ಆ್ಯಪ್ನಗರ

ಮಳೆಗಾಲದಲ್ಲಿ ಜ್ವರ ಬಂದಾಗ ಮಾಡಬೇಕಾದ ಮನೆಮದ್ದುಗಳಿವು

ಮಳೆಗಾಲದ ಈ ವಾತಾವರಣದಲ್ಲಿ ಜ್ವರ ಮತ್ತು ಶೀತ ಕಾಣಿಸಿಕೊಳ್ಳುವುದು ಸಹಜ. ನಿಮಗೆ ಜ್ವರದಂತಹ ಸಮಸ್ಯೆ ಕಾಣಿಸಿಕೊಂಡಾಗ ಕೆಲವು ಕ್ರಮ ಅನುಸರಿಸಿದರೆ ಬಹುಬೇಗ ಚೇತರಿಸಿಕೊಳ್ಳಬಹುದು.

Vijaya Karnataka Web 11 Aug 2020, 12:08 pm
ಸದ್ಯದ ಸ್ಥಿತಿಯಲ್ಲಿ ಜ್ವರ ಎಂದರೆ ಒಂದು ಬಗೆಯ ಆತಂಕ ಹಾಗೂ ಯಾವ ಕಾಯಿಲೆ ಇರಬಹುದು? ಎನ್ನುವ ಚಿಂತೆ ಕಾಡುವುದು. ಜ್ವರದ ಲಕ್ಷಣಗಳು ಕಾಣಿಸಿಕೊಂಡರೆ ಒಂದೇ ಸಮನೆ ಮಾನಸಿಕ ಒತ್ತಡವನ್ನು ಉಂಟುಮಾಡುತ್ತದೆ. ಯಾವುದೇ ವೈರಸ್ ನಮಗೆ ತಗುಲಿದಾಗ ಮೊದಲು ಕಾಣಿಸಿಕೊಳ್ಳುವುದು ಜ್ವರ. ರೋಗ ನಿರೋಧಕ ಶಕ್ತಿ ಕಡಿಮೆ ಇದ್ದಾಗ ವೈರಸ್‍ನ ದಾಳಿ ತೀವ್ರಗತಿಯನ್ನು ಪಡೆದುಕೊಳ್ಳುವುದು. ಅದಕ್ಕಾಗಿ ನಾವು ನಮ್ಮ ಆರೋಗ್ಯ ಉತ್ತಮವಾಗಿ ಇಡುವಂತಹ ಆಹಾರ ಪದಾರ್ಥವನ್ನು ಗಣನೀಯವಾಗಿ ಸೇವಿಸುತ್ತಿರಬೇಕು. ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಕೆಲವು ತ್ವರಿತವಾದ ಪದ್ಧತಿಯನ್ನು ಅನುಸರಿಸುವುದರಿಂದ ಜ್ವರದಂತಹ ಆರೋಗ್ಯ ಸಮಸ್ಯೆಯಿಂದ ದೂರ ಉಳಿಯಬಹುದು ಎನ್ನಲಾಗುತ್ತದೆ. ಹಾಗಾದರೆ ಆ ಕ್ರಮಗಳು ಯಾವವು? ಎನ್ನುವುದನ್ನು ತಿಳಿಯಲು ಲೇಖನದ ಮುಂದಿನ ವಿವರಣೆಯನ್ನು ಪರಿಶೀಲಿಸಿ.
Vijaya Karnataka Web simple home remedies for flu
ಮಳೆಗಾಲದಲ್ಲಿ ಜ್ವರ ಬಂದಾಗ ಮಾಡಬೇಕಾದ ಮನೆಮದ್ದುಗಳಿವು


​* ಸಾಕಷ್ಟು ನೀರನ್ನು ಕುಡಿಯಬೇಕು:

ಸಾಕಷ್ಟು ನೀರನ್ನು ಕುಡಿಯುವುದರಿಂದ ಮೂಗು, ಬಾಯಿ ಮತ್ತು ಗಂಟಲು ತೇವವಾಗಿಯೇ ಇರುತ್ತದೆ. ಜೊತೆಗೆ ಲೋಳೆ ಮತ್ತು ಕಫಗಳನ್ನು ಬಿಡುಗಡೆ ಮಾಡಲು ಸಹಾಯವಾಗುವುದು. ಜರದ ಚಿಹ್ನೆ ಅಥವಾ ಜ್ವರ ಕಾಣಿಸಿಕೊಂಡಾಗ ಬಿಸಿ ನೀರು ಅಥವಾ ಸಾಮಾನ್ಯ ನೀರು, ಸೂಪ್, ತೆಂಗಿನ ನೀರು ಮತ್ತು ಗಿಡಮೂಲಿಕೆಯ ಕಷಾಯಗಳನ್ನು ಕುಡಿಯಬೇಕು. ಮೂತ್ರದ ಬಣ್ಣವು ಬಿಳಿ ಬಣ್ಣದಿಂದ ಅಥವಾ ತಿಳಿ ಹಳದಿ ಬಣ್ಣದಿಂದ ಕೂಡಿರಬೇಕು.

​* ಚೆನ್ನಾಗಿ ವಿಶ್ರಾಂತಿ ಪಡೆಯಿರಿ:

ಜ್ವರದಿಂದ ಬಹುಬೇಗ ಚೇತರಿಸಿಕೊಳ್ಳಲು ಸಾಕಷ್ಟು ವಿಶ್ರಾಂತಿ ಪಡೆಯುವುದು ಬಹು ಮುಖ್ಯ. ಚೆನ್ನಾಗಿ ನಿದ್ರೆ ಮಾಡಬೇಕು. ಆಗ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ನಿತ್ಯವೂ ಮಾಡುವ ಕೆಲಸವನ್ನು ಸಹ ಪಕ್ಕದಲ್ಲಿ ಇಟ್ಟು ಆದಷ್ಟು ವಿಶ್ರಾಂತಿಯನ್ನು ಪಡೆದುಕೊಳ್ಳಬೇಕು. ಜ್ವರದಿಂದ ಚೇತರಿಸಿಕೊಳ್ಳಲು ಚೆನ್ನಾಗಿ ನಿದ್ರೆ ಮಾಡುವುದು ಅತಿ ಮುಖ್ಯ.

​* ಮೂಳೆ ಸಾರು:

ಮಾಂಸಹಾರಿಗಳಾಗಿದ್ದರೆ ಮೂಳೆ ಸಾರನ್ನು ಸೇವಿಸಬಹುದು. ಇದರಲ್ಲಿ ಸೋಡಿಯಂ ಮತ್ತು ಪೊಟ್ಯಾಸಿಯಮ್ ನಂತಹ ಖನಿಜಗಳು ಸಮೃದ್ಧವಾಗಿರುತ್ತವೆ. ಜ್ವರದಿಂದ ಬಳಲುತ್ತಿರುವಾಗ ಮೂಳೆಯ ಸಾರು ಕುಡಿದರೆ ಮೂಗಿನ ದಟ್ಟನೆಯಿಂದಲೂ ಪರಿಹಾರ ಸಿಗುತ್ತದೆ. ಈ ಹೈಡ್ರೇಟಿಂಗ್ ಸೂಪ್ ಪ್ರೋಟೀನ್‍ನಲ್ಲಿ ಸಮೃದ್ಧವಾಗಿರುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಪುನರ್ನಿರ್ಮಿಸಲು ಸಹಾಯ ಮಾಡುವುದು.

ಪುರುಷರ ಫಲವತ್ತತೆಯನ್ನು ಹೆಚ್ಚಿಸಲು ಬೇಕು ಸಿಹಿ ಕುಂಬಳಕಾಯಿ ಬೀಜ!

​* ಒಣ ಬೀಜಗಳ ಸೇವನೆ:

ರೋಗ ನಿರೋಧಕ ಶಕ್ತಿಯು ಸತುವಿನಿಂದ ಪ್ರಚೋದನೆ ಪಡೆದುಕೊಳ್ಳುವುದು. ಸೂಕ್ಷ್ಮ ಜೀವಿಗಳ ವಿರುದ್ಧ ಹೋರಾಡುವಂತಹ ಬಿಳಿ ರಕ್ತ ಕಣಗಳನ್ನು ಹೆಚ್ಚಿಸುವುದು. ದೇಹವು ವೈರಸ್ ವಿರುದ್ಧ ಹೋರಾಡುವ ಶಕ್ತಿಯನ್ನು ಪಡೆದುಕೊಳ್ಳುವುದು. ಅದಕ್ಕಾಗಿ ಸಮೃದ್ಧವಾದ ಸತುವಿನ ಅಂಶವನ್ನು ಹೊಂದಿರುವ ಮಸೂರ, ಕಡಲೆ ಬೀಜ, ಬೀನ್ಸ್, ಡೈರಿ ಉತ್ಪನ್ನ ಮತ್ತು ಮೊಟ್ಟೆಗಳನ್ನು ಸೇವಿಸಬೇಕು.

​* ಉಪ್ಪು ನೀರಿನಲ್ಲಿ ಗಂಟಲು ಗಲಬರಿಸುವುದು:

ವೈರಸ್ ಅಥವಾ ಸೋಂಕು ಗಂಟಲಿನಲ್ಲಿ ಉಳಿದುಕೊಳ್ಳುತ್ತವೆ. ಜೊತೆಗೆ ನಿಧಾನವಾಗಿ ಶ್ವಾಸಕೋಶ ಹಾಗೂ ದೇಹದ ಇರತ ಭಾಗಗಳಿಗೆ ಹರಡುವುದು. ಹಾಗಾಗಿ ಸೋಂಕು ಅಥವಾ ಜ್ವರ ಬಂದಾಗ ತಪ್ಪದೆ ಉಗುರು ಬೆಚ್ಚಗಿನ ನೀರಿಗೆ ಉಪ್ಪನ್ನು ಸೇರಿಸಿ ಗಂಡಲನ್ನು ಗಲಬರಿಸುವುದು ಅಥವಾ ಬಾಯನ್ನು ಉಪ್ಪುನೀರಿನಲ್ಲಿ ಮುಕ್ಕುಳಿಸುವುದು ಮಾಡಬೇಕು. ದಿನದಲ್ಲಿ ಸಾಕಷ್ಟು ಬಾರಿ ಹಾಗೆ ಮಾಡುವುದರಿಂದ ಗಂಟಲು ನೋವು ಮತ್ತು ಜ್ವರವು ಕಡಿಮೆಯಾಗುವುದು.

ಕಳಲೆಯನ್ನು ಏಕೆ ತಿನ್ನಬೇಕು ಎನ್ನುವುದು ನಿಮಗೆ ಗೊತ್ತಾ?

​* ಗಿಡಮೂಲಿಕೆಗಳ ಕಷಾಯ:

ಬೆಳ್ಳುಳ್ಳಿ, ಶುಂಠಿ, ಅರಿಶಿನ, ಲವಂಗ, ಜೀರಿಗೆ ಮತ್ತು ಸೋಂಪು ಗಳಂತಹ ಗಿಡಮೂಲಿಕೆಯಂತಹ ವಸ್ತುಗಳು ಜ್ವರದ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ. ಇವುಗಳನ್ನು ನೀರಿನಲ್ಲಿ ಕುದಿಸಿ ಕಷಾಯದ ರೂಪದಲ್ಲಿ ಕುಡಿದರೆ ಗಂಟಲಿಗೆ ಹಾಗೂ ದೇಹಕ್ಕೆ ಆರಾಮದಾಯಕ ಅನುಭವ ಉಂಟಾಗುವುದು. ಜೊತೆಗೆ ದೇಹದಲ್ಲಿರುವ ವೈರಸ್ ಸೋಂಕುಗಳು ದೂರವಾಗುತ್ತವೆ. ಮೂಗಿನ ದಟ್ಟಣೆ ಇದ್ದರೆ ತ್ವರಿತವಾದ ಉಪಶಮನ ಪಡೆದುಕೊಳ್ಳಬಹುದು.

​* ಹಬೆಯನ್ನು ತೆಗೆದುಕೊಳ್ಳುವುದು:

ಉಪ್ಪು ನೀರಿನಲ್ಲಿ ಗಾರ್ಗಲ್ ಮಾಡಿದಂತೆ ಸಾಮಾನ್ಯವಾದ ಶೀತ, ಜ್ವರ, ಮೂಗಿನ ದಟ್ಟಣೆ ಅಥವಾ ತಲೆನೋವು ಬಂದಾಗ ಬೆಚ್ಚಗಿನ ನೀರಿಗೆ , ನೀಲಗಿರಿ ಎಣ್ಣೆಯನ್ನು ಹಾಕಿ ಹಬೆಯನ್ನು ಪಡೆದುಕೊಳ್ಳಬಹುದು. ಹೀಗೆ ಮಾಡುವುದರಿಂದ ಶ್ವಾಸಕೋಶದಲ್ಲಿ ಸೆಳೆತ, ಒಣ ಕೆಮ್ಮು, ಕಿರಿಕಿರಿ, ಮೂಗಿನ ದಟ್ಟಣೆ, ಎದೆ ಬಿಗಿತ, ಉಸಿರಾಟದ ತೊಂದರೆ ಯಂತಹ ಸಮಸ್ಯೆಗಳು ಗುಣಮುಖವಾಗುತ್ತವೆ. ಜೊತೆಗೆ ನಿರಾಳವಾದ ಅನುಭವ ನೀಡುವುದು. ಶೀತ ಮತ್ತು ಜ್ವರವನ್ನು ಹೊಂದಿದ್ದಾಗ ಬೆಳಿಗ್ಗೆ ಮತ್ತು ಸಂಜೆ ಈ ಕ್ರಮವನ್ನು ಅನುಸರಿಸಬಹುದು. ಕೆಲವು ಆಹಾರ ಪದಾರ್ಥಗಳು ಮತ್ತು ಮನೆ ಔಷಧಿಗಳು ನಿಮಗೆ ಅಲರ್ಜಿ ಉಂಟು ಮಾಡಬಹುದು. ಅದಕ್ಕಾಗಿ ಯಾವುದೇ ಕ್ರಮ ಅನುಸರಿಸುವುದರ ಮೊದಲು ವೈದ್ಯರಲ್ಲಿ ಒಮ್ಮೆ ಸಲಹೆಯನ್ನು ಪಡೆಯಲು ಮರೆಯದಿರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ