ಆ್ಯಪ್ನಗರ

ನಿದ್ರೆ ಮಾಡಿದರೆ ಅನಾರೋಗ್ಯದಿಂದ ದೂರವಾಗಲು ಸಾಧ್ಯವಂತೆ!

ನಿಮ್ಮ ದೇಹಕ್ಕೆ ಆರಾಮ ಇಲ್ಲ ಎಂದು ಅನಿಸುವ ತಕ್ಷಣ, ಸ್ವಲ್ಪ ಬೇಗ ಮಲಗಿ, ಕಣ್ಣುಗಳಿಗೆ ವಿಶ್ರಾಂತಿ ನೀಡಿ. ಅಂದರೆ ಮೊಬೈಲ್‌, ಟಿವಿಗಳಿಂದ ದೂರವಿರಿ ಅಂದಲ್ಲ. ಸುಮ್ಮನೆ ಮಲಗಿಕೊಳ್ಳಿ. ರಾತ್ರಿ ಬೇಗ ಮಲಗಿ ಚೆನ್ನಾಗಿ ನಿದ್ದೆ ಹೋಗಿ.

TIMESOFINDIA.COM 3 Apr 2019, 7:49 pm
ಬದಲಾಗುತ್ತಿರುವ ವಾತಾವರಣ ನಿಮ್ಮನ್ನು ಬಲು ಬೇಗನೇ ಅನಾರೋಗ್ಯಕ್ಕೆ ದೂಡಬಹುದು. ಹೀಗಾಗಿ ಬದಲಾಗುವ ವಾಯುಗುಣಕ್ಕೆ ನೀವು ಕೊಂಚ ಮುಂಜಾಗ್ರತೆ ವಹಿಸುವುದು ಮುಖ್ಯ.
Vijaya Karnataka Web sleep


ಮುಂಜಾಗ್ರತೆ ಅಂದರೆ ಹೇಗೆ, ಮೊದಲೇ ವೈದ್ಯರ ಬಳಿ ಹೋಗಿ ಸಿಕ್ಕಿದ ಟೆಸ್ಟ್‌ಗಳನ್ನು ಮಾಡಿಸುವುದಲ್ಲ. ಹೀಗೆ ಮಾಡುವುದರಿಂದ ಯಾವುದೇ ಪ್ರಯೋಜನವೂ ಇಲ್ಲ. ನಿಮ್ಮ ಟೆಸ್ಟ್‌ಗಳೆಲ್ಲವೂ ನಾರ್ಮಲ್‌ ಆಗೇ ಇರುತ್ತದೆ.

ನಿಮ್ಮ ದೇಹಕ್ಕೆ ಆರಾಮ ಇಲ್ಲ ಎಂದು ಅನಿಸುವ ತಕ್ಷಣ, ಸ್ವಲ್ಪ ಬೇಗ ಮಲಗಿ, ಕಣ್ಣುಗಳಿಗೆ ವಿಶ್ರಾಂತಿ ನೀಡಿ. ಅಂದರೆ ಮೊಬೈಲ್‌, ಟಿವಿಗಳಿಂದ ದೂರವಿರಿ ಅಂದಲ್ಲ. ಸುಮ್ಮನೆ ಮಲಗಿಕೊಳ್ಳಿ. ರಾತ್ರಿ ಬೇಗ ಮಲಗಿ ಚೆನ್ನಾಗಿ ನಿದ್ದೆ ಹೋಗಿ. ಇದರಿಂದ ನಿಮ್ಮ ದೇಹದಲ್ಲಿ ವೈರಾಣುಗಳ ವಿರುದ್ಧ ಹೋರಾಡುವ ಶಕ್ತಿ ಹೆಚ್ಚುತ್ತದೆ. ದೇಹ ಆಯಾಸ ಆಗುವುದರಿಂದ ರಕ್ತದಲ್ಲಿ ವೈರಾಣುಗಳ ವಿರುದ್ಧ ಹೋರಾಡುವ ಶಕ್ತಿ ಕುಂಠಿತವಾಗುತ್ತದೆ ಎಂದು ಅಧ್ಯಯನದಿಂದಲೇ ದೃಢಪಟ್ಟಿದೆ.

ತಲೆನೋವು, ಶಿವರಿಂಗ್‌, ಮೂಗಲ್ಲಿ ಕಿರಿಕಿರಿ ಸೇರಿದಂತೆ ಇನ್ನಿತರ ಲಕ್ಷಣಗಳನ್ನು ನೀವು ಅನುಭವಿಸಿದ್ದೇ ಆದಲ್ಲಿ, ಔಷಧಿಯ ಬದಲು ರೆಸ್ಟ್‌ ತೆಗೆದುಕೊಳ್ಳುವುದು ನಿಮ್ಮನ್ನು ಮತ್ತಷ್ಟು ಅನಾರೋಗ್ಯಕ್ಕೆ ಒಳಪಡುವುದನ್ನು ತಪ್ಪಿಸುತ್ತದೆ.

ಅಧ್ಯಯನ ಏನ್‌ ಹೇಳುತ್ತೆ?
10 ಮಂದಿಯನ್ನು ಅಧ್ಯಯನಕ್ಕೆ ಆಯ್ಕೆ ಮಾಡಲಾಗಿತ್ತು. 5 ಮಂದಿಯನ್ನು ರಾತ್ರಿ ಚೆನ್ನಾಗಿ ನಿದ್ದೆ ಮಾಡಲು ಬಿಟ್ಟರೆ, ಇನ್ನು ಐವರನ್ನು ಗುಂಪನ್ನು ರಾತ್ರಿ ಎದ್ದಿರುವಂತೆ ಸೂಚಿಸಲಾಗದೆ. 2 ವಾರದ ಬಳಿಕ ಅವರೆಲ್ಲರ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಯಿತು. ಇದರಲ್ಲಿ ರಾತ್ರಿ ಚೆನ್ನಾಗಿ ನಿದ್ರಿಸಿದ ಐವರ ರಕ್ಷದಲ್ಲಿ ವೈರಾಣುಗಳ ವಿರುದ್ಧ ಹೋರಾಡುವ ಶಕ್ತಿ ಹೆಚ್ಚಳವಾಗಿರುವುದು ಕಂಡು ಬಂದಿದೆ. ಉಳಿದವರಲ್ಲಿ ಈ ಅಂಶ ವಿರುದ್ಧವಾಗಿರುವುದು ದಾಖಲಾಗಿದೆ ಎಂಬುದಾಗಿ ದಿ ಜರ್ನಲ್‌ ಆಫ್‌ ಎಕ್ಸ್‌ಪರಿಮೆಂಟಲ್‌ ಮೆಡಿಸಿನ್‌ನ ಅಧ್ಯಯನದಲ್ಲಿ ತಿಳಿದು ಬಂದಿದೆ.

ರಾತ್ರಿ ಚೆನ್ನಾಗಿ ಹಾಗೂ ಸರಿಯಾದ ಪ್ರಮಾಣದಲ್ಲಿ ನಿದ್ರಿಸುವುದು ಒಬ್ಬ ವ್ಯಕ್ತಿಯಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅಧ್ಯಯನದಿಂದ ಕಂಡುಕೊಳ್ಳಲಾಗಿದೆ. ಹೀಗಾಗಿ ದೇಹದಲ್ಲಿ ಆಯಾಸ, ಅನಾರೋಗ್ಯದ ಲಕ್ಷಣಗಳು ಕಂಡು ಬಂದಿದ್ದೇ ಆದಲ್ಲಿ, ಔಷಧಿಗಳ ಮೊದಲು ಸರಿಯಾದ ಪ್ರಮಾಣದಲ್ಲಿ ನಿದ್ರೆ, ದೇಹ ದಂಡಿಸದೇ ಇರುವ ಅಭ್ಯಾಸ ಮಾಡಿಕೊಳ್ಳಿ.

ಪ್ರಸ್ತುತ ಬದಲಾದ ಸನ್ನಿವೇಶಗಳಲ್ಲಿ ಅನೇಕ ರೀತಿಯ ಜ್ವರಗಳಿವೆ. ಆದರೆ ಸಾಮಾನ್ಯ ಶೀತ ಜ್ವರಕ್ಕೆ ಔಷಧಿ ಇಲ್ಲದೆಯೂ ಕಡಿಯಾಗುತ್ತದೆ. ಆರಂಭದಲ್ಲೇ ಗಂಟಲಲ್ಲಿ ಕಿರಿಕಿರಿ, ತಲೆ ನೋವು, ಕಟ್ಟಿದ ಮೂಗು ಇವೆಲ್ಲ ಸಾಮಾನ್ಯ ಲಕ್ಷಣಗಳು. ಆದರೆ ಇದರ ಹೊರತಾಗಿ ರಾತ್ರಿ ಮಾತ್ರ ಜ್ವರ, ಕಿವಿ ಬಿಸಿಯಾಗುವುದು, ನಿಶಕ್ತಿ, ಚಳಿ ಜ್ವರ, ವಾಂತಿ, ಬೇಧಿ ಇದ್ದಲ್ಲಿ ವೈದ್ಯರ ಸಲಹೆ ಅವಶ್ಯ. ಹೀಗಾದಲ್ಲಿ ಕೇವಲ ನಿದ್ರಿಸುವುದರಿಂದ ಪ್ರಯೋಜನ ಇರದು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ