ಆ್ಯಪ್ನಗರ

ಎದೆನೋವಿಗೆ ಇಲ್ಲಿದೆ ನೋಡಿ ಕೆಲವೊಂದು ನೈಸರ್ಗಿಕ ಪರಿಹಾರಗಳು

ಮನೆಮದ್ದು ಬಳಕೆ ಮಾಡಿಕೊಂಡು ಎದೆನೋವನ್ನು ಕಡಿಮೆ ಮಾಡಬಹುದು.

Vijaya Karnataka Web 12 Oct 2021, 3:31 pm
ಎದೆನೋವು ಬಂದ ಕೂಡಲೇ ಬೆಚ್ಚಿಬೀಳುವವರೇ ಜಾಸ್ತಿ. ಎದೆನೋವು ಎಂದರೆ ಅದು ಹೃದಯಾಘಾತವೇ ಎಂದು ಭಾವಿಸಿರುವುದೇ ಈ ಭೀತಿಗೆ ಮುಖ್ಯ ಕಾರಣ. ಆದರೆ ಎದೆ ನೋವು ಎನ್ನುವುದು ಕೇವಲ ಹೃದಯಾಘಾತದಿಂದಾಗಿ ಮಾತ್ರ ಬರುವುದಲ್ಲ, ಇದು ನಾನಾ ರೀತಿಯಿಂದ ಬರಬಹುದು. ಅದರಲ್ಲೂ ಮುಖ್ಯವಾಗಿ ಕೆಲವೊಂದು ಸಲ ಅಸಿಡಿಟಿಯಿಂದಾಗಿಯೂ ಎದೆನೋವು ಬರಬಹುದು. ಹೀಗಾಗಿ ಎಲ್ಲಾ ಎದೆನೋವನ್ನು ಹೃದಯಾಘಾತ ಎಂದು ಪರಿಗಣಿಸಲು ಆಗದು.
Vijaya Karnataka Web simple ways to get rid from chest pain naturally
ಎದೆನೋವಿಗೆ ಇಲ್ಲಿದೆ ನೋಡಿ ಕೆಲವೊಂದು ನೈಸರ್ಗಿಕ ಪರಿಹಾರಗಳು


ಹೃದಯ ಸಂಬಂಧಿ ಕಾಯಿಲೆಯಿಂದಾಗಿ ಎದೆನೋವು ಕಾಣಿಸಿಕೊಂಡಿದ್ದರೆ ಆಗ ನಿಶ್ಯಕ್ತಿ, ಬಳಲಿಕೆ, ಎದೆಕಟ್ಟುವಿಕೆ, ವಾಕರಿಕೆ ಮತ್ತು ಹೊಟ್ಟೆಯ ನೋವು ಕಂಡುಬರಬಹುದು. ಜ್ವರ, ಚಳಿ, ಆತಂಕ, ನುಂಗಲು ಕಷ್ಟವಾಗುವುದು ಮತ್ತು ಬೆನ್ನು ನೋವು ಕೂಡ ತೀವ್ರವಾಗಿರುವುದು ಇತರ ಕೆಲವು ಲಕ್ಷಣಗಳು. ಸಾಮಾನ್ಯ ಎದೆನೋವನ್ನು ನಿವಾರಣೆ ಮಾಡಲು ಕೆಲವು ನೈಸರ್ಗಿಕ ಮನೆಮದ್ದುಗಳನ್ನು ತಿಳಿಸಿಕೊಡಲಿದ್ದೇವೆ.

ಅಲೋವೆರಾ ಜ್ಯೂಸ್

ನೈಸರ್ಗಿಕವಾಗಿ ಆಂಟಿಆಕ್ಸಿಡೆಂಟ್ ಗುಣ ಹೊಂದಿರುವ ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಇದು ರಕ್ತದೊತ್ತಡ ಕಡಿಮೆ ಮಾಡುವುದು, ಕೊಲೆಸ್ಟ್ರಾಲ್ ನಿಯಂತ್ರಿಸುವುದು ಮತ್ತು ಅಪಧಮನಿ ಆರೋಗ್ಯಕ್ಕೆ ಇದು ಲಾಭಕಾರಿ. ಅರ್ಧ ಕಪ್ ಅಲೋವೆರಾ ಜ್ಯೂಸ್ ಕುಡಿದರೆ ಆಗ ತುಂಬಾ ಪರಿಣಾಮಕಾರಿ ಆಗಿರುವುದು.

ವಿಟಮಿನ್ ಸೇವನೆ ಮಾಡಿ

ವಿಟಮಿನ್ ಡಿ ಮತ್ತು ಬಿ12 ಕೊರತೆ ಇರುವಂತಹ ಜನರಲ್ಲಿ ಎದೆ ನೋವು ಕಂಡುಬರುವುದು ಮತ್ತು ಇದು ಕೆಲವೊಂದು ಸಲ ಹೃದಯಾಘಾತಕ್ಕೂ ಕಾರಣವಾಗಬಲ್ಲದು ಎಂದು ಅಧ್ಯಯನಗಳು ಹೇಳಿವೆ. ಹೀಗಾಗಿ ಸರಿಯಾದ ರೀತಿಯಲ್ಲಿ ವಿಟಮಿನ್ ಡಿ ಮತ್ತು ಬಿ12 ಸೇವನೆ ಮಾಡಿ. ಇದಕ್ಕಾಗಿ ಚೀಸ್, ಮೊಟ್ಟೆಯ ಹಳದಿ ಭಾಗ, ಸೀರಲ್ ಮತ್ತು ಸೋಯಾ ಉತ್ಪನ್ನಗಳನ್ನು ಸೇವಿಸಿ.

ಅರಶಿನ ಹಾಲು

  • ಅರಶಿನದಲ್ಲಿ ಇರುವಂತಹ ಕರ್ಕ್ಯೂಮಿನ್ ಅಂಶವು ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಲು ಮತ್ತು ರಕ್ತನಾಳದಲ್ಲಿ ತಡೆಯಾಗುವುದನ್ನು ತಡೆಯುವುದು. ಇದರಿಂದ ಹೃದಯಾಘಾತದ ಅಪಾಯವು ಕಡಿಮೆ ಆಗುವುದು.
  • ಇದರಲ್ಲಿ ಉರಿಯೂತ ಶಮನಕಾರಿ ಗುಣಗಳಿವೆ ಮತ್ತು ಇದು ಎದೆನೋವು ಕಡಿಮೆ ಮಾಡುವುದು. ಬಿಸಿ ಹಾಲಿಗೆ ಅರಶಿನ ಹಾಕಿಕೊಂಡು ಸೇವನೆ ಮಾಡಿದರೆ ಆಗ ಅದು ತುಂಬಾ ಪರಿಣಾಮಕಾರಿ ಆಗಿರುವುದು.

ತುಳಸಿ ಎಲೆಗಳು

ತುಳಸಿ ಎಲೆಗಳಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಕೆ ಮತ್ತು ಮೆಗ್ನಿಶಿಯಂ ಅಂಶವಿದೆ. ಮೆಗ್ನಿಶಿಯಂ ದೇಹದಲ್ಲಿದ್ದರೆ, ಅದರಿಂದ ರಕ್ತ ಸಂಚಾರವು ಹೃದಯಕ್ಕೆ ಸುಗಮವಾಗಿ ಸಾಗಲು ಸಹಕಾರಿ ಮತ್ತು ವಿಟಮಿನ್ ಕೆ ಅಂಶವು ಕೊಲೆಸ್ಟ್ರಾಲ್ ನ್ನು ತಡೆಯುವುದು. ಕೊಲೆಸ್ಟ್ರಾಲ್ ರಕ್ತದಲ್ಲಿ ಏರಿಕೆಯಾದರೆ ಅದರಿಂದ ಎದೆನೋವು ಬರಬಹುದು. ಇದರಿಂದ ತುಳಸಿ ಎಲೆಗಳನ್ನು ಸೇವನೆ ಮಾಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ