ಆ್ಯಪ್ನಗರ

ದೀಪಾವಳಿಗೆ ಎಣ್ಣೆ ಸ್ನಾನದ ವಿಶೇಷತೆಯೇನು?

ದೀಪಾವಳಿ ಬೆಳಕಿನ ಹಬ್ಬ ಹೇಗೋ ಸ್ನಾನದ ಹಬ್ಬವೂ ಹೌದು. ಮಕ್ಕಳಿಗೆ ತಾಯಿ, ಗಂಡನಿಗೆ ಹೆಂಡತಿ ಎಣ್ಣೆ ಹಚ್ಚಿ ನೀರು ಹೊಯ್ಯುವ ಸಂಪ್ರದಾಯ. ಅದರಲ್ಲೂ ಮದುವೆಯಾದ ಮೊದಲ ವರ್ಷ ಎಣ್ಣೆ ಸ್ನಾನಕ್ಕೆ ಎಣೆ ಇಲ್ಲದ ಸಂಭ್ರಮ. ದೀಪ ಎಂದರೆ ದಾರಿ ತೋರಿಸುವ ಬೆಳಕು ಎನ್ನುತ್ತಾರೆ.

Vijaya Karnataka 17 Oct 2017, 12:50 pm
ಕೃಷ್ಣಭಟ್ ಆಳದಂಗಡಿ
Vijaya Karnataka Web significance of oil bath in deepavali
ದೀಪಾವಳಿಗೆ ಎಣ್ಣೆ ಸ್ನಾನದ ವಿಶೇಷತೆಯೇನು?


ದೀಪಾವಳಿ ಬೆಳಕಿನ ಹಬ್ಬ ಹೇಗೋ ಸ್ನಾನದ ಹಬ್ಬವೂ ಹೌದು. ಮಕ್ಕಳಿಗೆ ತಾಯಿ, ಗಂಡನಿಗೆ ಹೆಂಡತಿ ಎಣ್ಣೆ ಹಚ್ಚಿ ನೀರು ಹೊಯ್ಯುವ ಸಂಪ್ರದಾಯ. ಅದರಲ್ಲೂ ಮದುವೆಯಾದ ಮೊದಲ ವರ್ಷ ಎಣ್ಣೆ ಸ್ನಾನಕ್ಕೆ ಎಣೆ ಇಲ್ಲದ ಸಂಭ್ರಮ. ದೀಪ ಎಂದರೆ ದಾರಿ ತೋರಿಸುವ ಬೆಳಕು ಎನ್ನುತ್ತಾರೆ. ನಿಜವೆಂದರೆ ನರಕ ಚತುರ್ದಶಿಯ ಎಣ್ಣೆ ಸ್ನಾನದ ಹೆಸರಲ್ಲಿ ನಮ್ಮ ಪರಂಪರೆ ತೋರಿಸಿದ ದಾರಿ ಇದೆಯಲ್ಲ, ಅದು ನಿಜಕ್ಕೂ ಪರಮಾದ್ಭುತ.

ಮನಸಿಗೂ ದಿವ್ಯಾಭ್ಯಂಜನ

ಎಣ್ಣೆ ಸ್ನಾನದ ವಿಶೇಷತೆಯ ಜತೆಗೆ ಅದರಿಂದ ದೊರೆಯುವ ದೈಹಿಕ ನಿರಾಳತೆ ನಮಗೆ ಹೊಸ ಬೆಳಕನ್ನೇ ಕೊಡುತ್ತದೆ. ಅಮ್ಮನ ಕೈಲಿ ಎಣ್ಣೆ ಹಚ್ಚಿಸಿಕೊಂಡು, ಒಂದು
ಗಂಟೆ ಹಾಗೆ ಉಳಿಸಿಕೊಂಡು ನಂತರ ಹಬೆಯಾಡುವ ಬಿಸಿ ಬಿಸಿ ನೀರನ್ನು ಹೊಯ್ಯಿಸಿಕೊಳ್ಳುವಲ್ಲಿ ಇರುವ ಸುಖಾನುಭವ ರೋಮಾಂಚನ. ಕುಟುಂಬದೊಳಗೆ
ಆತ್ಮೀಯತೆಯನ್ನು ಉದ್ದೀಪಿಸುವ ಈ ಪ್ರಕ್ರಿಯೆ ದೇಹಾರೋಗ್ಯದ ನಿಟ್ಟಿನಲ್ಲೂ ಮಹತ್ವದ್ದು.

ನಾವು ವರ್ಷಕ್ಕೊಮ್ಮೆ ಸಂಪ್ರದಾಯದ ಹೆಸರಿನಲ್ಲಿ ಮಾಡುವ ತೈಲ ಸ್ನಾನವೇ ಅಷ್ಟೊಂದು ಖುಷಿ ಕೊಡುವಾಗ ಅದನ್ನು ವಾರಕ್ಕೊಮ್ಮೆಯೋ, ತಿಂಗಳಿಗೊಮ್ಮೆಯೋ
ಮಾಡಿದರೆ ಹೇಗಿದ್ದೀತು? ತೈಲಾಭ್ಯಂಗವೆಂದು ಕರೆಯಲಾಗುವ ಎಣ್ಣೆ ಸ್ನಾನ ನಿಜಕ್ಕೂ ಪರಮಾದ್ಭುತ ಪರಿಣಾಮಕಾರಿ. ಮೈಗೆ ಹಚ್ಚಿಕೊಳ್ಳುವ ಎಣ್ಣೆ, ಮಾಡುವ
ಪುಟ್ಟ ಮಸಾಜ್‌, ಒಂದು ಗಂಟೆಯ ವಿರಾಮದ ಅವಧಿಯಲ್ಲಿ ಮೈಯ ಚರ್ಮದ ಕಣ ಕಣಗಳು ಎಣ್ಣೆಯಲ್ಲಿ ಮಿಂದೆದ್ದು ಪುನಶ್ಚೇತನಗೊಳ್ಳುವ ಪರಿ, ಬಿಸಿ ನೀರು
ತಾಗಿದಾಗ ಇಡೀ ದೇಹದಲ್ಲಿ ಆಗುವ ಸಂಚಲನ. ಇದನ್ನು ಆಯುರ್ವೇದ ಅತ್ಯಂತ ಸಂಭ್ರಮದಿಂದ ವಿವರಿಸುತ್ತದೆ.

ಮಸಾಜ್‌ಗೆ ಯಾವ ಎಣ್ಣೆ ಸೂಕ್ತ?
* ತೆಂಗಿನೆಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಮೈಗೆ ಮಸಾಜ್‌ ಮಾಡಿದರೆ ಒಳ್ಳೆಯದು.
* ದೇಹದಲ್ಲಿ ಪಿತ್ತದ ಅಂಶ ಕಡಿಮೆ ಮಾಡಲು ಎಳ್ಳೆಣ್ಣೆಯಿಂದ ಮಸಾಜ್ ಮಾಡಿದರೆ ಒಳ್ಳೆಯದು.

ಉಪಯೋಗಗಳು
* ತೈಲ ಸ್ನಾನದಿಂದ ತ್ವಚೆಯ ಮಾಯಿಶ್ಚರೈಸರ್ ಕಾಪಾಡಬಹುದು. ಇನ್ನು ಚಳಿಗಾಲ ಪ್ರಾರಂಭವಾಗುವುದರಿಂದ ಚಳಿಗಾಲದ ವಿರುದ್ಧ ತವಚೆ ರಕ್ಷಣೆಗೂ ಎಣ್ಣೆ ಸ್ನಾನ ಸಹಕಾರಿ.
* ತ್ವಚೆ ಕಾಂತಿ ಹೆಚ್ಚಾಗುವುದು.
* ದೇಹದಲ್ಲಿ ರಕ್ತ ಸಂಚಾಲನಕ್ಕೆ ಸಹಕಾರಿ
* ಮಾನಸಿಕ ಒತ್ತಡ ಕಡಿಮೆ ಮಾಡಿ ಮನಸ್ಸಿಗೆ ನಿರಾಳತೆಯ ಅನುಭವ ನೀಡುವುದು.
* ಸ್ನಾಯುಗಳು ಬಲವಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ