ಲಿ ಅಳವಡಿಸಿಕೊಳ್ಳಲೇಬೇಕಾದ ಐದು ಕಪ್ಪು ಆಹಾರಗಳು

​ಶಕ್ತಿಯನ್ನು ಹೆಚ್ಚಿಸುವುದು

ಎಳನೀರಿನ ಗಂಜಿಯಲ್ಲಿ ಟ್ರೈಗ್ಲಿಸರೈಡ್ ಅಧಿಕವಾಗಿರುತ್ತದೆ. ಅವು ನಮ್ಮ ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುವುದು. ಜೊತೆಗೆ ಇತರ ಸಂಯೋಜನೆಯೊಂದಿಗೆ ದೇಹಕ್ಕೆ ಅಧಿಕ ಶಕ್ತಿ ದೊರೆಯುವಂತೆ ಮಾಡುವುದು.

​ರೋಗನಿರೋಧಕ ಶಕ್ತಿ ಹೆಚ್ಚಿಸುವುದು:

ಎಳನೀರಿನ ಗಂಜಿಯಲ್ಲಿ ಹೆಚ್ಚಿನ ಉತ್ಕರ್ಷಣ ನಿರೋಧಕ ಶಕ್ತಿಯಿದೆ. ಇದು ದೇಹಕ್ಕೆ ಅನೇಕ ಬಗೆಯ ಶಕ್ತಿ ಹಾಗೂ ಪೋಷಣೆಯನ್ನು ನೀಡುತ್ತದೆ. ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ವರ್ಧಿಸಲು ಸಹಾಯ ಮಾಡುವುದು. ಅಂಟು ಹಾಗೂ ಸೋಂಕು ರೋಗಗಳಿಂದ ದೂರ ಇಡುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ